ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ: ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಮತ್ತು ಉಪನ್ಯಾಸಮಾಲೆ: ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆ ಅಪಾರ - ಪ್ರೊ.ಎಂ.ವೆಂಕಟೇಶ್ವರಲು ಜಯ ಧ್ವಜ ನ್ಯೂಸ್ ,ರಾಯಚೂರು,ಮಾ.೧೦- ಪ್ರಾಚೀನ ಕಾಲದಿಂದಲೂ ನಮ್ಮ ದೇಶ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಕೊಡುಗೆಗಳನ್ನು ಕೊಟ್ಟಿದೆ. ಖಗೋಳದಿಂದ ಹಿಡಿದು ಜ್ಯೋತಿಷ್ಯಶಾಸ್ತçದವರೆಗೂ ಅನೇಕ ರೀತಿಯಿಂದ ವಿಜ್ಞಾನ ಆವಿಷ್ಕಾರಗಳಾಗಿವೆ. ವಿಜ್ಞಾನ ಹೇಗೆ ಬೆಳೆಯಿತು ಎಂದರೆ ಗ್ರಹಿಕೆಯಿಂದ ಮಾತ್ರ ಬೆಳೆಯಿತು ಎಂದು ತುಮಕೂರಿನ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ವೆಂಕಟೇಶ್ವರಲು ಉದ್ಘಾಟಕ ನುಡಿಗಳನ್ನಾಡಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗಗಳ ವತಿಯಿಂದ ಮಂಗಳವಾರದಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಅಂಗವಾಗಿ ವಿಶೇಷ ಉಪನ್ಯಾಸಮಾಲೆ ಕಾರ್ಯಕ್ರಮವನ್ನು ಡಾ.ಸಿ.ವಿ.ರಾಮನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಒಂದು ಆಲೋಚನೆಯ ಸಾಮರ್ಥ್ಯವನ್ನು ಒಳಗೊಂಡಿದೆ. ಡಾ.ಸಿ.ವಿ.ರಾಮನ್ರ ಪ್ರಾಮಾಣಿಕತೆ, ಶಿಸ್ತು, ಶ್ರಮ ಇಂದಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಲಿಯಬೇಕು. ವಿಕ್ರಂ ಸಾರಾಬಾಯಿ, ಎಂ.ಎಸ್.ಸ್ವಾಮಿನಾಥನ್ ಇವರೆಲ್ಲರೂ ಪ್ರಸಿದ್ಧ ವಿಜ್ಞಾನಿಗಳು. ಯುವಕರು ಉತ್ತಮ ಆಲೋಚನೆಯಿಂದ ಮಾತ್ರ ಮುಂದೆಬರಲು ಸಾಧ್ಯ. ವಿದ್ಯಾರ್ಥಿಗಳಲ್ಲಿರ...