ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರಗಳ ಸಂಘದ ರಾಜ್ಯ ಅಧ್ಯಕ್ಷರಾದ ಸಿ. ಬಸವಣ್ಣನವರಿಗೆ ಅಭಿನಂದನಾ ಸಮಾರಂಭ : ನೌಕರರ ಬೇಡಿಕೆ ಈಡೇರಿಸಲು ಕೋರಿಕೆ ಜಯಧ್ವಜ ನ್ಯೂಸ್ , ರಾಯಚೂರು , ಫೆ.28- ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರಗಳ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಸಿ. ಬಸವಣ್ಣನವರು ಪ್ರಾದೇಶಿಕ ಕೇಂದ್ರರಾಯಚೂರು ವತಿಯಿಂದ ಫೆ.26 ರಂದು ಹಮ್ಮಿಕೊಂಡ ಅಭಿನಂದನಾ ಸಮಾರಂಭಕ್ಕೆ ರಾಯಚೂರು ವೃತ್ತಕ್ಕೆ ಆಗಮಿಸಿದಾಗ,ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ 659 ರಾಯಚೂರು ವತಿಯಿಂದ ಸ್ವಾಗತಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಶ್ರೀ ಸಿ. ಬಸವಣ್ಣ ಅಧ್ಯಕ್ಷರು ಇವರು ಕವಿಪ್ರನಿ ನೌಕರ ಸಂಘಗಳ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರಿಂದ ನೌಕರರ ಬೇಡಿಕೆಗಳಾದ, 7528 ನೌಕರರನ್ನು ಒಳಗೊಂಡಂತೆ ನಿಗಮದ ಎಲ್ಲಾ ನೌಕರರಿಗೆ ಹಳೆಯ ಪಿಂಚಣಿ (ಓಪಿಎಸ್) ಜಾರಿಗೆ ಮಾಡುವುದು, ಇಂದಿನ ವರ್ಕ್ ಲೋಡ್ ನಾರ್ಮ್ಸ ಪ್ರಕಾರ ಸಿ ಮತ್ತು ಡಿ ಗುಂಪಿನ ನೌಕರರ ಹುದ್ದೆಗಳನ್ನು ಮಂಜೂರು ಮಾಡಿಸುವುದು, ಮತ್ತು ಜೆಸ್ಕಾಂ ಕಂಪನಿಯ ಎಲ್ಲಾ ನೌಕರ ಮತ್ತು ಕುಟುಂಬದವರಿಗೆ ಕ್ಯಾಶ್ ಲೆಸ್ ಹೆಲ್ತ್ ಕಾರ...