Posts

Image
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ:       ಗುರಿ ಸಾಧಿಸಲು ನಿರಂತರ ಪ್ರಯತ್ನ‌ ಇರಲಿ-  ಡಾ.ನಾಗಲಕ್ಷ್ಮೀ ಚೌಧರಿ ಜಯ ಧ್ವಜ ನ್ಯೂಸ್ ,ರಾಯಚೂರು, ಜು. 10- ಉತ್ತಮ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಗುರಿಯನ್ನು ಇಟ್ಟಕೊಳ್ಳಬೇಕು. ಆ ಗುರಿ ಸಾಧಿಸಲು ನಿರಂತರ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು. ಅವರಿಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ‌ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾಲೇಜ್ ಶಿಕ್ಷಣ ಇಲಾಖೆ ರಾಯಚೂರು ಇವರ ಸಂಯೋಗದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ಎಷ್ಟೇ ಅಡ್ಡಿ ಆತಂಕ ಎದುರಾದರೂ ಕಲಿಯೋದು ಬಿಡಬಾರದು. ದಿನನಿತ್ಯದ ಪ್ರಚಲಿತದ ಘಟನೆಗಳನ್ನು ಗಮನಿಸಬೇಕು. ವಿದ್ಯಾರ್ಥಿಗಳು ಪ್ರತಿದಿನವೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನವನ್ನು ಪಡೆದವರು ಜಗತ್ತನ್ನು ಆಳ್ವಿಕೆ ಮಾಡಬಹುದು. ಸ್ತ್ರೀ‌ ಶೋಷಣೆ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರು ಹೋರಾಟ ಮಾಡಿದ್ದಾರೆ. ಅವರನ್ನು ಪ್ರೇರಣೆಯಾಗಿ ಪಡೆಯಬೇಕು.  ಒಳ್ಳೆಯ ಸ್ನೇಹಿತರ ಗುಂಪು ಮಾಡಬೇಕು. ಸಮಾಜದ ಆದರ್ಶ ವ್ಯಕ್ತಿಯಾಗಿ ಬಾಳಬೇಕು. ಮೊಬೈಲ್ ಬಳಕೆ...
Image
  ಮುಖ್ಯಮಂತ್ರಿಗಳ  ಸಚಿವಾಲಯದ  ಮಾಧ್ಯಮ      ಕಾರ್ಯದರ್ಶಿಗಳಾಗಿ ಪಿ.ತ್ಯಾಗರಾಜ್ ನೇಮಕ.                                                                                                                              ಜಯ ಧ್ವಜ ನ್ಯೂಸ್, ರಾಯಚೂರು ,ಜು.8- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಸಚಿವಾಲಯದ ಮಾಧ್ಯಮ ಕಾರ್ಯದರ್ಶಿಗಳಾಗಿ ಪಿ.ತ್ಯಾಗರಾಜರವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ಪಿ.ತ್ಯಾಗರಾಜ್ ರವರು ನಾಡಿನ  ಖ್ಯಾತ ಪತ್ರಿಕೆಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಪತ್ರಿಕೆಗಳಲ್ಲಿ ಅಂಕಣಗಳನ್ನು ಸಹ ಬರೆಯುತ್ತಿದ್ದರು. ಸದ್ಯ ಅವರನ್ನು ಮುಖ್ಯಮಂತ್ರಿಗಳ ಸಚಿವಾಲಯದ ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಕಗೊಳಿಸಲಾಗಿದೆ ಇವರೊಂದಿಗೆ ಆರ್. ಜಯಪ್ರಕಾಶ್ ಮತ್ತು ರಾಘವೇಂದ್ರ ಭಟ್ ರವರನ್ನು ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ .
Image
  ಮಾದಿಗ ದಂಡೋರದಿಂದ ಲಲಿತ ವೃದ್ಧಾಶ್ರಮದಲ್ಲಿ ಮಂದಕೃಷ್ಣ ಮಾದಿಗರವರ ಹುಟ್ಟು ಹಬ್ಬ ಆಚರಣೆ ಜಯ ಧ್ವಜ ನ್ಯೂಸ್ , ರಾಯಚೂರು , ಜು.7 - ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರ ಆದೇಶದ ಮೇರೆಗೆ ಇಂದು ನಗರದ ಲಲಿತಾ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ  32ನೇ ಮಾದಿಗ ದಂಡೋರ ಎಂ ಆರ್ ಪಿ ಎಸ್ ಸಂಘಟನೆಯ ಸಂಸ್ಥಾಪನೆ ದಿನ ಹಾಗೂ ಪದ್ಮಶ್ರೀ ಮಂದಕೃಷ್ಣ ಮಾದಿಗ  ರವರ ಹುಟ್ಟು ಹಬ್ಬ ಆಚರಣೆ ಲಲಿತ ವೃದ್ಧಾಶ್ರಮದಲ್ಲಿ  ಸರಳವಾಗಿ ಆಚರಿಸಲಾಯಿತು.  ಈ  ಸಂದರ್ಭದಲ್ಲಿ  ರಂಜಿತ್ ದಂಡೋರ ಎಂ ಆರ್ ಪಿ ಎಸ್  ಜಿಲ್ಲಾ ಯುವ ಸೇನೆ ಅಧ್ಯಕ್ಷರು ಮಾತನಾಡಿ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ  ನಾಯಕತ್ವದಲ್ಲಿ  1994 ರಲ್ಲಿ ಉದ್ಘಾಟನೆಯದ ಮಾದಿಗ ದಂಡೋರ ಎಂ ಆರ್ ಪಿ ಎಸ್ ಸಂಘಟನೆಯ ಹೋರಾಟದ ಹಾದಿ ಇಂದಿಗೆ 32ನೆಯ ವರ್ಷದ ವಾರ್ಷಿಕೋತ್ಸವ ಸಂಸ್ಥಾಪನೆ ದಿನ ಹಾಗೂ ಪದ್ಮಶ್ರೀ ಮಂದಕೃಷ್ಣ  ಮಾದಿಗ ರವರು  ಹುಟ್ಟುಹಬ್ಬ  ಮತ್ತು ಅನೇಕ ಸಮಾಜ ತಮ್ಮದೇ ಆದ ಛಾಯೆಯನ್ನು ಮೂಡಿಸಿ. ಪರಿಶಿಷ್ಟ ಜಾತಿಯ ಸಮುದಾಯಗಳಿಗೆ  ಒಳ ಮಿಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ 35 ವರ್ಷಗಳಿಂದ ನಿರಂತರ ಹೋರಾಟದ ಮೂಲಕ ವರ್ಗೀಕರಣವನ್ನು ಸಾಧಿಸಿದ್ದಾರೆ. ಸಾಮಾಜಿಕ ಸೇವೆಯನ್ನು ಗುರುತಿಸಿ 2025ರಲ್ಲಿ  ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ...
Image
  ಜು. 8 ರಂದು 'ಮಾಗಿದ ಮುತ್ಸದ್ದಿ' ಗ್ರಂಥ ಲೋಕಾರ್ಪಣೆ  ಹಾಗೂ ಅಭಿನಂದನಾ ಸಮಾರಂಭ:          ಎಂ.ಎಸ್.ಪಾಟೀಲರು ರಾಜಕೀಯ ಎದುರಾಳಿಗೂ ಒಳ್ಳೇದನ್ನೇ ಬಯಸಿದ್ದರು- ಪಾಪಾರೆಡ್ಡಿ.                                        ಜಯ ಧ್ವಜ ನ್ಯೂಸ್, ರಾಯಚೂರು,ಜು.6 - ಹಿರಿಯ ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಸಚಿವ ಎಂ.ಎಸ್. ಪಾಟೀಲರವರ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಜು.8ರಂದು ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷರು  ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಮತ್ತು ಗೌರವಾಧ್ಯಕ್ಷರು ಹಾಗೂ ಶಾಸಕರಾದ ಡಾ.ಶಿವರಾಜ ಪಾಟೀಲ್ ಹೇಳಿದರು. ಅವರೀರ್ವರು  ಜಂಟಿಯಾಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪಾಪಾರೆಡ್ಡಿ ಮಾತನಾಡಿ ಎಂ.ಎಸ್.ಪಾಟೀಲರು 70ರ ದಶಕದಿಂದಲೆ ರಾಜಕೀಯ ಮುನ್ನೆಲೆಗೆ ಬಂದವರು ಶಾಸಕರಾಗಿ, ಸಚಿವರಾಗಿ ವಿವಿಧ ಸ್ಥಾನಮಾನಗಳಿಸಿ ಉತ್ತಮ ನಡೆ ನುಡಿಯುಳ್ಳ ಸಜ್ಜನ ರಾಜಕಾರಣಿ ಎಂದು ಜನಿಜನಿತರಾದವರು ಎಂದರು. ವಿಧಾನಸಭೆ ನಗರ ಕ್ಷೇತ್ರದ  ಅನೇಕ ಚುನಾವಣೆಗಳಲ್ಲಿ ನಾನು ಅವರ ವಿರುದ್ಧ ಸ್ಪರ್ಧಿಸಿದ್ದೆ ಅವರ ಬಗ್ಗೆ ಚುನಾವಣೆ ಬಹಿರಂಗ ಸಮಾವೇಶಗಳಲ್ಲಿ ಅವರ ಬಗ್ಗೆ ರಾಜಕೀಯವಾಗಿ ವಾಗ್ದಾಳಿ ನಡೆಸಿದ್ದರೂ ಅವರು ನನ್ನ ಬಗ್ಗೆ ಎ...
