ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದವರು ಶ್ರೀಶೇಷ ದಾಸರು -ಮುರಳಿಧರ ಕುಲಕರ್ಣಿ ಜಯ ಧ್ವಜ ನ್ಯೂಸ್ , ರಾಯಚೂರು, ಏ.25- ಗದ್ವಾಲ ಸಂಸ್ಥಾನ ರಾಜನಿಂದ ಅವಮಾನಿತಗೊಂಡು, ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದಂತ ಶೇಷಪ್ಪನವರು ಚಿಂತ್ರವಲ್ಲಿಯ ಪ್ರಾಣದೇವರ ಸೇವೆಯನ್ನು ಮಾಡಿ ಶ್ರೀ ವಿಜಯದಾಸರ ಅನುಗ್ರಹದಿಂದ ಶೇಷ ದಾಸರಾಗಿ ದಾಸ ಸಾಹಿತ್ಯಕ್ಕೆ ವಿಶೇಷ ಶ್ರೇಷ್ಠ ಕೊಡುಗೆ ನೀಡಿದ ಮಹನೀಯರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು. ಅವರು ನಿನ್ನೆ ದಾಸ ಶ್ರೇಷ್ಠರಾದ ಶ್ರೀ ಶೇಷ ದಾಸರ 208ನೆಯಆರಾಧನೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಶ್ರೀಶೇಷ ದಾಸರು 43 ಸುಳಾದಿಗಳನ್ನು, 14 ಉಗಾ ಭೋಗ ಗಳನ್ನು, 4 ಪದ್ಯಗಳನ್ನು, ಪಂಚ ಪ್ರಮೇಯಗಳನ್ನು ,ಗದ್ಯಗಳನ್ನು ,ಶ್ರೀ ವಿಜಯರಾಯರ ಚಕ್ರಾಬಾಜ್ಜ ಮಂಡಲ ವಿವರವನ್ನು ರಚಿಸಿದ್ದಾರೆ. ಇವುಗಳಲ್ಲಿ ಪ್ರಾರ್ಥನಾ ಸುಳಾದಿ, ಜ್ಞಾನ ಯಜ್ಞ ಸುಳಾದಿ,ವಾರದ ಸುಳಾದಿ, ಶ್ರೀ ಲಕ್ಷ್ಮೀದೇವಿ ,ಸುಳಾದಿ ಮುಂತಾದವುಗಳೆಲ್ಲ ತುಂಬಾ ಪ್ರಸಿದ್ಧಿಯನ್ನು ಪಡೆದಿವೆ, ಎಂದು ಹೇಳಿದರು. ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರುರವರು ಮಾತನಾಡಿ, ದೈವಾಂಶ ಸಂಭೂತರಾದ ಶ್ರೀ ಶೇಷ ದಾಸರು ಜನಸಾಮಾನ್ಯರಿಗೆ ಸನ್ಮಾರ್ಗದ ಹಾದಿ ತೋರಿಸುವ ಕಾರ್ಯವನ್...