ಕಲಾ ಸುಂಕುಲ ಸಂಸ್ಥೆಯಿಂದ ಬಸವ ಜಯಂತಿ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರಶಸ್ತಿಗಳು ಮನುಷ್ಯನ ಯಶಸ್ಸಿನ ಮೆಟ್ಟಿಲುಗಳು- ಕೆ ಶಿವನಗೌಡ ನಾಯಕ ಜಯ ಧ್ವಜ ನ್ಯೂಸ್ ,ರಾಯಚೂರು ಏ. 19- ಮನುಷ್ಯ ತನ್ನ ಬದುಕಿನಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ದಾರಿದೀಪವಾಗಬೇಕು ಯಾವುದೇ ನಿರೀಕ್ಷೆಯಿಲ್ಲದೆ ಸಾಧನೆ ಮಾಡುವುದು ವಿಶೇಷ ನಿಮ್ಮ ಪರಿಶ್ರಮದಿಂದ ಪ್ರಶಸ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ನೀವು ಮಾಡುವ ಸಮಾಜ ಮುಖಿ ಕೆಲಸ ಆಗಿರಬೇಕು. ಪ್ರಶಸ್ತಿಗಳು ಮನುಷ್ಯನ ಯಶಸ್ಸಿನ ಮೆಟ್ಟಿಲುಗಳು ಎಂದು ಮಾಜಿ ಸಚಿವ ಕೆ ಶಿವನಗೌಡ ಹೇಳಿದರು. ಅವರಿಂದು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಏರ್ಪಡಿಸಿದ್ದ ಬಸವ ಜಯಂತಿ ಅಂಗವಾಗಿ ಸಂಗೀತೋತ್ಸವ ಪುಸ್ತಕ ಲೋಕಾರ್ಪಣೆ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆಯನ್ನು ಮಾಡಿ ಮಾತನಾಡಿ ಸಂಗೀತಕ್ಕೆ ರೋಗ ನಿರೋಧಕ ಶಕ್ತಿ ಇದೆ. ಕಲಾ ಸುಂಕುಲ ಸಂಸ್ಥೆ ರಾಯಚೂರು ಜಿಲ್ಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿರುವ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು. ಮುಕ್ಕಣ್ಣ ಕರಿಗಾರ್ ಬರೆದಿರುವ ಮುಕ್ಕಣ್ಣ ಕಂಡ ಬಸವಣ್ಣ ಪುಸ್ತಕ ಮತ್ತು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾಕ್ಟರ್ ಸತೀಶ್ ಕುಮಾರ್ ಹೊಸಮನಿ ಅವರು ಬರೆದಿರುವ ಶರಣರ ದರ್ಶನ ಎರಡು ಪುಸ್ತಕಗಳು ಇಂದು ಲೋಕಾರ್ಪ...