Image
ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಅಭಿವೃದ್ಧಿ ಆಗಲಿ ಪ್ರೊ. ಶಿವಾನಂದ ಕೆಳಗಿನಮನಿ.   ಜಯಧ್ವಜ ನ್ಯೂಸ್ , ರಾಯಚೂರು ಜು.6- ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟವನ್ನು ಉನ್ನತಿಕರಿಸಲು ನಮ್ಮ ವಿಶ್ವವಿದ್ಯಾಲಯ ನಿರಂತರವಾಗಿ ಪರಿಶ್ರಮಿಸುತ್ತದೆ ಅದರೊಂದಿಗೆ ಈ ಭಾಗದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಭಾಗದ ಜನಪ್ರತಿನಿಧಿಗಳು, ಸಾಹಿತಿಗಳು ಹಾಗೂ ತಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ನಮ್ಮ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯ ಪ್ರಯತ್ನಿಸುತ್ತದೆ ಎಂದು ಹೇಳಲು ಖುಷಿಯಾಗುತ್ತದೆ ಅದರೊಂದಿಗೆ ಈ ಎರಡು ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಅಂದರೆ ಅದರಲ್ಲಿ ಮುಖ್ಯವಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿರುವುದನ್ನು  ಕಂಡುಕೊಂಡಿದ್ದೇನೆ ಈ ಭಾಗದ ಅನೇಕ ಸಮಸ್ಯೆಗಳಿಗೆ ಸಂಶೋಧನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಅದನ್ನು ಮುಂದಿನ ದಿನಗಳಲ್ಲಿ ನಮ್ಮ ವಿಶ್ವವಿದ್ಯಾಲಯ ಎಲ್ಲಾ ಪ್ರಯತ್ನ ಮಾಡುತ್ತದೆ. ಆದರೆ ಇದರೊಂದಿಗೆ ತಮ್ಮೆಲ್ಲರ ಸಹಕಾರವಿದ್ದರೆ ಈ ವಿಶ್ವವಿದ್ಯಾಲಯವನ್ನು ರಾಜ್ಯಮಟ್ಟದ ಮಾದರಿ ವಿಶ್ವವಿದ್ಯಾನಿಲಯ ಮಾಡುವುದರಲ್ಲಿ ತಮ್ಮೆಲ್ಲರ  ಸಹಕಾರ ನನಗೆ ಬೇಕಾಗುತ್ತದೆ. ಈಗ ತಾವೆಲ್ಲರೂ ನನ್ನ ಒಂದು ವರ್ಷದ ಕಾರ್ಯವಿಧಾನವನ್ನು ಪರಿಗಣಿಸಿ ಅಭಿನಂದಿಸುತ್ತಿರುವುದಕ್ಕೆ ತಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ ಎಂದು ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ...
Image
  ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು- ಶಾಸಕ ಬಸನಗೌಡ ದದ್ದಲ್ ಜಯ ಧ್ವಜ ನ್ಯೂಸ್ , ರಾಯಚೂರು. ಜು. 4-  ರಾಯಚೂರು ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಥಳಗಳು ಹಾಗೂ ಮೂರು ಮಹತ್ತರವಾದ ಐಲೆಂಡುಗಳು ಇವೆ.  ಇಲ್ಲಿಗೆ ಕರ್ನಾಟಕ. ಮಹಾರಾಷ್ಟ್ರ. ತೆಲಂಗಾಣ ಸೇರಿದಂತೆ ಇತರೆ ಹಲವಾರು ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಹೇಳಿದರು ಅವರು ಗ್ರಾಮೀಣ ಕ್ಷೇತ್ರದ ವಿವಿಧ ಪ್ರದೇಶಗಳ ಅಭಿವೃದ್ದಿ ಪರಿಶೀಲನೆ ಭಾಗವಾಗಿ ಕುರುಗಡ್ಡೆ ದತ್ತಾತ್ರೆಯ‌ ದೇವಸ್ಥಾನ ಬಳಿ ನಡೆದ ಕಾಮಗಾರಿ   ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗಳೊಂದಿಗೆ  ಮಾತನಾಡಿದರು. ಇಂದು  ನಾವು  ಎಲ್ಲರೂ ಒಂದಾಗಿ ಸೇರಿದ್ದೇವೆ. ಮಾಧ್ಯಮದವರನ್ನು ಕೆಲವು ಪ್ರಮುಖ ಪ್ರವಾಸೋದ್ಯಮ ಸ್ಥಳಗಳಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಕರೆದಿದ್ದೇನೆಂದ ಅವರು. ಕಳೆದ ಎಂಟು ವರ್ಷಗಳಿಂದ ನಾನು ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿಯನ್ನು ನೀವು ಸ್ವತಃ ನೋಡಿ, ನಿಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕು ಎಂಬುದು ನಾನು ತಮಗೆಲ್ಲರಿಗೂ ಕರೆದ ಉದ್ದೇಶ ಆಗಿದೆ. ನಮ್ಮ ಕ್ಷೇತ್ರದಲ್ಲಿ ಅತ್ಯ...
Image
  ವಾಲ್ಮೀಕಿ ವಿಶ್ವವಿದ್ಯಾನಿಲಯ ಕುಲಪತಿಗಳಾದ ಶಿವಾನಂದ ಕೆಳಗಿನಮನಿರವರಿಗೆ  ಅಭಿನಂದನಾ ಸಮಾರಂಭ. ಜಯ ಧ್ವಜ ನ್ಯೂಸ್ ,ರಾಯಚೂರು, ಜು 4 -   ಕಲಾಸಂಕುಲ ಸಂಸ್ಥೆ  ರಾಯಚೂರು ಹಾಗೂ ಲೋಹಿಯಾ ಪ್ರತಿಷ್ಠಾನ ರಾಯಚೂರು ಇವರ ವತಿಯಿಂದ ಗೌರವಾನ್ವಿತ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ  ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ರಾಯಚೂರು ಇವರಿಗೆ ಜು.5 ರಂದು ರವಿವಾರ ಸಂಜೆ 6 ಗಂಟೆಗೆ ರಾಯಚೂರು ರಂಗಮಂದಿರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಮಾರುತಿ ಬಡಿಗೇರ್ ತಿಳಿಸಿದ್ದಾರೆ.  ಕಾರ್ಯಕ್ರಮದ ಉದ್ಘಾಟಕರಾಗಿ  ಡಾ ಬಸವಪ್ರಭು ಪಾಟೀಲ್ ಬೆಟ್ಟದೂರು. ಹಿರಿಯ ಸಾಹಿತಿಗಳಾದ ವೀರ ಹನುಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷರಾದ ಗಿರಿಜಾ ರಾಜಶೇಖರ್,  ಭೀಮನಗೌಡ ಪಾಟೀಲ್  ಇಟಗಿ, ಜೆ ಎಲ್ ಈರಣ್ಣ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಾ, ಜಿಲ್ಲಾ ಕಾರಾಗ್ರಹ ಇಲಾಖೆಯ ಜಿಲ್ಲಾ  ಆದೀಕ್ಷಕರಾದ ಅನಿತಾ ಹಿರೇಮನಿ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶ್ರೀದೇವಿ ಆರ್ ವಿ ನಾಯಕ.. ಸಮಾಜ ಸೇವಕಿ ಡಾ. ಫಾತಿಮಾ ಹುಸೇನ್, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷರಾದ  ರೇಖಾ ಬಡಿಗೇರ್ ಭಾಗವಹಿಸಲಿದ್ದಾರೆ.   ಸಾಧಕ ಮೂರು ಜನರಿಗೆ ರಾಜ್ಯಮಟ್ಟದ ಪ್ರಶಸ್...