Posts

Image
  ವಾರ್ಡ್ ನಂ.17ರಲ್ಲಿ ನಿಯಮ ಉಲ್ಲಂಘಿಸಿ ದೌರ್ಜನ್ಯದಿಂದ ಮನೆ ನಿರ್ಮಾಣ                                                  ಜಯ ಧ್ವಜ ನ್ಯೂಸ್, ರಾಯಚೂರು,ಆ.11- ನಗರದ ವಾರ್ಡ್ ನಂ.17ರಲ್ಲಿ ನಿಯಮ ಉಲ್ಲಂಘಿಸಿ ಮನೆ ನಿರ್ಮಿಸುತ್ತಿದ್ದು ಮಹಾನಗರ ಪಾಲಿಕೆ ಇದನ್ನು ತಡೆಯಲು ಕೋರಲಾಗಿದೆ. ಕನ್ನಿಕಾ ಪರಮೇಶ್ವರಿ ಹಾಸ್ಟೆಲ್ ಹಿಂಬಾಗದ ಓಣಿಯಲ್ಲಿ ಕಾಡ್ಲೂರು ದೇಸಾಯಿಯವರ ಮನೆಯ ಹಿಂಬದಿ ಹೊಂದಿಕೊಂಡಂತೆ ಅವರ ಮನೆಯ ವೆಂಟೀಲೇಟರ್ ಗಳನ್ನು ಮುಚ್ಚಿ ಮನೆ ನಿರ್ಮಿಸುತ್ತಿದ್ದು ಇದನ್ನು  ಪ್ರಶ್ನಿಸಿದರೆ ದಬ್ಬಾಳಿಕೆಯಿಂದ ಉದ್ಧಟತನದ ವರ್ತನೆಯಿಂದ ಮನೆ ನಿರ್ಮಿಸುತ್ತಿದ್ದು ಇದನ್ನು ಕೂಡಲೆ ಸಂಬಂಧಿಸಿದ ಮಹಾನಗರ  ಪಾಲಿಕೆ ಅಧಿಕಾರಿಗಳು ತಡೆದು ನ್ಯಾಯ ದೊರಕಿಸಿಕೊಡಬೇಕು ಮತ್ತು ಸ್ಥಳದಲ್ಲಿ ಉದ್ವಿಗ್ನತೆ ಪರಿಸ್ಥಿತಿ ಉಂಟಾಗದಂತೆ ಪೊಲೀಸರು ಕ್ರಮ ಕೈಗಳ್ಳಬೇಕೆಂದು ಕೋರಲಾಗಿದೆ .
Image
  126ನೇ ನೀರಾವರಿ ಸಲಹಾ ಸಮಿತಿ ಸಭೆ ಕೊಪ್ಪಳ,‌ ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತರಿಗೆ ಅನ್ಯಾಯ ಮಾಡುವುದಿಲ್ಲ- ಶಿವರಾಜ ತಂಗಡಗಿ ಜಯ ಧ್ವಜ ನ್ಯೂಸ್ ,ರಾಯಚೂರು, ಆ. 11-  ರೈತರ ನೆಮ್ಮದಿಯೇ ನಮ್ಮ ನೆಮ್ಮದಿ. ರಾಜ್ಯ ಸರ್ಕಾರ ರೈತರ ಪರವಾಗಿದೆ. ಕಾಲುವೆಗೆ ನೀರು ಹರಿಸುವ ವಿಷಯದಲ್ಲಿ ರೈತರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಸಚಿವರಾದ ಶಿವರಾಜ ತಂಗಡಗಿ ಅವರು ಸ್ಪಷ್ಟಪಡಿಸಿದರು. ಮುನಿರಾಬಾದ್‌ನ ಕಾಡಾ ಟಿ.ಬಿ.ಪಿ. ಸಭಾಂಗಣದಲ್ಲಿ ಇಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯ ಪೂರ್ವದಲ್ಲಿ ರೈತ ಮುಖಂಡರ ಸಲಹೆ ಪಡೆದು ಅವರು ಮಾತನಾಡಿದರು. ಕೆಲ ಕಡೆಗಳಲ್ಲಿ ಮಳೆ ಆದಾಗ್ಯೂ ರಾಜ್ಯದಲ್ಲಿ ಬರದ ಛಾಯೆ ಇದೆ. 177 ತಾಲೂಕುಗಳಲ್ಲಿ ಬರದ ಪರಸ್ಥಿತಿ ಇದೆ.‌ ತುಂಗಾ ಮತ್ತು ಭದ್ರಾ ಜಲಾಶಯಗಳಿಗೆ ನೀರು ಹರಿದು ಬಂದಿದೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಇದೆ. ಸದ್ಯ ಈಗ 82 ಟಿಎಂಸಿ ನೀರು ಲಭ್ಯವಿದೆ. ಜಲಾಶಯದಲ್ಲಿನ ನೀರು ಲಭ್ಯತೆ ಸ್ಥಿತಿಗತಿ ಅರಿತು ಈ ಭಾಗದ ಎಲ್ಲ ಜನಪ್ರತಿನಿಧಿಗಳ ಸಲಹೆ ಪಡೆದುಕೊಂಡು ಕಾಲುವೆಗೆ ನೀರು ಹರಿಸಲು ಕಾಲಾವಕಾಶ ನೀಡಬೇಕು ಎಂದು ಸಚಿವರು ಮನವಿ ಮಾಡಿದರು. ಸಭೆಯಲ್ಲಿ  ಮಾಜಿ ಸಚಿವರಾದ ಎನ್ ಎಸ್ ಬೋಸರಾಜು,   ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ,  ಜಿ.ಹಂಪಯ್ಯ ನಾಯಕ, ಬಸನನಗೌಡ ತುರವಿಹಾಳ, ಡಾ.ಎಸ್.ಶಿವರ...
