Posts

Image
  ಫೆ.11ರಂದು ನಗರಕ್ಕೆ ಪ್ರೇಮ ವಾಹಿನಿ ರಥಯಾತ್ರೆ -ಸುಬ್ರಮಣ್ಯಂ.                                                                                                                                               ಜಯ ಧ್ವಜ ನ್ಯೂಸ್, ರಾಯಚೂರು,ಫೆ.9- ಸತ್ಯ ಸಾಯಿ ಸೇವಾ ಆರ್ಗನೈಜೇಷನ್ ಈಶಾನ್ಯ ಕರ್ನಾಟಕ ವಿಭಾಗದಿಂದ ಫೆ.11 ರಂದು ನಗರಕ್ಕೆ ಪ್ರೇಮ ವಾಹಿನಿ ರಥಯಾತ್ರೆ ಆಗಮಿಸಲಿದೆ ಎಂದು ಆಯೋಜಕರಾದ ಸುಬ್ರಹ್ಮಣ್ಯಮ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಅಂದು ಬೆಳಿಗ್ಗೆ 10ಕ್ಕೆ ಶಕ್ತಿ ನಗರದಿಂದ ನಗರದ ಮಾ ಆಶಾಪುರಿ ಕಲ್ಯಾಣ ಮಂಟಪ ತಲುಪಲಿದೆ  ಅಲ್ಲಿ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತದನಂತರ ರಥಯಾತ್ರೆ 1.30ಕ್ಕೆ  ನಗರದ ಗಂಜ್ ವೃತ್ತ, ಸಿಟಿ ಟಾಕೀಸ್ ವೃತ್ತ,ಚಂದ್ರಮೌಳೆಶ್ವರ ವೃತ್ತ, ಬಸವೇಶ್ವರ ವೃತ್ತ ಮೂಲಕ ಸಿಂಧನೂರಿನ...
Image
  ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ - ಚಾಮರಸ ಮಾಲಿಪಾಟೀಲ್.                                           ಜಯ ಧ್ವಜ ನ್ಯೂಸ್ ರಾಯಚೂರು, ಫೆ.9- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಫೆ.12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತದೆ ಎಂದು ಸಂಯುಕ್ತ ಹೋರಾಟ ರಾಜ್ಯ ಸಂಚಾಲಕ ಚಾಮರಸ್ ಮಾಲಿಪಾಟೀಲ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್, ವಿಬಿಜಿರಾಮಜಿ ಯೋಜನೆ ಜಾರಿಗೆ ಮುಂದಾಗಿದ್ದು ಕಾರ್ಮಿಕರು, ಬಡವರು, ಕೂಲಿಕಾರರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು ನರೇಗಾ ಬದಲಾಯಿಸಿ ವಿಬಿಜಿರಾಮಜಿ ಜಾರಿಗೊಳಿಸುವುದು ಗ್ರಾಮೀಣ ಪ್ರದೇಶದಲ್ಲಿ ಮರಣ ಶಾಸನವಾಗಲಿದೆ ಎಂದರು. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ ಕಾರ್ಮಿಕರ ಹಕ್ಕು ಕಸಿಯುವ ಹುನ್ನಾರ ಅಡಗಿದೆ ಎಂದರು. ನರೇಗಾದಡಿ ಇದ್ದ ನಿಯಮಗಳನ್ನು ತೆಗೆದು ಹೊಸ ಹೆಸರಿನೊಂದಿಗೆ ಕಾಯ್ದೆ ರೂಪಿಸಿ ಜನರಿಗೆ ಸಂಕಷ್ಟಕ್ಕೆ ದೂಡುತ್ತಿದೆ ಎಂದರು. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ ರಾಜ್ಯ ಸರ್ಕಾರ 6 ನೇ ಗ್ಯಾರಂಟಿಯಾಗಿ ಭೂಮಿ ನೀಡುವ ಬಗ್ಗೆ ಉಲ್ಲೇಖಿಸಿದ್ದು  ಯಾರಿಗೆ ಭೂಮಿ ನೀಡುತ್ತೇವೆ ಎಂದು ...
