Posts

Image
  ಅಂಜುಮನ್ - ಎ ರಾಯಚೂರು ವತಿಯಿಂದ ಮೇ 11 ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ. 9-  ನಗರದ ಅಂಜುಮನ್-ಎ-ರಾಯಚೂರು ಸಂಸ್ಥೆಯ ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿದ ನಗರದ ವಿದ್ಯಾರ್ಥಿಗಳನ್ನು ಗೌರವಿಸಲು ‘ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ’ ಸಮಾರಂಭವನ್ನು ಆಯೋಜಿಸಲಾಗಿದೆ . ಮೇ.11 ರಂದು ಸೋಮವಾರ ಸಂಜೆ 6:00 ಗಂಟೆಗೆ ನಗರದ ಸ್ಟೇಷನ್ ರಸ್ತೆಯಲ್ಲಿರುವ ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು , ನಗರದ ಯುವ ಪ್ರತಿಭೆಗಳನ್ನು ಗುರುತಿಸಿ, ಅವರ ಸಾಧನೆಯನ್ನು ಸಂಭ್ರಮಿಸುವುದು ಮತ್ತು ಮುಂದಿನ ಹಂತದ ಶಿಕ್ಷಣಕ್ಕೆ ಸ್ಫೂರ್ತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು , ಈ ಕಾರ್ಯಕ್ರಮದಲ್ಲಿ ಸಿಂಧನೂರು ಶಾಸಕ  ಹಂಪನಗೌಡ ಬಾದರ್ಲಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ  ಎ. ವಸಂತ ಕುಮಾರ್ ಹಾಗೂ ರಾಯಚೂರು ಗ್ರಾಮೀಣ ಶಾಸಕ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಬಸನಗೌಡ ದದ್ದಲ್ ಪಾಲ್ಗೊಳ್ಳಲಿದ್ದು,  ​ಅಂಜುಮನ್-ಎ-ರಾಯಚೂರು ಸಂಚಾಲಕರಾದ ಜನಾಬ್ ಹಾರಿಸ್ ಸಿದ್ದಿಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಹಜರತ್ ಸೈಯದ್ ಶಾ ನಬಿ ಮೊಹಿಯುದ್ದೀನ್ ಖಾದ್ರಿ ಚಾಂದ್ ಪೀರ್ ಸಾಹ...
Image
ಮಹಾನಗರ ಪಾಲಿಕೆ ಕರ ಸಂಗ್ರಹಕ್ಕೆ ಆಸಕ್ತಿ:            ಕಸ ಸಂಗ್ರಹಕ್ಕೆ ನಿರಾಸಕ್ತಿ;    ವಾರ್ಡ್ ನಂ. 17ರಲ್ಲಿ ಕಸ ವಿಲೇವಾರಿ ಕಡೆಗಣನೆ.                                                                                                                              ಜಯಧ್ವಜ ನ್ಯೂಸ್ , ರಾಯಚೂರು,ಮೇ.9-               ಮಹಾನಗರ ಪಾಲಿಕೆ ಕರ ಸಂಗ್ರಹಕ್ಕೆ ತೋರಿದ ಆಸಕ್ತಿ ಕಸ ಸಂಗ್ರಹಕ್ಕೆ ತೋರುತ್ತಿಲ್ಲ ವೆಂಬುದಕ್ಕೆ  ಸ್ಪಷ್ಟ ನಿದರ್ಶನ ಕಾಣುತ್ತಿದೆ.  ಆಸ್ತಿ ಕರ ಸಂಗ್ರಹ ವೇಳೆ   ಪ್ರತಿ ಮನೆಗಳಿಂದ  ಕಸ ವಿಲೇವಾರಿ ಸೆಸ್ ಪಡೆಯುವ ಮಹಾನಗರ ಪಾಲಿಕೆ ಕಸ ಸಂಗ್ರಹ ಕಡೆಗಣನೆ ಮಾಡಿದ್ದು ವಿಪರ್ಯಾಸದ ಸಂಗತಿಯಾಗಿದೆ. ನಗರಸಭೆ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ಅದರ ಕಾರ್ಯವೈಖರಿಯಲ್ಲಿ...
Image
  ಕೊಂಡ ಹನುಮೇಶ, ಪಿಎಸ್ಐ ಗುರುಚಂದ್ರ,  ಉದಯಕುಮಾರ್, ಕಾರುಣ್ಯ ಚನ್ನಬಸವರವರಿಗೆ ಬಸವ ಪುರಸ್ಕಾರ.   ಜಯ ಧ್ವಜ ನ್ಯೂಸ್ ರಾಯಚೂರು, ಮೇ 8 -    ನಗರದ ಖ್ಯಾತ ಉದ್ಯಮಿ ಗ್ರೀನ್ ರಾಯಚೂರು ಗೌರವ ಅಧ್ಯಕ್ಷರಾದ ಕೊಂಡ ಹನುಮೇಶ,ಕವಿತಾಳ ಪಿಎಸ್ಐ ಗುರುಚಂದ್ರ, ಸಿರವಾರದ ಪರಿಸರವಾದಿ ಎನ್.ಉದಯಕುಮಾರ್, ಕಾರುಣ್ಯ ವೃದ್ಧಾಶ್ರಮದ ಡಾ. ಚೆನ್ನಬಸವ ಸ್ವಾಮಿ ಹಿರೇಮಠ ಸೇರಿದಂತೆ 10 ಜನರು ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  ಶರಣ ಸೇವಾ ಸಮಿತಿ ಸಂಜಯನಗರ ಬೆಂಗಳೂರು ಹಾಗೂ ವಸಂತ ಲಕ್ಷ್ಮಿ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಬಸವ ಜಯಂತಿ ಆಚರಣೆ ಹಾಗೂ ಸಾಧಕರಿಗೆ ಬಸವ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದೇ ರವಿವಾರ ಸಂಜಯ ನಗರದ ಶ್ರೀ ರಮಣ ಮಹರ್ಷಿ ಸಭಾಂಗಣದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ಎಚ್ ಕೆ ಪಾಟೀಲ್, ಬೈರತಿ ಸುರೇಶ್  ಕೆಎಚ್ ಮುನಿಯಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಇವರಿಂದ ಪ್ರಶಸ್ತಿ ಪ್ರಧಾನ ನೆರವೇರಲಿದೆ ಎಂದು ಶರಣ ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
Image
  ರಿಂಗ್ ರೋಡ್ ಗೆ ಅನುಮತಿ :                  ಆರ್ ಡಿ ಎ ಅಧ್ಯಕ್ಷ       ರಾಜಶೇಖರ ರಾಮಸ್ವಾಮಿಗೆ  ಡಾ. ಬಾಬುರಾವ್ ಸನ್ಮಾನ ಜಯ ಧ್ವಜ ನ್ಯೂಸ್ , ರಾಯಚೂರು, ಮೇ.8- ರಿಂಗ್ ರೋಡ್ ಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಅವರಿಗೆ ಸಮಾಜ ಸೇವಕ ಡಾ.ಬಾಬುರಾವ್ ಅವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗೌರವ ‌ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಶೇಖರ ರಾಮಸ್ವಾಮಿ ಯವರು ನಗರಾಭಿವೃದ್ಧಿ ಪ್ರಾಧಿಕಾರದ ‌ಸಾಮಾನ್ಯ ಸಭೆಯಲ್ಲಿ ನಗರಕ್ಕೆ ಅವಶ್ಯವಾಗಿರುವ ರಿಂಗ್ ರೋಡ್ ಡಿಪಿಆರ್  ಕೈಗೊಳ್ಳಲು ತೀರ್ಮಾನಿಸಲಾಗಿದೆ. ರಿಂಗ್ ರೋಡ್ ಅಗತ್ಯತೆ ಕುರಿತು ಡಾ.ಬಾಬುರಾವ್ ಅವರು ಮನವಿ ಸಲ್ಲಿಸಿದ್ದರು. ಈ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿದಾಗ, ವಿಧಾನ ಪರಿಷತ್ ಸದಸ್ಯ ಎ..ವಸಂತಕುಮಾರ, ಆಯುಕ್ತರು ಹಾಗೂ ಸದಸ್ಯರ ಸಮಕ್ಷಮದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಒಪ್ಪಿಗೆ ಪಡೆದು ೪೮ ಲಕ್ಷ ರೂ.ವೆಚ್ಚದಲ್ಲಿ ಡಿಪಿಆರ್ ಕೈಗೊಳ್ಳಲು  ತೀರ್ಮಾನಿಸಲಾಗಿದ್ದು ೧೫ ದಿನಗಳೊಳಗೆ ಇದಕ್ಕೊಂದು ಪರಿಪೂರ್ಣ ರೂಪುರೇಷೆ ತಯಾರಿಸಲಾಗುವುದೆಂದರು. ನಂತರ ಡಾ.ಬಾಬುರಾವ್ ಮಾತನಾಡಿ, ೮೦೦ಕ್ಕೂ ಹೆಚ್ಚು ಬಲಿ ಪಡೆದಿರುವ ರಸ್ತೆಯ ಒತ್ತಡ ಕಡಿಮೆ ಮಾಡಲು ರಿಂಗ್ ರೋಡ್ ಅವಶ್ಯಕತೆ ಇರುವುದನ್ನು ನಗರಾಭಿವೃದ್...
Image
  ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ- ನೂತನ ‌ಜಿಲ್ಲಾಧಿಕಾರಿ ಪೂವಿತಾ ಎಸ್  ಜಯ ಧ್ವಜ ನ್ಯೂಸ್ ,ರಾಯಚೂರು. ಮೇ.7- ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಶ್ರಮಿಸೋಣ ಎಂದು ರಾಯಚೂರು ನೂತನ ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು. ಅವರು ಗುರುವಾರ ಜಿಲ್ಲಾಡಳಿತ ರಾಯಚೂರು ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೂತನ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರಿಗೆ ಸ್ವಾಗತ ಹಾಗೂ ನಿರ್ಗಮಿತ ಜಿಲ್ಲಾಧಿಕಾರಿ ನಿತೀಶ್. ಕೆ. ಅವರಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಯಚೂರು ಜಿಲ್ಲೆಗೆ ನನ್ನ ಮೇಲಾಧಿಕಾರಿಗಳು ಹೋಗುತ್ತಿರಾ ಎಂದಾಗ ನಾನು ಹಿಂದೆ ಮುಂದೆ ಯೋಚನೆ ಮಾಡದೆ ಎಸ್ ಎಂದು ಹೇಳಿದೆ ಎಕೆಂದರೆ ನಾನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಲಸ ಮಾಡಿರಲಿಲ್ಲ ಹಾಗಾಗಿ ನಾನು ಓಕೆ ಎಂದೆ. ನಿರ್ಗಮಿತ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿ ನಮಗೆ ದಾರಿ ಸುಲಭವಾಗಿ ಮಾಡಿದ್ದಾರೆ. ಎರಡು ವರ್ಷಗಳ ಕಡಿಮೆ ಅವಧಿಯಲ್ಲಿ ಅವರು ಉತ್ತಮ ಕೆಲಸ ಮಾಡಿರುವುದಕ್ಕೆ ತಾವು ಹೇಳುತ್ತಿರುವುದರಿಂದ ತಿಳಿಯುತ್ತದೆ. ಜಿಲ್ಲೆಯ ಅಭಿವೃದ್ಧಿಯ ದಾರಿಯಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು. ನಿರ್ಗಮಿತ ಜಿಲ್ಲಾಧಿಕಾರಿ ‌ನಿತೀಶ್ ಕೆ. ಅವರು ಮಾತನಾಡಿ ರಾಯಚೂರು ಜಿಲ್ಲೆಗೆ ಬರುವ ಮುಂಚೆ ಅನೇಕ ತಪ್ಪು ಕಲ್ಪನೆಗಳಿದ್ದವು. ಇಲ್ಲಿ ಪ್ರಾಮಾಣ...
Image
  ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ  ಪೂವಿತಾ ಎಸ್. ಅಧಿಕಾರ ಸ್ವೀಕಾರ:                              ಜನ ಪ್ರತಿನಿಧಿಗಳ, ಅಧಿಕಾರಿಗಳ ಸಹಕಾರದಿಂದ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುತ್ತೇನೆ- ನೂತನ ಡಿಸಿ ಜಯ ಧ್ವಜ ನ್ಯೂಸ್ ,ರಾಯಚೂರು. ಮೇ.6- ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ  ಪೂವಿತಾ ಎಸ್.   ರವರು ಇಂದು ಸಂಜೆ ಅಧಿಕಾರ ಸ್ವೀಕರಿಸಿದರು. ನೂತನ ಜಿಲ್ಲಾಧಿಕಾರಿಗಳಿಗೆ ನಿರ್ಗಮಿತ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೂವಿತಾ ಎಸ್. ಅವರು ಐತಿಹಾಸಿಕ ರಾಯಚೂರು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿರುವುದಕ್ಕೆ ನನಗೆ ತುಂಭಾ ಹೆಮ್ಮೆಯಾಗುತ್ತಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮೊದಲ ಆಧ್ಯತೆ ನೀಡುವುದರ ಜೊತೆಗೆ ಹಿಂದಿನ ಜಿಲ್ಲಾಧಿಕಾರಿಯವರ ಕೆಲಸಗಳನ್ನು ಮುಂದುವರೆಸುತ್ತೇನೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದೆ. ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರವನ್ನು ಕೋರುತ್ತೆನೆ ಎಂದು ಹೇಳಿದರು. ನೂತನ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಮೂಲತಃ ತಮಿಳು ನಾಡಿನ ರಾಜ್ಯದವರಾಗಿದ್ದು. 2016 ಕರ್ನಾಟಕ ಬ...
Image
  ನೂತನ ಜಿಲ್ಲಾಧಿಕಾರಿಗಳಾಗಿ ಪೂವಿತಾ ನೇಮಕ.                                          ಜಯ ಧ್ವಜ ನ್ಯೂಸ್ , ರಾಯಚೂರು,ಮೇ.5- ನೂತನ ಜಿಲ್ಲಾಧಿಕಾರಿಗಳಾಗಿ ಪೂವಿತಾರವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ನಿತೀಶ್.ಕೆ. ರವರು ವರ್ಗಾವಣೆಗೊಂಡ ಕಾರಣ ನೂತನ ಜಿಲ್ಲಾಧಿಕಾರಿಗಳನ್ನಾಗಿ ಪೂವಿತಾರವರನ್ನು ನೇಮಕಗೊಳಿಸಲಾಗಿದ್ದು ಅವರು ಈ ಮೊದಲು ನಗರ ಮೂಲ ಸೌಕರ್ಯ ಹಾಗೂ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ .