Posts

Image
  ವಂದೇ ಮಾತರಂ ಗೀತೆಗೆ ಅಗೌರವ ಖಂಡಿಸಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜಯ‌ ಧ್ವಜ ನ್ಯೂಸ್ ,ರಾಯಚೂರು,ಆ.16- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ “ವಂದೇ ಮಾತರಂ” ಗೀತೆಗೆ ಅಗೌರವ ತೋರಿಸಲಾಗಿದೆ ಎಂದು ಆರೋಪಿಸಿ, ಬಿಜೆಪಿ ಯುವ ಮೋರ್ಚಾ ರಾಯಚೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಭಾನುವಾರ ಸಂಜೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.  ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಎನ್. ವಿನಾಯಕ್ ರಾವ್  ಅವರು ಮಾತನಾಡಿ “ವಂದೇ ಮಾತರಂ ಕೇವಲ ಗೀತೆಯಲ್ಲ. ಅದು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ, ದೇಶಭಕ್ತಿ ಹಾಗೂ ರಾಷ್ಟ್ರೀಯ ಭಾವನೆಯೊಂದಿಗೆ ಬೆಸೆದುಕೊಂಡಿರುವ ಮಹತ್ವದ ರಾಷ್ಟ್ರಗೀತೆ. ಇಂತಹ ಗೀತೆಗೆ ಯಾವುದೇ ರೀತಿಯ ಅಗೌರವ ತೋರುವುದು ದೇಶದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ವಿಡಿಯೋ ಹಾಗೂ ಈ ಕುರಿತು ಪ್ರಕಟವಾದ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿದ ಯುವ ಮೋರ್ಚಾ ಮುಖಂಡರು, ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಹೇಳಿದರು. “ವಂದೇ ಮಾತರಂ”ಗೆ ಗೌರವ ನೀಡುವ ವಿಚಾರದಲ್ಲಿ ಯಾವುದೇ ರಾಜಕೀಯ ಭೇದಭಾವ ಇರಬ...
Image
  ಸಿಕಿಂದರ್ ಬಾದ್ ನಿಂದ ತಿರುಪತಿವರೆಗೆ ವಾರಕ್ಕೆರಡು ಸಲ ಸೂಪರ್ ಫಾಸ್ಟ್ ಎಕ್ಸ ಪ್ರೆಸ್ ರೈಲು- ಡಾ.ಬಾಬುರಾವ್  ಜಯ ಧ್ವಜ ನ್ಯೂಸ್ ,  ರಾಯಚೂರು,ಆ.16 - ಮುತ್ತಿನ ನಗರಿಯಿಂದ ಶ್ರೀ ವೆಂಕಟೇಶ್ವರನ ಸನ್ನಿಧಿಗೆ ತಿರುಪತಿ ಸೂಪರ್ ಫಾಸ್ಟ್  ಎಕ್ಸಪ್ರೆಸ್ ರೈಲು ವಾರಕ್ಕೆರಡು ಬಾರಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿರುವುದಾಗಿ ರೈಲ್ವೆ ಸಲಹಾ ಸಮಿತಿ ಮಂಡಳಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ. ರೈಲು (ಸಂಖ್ಯೆ 12732) ಬುಧವಾರ ಮತ್ತು ಶನಿವಾರ ಸಂಚರಿಸಲಿದೆ. ಸಿಕಿಂದರ್ ಬಾದ್ ನಿಂದ ಹೊರಡುವ ರೈಲು ತಿರುಪತಿ ಮುಖ್ಯ ನಿಲ್ದಾಣದವರೆಗೆ ಸಂಚರಿಸುತ್ತದೆ. ಸಂಜೆ 4.15 ಕ್ಕೆ ಸಿಕಿಂದರ್ ಬಾದ್ ಜಂಕ್ಷನ್ ನಿಂದ ಹೊರಡುವ ಈ ರೈಲು ಸಂಜೆ 4.50 ಕ್ಕೆ ಲಿಂಗಪಲ್ಲಿ, ಸಂಜೆ 5.15 ಕ್ಕೆ ವಿಕಾರಾಬಾದ್, ರಾತ್ರಿ 8.40 ಕ್ಕೆರಾಯಚೂರು, ರಾತ್ರಿ9.35 ಕ್ಕೆಆದೋನಿ, ರಾತ್ರಿ 10.50ಕ್ಕೆ ಗುಂತಕಲ್ ಜಂ , ರಾತ್ರಿ 11.30 ಕ್ಕೆ ಗೂಟಿ ಜಂ.  ಎರಡನೇ ದಿನ 12.30 ಕ್ಕೆ ಅನಂತಪುರ, ಬೆಳಿಗ್ಗೆ 1.20 ಧರ್ಮಾವರಂ ಜಂ. ಬೆಳಿಗ್ಗೆ 2 ಗಂಟೆಗೆ ಕದಿರಿ, ಬೆಳಿಗ್ಗೆ 2.25 ಕ್ಕೆ ಮುಲಕಲ್ ಚೆರುವು, ಬೆಳಿಗ್ಗೆ 3.05 ಕ್ಕೆ ಮದನಪಲ್ಲಿ ರಸ್ತೆ, ಬೆಳಿಗ್ಗೆ 3.30ಕ್ಕೆ ಕಲಿಕಿರಿ, ಬೆಳಿಗ್ಗೆ 3.50 ಕ್ಎಕ ಪಿಲೇರ್, ಬೆಳಿಗ್ಗೆ 4.40 ಪಾಕಾಲ ಜಂ. ಬೆಳಿಗ್ಗೆ 6.25 ತಿರುಪತಿ ಗಮ್ಯಸ್ಥಾನಕ್ಕೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.  ...
Image
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ                                                            ಜಯ ಧ್ವಜ ನ್ಯೂಸ್ , ರಾಯಚೂರು, ಆ.15- ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ ನಿಂದ ಹಮ್ಮಿಕೊಂಡ 80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಧ್ಯಕ್ಷರಾದ ವಿಜಯಕುಮಾರ್ ಜಾಗಟಗಲ್ ಅವರು      ರಾಷ್ರಧ್ವಜಾರೋಹಣ ನೆರವೇರಿಸಿದರು.  ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ದಲ್ಲಿ ಮೊದಲಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ,  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಪತ್ರಕರ್ತರಾದ ಜಗನ್ನಾಥ ಪೂಜಾರಿ ಅಧ್ಯಕ್ಷರಾದ ವಿಜಯ ಜಾಗಟಗಲ್ ,ಸ್ವಾತಂತ್ರ್ಯ ಕ್ಕಾಗಿ ತ್ಯಾಗ ಮಾಡಿದ ಅನೇಕರ ಮಹನಿಯರ ಸ್ಮರಣೆ ಮಾಡಿದರು.  ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಅಧಿಕಾರಿ ಜಿ.ಸುರೇಶ ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು .
Image
    ನಗರದ ವಿವಿಧೆಡೆ ಸಂಭ್ರಮದಿಂದ  80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.                                                            ಜಯಧ್ವಜ ನ್ಯೂಸ್ , ರಾಯಚೂರು ,ಆ.15- ನಗರದ ವಿವಿಧೆಡೆ ಸಂಭ್ರಮದಿಂದ  80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.                                                              ಮಹಾನಗರ ಪಾಲಿಕೆಯಲ್ಲಿ: ಪಾಲಿಕೆ ಆಯುಕ್ತರಾದ ಶ್ರೀ ಜುಬಿನ್ ಮಹಾಪಾತ್ರ ಭಾ ಆ ಸೇ ರವರು ಬೆಳಿಗ್ಗೆ 6-30 ಕ್ಕೆ ನಗರದ  ಗಾಂಧಿ ವೃತ್ತದಲ್ಲಿ ಹಾಗೂ 6-45 ಕ್ಕೆ ಕ್ರೀಡಾಂಗದಲ್ಲಿ  ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪೂಜೆ ಸಮರ್ಪಿಸಿ ಮಾಲಾರ್ಪಣೆ ಮಾಡಿದರು, ನಂತರ 7-30 ಕ್ಕೆ ಮಹಾನಗರ ಪಾಲಿಕೆಯ ವಲಯ-1 (ಹಳೆಯ ನಗರಸಭೆ) ಧ್ವಜಾರೋಹಣ ಕೊನೆಯದಾಗಿ 7-45ಕ್ಕೆ ಆಯುಕ್ತರ ಕಛೇರಿ ವಲಯ-2 ಧ್ವಜಾರೋಹಣ ನೆರೆವೇರಿಸಿದರು ಈ ಸುಸಂಧರ್ಭದಲ್ಲಿ ಮಾತನಾಡಿ  ಇಂದು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಪವಿತ್ರವ...
Image
  ರಸ್ತೆಗಳಲ್ಲೆ ಬರ್ತ್ ಡೆ ಪಾರ್ಟಿ; ಹೇಳುವರಿಲ್ಲ ಕೇಳುವರಿಲ್ಲ!                                       ಜಯ ಧ್ವಜ ನ್ಯೂಸ್, ರಾಯಚೂರು, ಆ.14- ನಗರದಲ್ಲಿ ಬರ್ತ್ ಡೇ ಪಾರ್ಟಿ ಮಾಡಲು ಹೋಟೆಲ್ ಗಳು, ಕಲ್ಯಾಣ ಮಂಟಪಗಳು, ಸಭಾಂಗಣಗಳು ಸಿಗುತ್ತಿಲ್ಲವೇ? ಇಂತಹ ಪ್ರಶ್ನೆ ಮೂಡುತ್ತಿರುವುದು ಏಕೆಂದರೆ ಸಾರ್ವಜನಿಕರು, ವಾಹನಗಳು ಸಂಚರಿಸುವ ರಸ್ತೆಯ ಮಧ್ಯದಲ್ಲೆ ಬರ್ತ್ ಡೇ ಪಾರ್ಟಿ ಮಾಡುತ್ತ ಕೇಕ್ ಕತ್ತರಿಸಿ, ಮುಖದ ತುಂಬ ಮೆತ್ತಿಕೊಂಡು ಕಿರಚುತ್ತ , ಅನಾಗರೀಕರಂತೆ  ವರ್ತನೆ ತೋರುತ್ತಾ ವಿಕೃತವಾಗಿ ಸಂಭ್ರಮಿಸುವ ದೃಶ್ಯಗಳನ್ನು ನೋಡಿದರೆ ನಾವು ನಾಗರೀಕ ಸಮಾಜದಲ್ಲಿ ಇದ್ದೇವೋ? ಅಥವಾ ಬೇರೆ ಯಾವುದೋ ಸ್ಥಳದಲ್ಲಿ ಇದ್ದೇವೋ? ಎಂಬ ಅನುಮಾನ ಮತ್ತು  ಅಸಹ್ಯ ಎರೆಡು ನಮ್ಮ ಮನದಲ್ಲಿ ಮೂಡುವುದಂತೂ ನಿಶ್ಚಿತ.                                           ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಜನ್ಮ ದಿನಾಚರಣೆ ಎಲ್ಲರೂ ಆಚರಿಸುವುದು ಸಹಜ ಮತ್ತು  ಅಪೇಕ್ಷೆಯೂ ಕೂಡ ಆದರೆ ಅದನ್ನು ಎಲ್ಲಿ , ಹೇಗೆ ಆಚರಿಸಬೇಕೆಂಬ ಕನಿಷ್ಟ ಪ್ರಜ್ಞೆಯೂ ಇಲ್ಲದೆ ರಸ್ತೆ ಮಧ್ಯೆ ಜನರಿಗೆ ಕಿರಿಕಿರಿ ...
Image
  ಭೂಮಾನಂದ ಕೊಲೆ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆ.24 ಬೃಹತ್ ಸಭೆ- ಎಸ್.ಮಾರೆಪ್ಪ.                                                          ಜಯ ಧ್ವಜ ನ್ಯೂಸ್ , ರಾಯಚೂರು,ಆ.13- ಹದ್ದಿನಾಳ ಗ್ರಾಮದ ಭೂಮಾನಂದ ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆ.24 ರಂದು ನಗರದಲ್ಲಿ ಬೃಹತ್ ಸಭೆ ಆಯೋಜಿಸಲಾಗಿದೆ ಎಂದು ಭೂಮಾನಂದ ಕಗ್ಗೊಲೆ ವಿರೋಧಿ ಒಕ್ಕೂಟ ಮುಖಂಡ ಎಸ್.ಮಾರೆಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ನಡೆದ ಭೂಮಾನಂದ ಕೊಲೆ ಪ್ರಕರಣದಲ್ಲಿ ಯಾರನ್ನು ಸಿಲುಕಿಸಲು ನಾವು ಪ್ರಯತ್ನಿಸುತ್ತಿಲ್ಲ ಬದಲಾಗಿ ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಮತ್ತು ಜಿಲ್ಲೆಯಲ್ಲಿ ಕೊಲೆ, ಮಾರಾಮಾರಿ ಮುಂತಾದವು ನಿಲ್ಲಬೇಕೆಂದು ನಮ್ಮ ಹೋರಾಟವಾಗಿದೆ ಎಂದರು. ಪ್ರಕರಣದಲ್ಲಿ ಪತ್ರಕರ್ತ ಭೀಮರಾಯ ಹದ್ದಿನಾಳ ಪಾತ್ರವಿರುವ ಬಗ್ಗೆ ದೂರುದಾರರು ಹೇಳಿಕೆ ಅರಿತುಕೊಂಡು ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ ಹೊರತು ನಮ್ಮ ಒತ್ತಾಯಕ್ಕಲ್ಲವೆಂದರು. ಯಾವುದೆ ಒಂದು ಸಮುದಾಯ ಮತ್ತೊಂದು ಸಮುದಾಯಕ್ಕೆ ವೈರಿಯಂದು ಬಿಂಬಿಸುವ ಕಾರ್ಯ ನಿಲ್ಲಬೇಕು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮತ್ತು ಸರ್ಕಾರ ಜಿಲ್ಲೆಯಲ್ಲಿ ಶಾಂತಿ...
Image
  ಕಲ್ಯಾಣ ಕರ್ನಾಟಕದಲ್ಲಿ ಯುಪಿಎಸ್ ಸಿ ನಾಗರೀಕ ಸೇವೆಗಳ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಒತ್ತಾಯ ಜಯ ಧ್ವಜ ನ್ಯೂಸ್ , ರಾಯಚೂರು ,ಆ.12-  ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ ಸಿ) ಪರೀಕ್ಷಾ ಕೇಂದ್ರ ಇಲ್ಲದೇ ಇರುವದರಿಂದ ಈ ಭಾಗದ ಅಭ್ಯರ್ಥಿಗಳು ದೂರದ ಬೆಂಗಳೂರು ಅಥವಾ ಹೈದರಾಬಾದ್ ನಗರಕ್ಕೆ ಹೋಗಬೇಕಾಗುತ್ತದೆ, ಈಗಾಗಲೇ ಕರ್ನಾಟಕದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರು ನಗರಗಳಲ್ಲಿ ಪರೀಕ್ಷಾ ಕೇಂದ್ರ ಇದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರ ಇಲ್ಲದೇ ಇರುವದು ತೊಂದರೆಯಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶವು ಏಳು ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳು ಹೊಂದಿರುವ ಪ್ರದೇಶವಾಗಿದ್ದು, ಸುಮಾರು 1.26 ಕೋಟಿ ಜನಸಂಖ್ಯೆ ಹೊಂದಿರುತ್ತದೆ. ಇಲ್ಲಿನ ಅಭ್ಯರ್ಥಿಗಳು ದೂರದ ಪ್ರದೇಶಗಳಲ್ಲಿ ಇರುವ ಪರೀಕ್ಷಾ ಕೇಂದ್ರಗಳಿಗೆ ಹೋಗುವದು ಪ್ರಯಾಸದಾಯಕವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶವು ಸಂವಿಧಾನದ ಅನುಚ್ಛೇದ 371J ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದು, ಇಲ್ಲಿ ಸಾಮಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವಾಗಿ ಹಿಂದುಳಿದ ಪ್ರದೇಶವಾಗಿರುತ್ತದೆ. ಈ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವಿಶೇಷವಾಗಿ ರಾಯಚೂರಿನಲ್ಲಿ ಒಂದು ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷಾ ಕೇಂದ್ರ ಸ್ಥಾಪನೆಯು ಅವಶ್ಯಕವಾಗಿರುತ್...