Posts

Image
  ಕಲಾ ಸುಂಕುಲ ಸಂಸ್ಥೆಯಿಂದ ಬಸವ ಜಯಂತಿ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ:   ಪ್ರಶಸ್ತಿಗಳು ಮನುಷ್ಯನ ಯಶಸ್ಸಿನ ಮೆಟ್ಟಿಲುಗಳು- ಕೆ ಶಿವನಗೌಡ ನಾಯಕ    ಜಯ ಧ್ವಜ ನ್ಯೂಸ್ ,ರಾಯಚೂರು ಏ. 19-   ಮನುಷ್ಯ ತನ್ನ ಬದುಕಿನಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ದಾರಿದೀಪವಾಗಬೇಕು  ಯಾವುದೇ ನಿರೀಕ್ಷೆಯಿಲ್ಲದೆ ಸಾಧನೆ ಮಾಡುವುದು ವಿಶೇಷ ನಿಮ್ಮ ಪರಿಶ್ರಮದಿಂದ ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ  ನೀವು ಮಾಡುವ ಸಮಾಜ ಮುಖಿ ಕೆಲಸ ಆಗಿರಬೇಕು. ಪ್ರಶಸ್ತಿಗಳು ಮನುಷ್ಯನ ಯಶಸ್ಸಿನ ಮೆಟ್ಟಿಲುಗಳು ಎಂದು ಮಾಜಿ ಸಚಿವ ಕೆ ಶಿವನಗೌಡ ಹೇಳಿದರು.  ಅವರಿಂದು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಏರ್ಪಡಿಸಿದ್ದ ಬಸವ ಜಯಂತಿ ಅಂಗವಾಗಿ ಸಂಗೀತೋತ್ಸವ ಪುಸ್ತಕ ಲೋಕಾರ್ಪಣೆ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆಯನ್ನು ಮಾಡಿ  ಮಾತನಾಡಿ ಸಂಗೀತಕ್ಕೆ ರೋಗ ನಿರೋಧಕ ಶಕ್ತಿ ಇದೆ. ಕಲಾ ಸುಂಕುಲ ಸಂಸ್ಥೆ ರಾಯಚೂರು ಜಿಲ್ಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿರುವ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.  ಮುಕ್ಕಣ್ಣ ಕರಿಗಾರ್ ಬರೆದಿರುವ ಮುಕ್ಕಣ್ಣ ಕಂಡ ಬಸವಣ್ಣ ಪುಸ್ತಕ ಮತ್ತು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾಕ್ಟರ್ ಸತೀಶ್ ಕುಮಾರ್ ಹೊಸಮನಿ ಅವರು ಬರೆದಿರುವ ಶರಣರ ದರ್ಶನ ಎರಡು ಪುಸ್ತಕಗಳು ಇಂದು ಲೋಕಾರ್ಪ...
Image
  ಸೆಕ್ಷನ್ 4(1)ಎ, 4(1)ಬಿ ಮಾಹಿತಿ ಸಾರ್ವಜನಿಕವಾಗಿ ಪ್ರಕಟಿಸುವಂತೆ ಸೂಚನೆ - ವೆಂಕಟ್ ಸಿಂಗ್  ಜಯಧ್ವಜ ನ್ಯೂಸ್  ,ರಾಯಚೂರು, ಏ.18- ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1)ಎ, 4(1)ಬಿ ರಂತೆ ಇಲಾಖೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್ ಸಿಂಗ್ ಹೇಳಿದರು. ಅವರಿಂದು ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಹಿತಿ‌ ಹಕ್ಕು ಕಾರ್ಯಾಗಾರ ನಂತರ  ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂದಿಲ್ಲಿ ಜಿಲ್ಲೆಯ  ಜಿಲ್ಲಾ, ತಾಲೂಕು, ಗ್ರಾಮೀಣ ಹಂತದ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗರ ನಡೆಸಲಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯ‌ ಮೂಲ ಆಶಯವೇ ಉತ್ತರದಾಯಿತ್ವ ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದಾಗಿದೆ. ಹೀಗಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಮ್ಮ ಕಚೇರಿ ಮಾಹಿತಿಯನ್ನು ಸ್ವಯಂ ಪ್ರೇರಿತರಾಗಿ ಕಾಯ್ದೆಯ ಸೆಕ್ಷನ್ 4(1)ಎ, 4(1)ಬಿ ರಂತೆ ಇಲಾಖೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿದಲ್ಲಿ ಕಚೇರಿಗೆ ಬರುವ ಅರ್ಜಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿಸಲಾಗಿದೆ ಎಂದರು. ಕಲಬುರಗಿ ವಿಭಾಗದ ಪ್ರತಿ ಜಿಲ್ಲೆಯಲ್ಲಿ ಈ ರೀತಿಯ ಕಾರ್ಯಾಗಾರ ಆಯೋಜಿಸಿ ಅಧಿಕಾರಿಗಳಲ್ಲಿ ಕಾಯ್ದೆ ಮಹತ್ವ ಮತ್ತು ಉದ್ದೇ...
Image
ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದಿರುವುದಕ್ಕೆ ಮಹಿಳಾ ಮೀಸಲಾತಿ ಮಸೂದೆ ಸೋಲು- ಡಾ.ರಝಾಕ್ ಉಸ್ತಾದ್  ಜಯ ಧ್ವಜ ನ್ಯೂಸ್ , ರಾಯಚೂರು , ಏ.18 - ಕೇಂದ್ರ ಸರಕಾರ ವಿಶೇಷ ಅಧಿವೇಶನದ ಮೂಲಕ ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಂಡಿಸಲಾದ ಮೂರು ಮಸೂದೆಗಳಿಗೆ ಅಗತ್ಯ ಬಹುಮತ ಪಡೆಯದೇ ಸೋಲಾಗಿದೆ, ಯಾವುದೇ ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಗೊತ್ತಿದ್ದರೂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಸೂದೆ ಮಂಡಿಸಿರುವದು ಇವರ ಬದ್ದತೆಯ ಪ್ರಶ್ನೆಯಾಗಿದೆ. ಇದು ಮಹಿಳಾ ಮೀಸಲಾತಿ ವಿರುದ್ದ ನಡೆದ ಬೆಳವಣಿಗೆಯಲ್ಲ, ಕೇಂದ್ರ ಸರಕಾರದ ನಿರಂಕುಶ ಆಡಳಿತಕ್ಕೆ ಆಗಿರುವ ಸೋಲು ಎಂದು ಕೆಪಸಿಸಿ ಮಾದ್ಯಮ ವಿಭಾಗ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ ದೂರಿದ್ದಾರೆ. ಬಿಜೆಪಿ ಪಕ್ಷಕ್ಕೆ ಮಹಿಳಾ ಮೀಸಲಾತಿ ಜಾರಿಗೊಳಿಸುವ ಯಾವುದೇ ಇಚ್ಚೆ ಇಲ್ಲ, ಯಾಕೆಂದರೆ 2023ರ ಮಹಿಳಾ ಮೀಸಲಾತಿ ಕಾಯ್ದೆ ರಾಷ್ಟ್ರಪತಿಗಳ ಅಂಕಿತವಾಗಿ ಮೂರು ವರ್ಷಗಳಾದರೂ ಗೆಜೆಟ್ ಅಧಿಸೂಚನೆ ಹೊರಡಿಸದೇ ಇರುವದು ಮಹಿಳಾ ಮೀಸಲಾತಿಯ ಬಗ್ಗೆ ಇವರಿಗೆ ಇರುವ ಕಾಳಜಿ ಎದ್ದು ಕಾಣುತ್ತದೆ. ಎಪ್ರಿಲ್ 16, 2026ಕ್ಕೆ ಮಹಿಳಾ ಮೀಸಲಾತಿ ಮಸೂದೆ 2023ಕ್ಕೆ ಅಧಿಸೂಚನೆ ಹೊರಡಿಸುವದು ಎಂದರೆ ಮೂರು ವರ್ಷ ಯಾವ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಇದ್ದರೂ ಎನ್ನುವದು ದೇಶದ ಜನರಿಗೆ ಇವರು ಹೇಳಬೇಕು. ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ಮಂಡಿಸುವಾಗ ಕಾಯ್ದೆ ಜಾರಿಯಲ್ಲಿದೆಯೇ ...
Image
  ಕಾಂಗ್ರೆಸ್ ಪಕ್ಷದ ಮಹಿಳಾ ಮೀಸಲಾತಿ ವಿರೋಧ ನೀತಿಯು ದೇಶದ ದುರಂತದ ಸಂಗತಿ- ರವೀಂದ್ರ ಜಲ್ದಾರ್ ಖಂಡನೆ. ಜಯ ಧ್ವಜ ನ್ಯೂಸ್ , ರಾಯಚೂರು ,ಏ.18-  ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿ ಎಂದಿಗೂ ಬದಲಾಗುವುದಿಲ್ಲ ಕಾಂಗ್ರೆಸ್ ಪಕ್ಷದ ಅಗ್ರ ನಾಯಕರಾದ  ಸೋನಿಯಾ ಗಾಂಧಿ ಮತ್ತು  ಪ್ರಿಯಾಂಕ ಗಾಂಧಿ ಅವರು ಸಹ ಮಹಿಳೆಯರಾಗಿದ್ದು ಮಹಿಳೆಯರಿಗಾಗಿ ಮೀಸಲಾತಿ ಕೊಡುವ ಮಹಾನ್ ಕ್ರಾಂತಿಕಾರಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದು ಅತ್ಯಂತ ದುರಂತದ ಸಂಗತಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ರವೀಂದ್ರ ಜಲ್ದಾರ್  ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಪಾರ್ಟಿ ಕೇವಲ ತನ್ನ ಕುಟುಂಬಕ್ಕೆ ಲಾಭವಾಗುವ ಯೋಜನೆಯನ್ನು ನೀತಿಯನ್ನು ಮಾತ್ರ ಸ್ವಾಗತ ಮಾಡುತ್ತದೆ ಎಂದು ಆರೋಪಿಸಿರುವ  ಅವರು ಮಹಿಳೆಯರ ಹಕ್ಕುಗಳ ಮೇಲೆ ಕೇವಲ ಭಾಷಣ ಮಾಡುವ ಕಾಂಗ್ರೆಸಿಗರು ಶೇ. 33% ಮಹಿಳಾ ಮೀಸಲಾತಿ ಬಿಲ್ ಮಂಡಿಸಿ ಮತಕ್ಕೆ ಹಾಕಿದಾಗ ಮಸೂದೆ ವಿರುದ್ಧ ಮತ ಚಲಾಯಿಸಿ  ಕೇಕೆ ಹಾಕುತ್ತಾ ಘೋಷಣೆ ಕೂಗತ್ತಾ ಸದನದಲ್ಲಿ ಯುದ್ಧ ಗೆದ್ದವರಂತೆ ನಡೆದುಕೊಂಡರು.ಆದರೆ ತಾವು ದೇಶದ ಮಹಿಳೆಯರ ಹಕ್ಕಿನ ವಿರುದ್ಧ ಸ್ವಾಭಿಮಾನದ ವಿರುದ್ಧ ಅವರ ಆತ್ಮಗೌರವದ ವಿರುದ್ಧ ಮತ ಹಾಕುತ್ತಿದ್ದೇವೆ ಎಂದು ಕಾಂಗ್ರೆಸ್' ನಾಯಕರಿಗೆ ಅನಿಸದೆ ಹೋದದ್ದು ನಿಜಕ್ಕೂ ದುರಂತ.   ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ...
Image
  ಸುಧಾಬಾಯಿ ನರಸಿಂಗರಾವ್ ದೇಶಪಾಂಡೆ ನಿಧನ.    ಜಯ ಧ್ವಜ ನ್ಯೂಸ್, ರಾಯಚೂರು, ಏ.18- ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ  ನರಸಿಂಗರಾವ್ ದೇಶಪಾಂಡೆ ಮುದುಗಲ್ ಇವರ ಧರ್ಮಪತ್ನಿ  ಸುಧಾ ಬಾಯಿ ದೇಶಪಾಂಡೆ ಮುದುಗಲ್(72)  ಅವರು ಇಂದು  ಮಧ್ಯಾಹ್ನ 2ಗಂಟೆಗೆ  ಬೆಂಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ  ದೈವಾಧೀನರಾಗಿದ್ದಾರೆ . ಮೃತರ ಅಂತ್ಯಕ್ರಿಯೆ  ಇಂದು ಸಂಜೆ 6 ಗಂಟೆಗೆ ಬೆಂಗಳೂರಿನಲ್ಲಿ  ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 
Image
  ನಾಯಕ ಸಮಾಜದಿಂದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನ ಆಚರಣೆ ಜಯ ಧ್ವಜ ನ್ಯೂಸ್ ,ರಾಯಚೂರು, ಏ.18-  ನಗರದಲ್ಲಿನ ಆದಿಕವಿ ಭಗವಾನ್ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಇಂದು ನಾಯಕ ಸಮಾಜದಿಂದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಹಾಗೂ ಶ್ರೀ ಹರಿಹರ ಬುಕ್ಕರಾಯರು, ಶ್ರೀ ಗಂಡುಗಲಿ ಕುಮಾರರಾಮ ಹಾಗೂ ಶ್ರೀಕೃಷ್ಣ ದೇವರಾಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಹಿರಿಯ ಪತ್ರಕರ್ತರು ಹಾಗೂ ಸಮಾಜದ ಮುಖಂಡರಾದ ಭೀಮರಾಯ ಹದ್ದಿನಾಳ ಅವರು ಮಾತನಾಡಿ, ಪ್ರತಿ ವರ್ಷ ಎಪ್ರಿಲ್ 18 ರಂದು ರಾಜ್ಯದ ಅನೇಕ ನಗರ ಪಟ್ಟಣ ಹಾಗೂ ಗ್ರಾಮದಲ್ಲಿಯೂ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನ ದಿನವನ್ನಾಗಿ ಆಚರಿಸಲಾಗುತ್ತಿದೆ.    ನಾಯಕ ರತ್ನಗಳಾದ ಹರಿಹರ ಬುಕ್ಕರಾಯರು (ಹಕ್ಕ-ಬುಕ್ಕ) ಗಂಡು ಲಿ ಕುಮಾರರಾಮ, ಶ್ರೀಕೃಷ್ಣದೇವರಾಯರ ಸ್ಮರಣೆ ಮಾಡಲಾಗುತ್ತದೆ.  ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕ ಬುಕ್ಕರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದಂತೆ ವಾಲ್ಮೀಕಿನಾಯಕ ಸಮುದಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿಮತ್ತು ಸಾಮಾಜಿಕವಾಗಿ ಮುಂದೆ ಬರಬೇಕು. ಹಕ್ಕ ಬುಕ್ಕರು, ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯ ಇವರೆಲ್ಲರ ಧೈರ್ಯ, ಸಾಹಸಗಳನ್ನು ಆದರ್ಶವಾಗಿ ಮಾಡಿಕೊಂಡುಸಮುದಾಯ ತಮ್ಮ ದೈನಂದಿನ ಜೀವನದಲ್ಲಿಅಭಿವೃದ್ಧಿಯಾಗಬೇಕಾಗಿದೆ ಎಂದು ಕರೆ ...
Image
  ಉರಿ ಬಿಸಿಲಿನ ತೀವ್ರತೆ ಹೆಚ್ಚಳದಿಂದ  ರಾಯಚೂರು ಜನತೆ ತತ್ತರ :  ಟ್ರಾಫಿಕ್ ಸಿಗ್ನಲ್ ಗಳಲ್ಲಿ ನೆರಳು ಪರದೆ ಅಳವಡಿಸಲು ಅಂಬಾಜಿರಾವ್ ಒತ್ತಾಯ.   ಜಯ ಧ್ವಜ ನ್ಯೂಸ್ ,ರಾಯಚೂರ,18- ಉರಿ ಬಿಸಿಲಿನ ತೀವ್ರತೆ ತಗ್ಗಿಸಲು ಮಹಾನಗರ ಪಾಲಿಕೆ ಕ್ರಮ ವಹಿಸಬೇಕೆಂದು ಸಮಾಜ ಸೇವಕ ಅಂಬಾಜಿರಾವ್ ಮೈದರ್ ಕೋರ್ ಒತ್ತಾಯಿಸಿದ್ದಾರೆ.  ಇತ್ತೀಚಿನ ದಿನಗಳಲ್ಲಿ ರಾಯಚೂರ ನಗರದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿರುವುದು ಸಾರ್ವಜನಿಕ ಜೀವನವನ್ನು ಸಂಕಷ್ಟಕರವಾಗಿಸಿದೆ. ನಗರದಲ್ಲಿನ ರಸ್ತೆಗಳಲ್ಲಿ ಸಂಚಾರ ಮಾಡುವ ಜನರಿಗೆ, ವಿಶೇಷವಾಗಿ ನಡೆದು ಹೋಗುವವರು, ದ್ವಿಚಕ್ರ ವಾಹನ ಚಾಲಕರು ಹಾಗೂ ಆಟೋ ಪ್ರಯಾಣಿಕರಿಗೆ ಉರಿ ಬಿಸಿಲು ಮತ್ತು ಬಿಸಿ ಗಾಳಿಯಿಂದ ತೀವ್ರ ತೊಂದರೆ ಉಂಟಾಗುತ್ತಿದೆ. ಜನರು ಹೊರಗೆ ತಿರುಗಾಡುವುದು ಬೆಂಕಿಯ ನಡುವೆ ಸಾಗುವಂತ ಅನುಭವವಾಗುತ್ತಿದೆ. ಈ ತೀವ್ರ ಪರಿಸ್ಥಿತಿಯನ್ನು ಗಮನಿಸಿದರೂ, ಮಹಾನಗರ ಪಾಲಿಕೆಯ ಸಂಬಂಧಿತ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳತ್ತ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು ನಗರದಲ್ಲಿ ಉಷ್ಣತೆಯನ್ನು ಕಡಿಮೆ ಮಾಡಲು ಮುಖ್ಯ ರಸ್ತೆಗಳಲ್ಲಿ ಹಾಗೂ ವಾರ್ಡ್‌ಗಳ ಒಳರಸ್ತೆಗಳಲ್ಲಿ ನೀರಿನ ಟ್ಯಾಂಕ್‌ಗಳ ಮೂಲಕ ನಿಯಮಿತವಾಗಿ ನೀರು ಸಿಂಪಡಿಸುವಂತಹ ಮೂಲಭೂತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದ್ದರೂ, ಈ ದಿಕ್ಕಿನಲ್ಲಿ ಯಾವುದೇ ಪರಿಣಾಮಕಾರಿ ಕ...