Posts

Image
  ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆ: ಬಿತ್ತನೆ ಬೀಜ, ರಸಗೊಬ್ಬರ ಜಿಲ್ಲೆಯಲ್ಲಿ ಸಮರ್ಪಕವಾಗಿ ಪೂರೈಕೆಯಾಗಲಿ -ಜಿಲ್ಲಾಧಿಕಾರಿ ಪೂವಿತಾ. ಎಸ್ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.26 - ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಸಲು ಬೀಜ ಮತ್ತು ರಸಗೊಬ್ಬರಗಳ ಕಂಪನಿಗಳ ಪ್ರತಿನಿಧಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ‌ನೀಡಿದರು. ಅವರಿಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ2026-27ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆಗಳ ಕುರಿತು ಕೃಷಿ ಇಲಾಖೆ ಹಾಗೂ ಬೀಜ ಮತ್ತು ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳಿಗೆ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಮೇ 26ರವರೆಗೆ ಒಟ್ಟು 654 ಮಿಲಿ ಮೀಟರ್‌ ಮಳೆಯಾಗಿದ್ದು, ಇದರಲ್ಲಿ ಮಸ್ಕಿ ತಾ‌ಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಮತ್ತು ದೇವದುರ್ಗ ತಾಲ್ಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ.2026-27ನೇ  ಸಾಲಿನಲ್ಲಿ ಭತ್ತ, ಜೋಳ, ಮೆಕ್ಕೆ ಜೋಳ, ಸಜ್ಜೆ, ನವಣೆಯಂತಹ ಒಟ್ಟು 2,18,861ಹೆಕ್ಟರ್ ಗಳಷ್ಟು ಏಕದಳ ಧಾನ್ಯಗಳ ಮುಂಗಾರು ಹಂಗಾಮಿನ ಕ್ಷೇತ್ರವಾರು ಗುರಿಯನ್ನು ಹೊಂದಿದ್ದು, ತೊಗರಿ, ಹೆಸರು, ಉದ್ದು, ಅ...
Image
  ನರಸಿಂಹಲು ಮಾಡಗಿರಿ ಉಚ್ಚಾಟನೆಗೆ ಆಗ್ರಹಿಸುವವರಿಂದಲೇ ಪಕ್ಷ ವಿರೋಧಿ ಚಟುವಟಿಕೆ -ರಮೇಶ್.                                                                                    ಜಯಧ್ವಜ ನ್ಯೂಸ್, ರಾಯಚೂರು, ಮೇ.26- ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸುವವರಿಂದಲೆ ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ನರಸಿಂಹಲು ಮಾಡಗಿರಿ ಬೆಂಬಲಿಗ ಹಾಗೂ ಸಂಬಂಧಿ ರಮೇಶ್ ಆರೋಪಿಸಿದರು. ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿನ್ನೆ ವಸಂತ ಕುಮಾರ್ ಬೆಂಬಲಿಗರಾದ ಅಂಜಿನ್ ಕುಮಾರ್ ಹಾಗೂ ಇತರರು ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಹೇಳಿದ್ದು ಸಮಂಜಸವಲ್ಲ ಬದಲಾಗಿ ವಸಂತಕುಮಾರ್ ರವರೇ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಚಟುವಟಿಕೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ ಅಲ್ಲದೆ ಅವರ ಬೆಂಬಲಿಗರು ಶಿವರಾಜ್ ಪಾಟೀಲ್ ರವರನ್ನು ಚುನಾವಣೆಯಲ್ಲಿ ಜಯಶಾಲಿಯಾದ ನಂತರ ಸನ್ಮಾನಿಸಿರುವ ದಾಖಲೆಗಳಿದ್ದು ಯಾರು ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ ಎನ್...
Image
  ತಾರಕಕ್ಕೇರಿದೆ ಬೆಂಬಲಿಗರ ಆರೋಪ ಪ್ರತ್ಯಾರೋಪ.                     ಜಯ ಧ್ವಜ ನ್ಯೂಸ್, ರಾಯಚೂರು,ಮೇ.26-  ಕಾಂಗ್ರೆಸ್    ಪ್ರಭಾವಿ  ರಾಜಕೀಯ ನಾಯಕರಿಬ್ಬರ ಬೆಂಬಲಿಗರ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು ಬೆಂಬಲಿಗರ ಸರಣಿ ಪತ್ರಿಕಾಗೋಷ್ಠಿ ಮೂಲಕ ಏಟಿಗೆ ಎದಿರೇಟು ಎನ್ನುವ ರೀತಿಯಲ್ಲಿ ಸಾಗಿದೆ. ನಗರದ ಹರಿಜನವಾಡದಲ್ಲಿ 5 ಕೋಟಿ ರೂ. ವೆಚ್ಚದ ಡಾ.ಬಾಬು ಜಗಜೀವನರಾಮ್  ಸಮುದಾಯ ಭವನ ನಿರ್ಮಾಣಕ್ಕೆ ಕಾರಣಿಕರ್ತರು ಸಚಿವ ಎನ್.ಎಸ್.ಬೋಸರಾಜು ಕಾರಣವೆಂದು ಬೋಸರಾಜು ಕಟ್ಟಾ ಬೆಂಬಲಿಗರಾದ ನರಸಿಂಹಲು ಮಾಡಿಗಿರಿಯವರು ಪತ್ರಿಕಾ ಜಾಹಿರಾತು ಪ್ರಕಟಗೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚಿತವಾದ ನಂತರ ಪತ್ರಿಕಾ ಗೋಷ್ಠಿಯಲ್ಲಿ ನರಸಿಂಹಲು ಮಾಡಗಿರಿ ಬೋಸರಾಜುರವರಿಂದಲೆ  ಅಭಿವೃದ್ಧಿ   ನಮ್ಮ ಬಡಾವಣೆಯಲ್ಲಿ ಆಗಿದೆ  ವಸಂತ ಕುಮಾರ್ ಅಭಿವೃದ್ಧಿ ಶೂನ್ಯ ವೆಂದು ಹೇಳಿದ ನಂತರ ಮರುದಿನವೇ ವಸಂತ ಕುಮಾರ್ ಬೆಂಬಲಿಗರ ಪಡೆಯಲ್ಲಿ ಗುರುತಿಸಿಕೊಂಡಿರುವ ಅಂಜಿನ ಕುಮಾರ್  ಪತ್ರಿಕಾ ಗೋಷ್ಟಿಯ ಮೂಲಕ ಪ್ರತ್ಯುತ್ತರ ನೀಡಿ ನರಸಿಂಹಲು ಮಾಡಗಿರಿಯವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಹೇಳಿದ ಮರುದಿನವೇ  ನರಸಿಂಹಲು ಮಾಡಗಿರಿ ಬೆಂಬಲಿಗರು ಪತ್ರಿಕಾ ಗೋಷ್ಠಿ ಏರ್ಪಡಿಸಿ ವಸಂತ ಕುಮಾರ್ ಪಕ್ಷ ವಿರೋಧಿ ನಡೆ ಬಗ್ಗೆ ಎಳೆ ಎಳೆಯಾಗಿ ಬಿಡಿ...
