ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಮುದ್ರಾಧಾರಣೆ. ಜಯ ಧ್ವಜ ನ್ಯೂಸ್, ರಾಯಚೂರು,ಜು.17- ಉತ್ತರಾಧಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನಗರಕ್ಕೆ ದಿಗ್ವಿಜಯಗೈದರು. ಬೆಳಿಗ್ಗೆ ನಗರದ ಎನ್ ಜಿ ಓ ಕಾಲೋನಿ ವೆಂಕಟರಮಣ ದೇವಸ್ಥಾನದಲ್ಲಿ ಮುದ್ರಾ ಧಾರಣೆ ನೆರವೇರಿಸಿದರು.
ಸರತಿ ಸಾಲಿನಲ್ಲಿ ನಿಂತು ಶಿಷ್ಯರು ಹಾಗೂ ಭಕ್ತರು ಮುದ್ರಾ ಪಡೆದರು. ನಂತರ ಶ್ರೀಪಾದಂಗಳವರು ನೆರೆದ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿದರು.ಪ್ರಹ್ಲಾದ್ ರಾವ್ ಕುಲಕರ್ಣಿ ಮನೆಯಲ್ಲಿ ಸಂಸ್ಥಾನ ಪೂಜೆ ಕೈಗೊಂಡರು. ಸಕಲರಿಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.



Comments
Post a Comment