Posts

Image
  ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟ  ಕೊಡುಗೆ ನೀಡಿದವರು ಶ್ರೀಶೇಷ ದಾಸರು -ಮುರಳಿಧರ ಕುಲಕರ್ಣಿ   ಜಯ ಧ್ವಜ ನ್ಯೂಸ್ , ರಾಯಚೂರು, ಏ.25- ಗದ್ವಾಲ ಸಂಸ್ಥಾನ ರಾಜನಿಂದ ಅವಮಾನಿತಗೊಂಡು, ಜೀವನದಲ್ಲಿ  ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದಂತ ಶೇಷಪ್ಪನವರು  ಚಿಂತ್ರವಲ್ಲಿಯ ಪ್ರಾಣದೇವರ ಸೇವೆಯನ್ನು ಮಾಡಿ ಶ್ರೀ ವಿಜಯದಾಸರ ಅನುಗ್ರಹದಿಂದ ಶೇಷ ದಾಸರಾಗಿ ದಾಸ ಸಾಹಿತ್ಯಕ್ಕೆ ವಿಶೇಷ ಶ್ರೇಷ್ಠ ಕೊಡುಗೆ ನೀಡಿದ ಮಹನೀಯರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.  ಅವರು ನಿನ್ನೆ ದಾಸ ಶ್ರೇಷ್ಠರಾದ ಶ್ರೀ ಶೇಷ ದಾಸರ 208ನೆಯಆರಾಧನೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.     ಶ್ರೀಶೇಷ ದಾಸರು 43 ಸುಳಾದಿಗಳನ್ನು, 14 ಉಗಾ ಭೋಗ ಗಳನ್ನು, 4 ಪದ್ಯಗಳನ್ನು, ಪಂಚ ಪ್ರಮೇಯಗಳನ್ನು ,ಗದ್ಯಗಳನ್ನು ,ಶ್ರೀ ವಿಜಯರಾಯರ  ಚಕ್ರಾಬಾಜ್ಜ ಮಂಡಲ ವಿವರವನ್ನು ರಚಿಸಿದ್ದಾರೆ. ಇವುಗಳಲ್ಲಿ ಪ್ರಾರ್ಥನಾ ಸುಳಾದಿ, ಜ್ಞಾನ ಯಜ್ಞ ಸುಳಾದಿ,ವಾರದ ಸುಳಾದಿ, ಶ್ರೀ ಲಕ್ಷ್ಮೀದೇವಿ ,ಸುಳಾದಿ ಮುಂತಾದವುಗಳೆಲ್ಲ ತುಂಬಾ ಪ್ರಸಿದ್ಧಿಯನ್ನು ಪಡೆದಿವೆ, ಎಂದು ಹೇಳಿದರು.   ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರುರವರು ಮಾತನಾಡಿ, ದೈವಾಂಶ ಸಂಭೂತರಾದ ಶ್ರೀ ಶೇಷ ದಾಸರು ಜನಸಾಮಾನ್ಯರಿಗೆ ಸನ್ಮಾರ್ಗದ ಹಾದಿ ತೋರಿಸುವ ಕಾರ್ಯವನ್...
Image
  ಸಿಇಟಿ ಪರೀಕ್ಷೆಯಲ್ಲಿ ಜನಿವಾರ ನಿರ್ಬಂಧ ಖಂಡನೀಯ- ಪಲಗುಲ ನಾಗರಾಜ ಜಯ ಧ್ವಜ ನ್ಯೂಸ್ , ರಾಯಚೂರು, ಏ.24- ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಧರಿಸಿದ್ಧ ಜನಿವಾರ ತೆಗೆಸಿದ್ದು ರಾಜ್ಯ ಸರ್ಕಾರದ ನೀತಿ ಖಂಡನೀಯ  ಎಂದು ಆರ್ಯವೈಶ್ಯ ಸಮಾಜದ ಚಿಂತಕ ಪಲುಗುಲ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ದೇಶ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ ಭೂಮಿ ಆಗಿರುತ್ತದೆ. ಆಯಾ ಜಾತಿಗಳಲ್ಲಿ ಅವರದೇ ಆದ ಸಂಪ್ರದಾಯ ಇರುತ್ತದೆ ಹಾಗಂತ ಪರೀಕ್ಷೆ ಬರೆಯುವಾಗ ಹೀಗೆಯೇ ಬರಬೇಕು ಎಂದು ಮುಂಚೆಯೇ ಆದೇಶ ಹೊರಡಿಸಬೇಕು ಅದು ಬಿಟ್ಟು ಪರೀಕ್ಷೆ ಪ್ರವೇಶಿಸುವಾಗ ಜನಿವಾರ ಹಾಕಬಾರದು,ಉಡುದಾರ ಹಾಕಬಾರದು ಎನ್ನುವ ಕಟ್ಟಪ್ಪಣೆ ಒಂದು ಸಮುದಾಯವನ್ನು ಅವಮಾನ ಮಾಡಿದಂತೆ ಆಗುತ್ತದೆ. ಇತ್ತೀಚೆಗೆ ವಿಶೇಷ ತಂತ್ರಜ್ಞಾನದ ಸಲಕರಣೆ ಬಂದು ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಸುತ್ತವೆ ಆದರೆ ಅದೇ ಮಾನದಂಡ ಇಟ್ಟುಕೊಂಡು ಜನಿವಾರ ಹಾಕಬಾರದು ಎನ್ನುವ ನೀತಿ ಸರಿಯಲ್ಲ, ಜನಿವಾರದಲ್ಲಿ ಏನಾದರೂ ತಂತ್ರಜ್ಞಾನದ ಸಾಧನ ಇಟ್ಟುಕೊಂಡು ಬರಲು ಸಾಧ್ಯವೇ ?. ಪರೀಕ್ಷೆ ಹೆಸರಲ್ಲಿ ಜಾತಿಗೆ ಅವಮಾನ ಮಾಡುವುದು ಖಂಡಿಸಲಾಗುತ್ತದೆ. ಜನಿವಾರ , ಉಡುದಾರ ಪರೀಕ್ಷೆಗೆ ಅಡ್ಡ ಬರುವುದೇ ಈ ಹಿಂದೆಯೂ ಜನಿವಾರ ತೆಗೆಸಿದರೆ ಮಾತ್ರ ಪರೀಕ್ಷೆಗೆ ಅವಕಾಶ ಎಂದಿದ್ದರು ಆದರೆ ಭವಿಷ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯಗಳನ್ನು ಬಿಡುವ ಮನಸ್ಸಿಲ್ಲದಿದ್ದರು ಬದುಕು ಕಟ್...
Image
  ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 21ನೇ ಸ್ಥಾನಕ್ಕೆ ಜಿಗಿತ : ಬಿ.ವಿ.ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಖದೇವ್ ಗೆ 625 ಕ್ಕೆ 625 ಅಂಕ: ಸಚಿವ ಬೋಸರಾಜು  ಶ್ಲಾಘನೆ ಜಯ ಧ್ವಜ ನ್ಯೂಸ್ ,ರಾಯಚೂರು, ಏ. 23-  ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆಯು ಅತ್ಯುತ್ತಮ ಸಾಧನೆ ತೋರಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕಳೆದ ವರ್ಷ  30ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ 94.41% ಫಲಿತಾಂಶದೊಂದಿಗೆ ಬರೋಬ್ಬರಿ 9 ಸ್ಥಾನಗಳ ಬೃಹತ್ ಜಿಗಿತ ಕಂಡು 21ನೇ ಸ್ಥಾನಕ್ಕೆ ಏರಿದೆ. ಈ ಅಭೂತಪೂರ್ವ ಸಾಧನೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ  ಎನ್.ಎಸ್. ಬೋಸರಾಜು ಅವರು  ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಮಾನ್ವಿ ತಾಲೂಕಿನ ಬಿ.ವಿ.ಆರ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಖದೇವ್ ಅವರು 625 ಕ್ಕೆ 625 ಪೂರ್ಣ ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಹಾಗೂ ಇಡೀ ರಾಜ್ಯಕ್ಕೆ ಕೀರ್ತಿ ತಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಸುಖದೇವ್ ಅವರ ಈ ಅಸಾಧಾರಣ ಸಾಧನೆಗೆ ಸಚಿವರು ವಿಶೇಷವಾಗಿ ಶ್ಲಾಘಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವ ಎನ್.ಎಸ್. ಬೋಸರಾಜು ಅವರು, "ರಾಯಚೂರು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಅತ್ಯುತ್ತಮಗೊಳ್ಳುತ್ತಿರುವುದಕ್ಕೆ ಈ ಫಲಿತಾ...
Image
  ಗಾಯತ್ರಿ ಭವನ: ಬಾಗಿಲು ಚೌಕಟ್ಟು ಸ್ಥಾಪನೆ.                                                                 ಜಯ ಧ್ವಜ ನ್ಯೂಸ್ , ರಾಯಚೂರು, ಏ.23-  ಇಂದು ನಗರದ ನವೋದಯ ಆಸ್ಪತ್ರೆ ಹತ್ತಿರ ಇರುವ ಬ್ರಾಹ್ಮಣ ಸಮಾಜದ ಹೆಮ್ಮೆಯ ಗಾಯತ್ರಿ ಭವನದ ನೂತನ ಬಾಗಿಲು ಚೌಕಟ್ಟು ಕೂಡಿಸಲಾಯಿತು. ಈಗಾಗಲೆ ಅನೇಕ ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದ ಹಿರಿಯರ ಸಹಕಾರದೊಂದಿಗೆ ಗಾಯತ್ರಿ ಭವನ ಕಟ್ಟಡದ ಕಾಮಗಾರಿ ಭರದಿಂದ ಸಾಗಿದ್ದು ಇಂದು ಮುಖ್ಯ ದ್ವಾರ ಚೌಕಟ್ಟು ಸ್ಥಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ  ಸಂದರ್ಭದಲ್ಲಿ ಎಕೆಬಿಎಂಎಸ್ ರಾಯಚೂರು ಜಿಲ್ಲಾ ಪ್ರತಿನಿಧಿ ರಮೇಶ ಕುಲಕರಣಿ, ಜಿಲ್ಲಾ ಸಂಚಾಲಕ  ವೇಣುಗೋಪಾಲ ಇನಾಮ್ದಾರ್, ಕಾರ್ಯಧ್ಯಕ್ಷರಾದ ವೆಂಕಟೇಶ್ ದೇಸಾಯಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಜಯಕುಮಾರ ಗಬ್ಬೂರು, ನಗರ ಸಂಚಾಲಕರಾದ ರಾಮರಾವ್ ಗಣೆಕಲ್, ಹಿರಿಯರಾದ ನಂದಾಪುರ ಶ್ರೀನಿವಾಸ, ಪ್ರಾಣೇಶ ಮುತಾಲಿಕ್, ಡಾ.ಆನಂದ್ ತೀರ್ಥ ಪಡ್ನೀಸ್ ,ಟಿ ರಮೇಶ್ ,ಕೋಲಾರ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಹಾಗೂ ವಿಷ್ಣು ತೀರ್ಥ ಸಿರವಾರ, ರಮಾಕಾಂತ್ ರಾವ್ ಗುಂಜಳ್ಳಿ, ಕಿಶನ್ ರಾವ್ ಎಲ್.ಕೆ. ದ...
Image
  ಆದಿಕವಿ ಶ್ರೀ ವಾಲ್ಮೀಕಿ ವಿವಿ : ಶ್ರೀ ಭಗೀರಥ ಜಯಂತಿ ಆಚರಣೆ ತಪೋನಿಷ್ಠೆಗೆ ಆದರ್ಶ ಮಹರ್ಷಿ ಭಗೀರಥ - ಪ್ರೊ.ಪಿ.ಭಾಸ್ಕರ್ ಜಯ ಧ್ವಜ ನ್ಯೂಸ್. ರಾಯಚೂರು,ಏ.23- ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತರುವಲ್ಲಿ ಮಹರ್ಷಿ ಭಗೀರಥರ ಪಾತ್ರ ಅಪ್ರತಿಮವಾದುದು, ಪೂರ್ವಜರ ಆತ್ಮಕ್ಕೆ ಶಾಂತಿ ಒದಗಿಸಿದ ಭಗೀರಥರ ಸಾಹಸವನ್ನು ಈ ದಿನವು ಅಸಾಧಾರಣ ಪರಿಶ್ರಮ, ಛಲ ಮತ್ತು ಸಮರ್ಪಣಾ ಮನೋಭಾವವನ್ನು ಸಂಕೇತಿಸುತ್ತದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಾಣಿಜ್ಯ ನಿಕಾಯದ ಡೀನರಾದ ಪ್ರೊ.ಪಿಭಾಸ್ಕರ್ ಅವರು ತಿಳಿಸಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‌ನಲ್ಲಿ ಶ್ರೀ ಭಗೀರಥ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿದ ಅವರು, ಹಿಂದೂ ಪುರಾಣಗಳಲ್ಲಿ ಛಲಬಿಡದ ರಾಜಋಷಿಯಾಗಿ ಪರಿಚಿತರಾದ ಇವರು ಸಕಲ ಜೀವರಾಶಿಗೆ ಅನುಕೂಲವಾಗುವಂತೆ ನಮ್ಮ ದೇಶದ ಜೀವನದಿ ಅಷ್ಟೆ ಅಲ್ಲದೇ ಗಂಗೆಯನ್ನು ಹಿಮಾಲಯದಿಂದ ಭೂಮಿಗೆ ತಂದು ಜೀವಧಾತುಗಳಿಗೆ ಸನ್ಮಾರ್ಗವನ್ನು ಕಲ್ಪಿಸಿದ ಮಹಾಪುರುಷರು. ಪ್ರಯತ್ನ ಪರಾಕಾಷ್ಠೆಯ ಭಗೀರಥ ಪ್ರಯತ್ನವೆಂದು ಜನಜನಿತವಾಗಿದ್ದು ತನ್ನ ಸಾಹಸಕ್ಕೆ ಗುರುಭಕ್ತಿಗೆ ತಪೋನಿಷ್ಠೆಗೆ ಆದರ್ಶವಾಗಿ ಕಂಗೊಳಿಸುತ್ತಾರೆ ಎಂದು ಅವರು ಹೇಳಿದರು.   ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯ ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಕಲಾ ನಿಕಾಯ ಡೀನರಾದ ಡ...
Image
ನಗರದಲ್ಲಿ ತಾಪಮಾನ ಏರಿಕೆ: ಸಾರ್ವಜನಿಕರ ರಕ್ಷಣೆಗಾಗಿ ಶಾಶ್ವತ ನೆರಳು ಹಾಗೂ ನೀರಿನ ವ್ಯವಸ್ಥೆಗೆ ಪ್ರಗತಿಪರ ಸಂಘಟನೆಗಳ ಒತ್ತಾಯ   ಜಯ ಧ್ವಜ ನ್ಯೂಸ್ , ರಾಯಚೂರು,ಏ.23- ನಗರದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ, ಇಂದು ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಮಾನವೀಯ ದೃಷ್ಟಿಕೋನದಿಂದ  ಸಂಘಟನೆಗಳ ಪ್ರತಿನಿಧಿಗಳು ನಗರದ ಪ್ರಮುಖ ವೃತ್ತಗಳಾದ ಬಸವೇಶ್ವರ ವೃತ್ತ ಹಾಗೂ ಗಂಜ್ ವೃತ್ತಗಳಿಗೆ ಭೇಟಿ ನೀಡಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲುವ ವಾಹನ ಸವಾರರಿಗೆ ಶಾಶ್ವತ ನೆರಳು ಒದಗಿಸುವ ಉದ್ದೇಶದಿಂದ ಪರದೆ (ಶೇಡ್) ವ್ಯವಸ್ಥೆಯನ್ನು ಪರಿಶೀಲಿಸಿ, ಸೂಕ್ತ ಸಲಹೆಗಳನ್ನು ನೀಡಿದರು. ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಲ್ಲಿ ಸಿಗ್ನಲ್‌ಗಳಲ್ಲಿ ನಿಂತುಕೊಳ್ಳುವ ನಾಗರಿಕರಿಗೆ ನೆರಳು ಸೌಲಭ್ಯ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇದಾದ ನಂತರ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ ಪ್ರತಿನಿಧಿ ಮಂಡಳಿ, ಈ ಕಾಮಗಾರಿಯನ್ನು ಆದ್ಯತೆಯಿಂದ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿತು. ಜೊತೆಗೆ, ನಗರದಲ್ಲಿನ ಜನನಿಭೀಡ ಪ್ರದೇಶಗಳಲ್ಲಿ ನೀರಿನ ಅರವಟ್ಟಿಗೆ (ಕುಡಿಯುವ ನೀರಿನ ತಾತ್ಕಾಲಿಕ ಕೇಂದ್ರಗಳು) ವ್ಯವಸ್ಥೆ ಮಾಡಬೇಕು ಹಾಗೂ ಪ್ರಮುಖ ರಸ್ತೆಗಳ ಮೇಲೆ ನೀರಿನ ಟ್ಯಾಂಕರ್ ಅಥವಾ ಅಗ್ನಿಶಾಮಕ ವಾಹನಗಳ ಮೂಲಕ ...
Image
  ಸ್ಟೇಶನ ರಸ್ತೆಯಲ್ಲಿ ನಿರಂತರ ಅಪಘಾತ; ರಿಂಗ್ ರಸ್ತೆಗೆ ಬಾಬುರಾವ್ ಒತ್ತಾಯ ಜಯ ಧ್ವಜ ನ್ಯೂಸ್ ,ರಾಯಚೂರು,ಏ.23-  ರಾಷ್ಟ್ರೀಯ ಹೆದ್ದಾರಿ 167ರ ದುಸ್ಥಿತಿ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಭಿವೃದ್ಧಿಯ ಸಂಕೇತವಾಗಬೇಕಾದ ಈ ರಸ್ತೆ ಇದೀಗ ಅಪಘಾತಗಳ ಸಾವಿನ ಬಲೆಯಾಗಿ ಪರಿಣಮಿಸಿದೆ. ನವೋದಯ ವೈದ್ಯಕೀಯ ಶಿಕ್ಷಣ ಸಂಸ್ಥೆ ವೃತ್ತದಿಂದ ಹೈದರಾಬಾದ್ ಬೈಪಾಸ್ ವರೆಗೆ ಹರಡುವ ಈ ಹೆದ್ದಾರಿಯಲ್ಲಿ ಇದುವರೆಗೆ ಸುಮಾರು 800ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವುದು ಆತಂಕಕಾರಿ ಸಂಗತಿಯಾಗಿದ್ದು, ಇತ್ತೀಚೆಗೆ ನಡೆದ ಅಪಘಾತದಲ್ಲಿ  ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆಗೆ  ಸಮಾಜ ಸೇವಕ ಹಾಗೂ ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಡಾ. ಬಾಬುರಾವ್ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಹಾಗೂ ವಾಹನ ಸವಾರರ ಪ್ರಕಾರ, ಹೆದ್ದಾರಿಯ ಕಿರಿದಾದ ವಿನ್ಯಾಸ, ಸಮರ್ಪಕ ದಾರಿದೀಪಗಳ ಕೊರತೆ, ಎಚ್ಚರಿಕಾ ಸೂಚನಾ ಫಲಕಗಳ ಅಭಾವ ಹಾಗೂ ನಿಯಂತ್ರಣರಹಿತ ವೇಗದ ಸಂಚಾರವೇ ಅಪಘಾತಗಳ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಬೆಳಕಿನ ಕೊರತೆಯಿಂದ ದೃಶ್ಯತೆ ಕುಂದಿ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಹೆದ್ದಾರಿಯ ಹಲವು ಭಾಗಗಳಲ್ಲಿ ಅಪಾಯಕಾರಿ ತಿರುವುಗಳು ಮತ್ತು ವಿಭಜನೆ ಇಲ್ಲದ ರಸ್ತೆಯ ಕಾರಣದಿಂದ ಮುಖಾಮುಖಿ ಡಿಕ್ಕಿಗಳು ಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಸ್ಥಳಗಳು...