Posts

Image
  ಮಾದಿಗ ದಂಡೋರದಿಂದ ಲಲಿತ ವೃದ್ಧಾಶ್ರಮದಲ್ಲಿ ಮಂದಕೃಷ್ಣ ಮಾದಿಗರವರ ಹುಟ್ಟು ಹಬ್ಬ ಆಚರಣೆ ಜಯ ಧ್ವಜ ನ್ಯೂಸ್ , ರಾಯಚೂರು , ಜು.7 - ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರ ಆದೇಶದ ಮೇರೆಗೆ ಇಂದು ನಗರದ ಲಲಿತಾ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ  32ನೇ ಮಾದಿಗ ದಂಡೋರ ಎಂ ಆರ್ ಪಿ ಎಸ್ ಸಂಘಟನೆಯ ಸಂಸ್ಥಾಪನೆ ದಿನ ಹಾಗೂ ಪದ್ಮಶ್ರೀ ಮಂದಕೃಷ್ಣ ಮಾದಿಗ  ರವರ ಹುಟ್ಟು ಹಬ್ಬ ಆಚರಣೆ ಲಲಿತ ವೃದ್ಧಾಶ್ರಮದಲ್ಲಿ  ಸರಳವಾಗಿ ಆಚರಿಸಲಾಯಿತು.  ಈ  ಸಂದರ್ಭದಲ್ಲಿ  ರಂಜಿತ್ ದಂಡೋರ ಎಂ ಆರ್ ಪಿ ಎಸ್  ಜಿಲ್ಲಾ ಯುವ ಸೇನೆ ಅಧ್ಯಕ್ಷರು ಮಾತನಾಡಿ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ  ನಾಯಕತ್ವದಲ್ಲಿ  1994 ರಲ್ಲಿ ಉದ್ಘಾಟನೆಯದ ಮಾದಿಗ ದಂಡೋರ ಎಂ ಆರ್ ಪಿ ಎಸ್ ಸಂಘಟನೆಯ ಹೋರಾಟದ ಹಾದಿ ಇಂದಿಗೆ 32ನೆಯ ವರ್ಷದ ವಾರ್ಷಿಕೋತ್ಸವ ಸಂಸ್ಥಾಪನೆ ದಿನ ಹಾಗೂ ಪದ್ಮಶ್ರೀ ಮಂದಕೃಷ್ಣ  ಮಾದಿಗ ರವರು  ಹುಟ್ಟುಹಬ್ಬ  ಮತ್ತು ಅನೇಕ ಸಮಾಜ ತಮ್ಮದೇ ಆದ ಛಾಯೆಯನ್ನು ಮೂಡಿಸಿ. ಪರಿಶಿಷ್ಟ ಜಾತಿಯ ಸಮುದಾಯಗಳಿಗೆ  ಒಳ ಮಿಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ 35 ವರ್ಷಗಳಿಂದ ನಿರಂತರ ಹೋರಾಟದ ಮೂಲಕ ವರ್ಗೀಕರಣವನ್ನು ಸಾಧಿಸಿದ್ದಾರೆ. ಸಾಮಾಜಿಕ ಸೇವೆಯನ್ನು ಗುರುತಿಸಿ 2025ರಲ್ಲಿ  ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ...
Image
  ಜು. 8 ರಂದು 'ಮಾಗಿದ ಮುತ್ಸದ್ದಿ' ಗ್ರಂಥ ಲೋಕಾರ್ಪಣೆ  ಹಾಗೂ ಅಭಿನಂದನಾ ಸಮಾರಂಭ:          ಎಂ.ಎಸ್.ಪಾಟೀಲರು ರಾಜಕೀಯ ಎದುರಾಳಿಗೂ ಒಳ್ಳೇದನ್ನೇ ಬಯಸಿದ್ದರು- ಪಾಪಾರೆಡ್ಡಿ.                                        ಜಯ ಧ್ವಜ ನ್ಯೂಸ್, ರಾಯಚೂರು,ಜು.6 - ಹಿರಿಯ ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಸಚಿವ ಎಂ.ಎಸ್. ಪಾಟೀಲರವರ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಜು.8ರಂದು ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷರು  ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಮತ್ತು ಗೌರವಾಧ್ಯಕ್ಷರು ಹಾಗೂ ಶಾಸಕರಾದ ಡಾ.ಶಿವರಾಜ ಪಾಟೀಲ್ ಹೇಳಿದರು. ಅವರೀರ್ವರು  ಜಂಟಿಯಾಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪಾಪಾರೆಡ್ಡಿ ಮಾತನಾಡಿ ಎಂ.ಎಸ್.ಪಾಟೀಲರು 70ರ ದಶಕದಿಂದಲೆ ರಾಜಕೀಯ ಮುನ್ನೆಲೆಗೆ ಬಂದವರು ಶಾಸಕರಾಗಿ, ಸಚಿವರಾಗಿ ವಿವಿಧ ಸ್ಥಾನಮಾನಗಳಿಸಿ ಉತ್ತಮ ನಡೆ ನುಡಿಯುಳ್ಳ ಸಜ್ಜನ ರಾಜಕಾರಣಿ ಎಂದು ಜನಿಜನಿತರಾದವರು ಎಂದರು. ವಿಧಾನಸಭೆ ನಗರ ಕ್ಷೇತ್ರದ  ಅನೇಕ ಚುನಾವಣೆಗಳಲ್ಲಿ ನಾನು ಅವರ ವಿರುದ್ಧ ಸ್ಪರ್ಧಿಸಿದ್ದೆ ಅವರ ಬಗ್ಗೆ ಚುನಾವಣೆ ಬಹಿರಂಗ ಸಮಾವೇಶಗಳಲ್ಲಿ ಅವರ ಬಗ್ಗೆ ರಾಜಕೀಯವಾಗಿ ವಾಗ್ದಾಳಿ ನಡೆಸಿದ್ದರೂ ಅವರು ನನ್ನ ಬಗ್ಗೆ ಎ...
Image
ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಅಭಿವೃದ್ಧಿ ಆಗಲಿ ಪ್ರೊ. ಶಿವಾನಂದ ಕೆಳಗಿನಮನಿ.   ಜಯಧ್ವಜ ನ್ಯೂಸ್ , ರಾಯಚೂರು ಜು.6- ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟವನ್ನು ಉನ್ನತಿಕರಿಸಲು ನಮ್ಮ ವಿಶ್ವವಿದ್ಯಾಲಯ ನಿರಂತರವಾಗಿ ಪರಿಶ್ರಮಿಸುತ್ತದೆ ಅದರೊಂದಿಗೆ ಈ ಭಾಗದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಭಾಗದ ಜನಪ್ರತಿನಿಧಿಗಳು, ಸಾಹಿತಿಗಳು ಹಾಗೂ ತಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ನಮ್ಮ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾನಿಲಯ ಪ್ರಯತ್ನಿಸುತ್ತದೆ ಎಂದು ಹೇಳಲು ಖುಷಿಯಾಗುತ್ತದೆ ಅದರೊಂದಿಗೆ ಈ ಎರಡು ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಅಂದರೆ ಅದರಲ್ಲಿ ಮುಖ್ಯವಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿರುವುದನ್ನು  ಕಂಡುಕೊಂಡಿದ್ದೇನೆ ಈ ಭಾಗದ ಅನೇಕ ಸಮಸ್ಯೆಗಳಿಗೆ ಸಂಶೋಧನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಅದನ್ನು ಮುಂದಿನ ದಿನಗಳಲ್ಲಿ ನಮ್ಮ ವಿಶ್ವವಿದ್ಯಾಲಯ ಎಲ್ಲಾ ಪ್ರಯತ್ನ ಮಾಡುತ್ತದೆ. ಆದರೆ ಇದರೊಂದಿಗೆ ತಮ್ಮೆಲ್ಲರ ಸಹಕಾರವಿದ್ದರೆ ಈ ವಿಶ್ವವಿದ್ಯಾಲಯವನ್ನು ರಾಜ್ಯಮಟ್ಟದ ಮಾದರಿ ವಿಶ್ವವಿದ್ಯಾನಿಲಯ ಮಾಡುವುದರಲ್ಲಿ ತಮ್ಮೆಲ್ಲರ  ಸಹಕಾರ ನನಗೆ ಬೇಕಾಗುತ್ತದೆ. ಈಗ ತಾವೆಲ್ಲರೂ ನನ್ನ ಒಂದು ವರ್ಷದ ಕಾರ್ಯವಿಧಾನವನ್ನು ಪರಿಗಣಿಸಿ ಅಭಿನಂದಿಸುತ್ತಿರುವುದಕ್ಕೆ ತಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ ಎಂದು ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ...
Image
  ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು- ಶಾಸಕ ಬಸನಗೌಡ ದದ್ದಲ್ ಜಯ ಧ್ವಜ ನ್ಯೂಸ್ , ರಾಯಚೂರು. ಜು. 4-  ರಾಯಚೂರು ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಥಳಗಳು ಹಾಗೂ ಮೂರು ಮಹತ್ತರವಾದ ಐಲೆಂಡುಗಳು ಇವೆ.  ಇಲ್ಲಿಗೆ ಕರ್ನಾಟಕ. ಮಹಾರಾಷ್ಟ್ರ. ತೆಲಂಗಾಣ ಸೇರಿದಂತೆ ಇತರೆ ಹಲವಾರು ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಹೇಳಿದರು ಅವರು ಗ್ರಾಮೀಣ ಕ್ಷೇತ್ರದ ವಿವಿಧ ಪ್ರದೇಶಗಳ ಅಭಿವೃದ್ದಿ ಪರಿಶೀಲನೆ ಭಾಗವಾಗಿ ಕುರುಗಡ್ಡೆ ದತ್ತಾತ್ರೆಯ‌ ದೇವಸ್ಥಾನ ಬಳಿ ನಡೆದ ಕಾಮಗಾರಿ   ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗಳೊಂದಿಗೆ  ಮಾತನಾಡಿದರು. ಇಂದು  ನಾವು  ಎಲ್ಲರೂ ಒಂದಾಗಿ ಸೇರಿದ್ದೇವೆ. ಮಾಧ್ಯಮದವರನ್ನು ಕೆಲವು ಪ್ರಮುಖ ಪ್ರವಾಸೋದ್ಯಮ ಸ್ಥಳಗಳಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಕರೆದಿದ್ದೇನೆಂದ ಅವರು. ಕಳೆದ ಎಂಟು ವರ್ಷಗಳಿಂದ ನಾನು ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿಯನ್ನು ನೀವು ಸ್ವತಃ ನೋಡಿ, ನಿಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕು ಎಂಬುದು ನಾನು ತಮಗೆಲ್ಲರಿಗೂ ಕರೆದ ಉದ್ದೇಶ ಆಗಿದೆ. ನಮ್ಮ ಕ್ಷೇತ್ರದಲ್ಲಿ ಅತ್ಯ...
Image
  ವಾಲ್ಮೀಕಿ ವಿಶ್ವವಿದ್ಯಾನಿಲಯ ಕುಲಪತಿಗಳಾದ ಶಿವಾನಂದ ಕೆಳಗಿನಮನಿರವರಿಗೆ  ಅಭಿನಂದನಾ ಸಮಾರಂಭ. ಜಯ ಧ್ವಜ ನ್ಯೂಸ್ ,ರಾಯಚೂರು, ಜು 4 -   ಕಲಾಸಂಕುಲ ಸಂಸ್ಥೆ  ರಾಯಚೂರು ಹಾಗೂ ಲೋಹಿಯಾ ಪ್ರತಿಷ್ಠಾನ ರಾಯಚೂರು ಇವರ ವತಿಯಿಂದ ಗೌರವಾನ್ವಿತ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ  ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ರಾಯಚೂರು ಇವರಿಗೆ ಜು.5 ರಂದು ರವಿವಾರ ಸಂಜೆ 6 ಗಂಟೆಗೆ ರಾಯಚೂರು ರಂಗಮಂದಿರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಮಾರುತಿ ಬಡಿಗೇರ್ ತಿಳಿಸಿದ್ದಾರೆ.  ಕಾರ್ಯಕ್ರಮದ ಉದ್ಘಾಟಕರಾಗಿ  ಡಾ ಬಸವಪ್ರಭು ಪಾಟೀಲ್ ಬೆಟ್ಟದೂರು. ಹಿರಿಯ ಸಾಹಿತಿಗಳಾದ ವೀರ ಹನುಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷರಾದ ಗಿರಿಜಾ ರಾಜಶೇಖರ್,  ಭೀಮನಗೌಡ ಪಾಟೀಲ್  ಇಟಗಿ, ಜೆ ಎಲ್ ಈರಣ್ಣ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಾ, ಜಿಲ್ಲಾ ಕಾರಾಗ್ರಹ ಇಲಾಖೆಯ ಜಿಲ್ಲಾ  ಆದೀಕ್ಷಕರಾದ ಅನಿತಾ ಹಿರೇಮನಿ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶ್ರೀದೇವಿ ಆರ್ ವಿ ನಾಯಕ.. ಸಮಾಜ ಸೇವಕಿ ಡಾ. ಫಾತಿಮಾ ಹುಸೇನ್, ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷರಾದ  ರೇಖಾ ಬಡಿಗೇರ್ ಭಾಗವಹಿಸಲಿದ್ದಾರೆ.   ಸಾಧಕ ಮೂರು ಜನರಿಗೆ ರಾಜ್ಯಮಟ್ಟದ ಪ್ರಶಸ್...
Image
  ಮುರಳೀಧರ ಕುಲಕರ್ಣಿ ನಿವಾಸದಲ್ಲಿ ಮನೆ ಮನೆಯಲ್ಲಿ ರಾಯರು ಕಾರ್ಯಕ್ರಮ: ಗುಡೆಬಲ್ಲೂರು ಶೇಷಾಚಾರ್ಯರಿಗೆ ಸನ್ಮಾನ , ಶೇಷಗಿರಿ ದಾಸರಿಂದ ದೇವರನಾಮ ಜಯ ಧ್ವಜ ನ್ಯೂಸ್, ರಾಯಚೂರು,ಜು.4-   ನಗರದ ವಿದ್ಯಾ ನಗರದಲ್ಲಿರುವ ಮುಖ್ಯೋಪಾಧ್ಯಾಯ ಮುರಳೀಧರ ಕುಲಕರ್ಣಿಯವರ ಮನೆಯಲ್ಲಿ ಗುರುವಾರ ಸಂಜೆ  ಮನೆ ಮನೆಯಲ್ಲಿ ರಾಯರು ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ಜರುಗಿತು. ತಾರತಮ್ಯುಕ್ತ ಭಜನೆ, ಸ್ವಸ್ತಿ ವಾಚನ, ಸಂಗೀತ ಕಾರ್ಯಕ್ರಮ, ಜೊತೆಗೆ ನರ್ತನ ಇವೆಲ್ಲವೂ ಭಕ್ತಿಯ ಪರಾಕಷ್ಟೆಯನ್ನು ಮುಟ್ಟಿದಂತ ಘಳಿಗೆಗಳಾಗಿದ್ದವು.    ಈ ಸಂದರ್ಭದಲ್ಲಿ ದಾಸ ಸಾಹಿತ್ಯದಲ್ಲಿ ಸೇವೆ ಮಾಡಿದ 91 ವರ್ಷದ ಜ್ಞಾನವೃದ್ಧರಾದ ಗುಡೇಬಲ್ಲೂರ್ ಶೇಷಾಚಾರ್ಯರು, ಡಾ. ಜಯ ಲಕ್ಷ್ಮಿ ಮಂಗಳಮೂರ್ತಿ, ಖ್ಯಾತ ಗಾಯಕ ಡಾಕ್ಟರ್ ರಾಯಚೂರು ಶೇಷಗಿರಿ ದಾಸ್, ರಮಾ ಕಾಂತ್ ನಾಗಡದಿನ್ನಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.  ಈ ಸಂದರ್ಭದಲ್ಲಿ ಭೀಮಸೇನ ಆಚಾರ್ಯ ಗುಡೆಬಲ್ಲೂರು, ಗುರುರಾಜ ನಾಗಡದಿನ್ನಿ, ರಾಘವೇಂದ್ರರಾವ್ , ಕೆಇಬಿ ಭೀಮಸೇನ್ ರಾವ್, ಪ್ರಸನ್ನ ಆಲಂಪಲ್ಲಿ, ಸುರೇಶ್ ಕಲ್ಲೂರ್, ರಮಾಕಾಂತ್ ಕುಲಕರ್ಣಿ ಗುಂಜಳ್ಳಿ, ಜಯಕುಮಾರ್ ದೇಸಾಯಿ ಕಾಡ್ಲೂರು,ಗುರುರಾಜ ಕೆಎಸ್ಸಾರ್ಟಿಸಿ ಕೊಪ್ರೇಶ್ ದೇಸಾಯಿ, ರವೀಂದ್ರ ಕುಲಕರ್ಣಿ ಹಾಗೂ ಹಲವಾರು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕೊನೆಯಲ್ಲಿ ಗಾಯಕ ಶೇಷಗಿರ...
Image
  ರಾಯಚೂರು ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಭೆ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲು ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್ ಸೂಚನೆ ಜಯ ಧ್ವಜ ನ್ಯೂಸ್ ,ರಾಯಚೂರು ಜು.3 - ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು   ರಾಯಚೂರು ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಆಗಿರುವ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಹೇಳಿದರು. ಅವರಿಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು, ಮುಂಗಾರು ಹಂಗಾಮಿನ ಬಿತ್ತನೆ ಮತ್ತು ರಸಗೊಬ್ಬರ ಬೇಡಿಕೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು. ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರವನ್ನು ಕಾಲಕಾಲಕ್ಕೆ ‌ರೈತರಿಗೆ ವಿತರಣೆ ಮಾಡಬೇಕು.ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು  ಖಾಸಗಿ ಅಂಗಡಿಗಳಲ್ಲಿ ಇರುವ ದಾಸ್ತಾನುಗಳ ಬಗ್ಗೆ ಫಲಕ ಪ್ರದರ್ಶನ ಮಾಡಬೇಕು. ರೈತರಿಂದ ಹೆಚ್ಚುವರಿ ಹಣವನ್ನು ಸ್ವೀಕರಿಸದಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಆ...