Posts

Image
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ                                                            ಜಯ ಧ್ವಜ ನ್ಯೂಸ್ , ರಾಯಚೂರು, ಆ.15- ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ ನಿಂದ ಹಮ್ಮಿಕೊಂಡ 80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಧ್ಯಕ್ಷರಾದ ವಿಜಯಕುಮಾರ್ ಜಾಗಟಗಲ್ ಅವರು      ರಾಷ್ರಧ್ವಜಾರೋಹಣ ನೆರವೇರಿಸಿದರು.  ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ದಲ್ಲಿ ಮೊದಲಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ,  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಪತ್ರಕರ್ತರಾದ ಜಗನ್ನಾಥ ಪೂಜಾರಿ ಅಧ್ಯಕ್ಷರಾದ ವಿಜಯ ಜಾಗಟಗಲ್ ,ಸ್ವಾತಂತ್ರ್ಯ ಕ್ಕಾಗಿ ತ್ಯಾಗ ಮಾಡಿದ ಅನೇಕರ ಮಹನಿಯರ ಸ್ಮರಣೆ ಮಾಡಿದರು.  ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಅಧಿಕಾರಿ ಜಿ.ಸುರೇಶ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು .
Image
    ನಗರದ ವಿವಿಧೆಡೆ ಸಂಭ್ರಮದಿಂದ  80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.                                                            ಜಯಧ್ವಜ ನ್ಯೂಸ್ , ರಾಯಚೂರು ,ಆ.15- ನಗರದ ವಿವಿಧೆಡೆ ಸಂಭ್ರಮದಿಂದ  80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.                                                              ಮಹಾನಗರ ಪಾಲಿಕೆಯಲ್ಲಿ: ಪಾಲಿಕೆ ಆಯುಕ್ತರಾದ ಶ್ರೀ ಜುಬಿನ್ ಮಹಾಪಾತ್ರ ಭಾ ಆ ಸೇ ರವರು ಬೆಳಿಗ್ಗೆ 6-30 ಕ್ಕೆ ನಗರದ  ಗಾಂಧಿ ವೃತ್ತದಲ್ಲಿ ಹಾಗೂ 6-45 ಕ್ಕೆ ಕ್ರೀಡಾಂಗದಲ್ಲಿ  ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪೂಜೆ ಸಮರ್ಪಿಸಿ ಮಾಲಾರ್ಪಣೆ ಮಾಡಿದರು, ನಂತರ 7-30 ಕ್ಕೆ ಮಹಾನಗರ ಪಾಲಿಕೆಯ ವಲಯ-1 (ಹಳೆಯ ನಗರಸಭೆ) ಧ್ವಜಾರೋಹಣ ಕೊನೆಯದಾಗಿ 7-45ಕ್ಕೆ ಆಯುಕ್ತರ ಕಛೇರಿ ವಲಯ-2 ಧ್ವಜಾರೋಹಣ ನೆರೆವೇರಿಸಿದರು ಈ ಸುಸಂಧರ್ಭದಲ್ಲಿ ಮಾತನಾಡಿ  ಇಂದು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಪವಿತ್ರವ...
Image
  ರಸ್ತೆಗಳಲ್ಲೆ ಬರ್ತ್ ಡೆ ಪಾರ್ಟಿ; ಹೇಳುವರಿಲ್ಲ ಕೇಳುವರಿಲ್ಲ!                                       ಜಯ ಧ್ವಜ ನ್ಯೂಸ್, ರಾಯಚೂರು, ಆ.14- ನಗರದಲ್ಲಿ ಬರ್ತ್ ಡೇ ಪಾರ್ಟಿ ಮಾಡಲು ಹೋಟೆಲ್ ಗಳು, ಕಲ್ಯಾಣ ಮಂಟಪಗಳು, ಸಭಾಂಗಣಗಳು ಸಿಗುತ್ತಿಲ್ಲವೇ? ಇಂತಹ ಪ್ರಶ್ನೆ ಮೂಡುತ್ತಿರುವುದು ಏಕೆಂದರೆ ಸಾರ್ವಜನಿಕರು, ವಾಹನಗಳು ಸಂಚರಿಸುವ ರಸ್ತೆಯ ಮಧ್ಯದಲ್ಲೆ ಬರ್ತ್ ಡೇ ಪಾರ್ಟಿ ಮಾಡುತ್ತ ಕೇಕ್ ಕತ್ತರಿಸಿ, ಮುಖದ ತುಂಬ ಮೆತ್ತಿಕೊಂಡು ಕಿರಚುತ್ತ , ಅನಾಗರೀಕರಂತೆ  ವರ್ತನೆ ತೋರುತ್ತಾ ವಿಕೃತವಾಗಿ ಸಂಭ್ರಮಿಸುವ ದೃಶ್ಯಗಳನ್ನು ನೋಡಿದರೆ ನಾವು ನಾಗರೀಕ ಸಮಾಜದಲ್ಲಿ ಇದ್ದೇವೋ? ಅಥವಾ ಬೇರೆ ಯಾವುದೋ ಸ್ಥಳದಲ್ಲಿ ಇದ್ದೇವೋ? ಎಂಬ ಅನುಮಾನ ಮತ್ತು  ಅಸಹ್ಯ ಎರೆಡು ನಮ್ಮ ಮನದಲ್ಲಿ ಮೂಡುವುದಂತೂ ನಿಶ್ಚಿತ.                                           ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಜನ್ಮ ದಿನಾಚರಣೆ ಎಲ್ಲರೂ ಆಚರಿಸುವುದು ಸಹಜ ಮತ್ತು  ಅಪೇಕ್ಷೆಯೂ ಕೂಡ ಆದರೆ ಅದನ್ನು ಎಲ್ಲಿ , ಹೇಗೆ ಆಚರಿಸಬೇಕೆಂಬ ಕನಿಷ್ಟ ಪ್ರಜ್ಞೆಯೂ ಇಲ್ಲದೆ ರಸ್ತೆ ಮಧ್ಯೆ ಜನರಿಗೆ ಕಿರಿಕಿರಿ ...
Image
  ಭೂಮಾನಂದ ಕೊಲೆ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆ.24 ಬೃಹತ್ ಸಭೆ- ಎಸ್.ಮಾರೆಪ್ಪ.                                                          ಜಯ ಧ್ವಜ ನ್ಯೂಸ್ , ರಾಯಚೂರು,ಆ.13- ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆ.24 ರಂದು ನಗರದಲ್ಲಿ ಬೃಹತ್ ಸಭೆ ಆಯೋಜಿಸಲಾಗಿದೆ ಎಂದು ಭೂಮಾನಂದ ಕಗ್ಗೊಲೆ ವಿರೋಧಿ ಒಕ್ಕೂಟ ಮುಖಂಡ ಎಸ್.ಮಾರೆಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ನಡೆದ ಭೂಮಾನಂದ ಕೊಲೆ ಪ್ರಕರಣದಲ್ಲಿ ಯಾರನ್ನು ಸಿಲುಕಿಸಲು ನಾವು ಪ್ರಯತ್ನಿಸುತ್ತಿಲ್ಲ ಬದಲಾಗಿ ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಮತ್ತು ಜಿಲ್ಲೆಯಲ್ಲಿ ಕೊಲೆ, ಮಾರಾಮಾರಿ ಮುಂತಾದವು ನಿಲ್ಲಬೇಕೆಂದು ನಮ್ಮ ಹೋರಾಟವಾಗಿದೆ ಎಂದರು. ಪ್ರಕರಣದಲ್ಲಿ ಪತ್ರಕರ್ತ ಭೀಮರಾಯ ಹದ್ದಿನಾಳ ಪಾತ್ರವಿರುವ ಬಗ್ಗೆ ದೂರುದಾರರು ಹೇಳಿಕೆ ಅರಿತುಕೊಂಡು ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ ಹೊರತು ನಮ್ಮ ಒತ್ತಾಯಕ್ಕಲ್ಲವೆಂದರು. ಯಾವುದೆ ಒಂದು ಸಮುದಾಯ ಮತ್ತೊಂದು ಸಮುದಾಯಕ್ಕೆ ವೈರಿಯಂದು ಬಿಂಬಿಸುವ ಕಾರ್ಯ ನಿಲ್ಲಬೇಕು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮತ್ತು ಸರ್ಕಾರ ಜಿಲ್ಲೆಯಲ್ಲಿ ಶಾಂತಿ...
Image
  ಕಲ್ಯಾಣ ಕರ್ನಾಟಕದಲ್ಲಿ ಯುಪಿಎಸ್ ಸಿ ನಾಗರೀಕ ಸೇವೆಗಳ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಒತ್ತಾಯ ಜಯ ಧ್ವಜ ನ್ಯೂಸ್ , ರಾಯಚೂರು ,ಆ.12-  ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ ಸಿ) ಪರೀಕ್ಷಾ ಕೇಂದ್ರ ಇಲ್ಲದೇ ಇರುವದರಿಂದ ಈ ಭಾಗದ ಅಭ್ಯರ್ಥಿಗಳು ದೂರದ ಬೆಂಗಳೂರು ಅಥವಾ ಹೈದರಾಬಾದ್ ನಗರಕ್ಕೆ ಹೋಗಬೇಕಾಗುತ್ತದೆ, ಈಗಾಗಲೇ ಕರ್ನಾಟಕದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರು ನಗರಗಳಲ್ಲಿ ಪರೀಕ್ಷಾ ಕೇಂದ್ರ ಇದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರ ಇಲ್ಲದೇ ಇರುವದು ತೊಂದರೆಯಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶವು ಏಳು ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳು ಹೊಂದಿರುವ ಪ್ರದೇಶವಾಗಿದ್ದು, ಸುಮಾರು 1.26 ಕೋಟಿ ಜನಸಂಖ್ಯೆ ಹೊಂದಿರುತ್ತದೆ. ಇಲ್ಲಿನ ಅಭ್ಯರ್ಥಿಗಳು ದೂರದ ಪ್ರದೇಶಗಳಲ್ಲಿ ಇರುವ ಪರೀಕ್ಷಾ ಕೇಂದ್ರಗಳಿಗೆ ಹೋಗುವದು ಪ್ರಯಾಸದಾಯಕವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶವು ಸಂವಿಧಾನದ ಅನುಚ್ಛೇದ 371J ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದು, ಇಲ್ಲಿ ಸಾಮಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವಾಗಿ ಹಿಂದುಳಿದ ಪ್ರದೇಶವಾಗಿರುತ್ತದೆ. ಈ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವಿಶೇಷವಾಗಿ ರಾಯಚೂರಿನಲ್ಲಿ ಒಂದು ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷಾ ಕೇಂದ್ರ ಸ್ಥಾಪನೆಯು ಅವಶ್ಯಕವಾಗಿರುತ್...
Image
  ವಾರ್ಡ್ ನಂ.17ರಲ್ಲಿ ನಿಯಮ ಉಲ್ಲಂಘಿಸಿ ದೌರ್ಜನ್ಯದಿಂದ ಮನೆ ನಿರ್ಮಾಣ                                                  ಜಯ ಧ್ವಜ ನ್ಯೂಸ್, ರಾಯಚೂರು,ಆ.11- ನಗರದ ವಾರ್ಡ್ ನಂ.17ರಲ್ಲಿ ನಿಯಮ ಉಲ್ಲಂಘಿಸಿ ಮನೆ ನಿರ್ಮಿಸುತ್ತಿದ್ದು ಮಹಾನಗರ ಪಾಲಿಕೆ ಇದನ್ನು ತಡೆಯಲು ಕೋರಲಾಗಿದೆ. ಕನ್ನಿಕಾ ಪರಮೇಶ್ವರಿ ಹಾಸ್ಟೆಲ್ ಹಿಂಬಾಗದ ಓಣಿಯಲ್ಲಿ ಕಾಡ್ಲೂರು ದೇಸಾಯಿಯವರ ಮನೆಯ ಹಿಂಬದಿ ಹೊಂದಿಕೊಂಡಂತೆ ಅವರ ಮನೆಯ ವೆಂಟೀಲೇಟರ್ ಗಳನ್ನು ಮುಚ್ಚಿ ಮನೆ ನಿರ್ಮಿಸುತ್ತಿದ್ದು ಇದನ್ನು  ಪ್ರಶ್ನಿಸಿದರೆ ದಬ್ಬಾಳಿಕೆಯಿಂದ ಉದ್ಧಟತನದ ವರ್ತನೆಯಿಂದ ಮನೆ ನಿರ್ಮಿಸುತ್ತಿದ್ದು ಇದನ್ನು ಕೂಡಲೆ ಸಂಬಂಧಿಸಿದ ಮಹಾನಗರ  ಪಾಲಿಕೆ ಅಧಿಕಾರಿಗಳು ತಡೆದು ನ್ಯಾಯ ದೊರಕಿಸಿಕೊಡಬೇಕು ಮತ್ತು ಸ್ಥಳದಲ್ಲಿ ಉದ್ವಿಗ್ನತೆ ಪರಿಸ್ಥಿತಿ ಉಂಟಾಗದಂತೆ ಪೊಲೀಸರು ಕ್ರಮ ಕೈಗಳ್ಳಬೇಕೆಂದು ಕೋರಲಾಗಿದೆ .
Image
  126ನೇ ನೀರಾವರಿ ಸಲಹಾ ಸಮಿತಿ ಸಭೆ ಕೊಪ್ಪಳ,‌ ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತರಿಗೆ ಅನ್ಯಾಯ ಮಾಡುವುದಿಲ್ಲ- ಶಿವರಾಜ ತಂಗಡಗಿ ಜಯ ಧ್ವಜ ನ್ಯೂಸ್ ,ರಾಯಚೂರು, ಆ. 11-  ರೈತರ ನೆಮ್ಮದಿಯೇ ನಮ್ಮ ನೆಮ್ಮದಿ. ರಾಜ್ಯ ಸರ್ಕಾರ ರೈತರ ಪರವಾಗಿದೆ. ಕಾಲುವೆಗೆ ನೀರು ಹರಿಸುವ ವಿಷಯದಲ್ಲಿ ರೈತರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಸ್ಪಷ್ಟಪಡಿಸಿದರು. ಮುನಿರಾಬಾದ್‌ನ ಕಾಡಾ ಟಿ.ಬಿ.ಪಿ. ಸಭಾಂಗಣದಲ್ಲಿ ಇಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯ ಪೂರ್ವದಲ್ಲಿ ರೈತ ಮುಖಂಡರ ಸಲಹೆ ಪಡೆದು ಅವರು ಮಾತನಾಡಿದರು. ಕೆಲ ಕಡೆಗಳಲ್ಲಿ ಮಳೆ ಆದಾಗ್ಯೂ ರಾಜ್ಯದಲ್ಲಿ ಬರದ ಛಾಯೆ ಇದೆ. 177 ತಾಲೂಕುಗಳಲ್ಲಿ ಬರದ ಪರಸ್ಥಿತಿ ಇದೆ.‌ ತುಂಗಾ ಮತ್ತು ಭದ್ರಾ ಜಲಾಶಯಗಳಿಗೆ ನೀರು ಹರಿದು ಬಂದಿದೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಇದೆ. ಸದ್ಯ ಈಗ 82 ಟಿಎಂಸಿ ನೀರು ಲಭ್ಯವಿದೆ. ಜಲಾಶಯದಲ್ಲಿನ ನೀರು ಲಭ್ಯತೆ ಸ್ಥಿತಿಗತಿ ಅರಿತು ಈ ಭಾಗದ ಎಲ್ಲ ಜನಪ್ರತಿನಿಧಿಗಳ ಸಲಹೆ ಪಡೆದುಕೊಂಡು ಕಾಲುವೆಗೆ ನೀರು ಹರಿಸಲು ಕಾಲಾವಕಾಶ ನೀಡಬೇಕು ಎಂದು ಸಚಿವರು ಮನವಿ ಮಾಡಿದರು. ಸಭೆಯಲ್ಲಿ  ಮಾಜಿ ಸಚಿವರಾದ ಎನ್ ಎಸ್ ಬೋಸರಾಜು,   ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ,  ಜಿ.ಹಂಪಯ್ಯ ನಾಯಕ, ಬಸನನಗೌಡ ತುರವಿಹಾಳ, ಡಾ.ಎಸ್.ಶಿವರ...