Image
  ಫೆ. 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಭೆ ಜಯ ಧ್ವಜ ನ್ಯೂಸ್ , ರಾಯಚೂರು, ಪೆ.9- ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಸಹಾಯಕ ಆಯುಕ್ತರಾದ ಶ್ರೀ ಹಂಪಣ್ಣ ಸಜ್ಜನ್ ಹಾಗೂ ತಹಸೀಲ್ದಾರ್ ಶ್ರೀ ಜಗದೀಶ್ ಅವರ ನೇತೃತ್ವದಲ್ಲಿ ಫೆಬ್ರವರಿ 19 ರಂದು ನಡೆಯಲಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಸಂಬಂಧಿಸಿದ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ, ನಗರದ ಖಾಸ್ ಭಾವಿ ಹತ್ತಿರ ಇರುವ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿ ರಂಗಮಂದಿರದವರೆಗೆ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಮೆರವಣಿಗೆಯಲ್ಲಿ ಸಾಹಿತಿಗಳು, ವಿವಿಧ ಕಲಾ ತಂಡಗಳು ಭಾಗವಹಿಸಿ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದರು. ಈ ಸಭೆಯಲ್ಲಿ ಮರಾಠ ಸಮಾಜದ ಅಧ್ಯಕ್ಷರು ಹನುಮಂತ್ ಜಗತಾಪ, ರಾಯಚೂರು ಕ್ಷತ್ರಿಯ ಒಕ್ಕೂಟದ ಅಧ್ಯಕ್ಷರು ಅಶೋಕ್ ಕುಮಾರ್ ಮೈದರ್ಕರ್, ಮುಖಂಡರಾದ ಶ್ರೀನಿವಾಸ್ ಪತಂಗೆ, ಭೀಮಣ್ಣ ಜಾಧವ, ಅಂಬಾಜಿ ರಾವು ಮೈದರ್ಕರ್, ಸೂರ್ಯ ರಾವು, ರಘು ನನ್ನೊರೆ, ಅಮಿತ್ ಜಗಟಪ್, ಸತೀಶ್ ಜಗಟಪ್, ಅಮರೇಶ್, ಸಿದ್ದು, ಶರಣು, ಶಿವರಾಮ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಶಾಂತಿ...
Image
  ಜಿಲ್ಲಾ ಉತ್ಸವ ಕಡೆಯ ದಿನ:                    ಕೃಷಿ ,ಆಹಾರ, ಗ್ಯಾರಂಟಿ, ಮತ್ಸ್ಯ ಮೇಳ, ಫಲ ಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಜಂಗುಳಿ .                                                                                                                                                            ಜಯ ಧ್ವಜ ನ್ಯೂಸ್ , ರಾಯಚೂರು, ಫೆ.7- ಮೂರು ದಿನಗಳ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಇಂದು ತೆರೆ ಬೀಳಲಿದ್ದು ಉತ್ಸವದ ಕಡೆಯ ದಿನವಾದ ಇಂದು ಕೃಷಿ ವಿವಿ ಮುಖ್ಯ ವೇದಿಕೆ ಬಳಿ ಸ್ಥಾಪಿತವಾದ ಆಹಾರ ಮೇಳ, ಕೃಷಿ ಮೇಳ ಮತ್ಸ್ಯ ಮೇಳ, ಗ್ಯಾರಂಟಿ ಮೇಳ, ಫಲ ಪುಷ್ಪ ಪ್ರದರ್ಶನ ಸೇರಿದಂತೆ ಕರ ಕುಶಲ ಮತ್ತು ಬಟ್ಟೆ, ಇತರೆ ವಸ್ತುಗಳ ಖರೀದಿ ಭರಾಟೆಯಲ್...
