ಪಡ್ಡೆ ಹುಡುಗರ ಅಡ್ಡೆಯಾಗುತ್ತಿರುವ ವಾರ್ಡ್ ನಂ.17 ರ ಓಣಿಗಳು: ನಿಯಂತ್ರಣಕ್ಕೆ ಪೊಲೀಸರ ದಿವ್ಯ ನಿರ್ಲಕ್ಷ್ಯ ಆರೋಪ. ಜಯ ಧ್ವಜ ನ್ಯೂಸ್, ರಾಯಚೂರು,ಆ.5- ನಗರದ ವಾರ್ಡ್ ನಂ. 17 ರ ಓಣಿಗಳು ಪಡ್ಡೆ ಹುಡುಗರ ಅಡ್ಡೆಯಾಗಿ ಮಾರ್ಪಡುತ್ತಿದ್ದು ಮುಂದಿನ ದಿನಗಳಲ್ಲಿ ಅಪರಾಧಿಕ ಚಟುವಟಿಕೆಗಳ ತಾಣವಾದರೂ ಅಚ್ಚರಿ ಪಡಬೇಕಾಗಿಲ್ಲ. ವಾರ್ಡ್ ನಂ.17 ಗಾಜಗಾರಪೇಟೆಯ ಚೌಡಮ್ಮಕಟ್ಟೆ ದೇವಸ್ಥಾನ ಪಕ್ಕದ ಓಣಿಯಲ್ಲಿ ದಳವಾಯಿ ಮನೆ ಕಟ್ಟೆ ಮತ್ತು ಅದರ ಎದುರಿನ ಚಿಕ್ಕದಾದ ಓಣಿ ಪಡ್ಡೆ ಹುಡುಗರು, ಅಪ್ರಾಪ್ತ ವಯಸ್ಕರಿಗೆ ಅಕ್ರಮ ಚಟುವಟಿಕೆ, ಮದ್ಯಪಾನ, ಚಟಗಳ ತಾಣವಾಗಿದೆ. ಈ ಪ್ರದೇಶದಲ್ಲಿ ಸುಸಂಸ್ಕೃತ , ಸಂಭಾವಿತ ಜನಗಳೆ ವಾಸವಿರುವ ಇಲ್ಲಿ ಬೆಳಿಗ್ಗೆ, ಮಧ್ಯಾಹ್ನ , ಸಂಜೆ ಮತ್ತು ರಾತ್ರಿಯಾದರಂತೂ ಹಾವಳಿ ಮಿತಿ ಮೀರುತ್ತದೆ, ಅಕ್ಕ ಪಕ್ಕದ ನಿವಾಸಿಗಳು ಬುದ್ಧಿವಾದ ಹೇಳಿದರೆ ಅದಕ್ಕೆ ಕಿಮ್ಮತ್ತು ನೀಡದೇ ಆಟಾಟೋಪ ಹೆಚ್ಚಾಗಿದೆ ಎಂದು ಸ್ಥಳೀಯ ನಿವಾಸಿಗ...