ಕೊಂಡ ಹನುಮೇಶ, ಪಿಎಸ್ಐ ಗುರುಚಂದ್ರ, ಉದಯಕುಮಾರ್, ಕಾರುಣ್ಯ ಚನ್ನಬಸವರವರಿಗೆ ಬಸವ ಪುರಸ್ಕಾರ. ಜಯ ಧ್ವಜ ನ್ಯೂಸ್ ರಾಯಚೂರು, ಮೇ 8 - ನಗರದ ಖ್ಯಾತ ಉದ್ಯಮಿ ಗ್ರೀನ್ ರಾಯಚೂರು ಗೌರವ ಅಧ್ಯಕ್ಷರಾದ ಕೊಂಡ ಹನುಮೇಶ,ಕವಿತಾಳ ಪಿಎಸ್ಐ ಗುರುಚಂದ್ರ, ಸಿರವಾರದ ಪರಿಸರವಾದಿ ಎನ್.ಉದಯಕುಮಾರ್, ಕಾರುಣ್ಯ ವೃದ್ಧಾಶ್ರಮದ ಡಾ. ಚೆನ್ನಬಸವ ಸ್ವಾಮಿ ಹಿರೇಮಠ ಸೇರಿದಂತೆ 10 ಜನರು ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶರಣ ಸೇವಾ ಸಮಿತಿ ಸಂಜಯನಗರ ಬೆಂಗಳೂರು ಹಾಗೂ ವಸಂತ ಲಕ್ಷ್ಮಿ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಬಸವ ಜಯಂತಿ ಆಚರಣೆ ಹಾಗೂ ಸಾಧಕರಿಗೆ ಬಸವ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದೇ ರವಿವಾರ ಸಂಜಯ ನಗರದ ಶ್ರೀ ರಮಣ ಮಹರ್ಷಿ ಸಭಾಂಗಣದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ಎಚ್ ಕೆ ಪಾಟೀಲ್, ಬೈರತಿ ಸುರೇಶ್ ಕೆಎಚ್ ಮುನಿಯಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಇವರಿಂದ ಪ್ರಶಸ್ತಿ ಪ್ರಧಾನ ನೆರವೇರಲಿದೆ ಎಂದು ಶರಣ ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .