Posts

Image
  ತ್ವರಿತಗತಿಯಲ್ಲಿ‌ ನಾಲೆ ದುರಸ್ತಿಗೊಳಿಸಲು ಸೂಚನೆ:  ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಅಗತ್ಯ ಕ್ರಮ- ಸಚಿವ ಎನ್ಎಸ್ ಬೋಸರಾಜು ಜಯ ಧ್ವಜ ನ್ಯೂಸ್ ,ರಾಯಚೂರು ಮಾ. 𝟮𝟬-  ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ  ಎನ್.ಎಸ್. ಬೋಸರಾಜು ಅವರು ತುಂಗಭದ್ರಾ ಯೋಜನೆಯ ಎಡದಂಡೆ ಕಾಲುವೆಯ ೧೩ನೇ ಮೈಲಿಯಲ್ಲಿ ಕಾಲುವೆ ಒಡೆದ ಸ್ಥಳಕ್ಕೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಾಲುವೆ ಒಡೆದ ಪರಿಣಾಮವಾಗಿ ಉಂಟಾಗಿರುವ ಸಮಸ್ಯೆಗಳನ್ನು ಹಾಗೂ ಸ್ಥಳದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಸಚಿವರು, ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಈಗಾಗಲೇ ದುರಸ್ತಿ ಕಾರ್ಯ ಆರಂಭವಾಗಿದ್ದು, ಕುಡಿಯುವ ನೀರಿನ ಅಭಾವ ಉಂಟಾಗದಂತೆ ತಡೆಯಲು ಸಮರೋಪಾದಿಯಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಕಾಲುವೆಗೆ ಕುಡಿಯುವ ನೀರನ್ನು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬೇಸಿಗೆಯ ಸಮಯವಾಗಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಹಗಲಿರುಳು ಕಾರ್ಯಾಚರಣೆ ನಡೆಸಿ, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಅಗತ್ಯವಿರುವ ಎಲ್ಲಾ ಯಂತ್ರೋಪಕರಣಗಳು ಹಾಗೂ ಕಾರ್ಮಿಕರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನು...
Image
  ಕುರ್ವಕಲಾ ಗ್ರಾಮಕ್ಕೆ ಗ್ರಾಮೀಣ  ಶಾಸಕ ಬಸನಗೌಡ  ದದ್ದಲ್ ಭೇಟಿ:  ಸೇತುವೆ ಕಾಮಗಾರಿ ಪರಿಶೀಲನೆ ಜಯ ಧ್ವಜ ನ್ಯೂಸ್ ರಾಯಚೂರು, ಮಾ.20- ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ಇಂದು ರಾಯಚೂರು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡು ರಾಯಚೂರು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ನೇತೃತ್ವದಲ್ಲಿ ಕುರ್ವಕಲಾ ಗ್ರಾಮಕ್ಕೆ ಭೇಟಿ ನೀಡಿ, ಸೇತುವೆ ಕಾಮಗಾರಿಯ ವೀಕ್ಷಣೆ ನಡೆಸಿದರು. ಭೇಟಿ ಸಂದರ್ಭದಲ್ಲಿ ಶಾಸಕರು, ದೇವಸ್ಥಾನ ಸುತ್ತಲು ಸಂಚರಿಸಿ ವೀಕ್ಷಣೆ ನಡೆಸಿ, ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ಹಲವಾರು ಅಭಿವೃದ್ಧಿ ಕಾಮಗಾರಿಗಳ ನೀಲಿ ನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಯಚೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ಮತ್ತು ಬೇರೆ ಬೇರೆ ರಾಜ್ಯಗಳ ಬಹಳಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ಗ್ರಾಮ ಸಂಪರ್ಕದ ಎಲ್ಲ ರಸ್ತೆಗಳು ಅಚ್ಚುಕಟ್ಟಾಗಿ ಇರಬೇಕು. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ದೇವಸ್ಥಾನದ ಅಭಿವೃದ್ಧಿಯ ಜೊತೆಗೆ ಇಲ್ಲಿಗೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಲಭ್ಯ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಅರಿತು ಅಧಿಕಾರಿಗಳು ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಸರ...
Image
    ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ತಾರಾನಾಥ   ಶಿಕ್ಷಣ ಸಂಸ್ಥೆಯಿಂದ ನೂರಕ್ಕೂ ಅಧಿಕ ಸಿಬ್ಬಂದಿಗೆ ಉಚಿತ ಗೋಧಿ ವಿತರಣೆ  ಜಯ ಧ್ವಜ ನ್ಯೂಸ್  ,ರಾಯಚೂರು, ಮಾ.20- ನಗರದ  ತಾರಾನಾಥ ಶಿಕ್ಷಣ ಸಂಸ್ಥೆಯ ವತಿಯಿಂದ  ಪ್ರತಿವರ್ಷದಂತೆ ಈ ವರ್ಷವೂ ನೂತನ ಸಂವತ್ಸರ ಯುಗಾದಿ ಹಾಗೂ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮಾನವೀಯತೆ ಮತ್ತು ಸಹಭಾಗಿತ್ವದ ಸಂಕೇತವಾಗಿ ವಿಶೇಷ ಕಾರ್ಯಕ್ರಮವನ್ನು ಚನ್ನಬಸಮ್ಮ.ಎಂ ನಾಗಪ್ಪ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು.  ಸಂಸ್ಥೆಯ ಅಧೀನದಲ್ಲಿರುವ ಎಲ್ಲಾ ಶಾಲಾ ಮತ್ತು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಕ್ಕೂ ಅಧಿಕ ಡಿ ಗ್ರೂಪ್ ನೌಕರರಿಗೆ ಸಂಸ್ಥೆಯ ಅಧ್ಯಕ್ಷರಾದ  ಪಾರಸಮಲ್ ಸುಖಾಣಿ  ಅವರು ಪ್ರತಿಯೊಬ್ಬರಿಗೂ ೩೫ ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಿದರು. ಈ ಉಪಕ್ರಮವು ಸಿಬ್ಬಂದಿಯ ಆರ್ಥಿಕ ಭದ್ರತೆಗೆ ನೆರವಾಗುವುದರ ಜೊತೆಗೆ ಹಬ್ಬದ ಸಂಭ್ರಮವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿತು.  ಈ  ಸಂದರ್ಭದಲ್ಲಿ ಚನ್ನಬಸಮ್ಮ ಎಂ ನಾಗಪ್ಪ ಬಾಲಕಿಯರ ಪದವಿಪೂರ್ವ ಕಾಲೇಜಿನ ಚೇರ್‌ಮನ್‌ಗಳಾದ  ಬಸ್ಸಪ್ಪ ತಿಪ್ಪಾರೆಡ್ಡಿ, ತಾರಾನಾಥ ಶಿಕ್ಷಣ ಸಂಸ್ಥೆಯ ಆಡಳಾತಾಧಿಕಾರಿಗಳಾದ  ಎಂ. ವಿರೇಶಪ್ಪ, ಸಿ ಎಂ ಎನ್ ಪ.ಪೂ ಕಾಲೇಜಿನ ಪ್ರಾಚಾರ್ಯರಾದ  ವೆಂಕಟೇಶ ದೊಡ್ಡಮನಿ, ಎಸ್ ಎಸ್ ಆರ್ ಜಿ ಮಹಿಳಾ ಪದವಿ ಕಾಲೇಜಿನ ಪ್ರ...
Image
  ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ‌ ಯುಕೆಜಿ   ಪ್ರಾರಂಭಿಸಲು ಒತ್ತಾಯಿಸಿ ಮಾರ್ಚ್ 23 ರಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳು ಬಂದ್ - ಹೆಚ್ .ಪದ್ಮಾ ಜಯ ಧ್ವಜ ನ್ಯೂಸ್ , ರಾಯಚೂರು ,ಮಾ.20 - ಶಿಕ್ಷಣ ಇಲಾಖೆ ಯಿಂದ ಪ್ರಾರಂಭಿಸಿದ ಎಲ್ ಕೆ ಜಿ‌ ಯುಕೆಜಿ ರದ್ದು ಪಡಿಸಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ‌ ಯುಕೆಜಿ   ಪ್ರಾರಂಭಿಸಲು ಒತ್ತಾಯಿಸಿ ಮಾರ್ಚ್ 23 ರಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರ ಬಂದ್ ಮಾಡಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ  ಜಿಲ್ಲಾಧ್ಯಕ್ಷೆ ಹೆಚ್ .ಪದ್ಮಾ ತಿಳಿಸಿದ್ದಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ  ಕಳೆದ ಮೂರು ನಾಲ್ಕು ವರ್ಷಗಳಿಂದ ಸತತವಾಗಿ ಹೋರಾಟ ನಡೆಸಿ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳಾಗಿ ಪರಿವರ್ತಿಸಲು ಒತ್ತಾಯಿಸಲಾಗುತ್ತಿದ್ದರು ಸರ್ಕಾರವು ಅದಕ್ಕೆ ಸ್ಪದಿಸದೇ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ.ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿದು ಕೂಡಲೇ ಅದನ್ನು ಕೈ ಬಿಟ್ಟು ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ -ಯುಕೆಜಿ ಪ್ರಾರಂಭಿಸಲು ಮತ್ತು ಎಫ್ ಆರ್ ಎಸ್ ( ಫೇಸ್ ಕ್ಯಾಪ್ಚರ್) ಪದ್ದತಿ ಕೈಬಿಡಲು.ಇವತ್ತಿನ ಬೆಲೆ ಏರಿಕೆ ಅನುಗುಣವಾಗಿ ಕನಿಷ್ಟ ವೇತನ 36000 ಜಾರಿಗೆ.ಹಾಗೂ ಅಂಗನವ...
Image
  ಸಹಕಾರ ಸಂಘಗಳ ಮೇಲೆ ಸರ್ಕಾರದ ಮೇಲ್ವಿಚಾರಣೆಗೆ  ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್ ಮನವಿ. ಜಯ ಧ್ವಜ ನ್ಯೂಸ್ , ರಾಯಚೂರು ,ಮಾ.18- ಹಿತಾಸಕ್ತಿ ಸಂಘರ್ಷದಲ್ಲಿ ಸಹಕಾರ ಸಂಘಗಳು" ಎಂಬ ಶೀರ್ಷಿಕೆ ಅಡಿಯಲ್ಲಿ ಮಾಧ್ಯಮ ವರದಿಯನ್ನು   ಪ್ರಸ್ತಾಪಿಸುತ್ತಾ, ರಾಜ್ಯದ  ಸಹಕಾರಿ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಆಡಳಿತಾತ್ಮಕ ದೌರ್ಬಲ್ಯಗಳಿಂದ ಸಾವಿರಾರು ಠೇವಣಿದಾರರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿರುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಇಟ್ಟು ತಮ್ಮ ಜೀವನದ ಉಳಿತಾಯವನ್ನು ಠೇವಣಿ ಇಟ್ಟಿರುವ ಹಿರಿಯ ನಾಗರಿಕರು, ನಿವೃತ್ತರು ಹಾಗೂ ಸಾಮಾನ್ಯ ಜನರು ಇಂದು ಭಾರೀ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹಗರಣಗಳಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದು, ಕೆಲವರು ಹಣಕ್ಕಾಗಿ ಕಾಯುತ್ತಾ ಜೀವ ಕಳೆದುಕೊಂಡಿರುವ ಘಟನೆಗಳೂ ವರದಿಯಾಗಿವೆ. ಸರ್ಕಾರದ ಮಾಹಿತಿಯ ಪ್ರಕಾರ ರಾಜ್ಯದಲ್ಲಿರುವ **೪೭,೭೩೬ ಸಹಕಾರ ಸಂಘಗಳಲ್ಲಿ ೧೪,೭೯೮ ಸಂಘಗಳು ನಷ್ಟದಲ್ಲಿದ್ದು**, **೧೨೫ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಿವಾಳಿಯಾಗಿವೆ**. ಹಾಗೆಯೇ **೫,೩೭೩ ಸೌಹಾರ್ದ ಸಹಕಾರ ಸಂಸ್ಥೆಗಳಲ್ಲಿ ೧,೦೧೭ ಸಂಸ್ಥೆಗಳು ನಷ್ಟದಲ್ಲಿದ್ದು**, ೧೮ ಸಂಸ್ಥೆಗಳಲ್ಲಿ ಅವ್ಯವಹಾರಗಳು ನಡೆದಿರುವುದು ತಿಳಿದುಬಂದಿದೆ. ಸಹಕಾರಿ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕ...
Image
  ರೈಕೆಮ್ ಮೆಡಿಕೇರ್ :  ಕ್ಷಯ ರೋಗಿಗಳ ದತ್ತು ಸ್ವೀಕಾರ  ಹಾಗೂ ಪೌಷ್ಟಿಕ ಆಹಾರ ವಿತರಣೆ.                                                   ಜಯ ಧ್ವಜ ನ್ಯೂಸ್ ರಾಯಚೂರು, ಮಾ. 18-  ರೈಕೆಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಕ್ಷಯ ರೋಗಿಗಳನ್ನು ದತ್ತು ಪಡೆಯುವ ಹಾಗೂ ಪೌಷ್ಟಿಕ ಆಹಾರದ ವಿತರಣೆ ಕಾರ್ಯಕ್ರಮ ಇಂದು ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.   ರಾಯಚೂರು ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ 25 ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ಟನ್ನು ವಿತರಣೆ ಮಾಡಲಾಯಿತು ಹಾಗೂ ಅವರಿಗೆ ಬೇಕಾಗುವ ಆರು ತಿಂಗಳ ಗುಣಮಟ್ಟದ ಆಹಾರವನ್ನು ಕಂಪನಿಯು ಒದಗಿಸುತ್ತದೆ ಹಾಗೂ ಮುಂದಿನ ದಿನಗಳಲ್ಲಿ ನಮ್ಮ ಕಂಪನಿಯ ವತಿಯಿಂದ ಶಕ್ತಿಮೀರಿ ಸೇವೆ ಮಾಡುತ್ತೇವೆ  ಎಂದು ಹೇಳಿದರು. ರೋಗಿಗಳಿಗೆ ತಿಂಗಳಿಗೆ ಬೇಕಾಗುವ ಪೌಷ್ಟಿಕ ಆಹಾರವನ್ನು ಕೊಡುತ್ತೇವೆ ಅದು ಉಚಿತವಾಗಿ ಕಡುಬಡತನದಲ್ಲಿರುವ ಜನರು ಅತಿ ಹೆಚ್ಚಾಗಿ ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದಾರೆ ಏಕೆಂದರೆ ಪೌಷ್ಟಿಕ ಆಹಾರದ ಕೊರತೆ ಹಾಗೂ ಮಧ್ಯ ಸೇವನೆಯಿಂದ ದೇಹವು ಶಕ್ತಿಯನ್ನು ಕಳೆದುಕೊಳ್ಳುತ್ತದೆ ಯಾರು ಆರೋಗ್ಯದಿಂದ ಇರುವುದಿಲ್ಲವೋ ಅವರಿಗೆ ಬೇಗನೆ ಕ್ಷಯ ರೋಗವು ಹರಡುತ್ತ...
Image
  ಬೇಸಿಗೆ : ಟ್ರಾಫಿಕ್ ಸಿಗ್ನಲ್ ಗಳಲ್ಲಿ ಅಳವಡಿಕೆಯಾಗದ ನೆರಳು ನೀಡುವ ಗ್ರೀನ್ ಮ್ಯಾಟ್                                              ಜಯಧ್ವಜ ನ್ಯೂಸ್,  ರಾಯಚೂರು,ಮಾ.17-                     ಬೇಸಿಗೆ ಪ್ರಾರಂಭವಾಗಿದ್ದು ಸೂರ್ಯನ ಪ್ರಖರತೆ ಏರುತ್ತಿದ್ದು ಬಿಸಿಲಿನ ತಾಪಮಾನವು ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಬಿಸಿಲಿನ ಝ‌ಳ ಅಧಿಕವಾಗತೊಡಗಿದೆ ನಗರದ  ಎರೆಡು ವೃತ್ತಿಗಳಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ದ್ವಿಚಕ್ರ ವಾಹನ ಸವಾರರು ನಿಲುಗಡೆ ಮಾಡುವ ಸಮಯದಲ್ಲಿ ಬಿಸಿಲಿನಿಂದ ಕಂಗೆಡುತ್ತಾರೆ ಆದ್ದರಿಂದ ಬಸವೇಶ್ವರ ವೃತ್ತ ಮತ್ತು ಗಂಜ್ ವೃತ್ತಗಳಲ್ಲಿ ನೆರಳು ನೀಡುವ ಗ್ರೀನ್ ಮ್ಯಾಟ್ ಅಳವಡಿಸಬೇಕು ಎನ್ನುವುದು ಸಾರ್ವಜನಿಕರ, ದ್ವಿಚಕ್ರ ವಾಹನ ಸವಾರರ ಕೋರಿಕೆಯಾಗಿದೆ.    ಊಷ್ಣಾಂಶದಲ್ಲಿ ಏರಿಕೆಯಾಗುತ್ತಿದ್ದು ಎಪ್ರಿಲ್ , ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಳವಾಗುತ್ತದೆ ಮಧ್ಯಾಹ್ನ ಸೂರ್ಯ ಬೆಂಕಿಯ ಉಂಡೆಯಂತೆ ಭಾಸವಾಗುತ್ತಾನೆ ರಸ್ತೆಯಲ್ಲಿ ಓಡಾಡುವುದು ಪ್ರಯಾಸಕರವಾಗುತ್ತದೆ ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ಸಿಗ್ನಲ್ ನಲ್ಲಿ  ನಿಂತು ಕೊಂಡಾಗ ಬೇಗನೆ ಹಸಿರು ದೀಪ ಬೆಳಗಿ ವಾ‌ಹನ ಮು...