ರಾಯಚೂರು ನಗರ ಸ್ವಚ್ಚತೆಗೆ ಸಾರ್ವಜನಿಕರು ಕೈ ಜೋಡಿಸಬೇಕು- ಜುಬಿನ್ ಮೋಹಪಾತ್ರ ಜಯ ಧ್ವಜ ನ್ಯೂಸ್ ,ರಾಯಚೂರು. ಜು. 14- ರಾಯಚೂರು ನಗರ ಸ್ವಚ್ಚತೆಗೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮಿಸಿದರೆ ಸಾಲದು ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ ಹೇಳಿದರು. ಅವರು ಮಂಗಳವಾರ ರಾಯಚೂರು ನಗರದ ಲಿಂಗಸೂಗುರ ರಸ್ತೆಯಲ್ಲಿ ರಸ್ತೆ ಸ್ವಚ್ಚಗೊಳಿಸುವ ಎರಡು ಮೆಕ್ಯಾನಿಕಲ್ ವಾಹನಗಳ ಪ್ರಾತ್ಯಕ್ಷಿಕೆ ವೀಕ್ಷಣೆಯ ನಂತರ ಈ ಕುರಿತು ಮಾಹಿತಿ ನೀಡಿ ಮಾತನಾಡಿದರು. ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಮೆಕ್ಯಾನಿಕಲ್ ಸ್ವೀಫರ್ ವಾಹನಗಳನ್ನು ಕರೆಸಿ ಡೆಮೊ ಮಾಡಲಾಗಿದೆ ಈ ವಾಹನಗಳಿಂದ ಮಳೆಗಾಲದಲ್ಲಿ ಕಸವನ್ನು ತೆಗೆಯಲು ಅನುಕೂಲವಾಗಲಿದೆ.ರಾಯಚೂರು ನಗರದ ಜನಸಂಖ್ಯೆ ದಿನೆ- ದಿನೆ ಹೆಚ್ಚಾಗುತ್ತಿರುವುದರಿಂದ ಇಂತಹ ವಾಹನಗಳಿಂದ ಅನುಕೂಲವಾಗಲಿದೆ ಇವುಗಳ ಸಾಮರ್ಥ್ಯ ಮೂರುವರೆ ಕ್ಯೂಬಿಕ್ ಮೀಟರ್ ಇದೆ. ಪ್ರಭಾತ್ ಡಿಸೈನ್ ಮತ್ತು ಚೆಲೆಂಜರ್ ಈ ಎರಡು ಕಂಪನಿಗಳು ಭಾಗವಹಿಸಿ ನಮಗೆ ಡೊಮೊ ತೋರಿಸಿವೆ. ಡೆಮೆ ಫಲಿತಾಂಶದ ನಂತರ ಒಂದು ತಿಂಗಳ ನಂತರ ಮತ್ತೊಂದು ಈ ವಾಹನ ತರೆಸುತ್ತೆವೆ ಎಂದರು. ಈ ಹಿಂದೆ ತಾವು ನೋಡಿದ್ದಿರಿ ನಮ್ಮ ಪೌರ ಕಾರ್ಮಿಕರು ಪ್ರತಿದಿನ 40 ರಿಂದ 60 ಜನರು ನಗರದಲ್ಲಿ ಕಸ ಗುಡಿಸಿ ಧೂಳು ಎತ್ತುತ್ತಿದ್ದರು. ಅದನ್ನು ಬೇರೆಕಡೆ ಸಾಗಿಸದೆ ಅಲ್ಲೆ ಒಂ...