ನವೋದಯ ಶಿಕ್ಷಣ ಸಂಸ್ಥೆ: ಫಾರ್ಮಸಿ, ಇಂಜಿನಿಯರಿಂಗ್ ,ನರ್ಸಿಂಗ್ , ಬಿಎಡ್ ಪದವಿ ಪ್ರದಾನ ಸಮಾರಂಭ: ಪದವಿ ಯೊಂದಿಗೆ ಕೌಶಲ್ಯತೆ ವೃದ್ಧಿಸಿಕೊಳ್ಳಿ- ಪ್ರೋ.ವೆಂಕಪ್ಪಯ್ಯ .ಆರ್. ದೇಸಾಯಿ ಜಯ ಧ್ವಜ ನ್ಯೂಸ್, ರಾಯಚೂರು, ಮಾ.7- ವಿದ್ಯಾರ್ಥಿಗಳು ಪದವಿ ಯೊಂದಿಗೆ ಕೌಶಲ್ಯವನ್ನು ಅಳವಡಿಸಿಕೊಂಡರೆ ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯವೆಂದು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ನಿರ್ದೇಶಕ ಪ್ರೋ.ವೆಂಕಪ್ಪಯ್ಯ .ಆರ್. ದೇಸಾಯಿ ಹೇಳಿದರು. ಅವರಿಂದು ನವೋದಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಎರಡನೆ ದಿನದ ಪದವಿ ಪ್ರದಾನ ಸಮಾರಂಭದಲ್ಲಿ ಇಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್ ಹಾಗೂ ಇನ್ನಿತರರು ಪದವಿಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಿ ಮಾತನಾಡಾದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದರೆ ಸಾಲದು ಬದಲಾಗಿ ಅಂಕಗಳೊಂದಿಗೆ ಕೌಶಲ್ಯತೆ ಸೃಜನಶೀಲತೆ ಅಳವಡಿಸಿಕೊಂಡರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯಗಳಿಸಲು ಹಾಗೂ ವೃತ್ತಿಯಲ್ಲಿ ಉನ್ನತ ಸಾಧನೆಗೈಯಲು ಸಾಧ್ಯವೆಂದರು. ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಎಲ್ಲೆಡ...