ಗಡಿ ಗ್ರಾಮಗಳ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆ ಜಯ ಧ್ವಜ ನ್ಯೂಸ್ , ರಾಯಚೂರು , ಮಾ.2- ಗಡಿ ಭಾಗವಾದ ಕೊರ್ತ ಕುಂದಾ , ಡಿ ರಾಂಪುರ ಇನ್ನಿತರ ಗ್ರಾಮಗಳಿಗೆ ರಾಯಚೂರ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ದುರಸ್ತಿ ಮಾಡಬೇಕು ಹತ್ತು ವರ್ಷಗಳಿಂದ ವಾರ್ಷಿಕ ನಿರ್ವಹಣೆ ಮಾಡದೇ ನಿರ್ಲಕ್ಷ ತೋರಿದ ಪಿಡಬ್ಲ್ಯೂ ಅಧಿಕಾರಿಗಳ ಮೇಲೆ ಕ್ರಮ ಕೇಳಬೇಕು ಎಂದು ಸಗಮ್ ಕುಂಟ ಗ್ರಾಮದಲ್ಲಿ ಮುಖ್ಯ ರಸ್ತೆಯನ್ನು ತಡೆದು ಕಲ್ಯಾಣ ಕರ್ನಾಟಕ ರೈತ ಸಂಘದಿಂದ ರಸ್ತೆ ತಡೆ ಹೋರಾಟ ಹಮ್ಮಿಕೊಳ್ಳಲಾಯಿತು. ಸಗಮ್ ಕುಂಟ ಯರಗುಂಟ ಶಾಖವಾದಿ ಪಲ್ಕಂ ದೊಡ್ಡಿ ಪೋತುಗಲ್ ಮೂಲಕಾ ರಾಯಚೂರಿಗೆ ಬರುವ ಮಾರ್ಗವು ಸಂಪೂರ್ಣವಾಗಿ ಹಾಳಾಗಿದ್ದು ರೈತರು ಓಡಾಡುವುದಕ್ಕೆ ಕಷ್ಟವಾಗಿದೆ ತಗ್ಗು ಗುಂಡಿಗಳು ನಿರ್ಮಾಣವಾಗಿ ಸಾವನ್ನು ಕೈಬೀಸಿ ಕರೆಯುತ್ತಿದೆ,ಕೃಷ್ಣಾ ನದಿಯ ಬದಿಯಲ್ಲಿರುವ ಹ...