Posts

Image
  ಹೊಕ್ರಾಣಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದ ರವಿ ಬೋಸರಾಜು ಎನ್ಎಸ್ ಬೋಸರಾಜು,  ಹಂಪಯ್ಯ ನಾಯಕರಿಂದ ಸಂತ್ರಸ್ತ ಕುಟುಂಬಕ್ಕೆ ₹2 ಲಕ್ಷ ರೂ. ನೆರವು ಜಯ ಧ್ವಜ ನ್ಯೂಸ್ ,ರಾಯಚೂರು,ಆ.20- ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾರೆ ಎನ್ನಲಾದ ಯುವತಿಯ ಕುಟುಂಬಕ್ಕೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಮತ್ತು ಶಾಸಕ ಹಂಪಯ್ಯ ನಾಯಕ್ ಅವರ ಪರವಾಗಿ ಕಾಂಗ್ರೆಸ್ ರಾಜ್ಯ ಯುವ ಮುಖಂಡ ರವಿ ಬೋಸರಾಜು ಅವರು ₹2 ಲಕ್ಷ ಆರ್ಥಿಕ ನೆರವು ನೀಡಿದರು. ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ್ ಅವರು ಖುದ್ದಾಗಿ ಗ್ರಾಮಕ್ಕೆ ಬರಲು ಸಾಧ್ಯವಾಗದ ಕಾರಣ, ಪ್ರಕರಣ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಪರವಾಗಿ ರವಿ ಬೋಸರಾಜು ಅವರು ಒಕ್ರಾಣಿ ಗ್ರಾಮಕ್ಕೆ ತೆರಳಿ ಸಂತ್ರಸ್ತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರ ಅವರು, “ಅಶ್ವಿನಿ ಅವರ ಕುಟುಂಬದ ನೋವು ಮತ್ತು ದುಃಖವನ್ನು ಅರ್ಥಮಾಡಿಕೊಳ್ಳುವುದು ಕಷ್ಟ  ಆ ಭಗವಂತ ಅಶ್ವಿನಿ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ.“ಅಶ್ವಿನಿ ಸಾವಿಗೆ ನ್ಯಾಯ ದೊರಕಬೇಕು. ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ...
Image
  ದೇವರಾಜ ಅರಸು ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ- ಉಪ ಆಯುಕ್ತ ಡಾ. ಶರಣಪ್ಪ ಜಯ ಧ್ವಜ ನ್ಯೂಸ್ ,ರಾಯಚೂರು, ಆ, 20- ಡಿ.ದೇವರಾಜ ಅರಸು ಅವರು ಕರ್ನಾಟಕದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಅವರೊಬ್ಬ ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿಯಾಗಿದ್ದರು ಎಂದು ರಾಯಚೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಡಾ. ಶರಣಪ್ಪ ಹೇಳಿದರು. ಅವರಿಂದು ಜಿಲ್ಲಾಡಳಿತ. ಜಿಲ್ಲಾ ಪಂಚಾಯತ. ಮಹಾನಗರ ಪಾಲಿಕೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ರವರ 111 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಡಿ. ದೇವರಾಜ ಅರಸು ಅವರು ವಿಶೇಷವಾಗಿ ಹಿಂದುಳಿದ. ದೀನ. ದುರ್ಬಲ ವರ್ಗಗಳ ಜನರ ಬಗ್ಗೆ ವಿಶೇಷ ಕಾಳಜಿ ಉಳ್ಳವರಾಗಿದ್ದರು. ಉಳುವವನೆ ಭೂಮಿಯ ಒಡೆಯ. ಭೂ ಸುಧಾರಣೆಯಂತಹ ಹಲವಾರು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಎಲ್ಲರಿಗೂ ಸಮಾನ ಭೂಮಿ ಹಂಚಿಕೆ ಹಾಗೂ ಅವರಿಗೆ ಸಮಾನ ಹಕ್ಕುಗಳನ್ನು ನೀಡಿದ್ದರು. ಭಾಷಾವಾರು ಪ್ರಾಂತ್ಯಗಳ ಮೇಲೆ ಮೊದಲು ಮೈಸೂರು ರಾಜ್ಯ ಉದಯವಾಯಿತು ಈ ಮೈಸೂರು ರಾಜ್ಯವನ್ನು ದೇವರಾಜ ಅರಸರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು....
Image
  ಮೇಘಾಲಯ ರಾಜ್ಯದ ಶಿಲಾಂಗ್ ನಲ್ಲಿ ಅಧ್ಯಯನ ಪ್ರವಾಸ ಶಿಬಿರ ಉದ್ಘಾಟಿಸಿದ ಆಯುಕ್ತ ಜುಬಿನ್ ಮಹೋಪಾತ್ರ.                                                ಜಯ ಧ್ವಜ ನ್ಯೂಸ್ , ರಾಯಚೂರು ,ಆ.20- ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವೈಜ್ಞಾನಿಕ ಹಂದಿ ಸಾಕಾಣಿಕೆ ಪದ್ಧತಿಗಳು,ಆಧುನಿಕ ಶೇಡ್ ನಿರ್ಮಾಣ ಹಾಗೂ ನಿರ್ವಹಣೆ,ಆಹಾರ ಮತ್ತು ಸಂತಾನೋತ್ಪತ್ತಿ ನಿರ್ವಹಣೆ,ಜೈವಿಕ ಸುರಕ್ಷತೆ, ತ್ಯಾಜ್ಯ ನಿರ್ವಹಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹಲವಾರು ಪದ್ಧತಿಗಳನ್ನು ಅಧ್ಯಯನ ಮಾಡಿ ಉತ್ತೇಜಿಸುವ ನಿಟ್ಟಿನಲ್ಲಿ ಮೇಘಾಲಯ ರಾಜ್ಯದ ಶಿಲ್ಲಾಂಗ್ ಅನುಸರಿಸಲಗುತ್ತಿರುವ ಪದ್ಧತಿಯ ಅಧ್ಯಯನ ಕುರಿತು ಆ.19 ರಿಂದ 23 ರ ವರೆಗೆ ನಡೆಯಲಿರುವ ತರಬೇತಿ ಶಿಬಿರವನ್ನು ಮಾನ್ಯ ಆಯುಕ್ತರಾದ  ಜುಬಿನ್ ಮಹೋಪಾತ್ರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಲವು ತಿಂಗಳಗಳ ನಿರಂತರ ಮೇಘಾಲಾಯ ರಾಜ್ಯ ಸರಕಾರ ಕಾರ್ಯದರ್ಶಿಗಳ ಹಾಗೂ ಅಧಿಕಾರಿಗಳ ಸಂಪರ್ಕ ಹಾಗೂ ಸಮನ್ವಯದಿಂದಾಗಿ ಈ ತರಬೇತಿಯ ಪೂರ್ಣ ಫಲ ಸಿಗುವ ತರಬೇತಿಯಲ್ಲಿ ವಿನೂತನ ಪದ್ಧತಿಗಳ ಅರಿವು ಪಡೆದು ಇಂತಹ ಪದ್ಧತಿಗಳನ್ನು ನಮ್ಮ ಮಹಾನಗರದಲ್ಲಿ ಅಳವಡಿಸುವುದಲ್ಲದೆ ರಾಜ್ಯದ ಇನ್ನಿತರ ಜಿಲ್ಲೆಗಳಿಗೆ ಮಾದರಿಯಾಗುವುದು ಹಾಗೂ ಮಾರ್ಗದ...
Image
  ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಪ್ರೇರಣಾದಾಯಿ‌ ಉಪನ್ಯಾಸ ಕಾರ್ಯಕ್ರಮ: ಆ.22 ರಂದು ನಗರಕ್ಕೆ ಪ್ರಸಿದ್ಧ ವಾಗ್ಮಿ ಡಾ.ಮೋಹಿತ ದಯಾಲ್ ಗುಪ್ತಾ ಆಗಮನ .                                                                   ಜಯ ಧ್ವಜ ನ್ಯೂಸ್, ರಾಯಚೂರು,ಆ.20-                   ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಉದಯನಗರ, ರಾಯಚೂರು ಸಂಸ್ಥೆಯಿಂದ  ಆ.22 ರಂದು ನಗರದ ವಿವಿಧಡೆ ಆಯೋಜಿಸಿರುವಂಥ ಪ್ರೇರಣಾದಾಯಿ ಉಪನ್ಯಾಸ ಕಾರ್ಯಕ್ರಮಕ್ಕೆ ಡಾ.ಮೋಹಿತ್ ದಯಾಲ್ ಗುಪ್ತಾ, ಪ್ರಸಿದ್ಧ   ಇಂಟರ್‌ನ್ಯಾಷನಲ್ ಮೋಟಿವೇಷನಲ್ ಸ್ಪೀಕರ್ ಮತ್ತು  ಕಾರ್ಡಿಯಾಲಾಜಿಷ್ಟ, ಜಿ.ಬಿ.ಪಂತ್ ಹಾಸ್ಪಿಟಲ್, ನ್ಯೂಡೆಲ್ಲಿ ಇವರು ಉಪನ್ಯಾಸಕರಾಗಿ ಆಗಮಿಸಲಿದ್ದಾರೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ಮಿತಾ ಅಕ್ಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ   ಡಾ.ಮೋಹಿತ್ ದಯಾಲ್ ಗುಪ್ತಾ ತಮ್ಮ ವೈಧ್ಯಕೀಯ ವೃತ್ತಿಜೀವನದಲ್ಲಿ 18ಕ್ಕೂ ಹೆಚ್ಚು ಚಿನ್ನದ ಪದಕಗಳು ಹಾಗೂ 5 ಬೆಳ್...
Image
  ರಂಗಾಸಕ್ತರ ಗಮನ ಸೆಳೆದ 'ಸಣ್ಣ ಗೌಡಸಾನಿ' ಜಯ ಧ್ವಜ ನ್ಯೂಸ್  , ರಾಯಚೂರು,ಆ.20- ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲೆ, ವಿಶೇಷವಾಗಿ ವಿಧವೆಯರ ಮೇಲೆ ನಡೆಯುವ ಮಾನಸಿಕ ಹಾಗೂ ಸಾಮಾಜಿಕ ದೌರ್ಜನ್ಯಗಳನ್ನು ತೀವ್ರವಾಗಿ ಚಿತ್ರಿಸಿರುವ, ಪುರುಷಪ್ರಧಾನ ಸಮಾಜದ ಕಪಟತನವನ್ನು ಬಯಲು ಮಾಡುತ್ತಾ, ಒಬ್ಬ ಹೆಣ್ಣು ತನ್ನ ಆತ್ಮಗೌರವಕ್ಕಾಗಿ ನಡೆಸುವ ನಿರಂತರ ಹೋರಾಟವನ್ನು ಧ್ವನಿಸುವ ನಾಡೋಜಾ ಶಾಂತರಸರ ಕಥೆ ಆಧಾರಿತ 'ಸಣ್ಣ ಗೌಡಸಾನಿ' ನಾಟಕವನ್ನು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಪ್ರದರ್ಶನ ನೀಡಲಾಯಿತು.  ಗ್ರಾಮೀಣ ಸಮಾಜದ ವಾಸ್ತವ ಚಿತ್ರಣ ಮತ್ತು ಜಾತಿ-ಲಿಂಗ ಆಧಾರಿತ ತಾರತಮ್ಯವನ್ನು ತೋರಿಸುತ್ತಾ, ಆತ್ಮಗೌರವ ಹಾಗೂ ಸ್ವಾಭಿಮಾನ ಉಳ್ಳ ಒಬ್ಬ ಮಹಿಳೆ ತಾನು ಮಾನಸಿಕವಾಗಿ ಸದೃಢಳಾಗಿದ್ದು ಇದೆಲ್ಲವನ್ನೂ ಹೇಗೆ ಸಹಿಸಿ-ಎದುರಿಸುತ್ತಾಳೆ ಎಂಬುದರ ಕಥಾಹಂದರದಿಂದ ಕೂಡಿರುವ ನಾಟಕವನ್ನು 'ಕಲಬುರಗಿ ರಂಗಾಯಣ' ಪ್ರಸ್ತುತಪಡಿಸಿದ್ದು, ಈ ಭಾಗದ ಪ್ರಸಿದ್ಧ ರಂಗಕರ್ಮಿಯಾದ ಪ್ರವೀಣ್ ರೆಡ್ಡಿ ಗುಂಜಹಳ್ಳಿಯವರ ನಿರ್ದೇಶನ, ಹೆಸರಾಂತ ಸಾಹಿತಿಗಳು ಹಾಗೂ ಕಥೆಗಾರರಾದ ಮಹಾಂತೇಶ್ ನವಲಕಲ್ ಅವರು ರಂಗರೂಪ ಹಾಗೂ ರಾಘವ ಕಮ್ಮಾರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದೆ. ನೆರಳು-ಬೆಳಕಿನ ಸಂಯೋಜನೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಭಾವನೆಗಳು ಮತ್ತು ಆಲೋಚನೆಗಳನ್ನು ಕೆದುಕುವಂತಿರುವ ಹಿನ್ನೆಲೆ ಸಂಗೀತ  ...
Image
ರಿಮ್ಸ್ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಒದಗಿಸಲು ರಾಯಚೂರು ಜಿಲ್ಲಾ ನಾಗರಿಕ ವೇದಿಕೆ ಮನವಿ ಜಯ ಧ್ವಜ ನ್ಯೂಸ್ , ರಾಯಚೂರು, ಆ.19- ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗಳಿಗೆ ತಕ್ಷಣ ಕಡಿವಾಣ ಹಾಕಿ – ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ಒದಗಿಸಲು ರಾಯಚೂರು ಜಿಲ್ಲಾ ನಾಗರಿಕ ವೇದಿಕೆ ಆಗ್ರಹಿಸಿ ಮನವಿಪತ್ರ ಸಲ್ಲಿಸಿತು. ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಲಭ್ಯತೆ, ತುರ್ತು ಚಿಕಿತ್ಸಾ ವಿಭಾಗ, ಔಷಧಿಗಳ ಪೂರೈಕೆ, ಸ್ವಚ್ಛತೆ, ಸ್ಕ್ಯಾನಿಂಗ್ ಸೇವೆ, ಬಿಲ್ಲಿಂಗ್ ವ್ಯವಸ್ಥೆ ಹಾಗೂ ಸಾರ್ವಜನಿಕ ಸೌಲಭ್ಯಗಳಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ತಕ್ಷಣ ಸರಿಪಡಿಸುವಂತೆ ಒತ್ತಾಯಿಸಿತು.  ರಿಮ್ಸ್ ಆಸ್ಪತ್ರೆ ರಾಯಚೂರು ಜಿಲ್ಲೆಯ ಬಡ ಮತ್ತು ಸಾಮಾನ್ಯ ಜನರಿಗೆ ಪ್ರಮುಖ ಆರೋಗ್ಯ ಕೇಂದ್ರವಾಗಿದೆ. ಪ್ರತಿದಿನ ಸಾವಿರಾರು ರೋಗಿಗಳು ಚಿಕಿತ್ಸೆಗೆ ಆಗಮಿಸುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಗುಣಮಟ್ಟದ, ಸಮಯೋಚಿತ ಹಾಗೂ ಸುರಕ್ಷಿತ ವೈದ್ಯಕೀಯ ಸೇವೆ ದೊರೆಯುವುದು ಅತ್ಯಗತ್ಯವಾಗಿದೆ. ಆದರೆ ಸಾರ್ವಜನಿಕರಿಂದ ಬಂದಿರುವ ದೂರುಗಳ ಪ್ರಕಾರ ಹಲವು ವಿಭಾಗಗಳಲ್ಲಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ . ಕೆಲವು ವಿಭಾಗಗಳಲ್ಲಿ ಪೂರ್ಣ ಪ್ರಮಾಣದ ವೈದ್ಯರು ನಿಯಮಿತವಾಗಿ ಲಭ್ಯವಿಲ್ಲದೆ, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ವೈದ್ಯರು ಲಭ್ಯವಿರುತ್ತಾರೆ ಎಂಬ ದೂರುಗಳಿವೆ. ಮಧ್ಯಾಹ್ನದ ನಂತರ ಹಿರಿಯ ಹಾಗೂ ತಜ್ಞ ವೈದ್ಯರ ಲಭ್ಯತೆ...
Image
ವಿಆರ್‌ಎಲ್’ ಸಂಸ್ಥೆಗೆ ಸುವರ್ಣ ‘ಸಂಭ್ರಮ’ ಮೈಸೂರಿನಲ್ಲಿ ವಿಶೇಷ ಸಮಾರಂಭ - ಬೃಹತ್ ಗೋದಾಮು ಉದ್ಘಾಟನೆ ಜಯ ಧ್ವಜ ನ್ಯೂಸ್ ,ರಾಯಚೂರು, ಆ.18- ಕನಸು, ಪರಿಶ್ರಮ, ನಂಬಿಕೆ, ಸವಾಲುಗಳನ್ನು ಮೆಟ್ಟಿ ನಿಂತು ಐದು ದಶಕಗಳ ಯಶಸ್ವಿ ಸೇವೆಯನ್ನು ಪೂರೈಸಿದ ‘ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್’ನ ಸುವರ್ಣ ಮಹೋತ್ಸವ ಸಮಾರಂಭ ಶನಿವಾರ ಮೈಸೂರಿನಲ್ಲಿ ಸಂಭ್ರಮದಿಂದ ಜರುಗಿತು. ಸಂಸ್ಥೆಗೆ ಸುವರ್ಣ ಮಹೋತ್ಸವದ ಜತೆಗೆ ನಗರದ ಬನ್ನಿಮಂಟಪ ಬಡಾವಣೆಯ ಜೋಡಿ ತೆಂಗಿನಮರ ರಸ್ತೆ ಬಳಿ ನೂತನವಾಗಿ ನಿರ್ಮಾಣವಾಗಿರುವ ವಿಆರ್‌ಎಲ್ ಕಟ್ಟಡ, ಬೃಹತ್ ಗೋದಾಮು ಕಟ್ಟಡ ಲೋಕಾರ್ಪಣೆ ಸಹ ಇದೇ ವೇಳೆ ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಮಾತ್ರವಲ್ಲದೆ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವ ಸಂಕೇಶ್ವರ ಅವರನ್ನು ಅಭಿನಂದಿಸಿ, ಸಂಸ್ಥೆಯ ಮುಂದಿನ ಪಯಣವೂ ಇನ್ನಷ್ಟು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. *ವಿಭಿನ್ನ ಆಲೋಚನೆಯ ಫಲ:*  ವಿಆರ್‌ಎಲ್ ಸಂಸ್ಥೆಯ ಆರಂಭದ ದಿನಗಳನ್ನು ಸ್ಮರಿಸಿದ ಡಾ.ವಿಜಯ ಸಂಕೇಶ್ವರ ಅವರು, ನನ್ನ ತಂದೆ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕುಟುಂಬದ ಎಲ್ಲರೂ ಒಂದೇ ಕ್ಷೇತ್ರದಲ್ಲಿ ಮುಂದುವರಿಯುವ ಬದಲು, ವಿಭಿನ್ನ ಕ್ಷೇತ್ರದಲ್ಲಿ ಹ...