ಪತ್ರಿಕಾ ಭವನದಲ್ಲಿ ರಿಪೋರ್ಟ್ ರ್ಸ್ ಗಿಲ್ಡ್ ನಿಂದ ಪ್ರತಿಭಾ ಪುರಸ್ಕಾರ, ಐದು ಸಾವಿರ ರೂ. ನಗದು ಬಹುಮಾನ ವಿತರಣೆ ಜಯ ಧ್ವಜ ನ್ಯೂಸ್ , ರಾಯಚೂರು,ಮೇ.22- ಪತ್ರಕರ್ತರ ಮಕ್ಕಳಿಗೆ ವಿದ್ಯೆಗೆ ಪ್ರೋತ್ಸಾಹ ನೀಡಲು ಪತ್ರಕರ್ತರ ಸಂಘಗಳು ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ರಾಯಚೂರು ಪ್ರಭಾ ಪತ್ರಿಕೆ ಸಂಪಾದಕರಾದ ಸುಶೀಲೇಂದ್ರ ಸೋದೆಗಾರ ಸಲಹೆ ನೀಡಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಮಕ್ಕಳಿಗಾಗಿ ಎಸ್ ಎಸ್ ಎಲ್ ಸಿ ಪಿಯುಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರ ಮಕ್ಕಳಿಗಾಗಿ ಉತ್ತಮ ಕೆಲಸ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಮ ವರ್ಗ ದಿಂದ ಅನೇಕ ಪತ್ರಕರ್ತರು ಬಂದಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶುಲ್ಕ ಕಟ್ಟುವಷ್ಟು ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. ಎಲ್ಲರೂ ಸೇರಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅಗತ್ಯ ನೆರವು ಸಿಗುವಂತೆ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು.. ಪತ್ರಕರ್ತರ ಮಕ್ಕಳಿಗೆ ನೆರವು ಕೊಡಿಸಲು ಸಲಹೆ ಮಾಡಿದರು. ನಗದು ಬಹುಮಾನ 5ಸಾವಿರ ರೂ ನೀಡುತ್ತಿರುವುದಕ್ಕೆ ಶ್ಲಾಘಿಸಿದರು. ರಿಪೋರ್ಟರ್ಸ ಗಿಲ್ಡ್ ಸದಸ್ಯರಾದ ಕೆ.ಸತ್ಯ ನಾರಾಯಣ ಮಾತನಾಡಿ, ಸಮಾಜದಲ್ಲಿ ಅಂಕುಡೊಂಕುಗಳಿಗೆ ಪರಿಹಾರ ಹುಡುಕುವ ಜೊತೆಗೆ ಕುಟುಂಬ ನಿರ್ವಹಣೆ ಮಾಡಲು ಎಲ್ಲರೂ ಶ್ರಮ ಪಡುತ್ತಾರೆ ಗಿಲ್ಡ್ ನ ಅನೇಕ ಕಾರ್ಯಕ್ರ...