Posts

Image
  ಬ್ರಾಹ್ಮಣ ಸಮಾಜದಿಂದ ಸನ್ಮಾನ.                                                                                                                           ಜಯ ಧ್ವಜ ನ್ಯೂಸ್ , ರಾಯಚೂರು, ಜೂ.22- ಇತ್ತೀಚೆಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ನಿರ್ದೇಶಕರಾಗಿ ನಾಮನಿರ್ದೇಶನಗೊಂಡ ವಿಪ್ರ ಸಮಾಜದ ಡಾ. ಬಿ,ಕೆ ದೇಸಾಯಿ ರವರನ್ನು ಬ್ರಾಹ್ಮಣ ಸಮಾಜದ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.                       ಈ ಸಂದರ್ಭದಲ್ಲಿ  ಎಕೆಬಿಎಂಎಸ್  ಜಿಲ್ಲಾ ಜನಪ್ರತಿನಿಧಿ  ರಮೇಶ್ ಕುಲಕರ್ಣಿ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷರಾದ ಪ್ರಾಣೇಶ್ ಮುತಾಲಿಕ್ ,ಜಿಲ್ಲಾ ಯುವ ಸಂಚಾಲಕರಾದ ಶ್ರೀನಿವಾಸ್ ದೇಸಾಯಿ ಮಲದಕಲ್ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.
Image
  ಜೂ.28 ರಂದು ಉಚಿತ ನೇತ್ರ ತಪಾಸಣಾ ಶಿಬಿರ.                                            ಜಯ ಧ್ವಜ ನ್ಯೂಸ್ , ರಾಯಚೂರು,ಜೂ.22- ವಿಶ್ವ ಮಿತ್ರ ಟ್ರಸ್ಟ್ ಹಾಗೂ ಡಾ.ಅಗರವಾಲ್ಸ್ ಕಣ್ಣಿನ ಆಸ್ಪತ್ರೆ  ರಾಯಚೂರು ಸಂಯುಕ್ತ ಆಶ್ರಯದಲ್ಲಿ  ಜೂ.28 ರಂದು ನಗರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ನಗರದ ಬೋಳಮಾನದೊಡ್ಡಿ ರಸ್ತೆಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಿಗ್ಗೆ 10.30 ರಿಂದ 1 ಗಂಟೆ ವರೆಗೆ ಶಿಬಿರ ನಡೆಯಲಿದ್ದು ಅನುಭವಿ ನೇತ್ರ ತಜ್ಞರಿಂದ ದೃಷ್ಟಿ ದೋಷ ತಪಾಸಣೆ, ಹಿರಿಯ ನಾಗರೀಕರಿಗೆ ಕಣ್ಣಿನ ಪೊರೆ ತಪಾಸಣೆ, ವೈದ್ಯರ ಸಲಹೆ ಮೇರೆಗೆ ಉಚಿತ ಕನ್ನಡಕ ವಿತರಣೆ ನಡೆಯಲಿದ್ದು ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸುವವರು ನೋಂದಣಿಗಾಗಿ ಆಧಾರ್ ಕಾರ್ಡ್ ತರಬೇಕು, ಜನ ಸಂದಣಿ ತಪ್ಪಿಸಲು ಬೇಗ ಬರಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 7411687808, 9448695874 , 9980468012 , 9845506138 ಗೆ ಸಂಪರ್ಕಿಸುವಂತೆ ವಿಶ್ವ ಮಿತ್ರ ಟ್ರಸ್ಟ್ ಅಧ್ಯಕ್ಷರಾದ ಡಿ.ಕೆ. ಮುರಳೀಧರ್ ಕೋರಿದ್ದಾರೆ.
Image
  ಅತ್ಯಂತ ಮೌಲಿಕ ಸಾಹಿತ್ಯವನ್ನು  ರಚಿಸಿದ ದಾಸ ಸಾಹಿತ್ಯದ ಮಹನೀಯರು ಶ್ರೀ ಮೋಹನದಾಸರು- ಮುರಳಿಧರ ಕುಲಕರ್ಣಿ ಜಯ‌ ಧ್ವಜ ನ್ಯೂಸ್ ರಾಯಚೂರು , ಜೂ.21 - ದಾಸ ಸಾಹಿತ್ಯದ ಎರಡನೇ ಘಟ್ಟದ ವಿಜಯದಾಸರ ಪರಂಪರೆಯಲ್ಲಿ ಬರುವ ಶ್ರೀ ಮೋಹನ ದಾಸರು ಹರಿದಾಸ ಶ್ರೇಷ್ಠ ರಾಗಿದ್ದಾರೆ. ದಾಸ ಸಾಹಿತ್ಯಕ್ಕೆ ಅತ್ಯಂತ ಮೌಲಿಕ ಸಾಹಿತ್ಯವನ್ನು ನೀಡಿದ ದಾಸ ಸಾಹಿತ್ಯದ ಮಹನೀಯರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ಹೇಳಿದರು.     ಅವರು ಶನಿವಾರ ಸಂಜೆ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಡೆದ ಶ್ರೀ ಮೋಹನ ದಾಸರ 211ನೇ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.   ಶ್ರೀ ಮೋಹನ ದಾಸರು ವಿಜಯದಾಸರಿಗೆ ಸಾಕು ಮಗ ಹಂಪಿಯ ಚಕ್ರ್ ತೀರ್ಥದ ಬಳಿ ಜೀವನದಲ್ಲಿ ನೊಂದು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಶ್ರೀ ವಿಜಯದಾಸರು ತಾಯಿ ಮಗುವನ್ನು ಸಂರಕ್ಷಿಸಿ ಹಲವಾರು ರೋಗದಿಂದ ಬಳಲುತ್ತಿರುವ ಮಗುವನ್ನು ತಾವೇ ದತ್ತಕ್ಕೆ ತೆಗೆದುಕೊಂಡು ಮೋಹನ ದಾಸರನ್ನುಬೆಳೆಸಿ ಹರಿದಾಸ ಸಾಹಿತ್ಯದ ಶ್ರೇಷ್ಠ ದಾಸರನ್ನಾಗಿ ಮಾಡಿದ ಕೀರ್ತಿ ವಿಜಯದಾಸರಿಗೆ ಸಲ್ಲುತ್ತದೆ ಎಂದು ಹೇಳಿದರು.    ಈ ಸಂದರ್ಭದಲ್ಲಿ ವೇ.ಮೂ.ಪಂ. ಮುಕುಂದಾಚಾರ್ಯ ಸತ್ಯನಾಥ ಕಾಲೋನಿ ಅವರು ಉಪನ್ಯಾಸವನ್ನು ನೀಡುತ್ತಾ ಮೋಹನ ದಾಸರ ಕೀರ್ತನೆಗಳೆಲ್ಲವೂ ಸೈದ್ಧಾಂತಿಕ ಆಧಾರದ ಮೇಲೆ ರೂಪುಗೊಂಡಿವೆ. ಇ...
Image
  ಪಾರ್ವತಮ್ಮ ಪಾಪಾರೆಡ್ಡಿ ನಿಧನ ಹಿನ್ನಲೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಮುಂದೂಡಿಕೆ.                                                                                                  ಜಯ ಧ್ವಜ ನ್ಯೂಸ್ ರಾಯಚೂರು,ಜೂ.19- ಮಾಜಿ ಶಾಸಕ ಎ.ಪಾಪಾರೆಡ್ಡಿಯವರ ಧರ್ಮಪತ್ನಿ ಪಾರ್ವತಮ್ಮ ನಿಧನ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಆಯೋಜಿಸಲಾಗಿದ್ದ ಮೂರು ದಿನಗಳ ಮುನ್ನೂರು ಕಾಪು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಮುಂದೂಡಲಾಗಿದೆ ಎಂದು ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಹೇಳಿದರು. ಅವರಿಂದು ನಗರದ ಗದ್ವಾಲ್ ರಸ್ತೆಯ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಬಳಿಕ ಮಾತನಾಡಿ ಮುನ್ನೂರು ಕಾಪು ಸಮಾಜದ ಹಿರಿಯರು, ಯುವಕರು ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದು ಈ ಬಾರಿ ಸಮಾಜದ ಹಿರಿಯ ವ್ಯಕ್ತಿಯೊಬ್ಬರ ನಿಧನ ಹಿನ್ನಲೆ ದುಖದ ವಾತಾವರಣ ಕಾರಣದಿಂದ ಮುಂಗಾರು ಸಾಂಸ್ಕೃತಿಕ ಹಬ್ಬ ಮುಂದೂಡಲು ಸರ್ವಾನುಮತದಿಂದ ನಿರ್ಣಯ ...
Image
  ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮ:                                        ಪಾರ್ವತಮ್ಮನವರು ಪಾಪಾರೆಡ್ಡಿಯವರನ್ನು ಸಮಾಜ ಸೇವೆಗೆ ಪ್ರೇರೇಪಿಸಿದವರು- ಎನ್.ಶಂಕ್ರಪ್ಪ.                                                     ಜಯ ಧ್ವಜ ನ್ಯೂಸ್, ರಾಯಚೂರು, ಜೂ.19- ಮಾಜಿ ಶಾಸಕ ಎ.ಪಾಪಾರೆಡ್ಡಿಯವರನ್ನು ಸಮಾಜ ಸೇವೆಗೆ ಪ್ರೇರಣೆ ನೀಡಿದವರು ಪಾರ್ವತಮ್ಮನವರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಅಭಿಪ್ರಾಯ ಪಟ್ಟರು. ಅವರಿಂದು ನಗರದ ಗದ್ವಾಲ್ ರಸ್ತೆಯ ಮುನ್ನೂರು ಕಾಪು ಶ್ರೀ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿದ್ದ ಪಾರ್ವತಮ್ಮ ಪಾಪಾರೆಡ್ಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಪಾಪಾರೆಡ್ಡಿಯವರನ್ನು ಅನೇಕ ದಶಕಗಳಿಂದ ಆತ್ಮೀಯ ಒಡನಾಟಯುಳ್ಳವರಾದ ನಾನು ಅವರ ರಾಜಕೀಯ ಏಳ್ಗೆ ಮತ್ತು ಸಮಾಜ ಮುಖಿ ಕಾರ್ಯಕ್ಕೆ ಸದಾ ಬೆನ್ನೆಲುಬಾಗಿ ನಿಂತವರು ಪಾರ್ವತಮ್ಮನವರು ಎಂದರು. ಪಾಪಾರೆಡ...
Image
  ಭಾರತೀಯ ರೈಲ್ವೆ - ದಿವ್ಯಾಂಗಜನ ರಿಯಾಯಿತಿ ಕಾರ್ಡ್ ಆನ್ಲೈನ್ ನಲ್ಲಿ ಲಭ್ಯ  - ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಜೂ.18- ಭಾರತೀಯ ರೈಲ್ವೆ ಈಗ ದಿವ್ಯಾಂಗಜನ ಪ್ರಯಾಣಿಕರಿಗೆ ರೈಲ್ವೆ ರಿಯಾಯಿತಿ ಫೋಟೋ ಗುರುತಿನ ಚೀಟಿ ನೀಡಿಕೆ ಮತ್ತು ನವೀಕರಣವನ್ನು ಸೌಲಭ್ಯವನ್ನು ಇನ್ನು ಮುಂದೆ  ಸಂಪೂರ್ಣ ಆನ್ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ತಿಳಿಸಿದ್ದಾರೆ.  ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಅವರು,  ಸಂಪೂರ್ಣ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ, ದಾಖಲೆ ಅಪ್ಲೋಡ್, ಸ್ಥಿತಿ ಪರಿಶೀಲನೆ, ಅನುಮೋದಿತ ಕಾರ್ಡ್ ಡೌನ್ಲೋಡ್ - ಎಲ್ಲವೂ ಡಿಜಿಟಲೀಕರಣ ಮಾಡಲಾಗಿದೆ.   ರೈಲ್ವೆ ಕಚೇರಿಗೆ ಹೋಗುವ ಅಗತ್ಯವಿಲ್ಲ:  ಮೊದಲು ರೈಲ್ವೆ ಕಚೇರಿಗೆ ಹೋಗಬೇಕಿತ್ತು. ಅಲ್ಲಿಂದ ಡಿವಿಜನಲ್ ಕಚೇರಿಗೆ ರವಾನೆ ಆಗಿ ಅಲ್ಲಿ ಪರಿಶೀಲನೆ ಮಾಡಿ ಕಾರ್ಡ್ ನೀಡಲಾಗುತ್ತಿತ್ತು. ಹಲವು ದಿನಗಳ ಕಾಲ ಕಾಯಬೇಕಾಗಿತ್ತು.  ಈಗ ಡಿಜಿಟಲ್ ಆಗಿ ಆಗುತ್ತದೆ  ರೈಲು ಟಿಕೆಟ್ನಲ್ಲಿ ರಿಯಾಯಿತಿ ಪಡೆಯಲು ಅರ್ಹರಾದ ದಿವ್ಯಾಂಗಜನ ಪ್ರಯಾಣಿಕರು ಆನ್ಲೈನ್ ಅರ್ಜಿ ಸಲ್ಲಿಸಲು ವೆಬ್ಸೈಟ್: http://divyangjanid.indianrail.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಭಾರತ ಸರಕಾರದ ನೈಋತ್ಯ ರೈಲ್ವೆ ದಿವ್ಯಾಂಗಜನರಿಗೆ ಈಗ ಸಿಹಿ ಸುದ್ಧಿ ನೀಡಿದ್ದು  ಕರ್ನ...
Image
  ನಾಳೆ ಮುನ್ನೂರು ಕಾಪು ಸಮಾಜದಿಂದ    ಪಾರ್ವತಮ್ಮರವರ ಶ್ರದ್ಧಾಂಜಲಿ ಕಾರ್ಯಕ್ರಮ.                                                                    ಜಯಧ್ವಜ ನ್ಯೂಸ್ ರಾಯಚೂರು, ಜೂ.18- ನಿನ್ನೆ ನಿಧನರಾದ ಮಾಜಿ ಶಾಸಕ ಎ.ಪಾಪಾರೆಡ್ಡಿರವರ ಧರ್ಮಪತ್ನಿ ಪಾರ್ವತಮ್ಮರವರ ಶ್ರದ್ಧಾಂಜಲಿ ಕಾರ್ಯಕ್ರಮ ಜೂ.19 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಗದ್ವಾಲ್ ರಸ್ತೆಯ ಮುನ್ನೂರು ಕಾಪು ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ  ಆಯೋಜಿಸಲಾಗಿದೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ  ಮುನ್ನೂರು ಕಾಪು ಸಮಾಜದ ಹಿರಿಯರು, ಮುಖಂಡರು, ಪದಾಧಿಕಾರಿಗಳು, ಸದಸ್ಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗಲಿದ ಪಾರ್ವತಮ್ಮರವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಮುನ್ನೂರು ಕಾಪು ಸಮಾಜದ ಅಧ್ಯಕ್ಷರಾದ ಬೆಲ್ಲಂ ನರಸರೆಡ್ಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.