Image
  ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಶ್ವಾನಗಳ ಪ್ರದರ್ಶನ ಉದ್ಘಾಟನೆ: ಪ್ರಾಣಿಗಳ ಮೇಲೆ ದಯೆ ಇರಲಿ ಸಚಿವ ಎನ್.ಎಸ್.ಭೋಸರಾಜು ಸಲಹೆ ಜಯ ಧ್ವಜ ನ್ಯೂಸ್ ,ರಾಯಚೂರು ಫೆ.6  ಶ್ವಾನಗಳು ಸೇರಿದಂತೆ ಎಲ್ಲ ಪ್ರಾಣಿಗಳ ಮೇಲೆ ದಯಾ ಭಾವ ಇರಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅವರಿಂದು ನಗರದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಆವರಣದಲ್ಲಿ ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ವಾನಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಣಿ ಹಿಂಸೆ ವಿರುದ್ಧ ಜಾಗೃತಿ ಮೂಡಿಸುವುದು, ಶ್ವಾನಗಳ ಆರೈಕೆ, ಆಹಾರ, ಲಸಿಕೆ ಮತ್ತು ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು. ಈ ವೇಳೆ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ರಾಯಚೂರು ಉತ್ಸವ ಅಂಗವಾಗಿ ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಸೇರಿದಂತೆ ಹತ್ತಾರು ಕಾರ್ಯಕ್ರಮಗಳ ನೋಡುವ ಭಾಗ್ಯ ಜಿಲ್ಲೆಯ ಸಾರ್ವಜನಿಕರಿಗೆ ಸಿಕ್ಕಿದೆ. ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಉತ್ಸವದ ಯಶಸ್ವಿಗೆ ಪ್ರ...
Image
ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಮಹಿಳಾ ಕವಿಗೋಷ್ಠಿಯ ಉದ್ಘಾಟನೆ : ಸ್ತ್ರೀ ಭೂಮಿಯ ಕಾವ್ಯ-ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಜಯ ಧ್ವಜ ನ್ಯೂಸ್ ,ರಾಯಚೂರು ಫೆ.6- ರಾಯಚೂರು ಉತ್ಸವದ ಅಂಗವಾಗಿ ಫೆ. 6ರಂದು ಮುಂಜಾನೆ 10:40ಕ್ಕೆ ಮಹಿಳಾ ಸಮಾಜದ ಆವರಣದಲ್ಲಿ ಆಯೋಜಿಸಲಾದ ಮಹಿಳಾ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, “ನಾನು ಒಬ್ಬಂಟಿ, ಸಾಮಾನ್ಯ ಸಾಹಿತಿ. ಆದರೂ ನನ್ನನ್ನು ಗುರುತಿಸಿ ಜಿಲ್ಲಾಡಳಿತವು ಉದ್ಘಾಟನೆಗೆ ಆಯ್ಕೆ ಮಾಡಿರುವುದು ನನಗೆ ಅಪಾರ ಸಂತಸ ತಂದಿದೆ” ಎಂದು ಭಾವುಕರಾಗಿ ಹೇಳಿದರು. “ಮಗುವಿನ ಜನ್ಮದೊಂದಿಗೆ ಕವನವೂ ಹುಟ್ಟಿದೆ. ನಕ್ಷತ್ರಗಳು ಆಕಾಶದ ಕವಿತೆಗಳಾದರೆ, ಸ್ತ್ರೀ ಭೂಮಿಯ ಕಾವ್ಯ” ಎಂದು ಅವರು ಅಭಿಪ್ರಾಯಪಟ್ಟರು. ಕವನ ಎಲ್ಲರಿಗೂ ಒಲಿಯುವುದಿಲ್ಲ. ಅದು ಒಲಿದರೆ ನಿದ್ರೆ ಕಸಿದುಕೊಳ್ಳುತ್ತದೆ, ಅಕ್ಟೋಪಸ್‌ನಂತೆ ಅಕ್ರಮಿಸುತ್ತದೆ. ಕಲಿಸಿದರೆ ಬರದ ಕವನ ಕನವರಿಕೆಯಲ್ಲೂ ಭಾವಗಳ ಮಂಥನ ನಡೆಸುತ್ತದೆ. ಕಾವ್ಯ ಸಮಾಜವನ್ನು ಸ್ಪಂದಿಸಬೇಕು. ಜಗತ್ತನ್ನು ಕವಿ ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ ಎಂದು ತಿಳಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಭಾರತಿ ಕುಲಕರ್ಣಿ, ಡಾ. ಶಿವಲೀಲಾ ಬಸನಗೌಡ ಅವರು ಕವನ ವಾಚಿಸಿದರು. “ಬಾರ್ ಮುಚ್ಚಿ ಎಲ್ಲೆಂದರಲ್ಲಿ ಅವರದೇ ದರ್ಬಾರ್” ಎಂಬ ಶೀರ್ಷಿಕೆಯ ಮೂಲಕ ಯೋಜನೆಗಳಿಂದ ಜನರಿಗೆ ಶಾಶ್ವತ ಪರಿಹಾರ ಸಿಗಬೇಕೆಂಬ ಆಶಯ...
Image
  ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಚುನಾವಣೆಗೆ ಜಿ‌.ಎಸ್.ವೀರಭದ್ರಪ್ಪ ವಕೀಲರಿಂದ ನಾಮ ಪತ್ರ ಸಲ್ಲಿಕೆ. ಜಯ ಧ್ವಜ ನ್ಯೂಸ್  ,ರಾಯಚೂರು, ಫೆ.6 -  ರಾಜ್ಯದಲ್ಲಿ ಮಾರ್ಚ್ 11 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು  ಚುನಾವಣೆಯ ಅಂಗವಾಗಿ ಇಂದು ಬೆಂಗಳೂರಿನ ವಕೀಲರು ಪರಿಷತ್ ಕಚೇರಿಯಲ್ಲಿ ತಮ್ಮ ತಂಡದೊಂದಿಗೆ ರಾಯಚೂರಿನ ವಕೀಲರು ಹಾಗೂ ರಾಯಚೂರು ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಜಿ‌.ಎಸ್. ವೀರಭದ್ರಪ್ಪ ರವರು ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿಯಾದ ಜಿ.ಎಸ್. ವೀರಭದ್ರಪ್ಪ,  ರಾಜ್ಯದ ವಕೀಲರ ಹಕ್ಕುಗಳು, ವೃತ್ತಿ ಗೌರವ, ಸಾಮಾಜಿಕ ಭದ್ರತೆ ಹಾಗೂ ವಕೀಲರ ಕಲ್ಯಾಣ ಯೋಜನೆಗಳ ಬಲಪಡಿಸುವುದು ನನ್ನ ಮುಖ್ಯ ಗುರಿಯಾಗಿದೆ, ವಕೀಲರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ, ಯುವ ವಕೀಲರಿಗೆ ಮಾರ್ಗದರ್ಶನ, ಕಾರ್ಯಾಗಾರಗಳು, ಮಹಿಳಾ ವಕೀಲರಿಗೆ ವಿಶೇಷ ಸೌಲಭ್ಯ, ಕಲ್ಯಾಣ ನಿಧಿಗಳ ಸಮರ್ಪಕ ಬಳಕೆ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುವೆ ಎಂದು ಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಕೀಲರು ಉಪಸ್ಥಿತರಿದ್ದು, ಬೆಂಬಲ ವ್ಯಕ್ತಪಡಿಸಿದರು. ವಕೀಲರ ಏಕತೆ ಮತ್ತು ಶಕ್ತಿ ಮೂಲಕ ಪರಿಷತ್ತನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಸಂಕಲ್ಪ ವ್ಯಕ್ತವಾಯಿತು. ರಾಜ್ಯದ ಎಲ್ಲಾ ನ್ಯಾಯವಾದಿಗಳು ತಮ್ಮ ಮೊದಲ ಪ್ರಾಶಸ್ತ್ಯದ ಅಮೂಲ್ಯವಾದ ಮ...