Image
  ಕೆಲ ಅರ್ಹ ಫಲಾನುಭವಿಗಳಿಗೆ ಜಮಾ ಆಗದ ವಿಧವಾವೇತನ , ಅಂಗವಿಕಲ ಮಾಸಾಶನ, ಗೃಹ ಲಕ್ಷ್ಮಿ ಹಣ                                                                    ಜಯ ಧ್ವಜ ನ್ಯೂಸ್, ರಾಯಚೂರು, ಮೇ.25-  ನಗರದ    ಕೆಲ  ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ದೊರೆಯುವ ಮಾಸಾಶನ, ಗ್ಯಾರಂಟಿ ಹಣ ಜಮಾ ಆಗದಿರುವುದರಿಂದ  ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ.  ಕಳೆದ ಎರೆಡು ತಿಂಗಳಿನಿಂದ ವಿಧವಾ , ಅಂಗವಿಕಲ ಮಾಸಾಶನ, ಗೃಹ ಲಕ್ಷ್ಮಿ ಹಣ, ಬಂದಿಲ್ಲವೆಂದು ದೂರಿರುವ ಫಲಾನುಭವಿಗಳು  ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ . ತಮ್ಮ ಖಾತೆಯಿರುವ ಅಂಚೆ ಕಛೇರಿಗೆ ಅಲೆದಾಡಿ ಸುಸ್ತಾಗಿದ್ದಾರೆ.
Image
    ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಶಿಕ್ಷಕ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ಜಯ ಧ್ವಜ ನ್ಯೂಸ್ ,ರಾಯಚೂರು ,ಮೇ.25- ಪ್ರಾಥಮಿಕ, ಪದವೀಧರ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗು ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲ ರಂಗ ಕಲ ಮತ್ತು ಸಂಗೀತ ಶಿಕ್ಷಕರ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಲು ಆಗ್ರಹಿಸಿ ಇಂದು ಅಂಬೇಡ್ಕರ್ ವೃತ್ತದಲ್ಲಿ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿಗಳು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಹಲವಾರು ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ನೇಮಕಾತಿಯನ್ನು ಮಾಡಿರುವುದಿಲ್ಲ. ಪ್ರತಿ ವರ್ಷ 15 ರಿಂದ 20 ಸಾವಿರ ಶಿಕ್ಷಕರು ನಿವೃತ್ತಿಯಾಗುತ್ತಿದ್ದಾರೆ. ಆ ಹುದ್ದೆಗಳನ್ನು ಹಾಗೆಯೇ ಖಾಲಿ ಬಿಡಲಾಗಿದೆ.  ಇಡೀ ರಾಜ್ಯದಲ್ಲಿ ಅಂದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 79,694 ಹುದ್ದೆಗಳು ಖಾಲಿ ಇವೆ.  ಕಲ್ಯಾಣ ಕರ್ನಾಟಕ ಭಾಗವು ಇಡೀ ರಾಜ್ಯದಲ್ಲಿಯೇ ಶಿಕ್ಷಕರ ಗಂಭೀರ ಕೊರತೆಯನ್ನು ಎದುರಿಸುತ್ತಿದೆ. ಕಲ್ಯಾಣ ಕರ್ನಾಟಕದ ಶಾಲೆಗಳಲ್ಲಿ ಒಟ್ಟು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸೇರಿದಂತೆ 22,595 ಹುದ್ದೆಗಳು ಖಾಲಿ ಬಿದ್ದಿವೆ. ಅದರಲ್ಲಿ 18,317 ಪ್ರಾಥಮಿಕ ಶಾಲಾ ಶಿಕ್ಷಕರು, 4278 ಪ್ರೌಢಶಾಲಾ ಶಿಕ್ಷಕರ ಅನುಮೋದಿತ ಹುದ್ದೆಗಳು ಖಾಲಿ ಬಿಡಲಾಗಿದೆ. ಈ ವಿಷಯದಲ್ಲಿ ರಾಯ...
Image
  ಸ್ಟೇಶನ್ ರಸ್ತೆಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ರಸ್ತೆ ಅಪಘಾತ.                                                                                            ಜಯ ಧ್ವಜ ನ್ಯೂಸ್, ರಾಯಚೂರು,ಮೇ.24-      ಅಪಘಾತ ವಲಯವೆಂದೆ ಕುಖ್ಯಾತಿ ಪಡೆದ ಸ್ಟೇಶನ್ ರಸ್ತೆಯಲ್ಲಿ ಬೆಳಿಗ್ಗೆ ಕೂದಲೆಳೆ ಅಂತರದಲ್ಲಿ ರಸ್ತೆ ಅಪಘಾತ ವೊಂದು ತಪ್ಪಿದ ಪ್ರಸಂಗ ನಡೆದು ವಾಹನ ಸವಾರರು ನಿಬ್ಬೆರಗಾದರು. ಟ್ರಾಕ್ಟರ್ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ವಿಶಿಷ್ಟಚೇತನ ತ್ರಿಚಕ್ರ ವಾಹನಕ್ಕೆ ಟ್ರಾಲಿ ತಾಗಿದ ಪರಿಣಾಮ ತ್ರಿಚಕ್ರ ವಾಹನ ರಸ್ತೆ ವಿಭಜಕಕ್ಕೆ ತಳ್ಳಲ್ಪಟ್ಟಿತು ಕೂದಲೆಳೆ ಅಂತರದಲ್ಲಿ ಭಾರಿ ಅಪಘಾತ ತಪ್ಪಿದಂತಾಯಿತು .
Image
  ಬೆಂಗಳೂರು-ಮುಂಬೈ  ಸ್ಲೀಪರ್ ವಂದೇಭಾರತ ರೈಲು ಸಂಚಾರ ಖಚಿತಪಡಿಸಿದ ರೈಲ್ವೆ ಇಲಾಖೆ- ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಮೇ.23- ಬೆಂಗಳೂರು- ಮುಂಬೈ ಮಧ್ಯ ಹೊಸ ಸ್ಲೀಪರ್ ವಂದೇ ಭಾರತ ರೈಲು ಸಂಚರಿಸುವುದನ್ನು ರೈಲ್ವೆ ಇಲಾಖೆ ಖಚಿತ ಪಡಿಸಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಈ ರೈಲು ಬೆಂಗಳೂರಿನಿಂದ ಹೊರಟು, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪೂರ ಮಾರ್ಗವಾಗಿ ಸಂಚರಿಸಲಿದೆ. ಟಿಕೆಟ್ ದರ ಮೂರನೇ ದರ್ಜೆ ಏಸಿಗೆ ಪ್ರತಿ ಕಿ.ಮೀಗೆ ಜಿಎಸ್ ಟಿ ಸೇರಿ ರೂ . ದ್ವಿತೀಯ ದರ್ಜೆ ಏಸಿಗೆ  3.10 ರೂ. ಪ್ರಥಮ ದರ್ಜೆ ಏಸಿಗೆ 3.80 ರೂ. ನಿಗದಿಪಡಿಸಲಾಗಿದೆ. ರೈಲು ಸಂಚಾರದ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಉದ್ಯಾನ ಎಕ್ಸ್ ಪ್ರೆಸ್ ಬಿಟ್ಟರೆ ಬೆಂಗಳೂರಿನಿಂದ ಮುಂಬೈಗೆ ಸಂಚರಿಸಲು 30 ವರ್ಷಗಳಿಂದ ಬೇರೆ ಯಾವುದೇ ರೈಲುಗಳ ಸೌಲಭ್ಯ ಇರಲಿಲ್ಲ.  ಈಗ ಬೆಂಗಳೂರು-ಮುಂಬೈ ನ್ಯೂ ಸ್ಲೀಪರ್ ವಂದೇಭಾರತ ರೈಲು ಸಂಚಾರದಿಂದಾಗಿ ಮತ್ತೊಂದು ರೈಲಿನ ಸೌಲಭ್ಯ ದೊರೆದಂತಾಗಿದೆ. ಈ ರೈಲು ಉದ್ಯಾನ ಗಿಂತ 9 ಕ್ಕಿಂತ ಹೆಚ್ಚು ತಾಸು ಉಳಿತಾಯ ಮಾಡಲಿದೆ. ಜೊತೆಗೆ ಈ ಭಾಗದ 30 ವರ್ಷದ ಕನಸು  ನನಸಾದಂತಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾ...