Posts

Image
  ಜಿಲ್ಲಾಡಳಿತದಿಂದ ಬಸವ ಜಯಂತೋತ್ಸವ: ಸಮಾನತೆಯ ತತ್ವದ ಪ್ರತಿಪಾದಕ ಬಸವಣ್ಣ- ಶಾಸಕ ಡಾ.ಶಿವರಾಜ ಪಾಟೀಲ್ ಜಯ ಧ್ವಜ ನ್ಯೂಸ್ ,ರಾಯಚೂರು, ಏ 20- ಸಮಾನತೆಯ  ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಬಸವಣ್ಣ ಅವರದ್ದು, ಅವರ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕೆಂದು ರಾಯಚೂರು ನಗರದ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಹೇಳಿದರು. ಅವರಿಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದವರು ಒಗ್ಗಟಾಗಿ ಸಮಾಜದ ಏಳಿಗೆ ಶ್ರಮಿಸಬೇಕು. ಸಮಸ್ಯೆಗಳು ಇದ್ದಲ್ಲಿ ಯಾವುದೇ ಸರ್ಕಾರ ಇರಲಿ ಹೋರಾಟ ಮಾಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಕಾಯಕವೇ ಕೈಲಾಸ ತತ್ವದಡಿ ಎಲ್ಲರೂ ಸಮಾನರು ಯಾವುದೇ ಕೆಲಸದಲ್ಲಿ ಮೇಲು–ಕೀಳಿಲ್ಲ ಎಂದು ಸಾರಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಹೌದು. ದೇಶದಲ್ಲಿ ಅನುಭವ ಮಂಟಪದ ಮೂಲಕ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದವರಲ್ಲಿ ಬಸವಣ್ಣ ಮೊದಲಿಗರು. ವಿದ್ಯೆಯಿಂದ ವಂಚಿರಾದವರಿಗೆ, ಮಹಿಳೆಯರಿಗೆ ಅಲ್ಲಿ ಶಿಕ್ಷಣ ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ಮಾಡಿಕೊಟ್ಟು ಸಾಮಾಜಿಕ ಬದಲಾವಣೆಗೆ ಕಾರಣರಾದರು ಎಂದು ಶಾಸಕರು ಹೇಳಿದರು. ಏಪ್ರಿಲ್ 22ರಂದು‌ ರಾಯಚೂರಿನಲ್ಲಿ ಸಮ...
Image
  ಕಲಾ ಸುಂಕುಲ ಸಂಸ್ಥೆಯಿಂದ ಬಸವ ಜಯಂತಿ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ:   ಪ್ರಶಸ್ತಿಗಳು ಮನುಷ್ಯನ ಯಶಸ್ಸಿನ ಮೆಟ್ಟಿಲುಗಳು- ಕೆ ಶಿವನಗೌಡ ನಾಯಕ    ಜಯ ಧ್ವಜ ನ್ಯೂಸ್ ,ರಾಯಚೂರು ಏ. 19-   ಮನುಷ್ಯ ತನ್ನ ಬದುಕಿನಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ದಾರಿದೀಪವಾಗಬೇಕು  ಯಾವುದೇ ನಿರೀಕ್ಷೆಯಿಲ್ಲದೆ ಸಾಧನೆ ಮಾಡುವುದು ವಿಶೇಷ ನಿಮ್ಮ ಪರಿಶ್ರಮದಿಂದ ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ  ನೀವು ಮಾಡುವ ಸಮಾಜ ಮುಖಿ ಕೆಲಸ ಆಗಿರಬೇಕು. ಪ್ರಶಸ್ತಿಗಳು ಮನುಷ್ಯನ ಯಶಸ್ಸಿನ ಮೆಟ್ಟಿಲುಗಳು ಎಂದು ಮಾಜಿ ಸಚಿವ ಕೆ ಶಿವನಗೌಡ ಹೇಳಿದರು.  ಅವರಿಂದು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಏರ್ಪಡಿಸಿದ್ದ ಬಸವ ಜಯಂತಿ ಅಂಗವಾಗಿ ಸಂಗೀತೋತ್ಸವ ಪುಸ್ತಕ ಲೋಕಾರ್ಪಣೆ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆಯನ್ನು ಮಾಡಿ  ಮಾತನಾಡಿ ಸಂಗೀತಕ್ಕೆ ರೋಗ ನಿರೋಧಕ ಶಕ್ತಿ ಇದೆ. ಕಲಾ ಸುಂಕುಲ ಸಂಸ್ಥೆ ರಾಯಚೂರು ಜಿಲ್ಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿರುವ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.  ಮುಕ್ಕಣ್ಣ ಕರಿಗಾರ್ ಬರೆದಿರುವ ಮುಕ್ಕಣ್ಣ ಕಂಡ ಬಸವಣ್ಣ ಪುಸ್ತಕ ಮತ್ತು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾಕ್ಟರ್ ಸತೀಶ್ ಕುಮಾರ್ ಹೊಸಮನಿ ಅವರು ಬರೆದಿರುವ ಶರಣರ ದರ್ಶನ ಎರಡು ಪುಸ್ತಕಗಳು ಇಂದು ಲೋಕಾರ್ಪ...
Image
  ಸೆಕ್ಷನ್ 4(1)ಎ, 4(1)ಬಿ ಮಾಹಿತಿ ಸಾರ್ವಜನಿಕವಾಗಿ ಪ್ರಕಟಿಸುವಂತೆ ಸೂಚನೆ - ವೆಂಕಟ್ ಸಿಂಗ್  ಜಯಧ್ವಜ ನ್ಯೂಸ್  ,ರಾಯಚೂರು, ಏ.18- ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1)ಎ, 4(1)ಬಿ ರಂತೆ ಇಲಾಖೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್ ಸಿಂಗ್ ಹೇಳಿದರು. ಅವರಿಂದು ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಹಿತಿ‌ ಹಕ್ಕು ಕಾರ್ಯಾಗಾರ ನಂತರ  ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂದಿಲ್ಲಿ ಜಿಲ್ಲೆಯ  ಜಿಲ್ಲಾ, ತಾಲೂಕು, ಗ್ರಾಮೀಣ ಹಂತದ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗರ ನಡೆಸಲಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯ‌ ಮೂಲ ಆಶಯವೇ ಉತ್ತರದಾಯಿತ್ವ ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದಾಗಿದೆ. ಹೀಗಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಮ್ಮ ಕಚೇರಿ ಮಾಹಿತಿಯನ್ನು ಸ್ವಯಂ ಪ್ರೇರಿತರಾಗಿ ಕಾಯ್ದೆಯ ಸೆಕ್ಷನ್ 4(1)ಎ, 4(1)ಬಿ ರಂತೆ ಇಲಾಖೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿದಲ್ಲಿ ಕಚೇರಿಗೆ ಬರುವ ಅರ್ಜಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿಸಲಾಗಿದೆ ಎಂದರು. ಕಲಬುರಗಿ ವಿಭಾಗದ ಪ್ರತಿ ಜಿಲ್ಲೆಯಲ್ಲಿ ಈ ರೀತಿಯ ಕಾರ್ಯಾಗಾರ ಆಯೋಜಿಸಿ ಅಧಿಕಾರಿಗಳಲ್ಲಿ ಕಾಯ್ದೆ ಮಹತ್ವ ಮತ್ತು ಉದ್ದೇ...
Image
ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದಿರುವುದಕ್ಕೆ ಮಹಿಳಾ ಮೀಸಲಾತಿ ಮಸೂದೆ ಸೋಲು- ಡಾ.ರಝಾಕ್ ಉಸ್ತಾದ್  ಜಯ ಧ್ವಜ ನ್ಯೂಸ್ , ರಾಯಚೂರು , ಏ.18 - ಕೇಂದ್ರ ಸರಕಾರ ವಿಶೇಷ ಅಧಿವೇಶನದ ಮೂಲಕ ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಂಡಿಸಲಾದ ಮೂರು ಮಸೂದೆಗಳಿಗೆ ಅಗತ್ಯ ಬಹುಮತ ಪಡೆಯದೇ ಸೋಲಾಗಿದೆ, ಯಾವುದೇ ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಗೊತ್ತಿದ್ದರೂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಸೂದೆ ಮಂಡಿಸಿರುವದು ಇವರ ಬದ್ದತೆಯ ಪ್ರಶ್ನೆಯಾಗಿದೆ. ಇದು ಮಹಿಳಾ ಮೀಸಲಾತಿ ವಿರುದ್ದ ನಡೆದ ಬೆಳವಣಿಗೆಯಲ್ಲ, ಕೇಂದ್ರ ಸರಕಾರದ ನಿರಂಕುಶ ಆಡಳಿತಕ್ಕೆ ಆಗಿರುವ ಸೋಲು ಎಂದು ಕೆಪಸಿಸಿ ಮಾದ್ಯಮ ವಿಭಾಗ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ ದೂರಿದ್ದಾರೆ. ಬಿಜೆಪಿ ಪಕ್ಷಕ್ಕೆ ಮಹಿಳಾ ಮೀಸಲಾತಿ ಜಾರಿಗೊಳಿಸುವ ಯಾವುದೇ ಇಚ್ಚೆ ಇಲ್ಲ, ಯಾಕೆಂದರೆ 2023ರ ಮಹಿಳಾ ಮೀಸಲಾತಿ ಕಾಯ್ದೆ ರಾಷ್ಟ್ರಪತಿಗಳ ಅಂಕಿತವಾಗಿ ಮೂರು ವರ್ಷಗಳಾದರೂ ಗೆಜೆಟ್ ಅಧಿಸೂಚನೆ ಹೊರಡಿಸದೇ ಇರುವದು ಮಹಿಳಾ ಮೀಸಲಾತಿಯ ಬಗ್ಗೆ ಇವರಿಗೆ ಇರುವ ಕಾಳಜಿ ಎದ್ದು ಕಾಣುತ್ತದೆ. ಎಪ್ರಿಲ್ 16, 2026ಕ್ಕೆ ಮಹಿಳಾ ಮೀಸಲಾತಿ ಮಸೂದೆ 2023ಕ್ಕೆ ಅಧಿಸೂಚನೆ ಹೊರಡಿಸುವದು ಎಂದರೆ ಮೂರು ವರ್ಷ ಯಾವ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಇದ್ದರೂ ಎನ್ನುವದು ದೇಶದ ಜನರಿಗೆ ಇವರು ಹೇಳಬೇಕು. ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ಮಂಡಿಸುವಾಗ ಕಾಯ್ದೆ ಜಾರಿಯಲ್ಲಿದೆಯೇ ...
Image
  ಕಾಂಗ್ರೆಸ್ ಪಕ್ಷದ ಮಹಿಳಾ ಮೀಸಲಾತಿ ವಿರೋಧ ನೀತಿಯು ದೇಶದ ದುರಂತದ ಸಂಗತಿ- ರವೀಂದ್ರ ಜಲ್ದಾರ್ ಖಂಡನೆ. ಜಯ ಧ್ವಜ ನ್ಯೂಸ್ , ರಾಯಚೂರು ,ಏ.18-  ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿ ಎಂದಿಗೂ ಬದಲಾಗುವುದಿಲ್ಲ ಕಾಂಗ್ರೆಸ್ ಪಕ್ಷದ ಅಗ್ರ ನಾಯಕರಾದ  ಸೋನಿಯಾ ಗಾಂಧಿ ಮತ್ತು  ಪ್ರಿಯಾಂಕ ಗಾಂಧಿ ಅವರು ಸಹ ಮಹಿಳೆಯರಾಗಿದ್ದು ಮಹಿಳೆಯರಿಗಾಗಿ ಮೀಸಲಾತಿ ಕೊಡುವ ಮಹಾನ್ ಕ್ರಾಂತಿಕಾರಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದು ಅತ್ಯಂತ ದುರಂತದ ಸಂಗತಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ರವೀಂದ್ರ ಜಲ್ದಾರ್  ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಪಾರ್ಟಿ ಕೇವಲ ತನ್ನ ಕುಟುಂಬಕ್ಕೆ ಲಾಭವಾಗುವ ಯೋಜನೆಯನ್ನು ನೀತಿಯನ್ನು ಮಾತ್ರ ಸ್ವಾಗತ ಮಾಡುತ್ತದೆ ಎಂದು ಆರೋಪಿಸಿರುವ  ಅವರು ಮಹಿಳೆಯರ ಹಕ್ಕುಗಳ ಮೇಲೆ ಕೇವಲ ಭಾಷಣ ಮಾಡುವ ಕಾಂಗ್ರೆಸಿಗರು ಶೇ. 33% ಮಹಿಳಾ ಮೀಸಲಾತಿ ಬಿಲ್ ಮಂಡಿಸಿ ಮತಕ್ಕೆ ಹಾಕಿದಾಗ ಮಸೂದೆ ವಿರುದ್ಧ ಮತ ಚಲಾಯಿಸಿ  ಕೇಕೆ ಹಾಕುತ್ತಾ ಘೋಷಣೆ ಕೂಗತ್ತಾ ಸದನದಲ್ಲಿ ಯುದ್ಧ ಗೆದ್ದವರಂತೆ ನಡೆದುಕೊಂಡರು.ಆದರೆ ತಾವು ದೇಶದ ಮಹಿಳೆಯರ ಹಕ್ಕಿನ ವಿರುದ್ಧ ಸ್ವಾಭಿಮಾನದ ವಿರುದ್ಧ ಅವರ ಆತ್ಮಗೌರವದ ವಿರುದ್ಧ ಮತ ಹಾಕುತ್ತಿದ್ದೇವೆ ಎಂದು ಕಾಂಗ್ರೆಸ್' ನಾಯಕರಿಗೆ ಅನಿಸದೆ ಹೋದದ್ದು ನಿಜಕ್ಕೂ ದುರಂತ.   ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ...
Image
  ಸುಧಾಬಾಯಿ ನರಸಿಂಗರಾವ್ ದೇಶಪಾಂಡೆ ನಿಧನ.    ಜಯ ಧ್ವಜ ನ್ಯೂಸ್, ರಾಯಚೂರು, ಏ.18- ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ  ನರಸಿಂಗರಾವ್ ದೇಶಪಾಂಡೆ ಮುದುಗಲ್ ಇವರ ಧರ್ಮಪತ್ನಿ  ಸುಧಾ ಬಾಯಿ ದೇಶಪಾಂಡೆ ಮುದುಗಲ್(72)  ಅವರು ಇಂದು  ಮಧ್ಯಾಹ್ನ 2ಗಂಟೆಗೆ  ಬೆಂಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ  ದೈವಾಧೀನರಾಗಿದ್ದಾರೆ . ಮೃತರ ಅಂತ್ಯಕ್ರಿಯೆ  ಇಂದು ಸಂಜೆ 6 ಗಂಟೆಗೆ ಬೆಂಗಳೂರಿನಲ್ಲಿ  ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 
Image
  ನಾಯಕ ಸಮಾಜದಿಂದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನ ಆಚರಣೆ ಜಯ ಧ್ವಜ ನ್ಯೂಸ್ ,ರಾಯಚೂರು, ಏ.18-  ನಗರದಲ್ಲಿನ ಆದಿಕವಿ ಭಗವಾನ್ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಇಂದು ನಾಯಕ ಸಮಾಜದಿಂದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ತಳಿಗೆ ಹಾಗೂ ಶ್ರೀ ಹರಿಹರ ಬುಕ್ಕರಾಯರು, ಶ್ರೀ ಗಂಡುಗಲಿ ಕುಮಾರರಾಮ ಹಾಗೂ ಶ್ರೀಕೃಷ್ಣ ದೇವರಾಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಹಿರಿಯ ಪತ್ರಕರ್ತರು ಹಾಗೂ ಸಮಾಜದ ಮುಖಂಡರಾದ ಭೀಮರಾಯ ಹದ್ದಿನಾಳ ಅವರು ಮಾತನಾಡಿ, ಪ್ರತಿ ವರ್ಷ ಎಪ್ರಿಲ್ 18 ರಂದು ರಾಜ್ಯದ ಅನೇಕ ನಗರ ಪಟ್ಟಣ ಹಾಗೂ ಗ್ರಾಮದಲ್ಲಿಯೂ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನ ದಿನವನ್ನಾಗಿ ಆಚರಿಸಲಾಗುತ್ತಿದೆ.    ನಾಯಕ ರತ್ನಗಳಾದ ಹರಿಹರ ಬುಕ್ಕರಾಯರು (ಹಕ್ಕ-ಬುಕ್ಕ) ಗಂಡು ಲಿ ಕುಮಾರರಾಮ, ಶ್ರೀಕೃಷ್ಣದೇವರಾಯರ ಸ್ಮರಣೆ ಮಾಡಲಾಗುತ್ತದೆ.  ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕ ಬುಕ್ಕರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದಂತೆ ವಾಲ್ಮೀಕಿನಾಯಕ ಸಮುದಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿಮತ್ತು ಸಾಮಾಜಿಕವಾಗಿ ಮುಂದೆ ಬರಬೇಕು. ಹಕ್ಕ ಬುಕ್ಕರು, ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯ ಇವರೆಲ್ಲರ ಧೈರ್ಯ, ಸಾಹಸಗಳನ್ನು ಆದರ್ಶವಾಗಿ ಮಾಡಿಕೊಂಡುಸಮುದಾಯ ತಮ್ಮ ದೈನಂದಿನ ಜೀವನದಲ್ಲಿಅಭಿವೃದ್ಧಿಯಾಗಬೇಕಾಗಿದೆ ಎಂದು ಕರೆ ...