Image
  ಮಂಕಾಳ ವೈದ್ಯರವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟ- ಶರಣಪ್ಪ.                                              ಜಯ ಧ್ವಜ ನ್ಯೂಸ್ , ರಾಯಚೂರು,ಆ.11- ಮಂಕಾಳ ವೈದ್ಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ನಷ್ಟವಾಗಲಿದೆ ಎಂದು ಜಿಲ್ಲಾ ಗಂಗಾಮತಸ್ಥ ಸಮಾಜ ಮಾಜಿ ಕಾರ್ಯದರ್ಶಿ ಶರಣಪ್ಪ ಕಡುಗೋಲು ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಸುಮಾರು 60 ಲಕ್ಷದಷ್ಟು ಜನಸಂಖ್ಯೆಯಿರುವ ದೊಡ್ಡ ಸಮಾಜದ ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದ ಏಕೈಕ ವಿಧಾನಸಭೆ ಶಾಸಕ ರಾಗಿರುವ  ಮಂಕಾಳು ವೈದ್ಯರನ್ನು ಸಿಎಂ ಡಿಕೆ ಶಿವಕುಮಾರ್ ಸಂಪುಟ ವಿಸ್ತರಣೆ ವೇಳೆ ಮೊದಲ ಪಟ್ಟಿಯಲ್ಲಿ ಹೆಸರು ಸೇರಿಸಿ ತದನಂತರ ಕೊನೆ ಕ್ಷಣದಲ್ಲಿ ಕೈಬಿಟ್ಟಿದ್ದು ಗಂಗಾಮತಸ್ಥ ಸಮಾಜಕ್ಕೆ ತುಂಬಾ ಅನ್ಯಾಯವಾದಂತಾಗಿದೆ ಎಂದರು. ಕಲ್ಬುರ್ಗಿ ಜಿಲ್ಲೆಯಲ್ಲಿ ನಮ್ಮ ಸಮಾಜದ ಹೆಚ್ಚಿನ ಬೆಂಬಲದಿಂದಲೇ ಪ್ರಿಯಾಂಕ ಖರ್ಗೆ ಆಯ್ಕೆಯಾಗಿದ್ದಾರೆ ನಮ್ಮ ಸಮಾಜಕ್ಕೆ  ಸಚಿವ ಸ್ಥಾನ ಸಿಗದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ, ತಿಮ್ಮಪ್ಪ, ನರಸಿಂಹಲು, ರಾಮು, ಈರ...
Image
  ಶ್ರೀ ಮಾತೆ ಬಾಲಮಾರೆಮ್ಮ ದೇವಸ್ಥಾನದ ಅಭಿವೃದ್ದಿಗೆ 40 ಲಕ್ಷ ರೂ.ಅನುದಾನ ನೀಡಿದ ವಸಂತ ಕುಮಾರ  ಜಯ ಧ್ವಜ ನ್ಯೂಸ್ , ರಾಯಚೂರು , ಆ.11-  ವಿಧಾನ ಪರಿಷತ್ ಸದಸ್ಯರಾದ ಎ.ವಸಂತ್ ಕುಮಾರ್ ರವರು   ಬಾಲ ಮಾರಮ್ಮ ದೇವಸ್ಥಾನ ಅಭಿವೃದ್ಧಿಗೆ 40 ಲಕ್ಷ ರೂ. ಅನುದಾನ ನೀಡಿದರು. ಇಂದು ಬೆಳಿಗ್ಗೆ ಶ್ರೀ ಬಾಲ ಮಾರಮ್ಮ ದೇವಸ್ಥಾನ ಸಮಿತಿಯವರ ವಿಶೇಷ ಆಹ್ವನದ ಮೇರೆಗೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಾಲಮಾರಮ್ಮ ದೇವಿಯ ಆಶೀರ್ವಾದ ಪಡೆದು ಮಾತನಾಡಿದ ಅವರು ಸಮಿತಿಯವರ ವಿನಂತಿಯ ಮೇರೆಗೆ ದೇವಸ್ಥಾನದ ಅಭಿವೃದ್ದಿಗೆ 2026-27 ನೇ ಸಾಲಿನ ಎಂ. ಎಲ್. ಸಿ  ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ದೇವಸ್ಥಾನದ ಅಭಿವೃದ್ದಿಗೆ 40 ಲಕ್ಷ ಅನುದಾನ ನೀಡುತ್ತಿರುವುದಾಗಿ ತಿಳಿಸಿದರು.  ದೇವಸ್ಥಾನಕ್ಕೆ ಅನುಧಾನ ನೀಡಿದ್ದಕ್ಕೆ ದೇವಸ್ಥಾನ ಸಮಿತಿ ಅಧ್ಯಕ್ಷರು ಸಮಿತಿ ಸದಸ್ಯರು ವಿಧಾನ ಪರಿಷತ್ ಸದಸ್ಯರನ್ನು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಆರ್ ಡಿ ಎ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಕೆ ಟಿ ನರಸಣ್ಣ ಅಧ್ಯಕ್ಷರು ಬಾಲ ಮಾರೆಮ್ಮ ದೇವಸ್ಥಾನ ಸಮಿತಿ, ಡಿ ಕೆ ಮುರುಳಿ ಯಾದವ್, ತಿಮ್ಮಪ್ಪ ಕೋರ್ಟ್, ಬಂಕ ಶಿವಪ್ಪ, ಪ್ರಕಾಶ್ ವಕೀಲರು,  ಶ್ರೀನಿವಾಸ, ಸುರೇಂದ್ರ , ಮಾರಪ್ಪ ಸೆಂಟ್ರಿಂಗ್, ಬಂಕ ರಾಮು, ತಲಾರ್ ಶಂಕರ್, ಟೈಲರ್ ಹಣಮಂತು, ಡಾ, ನಾಗೇಶ್, ಮೇಸ್ತ್ರಿ ಹನಮಂತು, ಹಾಲ್ವಿ ನ...
Image
  ಬೆಂಗಳೂರು-ಮುಂಬೈ  ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲೇ ಪ್ರಾರಂಭ- ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಆ.11 - ಬೆಂಗಳೂರು-ಮುಂಬೈ  ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ವೇಗದ ರೈಲು ಸಂಪರ್ಕವನ್ನು ಕೊಡುಗೆ ನೀಡಲು ಮುಂದಾಗಿದ್ದು ಕಲ್ಯಾಣ ಕರ್ನಾಟಕ ಜನತೆಗೆ ಸಿಹಿ ಸುದ್ಧಿ ನೀಡಿದೆ. ದಕ್ಷಿಣ ಪಶ್ಚಿಮ ರೈಲೈ ವಂದೇ ಭಾರತ ಸ್ಲೀಪರ್ ರೈಲುಗಳ ಸಂಚಾರಕ್ಕೆ ಸಿದ್ಧತೆ ನಡೆಸಿದ್ದು ಬೆಂಗಳೂರು-ಮುಂಬೈ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರೀಮಿಯಂ ರಾತ್ರಿ ಸೇವೆ ಆರಂಭಿಸಲಿದೆ‌ ಬೆಂಗಳೂರು ರೈಲು ನಿಲ್ದಾಣ ವನ್ನು ಸಂಜೆ 6ಗಂಟೆಗೆ ನಿರ್ಗಮಿಸುವ ಈ ರೈಲು ರಾತ್ರಿ 9.25ಕ್ಕೆ  ಗುಂತಕಲ್,10.55ಕ್ಕೆ ರಾಯಚೂರು, ಮಧ್ಯ ರಾತ್ರಿ 12.40ಕ್ಕೆ  ಕಲಬುರಗಿ,ತಡರಾತ್ರಿ 2.05ಕ್ಕೆ ಸೊಲ್ಲಾಪುರ, ಬೆಳಗಿನ ಜಾವ 5.50ಕ್ಕೆ ಪುಣೆ,ಬೆಳಿಗ್ಗೆ 8.30ಕ್ಕೆ ಮುಂಬೈ ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ ಎಂದು ಅವರು ಹೇಳಿದ್ದಾರೆ. ಈ ರೈಲು ಓಡಿಸುವಂತೆ ಈ ಭಾಗದ ಜನರ ಪರವಾಗಿ ರೈಲ್ವೆ ಸಚಿವರಲ್ಲಿ ಮಾಡಿಕೊಂಡ ಮನವಿಗೆ ಈಗ ಸ್ಪಂದನೆ ಸಿಕ್ಕಿದ್ದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಅವರು ಕಲ್ಯಾಣ ಕರ್ನಾಟಕ ಜನತೆ ಇದರ ಪ್ರಯೋಜನ ಪಡೆಯಲು ಪ್ರಕಟಣೆಯಲ್ಲಿ ಕೋರಿದ್ದಾರೆ.
Image
  ಕೇಂದ್ರ ಸರಕಾರದ ಬಲವಂತದ ಭೂಸ್ವಾಧೀನ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ  ‘ಜೈಲ್ ಭರೋ’ ಚಳುವಳಿ ಪ್ರತಿಭಟನೆ ಜಯ ಧ್ವಜ ನ್ಯೂಸ್ , ರಾಯಚೂರು,ಆ.10- ಕೇಂದ್ರ ಸರಕಾರದ ಬಲವಂತದ ಭೂಸ್ವಾಧೀನ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ನಡೆಯುತ್ತಿರುವ ‘ಜೈಲ್ ಭರೋ’ ಚಳುವಳಿಯ ಭಾಗವಾಗಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು, ಜೈಲ್ ಗೆ ಬೃಹತ್ ಮೆರವಣೆಗೆ ತೆರಳುತ್ತಿರುವ ವೇಳೆ ಹಲವು ರೈತ ಮುಖಂಡರು ಹಾಗೂ ಮಹಿಳಾ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಈ ಪ್ರತಿಭಟನೆಯಲ್ಲಿ  ಗಿರಿಯಪ್ಪ ಪೂಜಾರಿ, ನರಸಣ್ಣ ನಾಯಕ, ಶಬ್ಬೀರ, ರಮೇಶ ವೀರಾಪೂರು,ರುದ್ರಪ್ಪ ನಾಯಕ, ವರಲಕ್ಷೀ, ಎಚ್. ಪದ್ಮಾ, ಕೆ.ಜಿ. ವಿರೇಶ, ರಮಾದೇವಿ, ಶರಣಬಸವ, ಸಂಗಯ್ಯ ಸ್ವಾಮಿ, ರಂಗನಾಥ, ಸಾಜೀದ್, ಮಹೇಶ ಚಿಕಲಪರವಿ, ಮಲ್ಲನಗೌಡ, ವೀರೇಶ ಬಿ.ಎನ್. ಬಸಲಿಂಗಪ್ಪ ನಗನೂರು, ಬಸತರಾಯ ಗೌಡ, ಸೇರಿದಂತೆ ಅನೇಕರು ಬಂಧನಕ್ಕೊಳಗಾದರು.
Image
  ಆ.28 ರಂದು ಗಬ್ಬೂರಲ್ಲಿ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಸಮಾರಂಭ:                    ಪ್ರೊ.ಮಲ್ಲೇಪುರಂ.ಜಿ ವೆಂಕಟೇಶ ,ರಘುನಾಥರೆಡ್ಡಿ ಮನ್ಸಲಾಪೂರು ,ಖಾಸೀಮ್ ಮಲ್ಲಿಗೆ ಮಡುವು ರವರಿಗೆ ಲಭಿಸಿದ ಪ್ರಶಸ್ತಿ -ಬಸವರಾಜ ಸಿನ್ನೂರ  ಜಯ ಧ್ವಜ ನ್ಯೂಸ್ ,ರಾಯಚೂರು, ಆ.10- ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠವು ಕೊಡಮಾಡುವ" ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.28ರಂದು ಆಯೋಜಿಸಲಾಗಿದೆ ಎಂದು  ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸದಸ್ಯ ಬಸವರಾಜ ಸಿನ್ನೂರ ಹೇಳಿದರು.                          ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.      ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಅವರ ಅಧ್ಯಾತ್ಮಿಕ ಗುರುಗಳಾದ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಹೆಸರಿನಲ್ಲಿ ಕುಮಾರಸ್ವಾಮಿಗಳವರ ಹುಟ್ಟುಹಬ್ಬವಾದ ನೂಲಹುಣ್ಣಿಮೆಯಂದು ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಗಣನ...