ಸಂಸದ ಗೋವಿಂದ ಕಾರಜೋಳ ಬಗ್ಗೆ ಅವಹೇಳನಕಾರಿ ಪೋಸ್ಟರ್ ಕ್ರಮಕ್ಕೆ ರವೀಂದ್ರ ಜಲ್ದಾರ್ ಪೊಲೀಸರಿಗೆ ಒತ್ತಾಯ ಜಯ ಧ್ವಜ ನ್ಯೂಸ್, ರಾಯಚೂರು,ಜು.25- ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದುರ್ಗ ಸಂಸದರ ವಿರುದ್ಧ ಹಾಗೂ ಬಿಜೆಪಿ ಪಕ್ಷದ ಬಗ್ಗೆ ಅವಹೇಳನಕಾರಿ , ಮಾನಹಾನಿಕರ ಹಾಗೂ ಸಾರ್ವಜನಿಕ ಶಾಂತಿ ಕದಡುವ ಉದ್ದೇಶದ ಪೋಸ್ಟ್ ಗಳನ್ನು ಪ್ರಕಟಿಸಿರುವ ಪಾವಗಡ ಮೂಲದ ಶ್ರೀನಿವಾಸ್ ಬಾಬು ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ರವೀಂದ್ರ ಜಲ್ದಾರ್ ಮನವಿ ಪತ್ರಿ ಸಲ್ಲಿಸಿದರು. ಪಾವಗಡ ತಾಲ್ಲೂಕಿನ ಶ್ರೀನಿವಾಸ್ ಬಾಬು ಎಂಬ ವ್ಯಕ್ತಿಯು , ಚಿತ್ರದುರ್ಗ ಲೊಕಸಭಾ ಸಂಸದರಾದ ಶ್ರೀ ಗೋವಿಂದ್ ಕಾರಜೋಳ ಅವರ ವಿರುದ್ಧ ನಿರಂತರವಾಗಿ ಅವಹೇಳನಕಾರಿ , ಮಾನಹಾನಿಕರ ಹಾಗೂ ಗೌರವಕ್ಕೆ ದಕ್ಕೆ ತರುವ ರೀತಿಯ ಪೋಸ್ಟ್ ಗಳನ್ನು ಪ್ರಕಟಿಸುತ್ತಿದ್ದಾರೆಂದು ದೂರಿದ ಅವರು ದೇಶದ ಪ್ರಮುಖ ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವನ್ನು ಉದ್ದೇಶಪೂರ್ವಕವಾಗಿ "ಬ್ಲೂ ಜೆಪಿ" ಎಂಬ ಅವಹೇಳನಕಾರಿ ಪದ ಮತ್ತು ನಮ್ಮ ಪಕ್ಷದ ಕಾರ್ಯಕರ್ತರನ್ನು "ದಲ್ಲಾಳಿಗಳು" ಎಂಬ ಪದಗಳನ್ನು ಬಳಸಿ ನಿಂದಿಸುತಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಭಾವನೆಗಳಿಗೆ ದಕ್ಕೆ ಉಂಟಾಗುತ್ತಿದೆ ಇಂತಹ ಪೋಸ್ಟ್ಗಳು ಸಾರ್ವಜನಿಕರಲ್ಲಿ ದ್ವೇಷ, ವೈಮನಸ್ಸು ಮತ್ತು ಉದಿಗ್ನತೆ ಉಂಟು ಮಾಡುವ ಸಾಧ್ಯತೆ ಇದ್ದು , ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ತರುವಂತಿ...