ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನ ಆಚರಣೆ: ಅಭಿಮಾನಿಗಳಿಂದ ವಿಷ್ಣುವರ್ಧನ್ ರವರ ಚಿತ್ರಗೀತೆಗಳ ಅರ್ಪಣೆ. ಜಯ ಧ್ವಜ ನ್ಯೂಸ್, ರಾಯಚೂರು, ಸೆ.18- ನಗರದ ಜವಾಹರ ನಗರ ಬಡಾವಣೆಯ ಶ್ರೀಗೋಪಾಲ್ ಆಚಾರ್ ಮಠದ್ ರವರ ಮನೆಯಲ್ಲಿ ಕರ್ನಾಟಕ ರತ್ನ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್ ರವರ 76ನೇ ಜನ್ಮದಿನವನ್ನು ವಿಷ್ಣುವರ್ಧನ್ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎಲ್ಲಾ ಅತಿಥಿಗಳು ಪುಷ್ಪ ನಮನ ಸಲ್ಲಿಸಿ ಕೇಕ್ ಕತ್ತರಿಸುವುದರ ಮುಖಾಂತರ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಯಚೂರಿನ ಜೂನಿಯರ್ ವಿಷ್ಣುವರ್ಧನ್ ನಾರಾಯಣ ರಾವ್ ದೇಸಾಯಿ,ವಿಜಯ್ ಕುಮಾರ್ ದಿನ್ನಿ,ಗುರುರಾಜ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಗುರಮಿಟಕಲ್ ರಮೇಶ್,ರಮಾಕಾಂತ್ ,ಕೋಲಾರ ವೆಂಕಟೇಶ್, ಜಯಕುಮಾರ್ ದೇಸಾಯಿ ಕಾಡ್ಲೂರು, ವಿನೋದ...