Posts

Image
  ಅಂತರರಾಷ್ಟ್ರೀಯ ಕಾಮಿಕ್ಸ್ ಸ್ಪರ್ಧೆಯಲ್ಲಿ ಜಿಲ್ಲೆಯ ಸಿರಿ ಪರವತಿನೇನಿಗೆ ಗೌರವ ಪ್ರಶಸ್ತಿ ಜಯ ಧ್ವಜ ನ್ಯೂಸ್ ,ರಾಯಚೂರು,ಮೇ.30- ಜಿಲ್ಲೆಯ ಅಮರೇಶ್ವರ ಕ್ಯಾಂಪ್ ನಿವಾಸಿ ವಿನೋದಕುಮಾರ ಅವರ ಪುತ್ರಿ ಸಿರಿ ಪರವತಿನೇನಿ ಅವರು ಅಂತರರಾಷ್ಟ್ರೀಯ ಮಟ್ಟದ ನಾಲ್ಕನೇ ಎಫ್‌ಪಿಜಿ ವಿಶ್ವವಿದ್ಯಾಲಯಗಳ ಎಸ್‌ಡಿಜಿಗಳ ಇಂಗ್ಲಿಷ್ ನಾಲ್ಕು-ಫ್ರೇಮ್ ಕಾಮಿಕ್ಸ್ ಸ್ಕ್ರಿಪ್ಟ್ ಸ್ಪರ್ಧೆ-2026ರಲ್ಲಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಡಿಸೈನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸಿರಿ, "ಜಸ್ಟ್ ಒನ್ ಚಾಯಿಸ್" ಎಂಬ ಶೀರ್ಷಿಕೆಯ ಕಾಮಿಕ್ಸ್ ಕೃತಿಯ ಮೂಲಕ ಈ ಸಾಧನೆ ಮಾಡಿದ್ದಾರೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾದ ಎಸ್‌ಡಿಜಿ-12 (ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ) ವಿಷಯವನ್ನು ಆಧರಿಸಿ ರಚಿಸಲಾದ ಈ ಕಾಮಿಕ್ಸ್, ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮಗಳು ಹಾಗೂ ಪರಿಸರ ಸ್ನೇಹಿ ಆಯ್ಕೆಗಳ ಮಹತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ತೈವಾನ್‌ನ ಮಿಂಗ್ ಚಿ ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಚಾಂಗ್ ಗುಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳು ಜಂಟಿಯಾಗಿ ಆಯೋಜಿಸಿದ್ದ ಈ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸಿರಿಯವರ ಸೃಜನಶೀಲತೆ, ಸಾಮಾಜಿಕ ಕಾಳಜಿ ಹಾಗೂ ಪರಿ...
Image
  ಶೃತಿ ಸಾಹಿತ್ಯ ಮೇಳದಿಂದ ಶ್ರುತಿ-ಸಂಸ್ಕೃತಿ ಉಪನ್ಯಾಸ ಕಾರ್ಯಕ್ರಮ: ಆಳವಾದ ಅಧ್ಯಯನದಿಂದ ಮಾತ್ರ  ಪರಿಪೂರ್ಣ ಜ್ಞಾನ ಪ್ರಾಪ್ತಿ -ವಿಜಯಸಿಂಹಾಚಾರ್ಯ      ಜಯ ಧ್ವಜ ನ್ಯೂಸ್ ,ರಾಯಚೂರು,ಮೇ.30- ಯಾವುದೇ ವಿಷಯವಿರಲಿ ಆ ವಿಷಯದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿದಾಗ ಮಾತ್ರ ಪರಿಪೂರ್ಣ ಜ್ಞಾನ ಲಭಿಸಿ ಸಂಸ್ಕೃತಿ ಹಾಗೂ ಸಂಸ್ಕಾರ ಅನಾವರಣಗೊಳ್ಳುತ್ತದೆ, ಎಂದು ಖ್ಯಾತ ವಿದ್ವಾಂಸರು, ಸಾಹಿತಿಗಳಾದ  ಪಂ. ಸಿ.ಜೆ.ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ ಅವರು ಹೇಳಿದರು.   ಅವರು ಶ್ರುತಿ ಸಾಹಿತ್ಯ ಮೇಳ ರಾಯಚೂರು ವತಿಯಿಂದ ಶುಕ್ರವಾರದಂದು ಬೆಳಗ್ಗೆ ನಗರದ ಎಸ್‌ ಆರ್. ಕೆ.ಬಿ.ಎಡ್. ಕಾಲೇಜಿನ ಟ್ಯಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ ಶ್ರುತಿ ಸಂಸ್ಕೃತಿ ಕಾರ್ಯಕ್ರಮದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಎಂಬ ವಿಷಯದ ಮೇಲೆ ಮಾತನಾಡಿದರು. ಸಾಧನೆಯಿಂದ ನಿಧಾನವಾಗಿ  ಹುಟ್ಟಿದ ಪ್ರತಿಭೆ  ಕೊನೆಯವರೆಗೂ ಇರುತ್ತದೆ. ಆದರೆ ಪ್ರಸ್ತುತ ಪ್ರತಿಭೆಗಳು ಹಾಗೂ ಜ್ಞಾನಅಂದೇ ಹುಟ್ಟಿ ಅಂದೆ ಸಾಯುತ್ತವೆ. ಇಂದು ಅತಿಯಾದ ತಂತ್ರಜ್ಞಾನದ ಬಳಕೆಯ ಮೇಲೆ  ಅವಲಂಬಿತಗೊಂಡು ಸ್ವಂತಿಕೆಯು ಮರೆಯಾಗುತ್ತಿದೆ, ಆದ್ದರಿಂದ ಪ್ರತಿಯೊಬ್ಬರೂ ನಿರಂತರ ಸತತ ಅಧ್ಯಯನದ ರೂಢಿಯನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.  ಕಾರ್ಯಕ್ರಮವನ್ನು ಉದ್ಘಾಟಿಸಿದ ಅಂತರಾಷ್ಟ್ರೀಯ ಕಲಾವಿದರಾದ ಪಂಡಿತ ನರಸಿಂಹಲು ವಡವಾಟಿಯವರು ಮಾತನಾಡಿ...
Image
  ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯಿಂದ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ?                                                    ಜಯ ಧ್ವಜ ನ್ಯೂಸ್, ರಾಯಚೂರು,ಮೇ.29-    ಸಿದ್ದರಾಮಯ್ಯ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್  ಅಲಂಕರಿಸುವುದು  ಬಹುತೇಕ ಖಚಿತ ಎನ್ನಲಾಗಿದ್ದು ನಾಳೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗುತ್ತದೆ ಎನ್ನಲಾಗಿದೆ .ಅವರ ನೇತೃತ್ವದ ಸರ್ಕಾರದಲ್ಲಿ ಯಾರೆಲ್ಲ ಮಂತ್ರಿ ಮಂಡಲ ಸೇರುತ್ತಾರೆ ಎಂಬುದು ಇನ್ನೂ ನಿಖರವಾಗಿಲ್ಲ ಈಗಾಗಲೆ ಸಚಿವ ಸ್ಥಾನ ಆಕಾಂಕ್ಷಿಗಳು ಹೈಕಮಾಂಡ್ ಗೆ ಮನವರಿಕೆ ಮಾಡುವಲ್ಲಿ ನಿರತರಾಗಿದ್ದಾರೆ . ರಾಯಚೂರು ಜಿಲ್ಲೆಯಿಂದ ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಕುತೂಹಲವಿದ್ದು ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆಯೋ ಅಥವಾ ಹಳಬರನ್ನೇ ಮುಂದುವರಿಸುತ್ತಾರೋ ಎನ್ನುವುದು ಸ್ಪಷ್ಟ ಗೊಂಡಿಲ್ಲ.  ಹಿರಿಯ ರಾಜಕಾರಣಿ ಎಐಸಿಸಿ ಮಟ್ಟದಲ್ಲಿ ತಮ್ಮದೆ ವರ್ಚಸ್ಸು ಹೊಂದಿರುವ ಎನ್ ಎಸ್ ಬೋಸರಾಜುರವರು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ ಉಳಿದಂತೆ ಜಿಲ್ಲೆಯಿಂದ ನಾಲ್ವರ...
Image
  ತಾಲೂಕಿನಲ್ಲಿ ಎಲ್ ಪಿ ಜಿ ಪೆಟ್ರೋಲ್ ,ಡೀಸೆಲ್ ಅಭಾವವಿಲ್ಲ - ತಹಸೀಲ್ದಾರ್                                      ಜಯ ಧ್ವಜ ನ್ಯೂಸ್ , ರಾಯಚೂರು,ಮೇ.27- ತಾಲೂಕಿನಲ್ಲಿ ಎಲ್ ಪಿ ಜಿ ಪೆಟ್ರೋಲ್ , ಡೀಸೆಲ್ ಅಭಾವವಿಲ್ಲವೆಂದು ತಹಸೀಲ್ದಾರ್ ತಿಳಿಸಿದ್ದಾರೆ. ಗ್ಯಾಸ್ ಏಜೆನ್ಸಿಗಳು, ಪೆಟ್ರೋಲ್ ಬಂಕ್ ಗಳು ನೋ ಸ್ಟಾಕ್ ಬೋರ್ಡ್ ಅಂಟಿಸಬಾರದು ಸೂಕ್ತ ದಾಸ್ತಾನು ಸಂಗ್ರಹಿಸಬೇಕು ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತಹವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆ: ಬಿತ್ತನೆ ಬೀಜ, ರಸಗೊಬ್ಬರ ಜಿಲ್ಲೆಯಲ್ಲಿ ಸಮರ್ಪಕವಾಗಿ ಪೂರೈಕೆಯಾಗಲಿ -ಜಿಲ್ಲಾಧಿಕಾರಿ ಪೂವಿತಾ. ಎಸ್ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.26 - ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಸಲು ಬೀಜ ಮತ್ತು ರಸಗೊಬ್ಬರಗಳ ಕಂಪನಿಗಳ ಪ್ರತಿನಿಧಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ‌ನೀಡಿದರು. ಅವರಿಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ2026-27ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆಗಳ ಕುರಿತು ಕೃಷಿ ಇಲಾಖೆ ಹಾಗೂ ಬೀಜ ಮತ್ತು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳಿಗೆ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಮೇ 26ರವರೆಗೆ ಒಟ್ಟು 654 ಮಿಲಿ ಮೀಟರ್‌ ಮಳೆಯಾಗಿದ್ದು, ಇದರಲ್ಲಿ ಮಸ್ಕಿ ತಾ‌ಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಮತ್ತು ದೇವದುರ್ಗ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ.2026-27ನೇ  ಸಾಲಿನಲ್ಲಿ ಭತ್ತ, ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆಯಂತಹ ಒಟ್ಟು 2,18,861ಹೆಕ್ಟರ್ ಗಳಷ್ಟು ಏಕದಳ ಧಾನ್ಯಗಳ ಮುಂಗಾರು ಹಂಗಾಮಿನ ಕ್ಷೇತ್ರವಾರು ಗುರಿಯನ್ನು ಹೊಂದಿದ್ದು, ತೊಗರಿ, ಹೆಸರು, ಉದ್ದು, ಅ...
Image
  ನರಸಿಂಹಲು ಮಾಡಗಿರಿ ಉಚ್ಚಾಟನೆಗೆ ಆಗ್ರಹಿಸುವವರಿಂದಲೇ ಪಕ್ಷ ವಿರೋಧಿ ಚಟುವಟಿಕೆ -ರಮೇಶ್.                                                                                    ಜಯಧ್ವಜ ನ್ಯೂಸ್, ರಾಯಚೂರು, ಮೇ.26- ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸುವವರಿಂದಲೆ ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ನರಸಿಂಹಲು ಮಾಡಗಿರಿ ಬೆಂಬಲಿಗ ಹಾಗೂ ಸಂಬಂಧಿ ರಮೇಶ್ ಆರೋಪಿಸಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿನ್ನೆ ವಸಂತ ಕುಮಾರ್ ಬೆಂಬಲಿಗರಾದ ಅಂಜಿನ್ ಕುಮಾರ್ ಹಾಗೂ ಇತರರು ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಹೇಳಿದ್ದು ಸಮಂಜಸವಲ್ಲ ಬದಲಾಗಿ ವಸಂತಕುಮಾರ್ ರವರೇ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಚಟುವಟಿಕೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ ಅಲ್ಲದೆ ಅವರ ಬೆಂಬಲಿಗರು ಶಿವರಾಜ್ ಪಾಟೀಲ್ ರವರನ್ನು ಚುನಾವಣೆಯಲ್ಲಿ ಜಯಶಾಲಿಯಾದ ನಂತರ ಸನ್ಮಾನಿಸಿರುವ ದಾಖಲೆಗಳಿದ್ದು ಯಾರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಎನ್...
Image
  ತಾರಕಕ್ಕೇರಿದೆ ಬೆಂಬಲಿಗರ ಆರೋಪ ಪ್ರತ್ಯಾರೋಪ.                     ಜಯ ಧ್ವಜ ನ್ಯೂಸ್, ರಾಯಚೂರು,ಮೇ.26-  ಕಾಂಗ್ರೆಸ್    ಪ್ರಭಾವಿ  ರಾಜಕೀಯ ನಾಯಕರಿಬ್ಬರ ಬೆಂಬಲಿಗರ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು ಬೆಂಬಲಿಗರ ಸರಣಿ ಪತ್ರಿಕಾಗೋಷ್ಠಿ ಮೂಲಕ ಏಟಿಗೆ ಎದಿರೇಟು ಎನ್ನುವ ರೀತಿಯಲ್ಲಿ ಸಾಗಿದೆ. ನಗರದ ಹರಿಜನವಾಡದಲ್ಲಿ 5 ಕೋಟಿ ರೂ. ವೆಚ್ಚದ ಡಾ.ಬಾಬು ಜಗಜೀವನರಾಮ್  ಸಮುದಾಯ ಭವನ ನಿರ್ಮಾಣಕ್ಕೆ ಕಾರಣಿಕರ್ತರು ಸಚಿವ ಎನ್.ಎಸ್.ಬೋಸರಾಜು ಕಾರಣವೆಂದು ಬೋಸರಾಜು ಕಟ್ಟಾ ಬೆಂಬಲಿಗರಾದ ನರಸಿಂಹಲು ಮಾಡಿಗಿರಿಯವರು ಪತ್ರಿಕಾ ಜಾಹಿರಾತು ಪ್ರಕಟಗೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚಿತವಾದ ನಂತರ ಪತ್ರಿಕಾ ಗೋಷ್ಠಿಯಲ್ಲಿ ನರಸಿಂಹಲು ಮಾಡಗಿರಿ ಬೋಸರಾಜುರವರಿಂದಲೆ  ಅಭಿವೃದ್ಧಿ   ನಮ್ಮ ಬಡಾವಣೆಯಲ್ಲಿ ಆಗಿದೆ  ವಸಂತ ಕುಮಾರ್ ಅಭಿವೃದ್ಧಿ ಶೂನ್ಯ ವೆಂದು ಹೇಳಿದ ನಂತರ ಮರುದಿನವೇ ವಸಂತ ಕುಮಾರ್ ಬೆಂಬಲಿಗರ ಪಡೆಯಲ್ಲಿ ಗುರುತಿಸಿಕೊಂಡಿರುವ ಅಂಜಿನ ಕುಮಾರ್  ಪತ್ರಿಕಾ ಗೋಷ್ಟಿಯ ಮೂಲಕ ಪ್ರತ್ಯುತ್ತರ ನೀಡಿ ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಹೇಳಿದ ಮರುದಿನವೇ  ನರಸಿಂಹಲು ಮಾಡಗಿರಿ ಬೆಂಬಲಿಗರು ಪತ್ರಿಕಾ ಗೋಷ್ಠಿ ಏರ್ಪಡಿಸಿ ವಸಂತ ಕುಮಾರ್ ಪಕ್ಷ ವಿರೋಧಿ ನಡೆ ಬಗ್ಗೆ ಎಳೆ ಎಳೆಯಾಗಿ ಬಿಡಿ...