Posts

Image
  ಮಾ 16 ರಂದು ಪಾಲಿಕೆ ಮುಂಗಡ ಪತ್ರ ಪೂರ್ವಭಾವಿ ಸಭೆ                     ಜಯ ಧ್ವಜ ನ್ಯೂಸ್ ,ರಾಯಚೂರು ಮಾ. 12-     ಮಹಾನಗರ ಪಾಲಿಕೆಯಿಂದ 2026-27ನೇ ಸಾಲಿನ ಮುಂಗಡ ಪತ್ರವನ್ನು ತಯಾರಿಸಲು ಮಾರ್ಚ್ 16ರ ಬೆಳಿಗ್ಗೆ 10.30 ಗಂಟೆಗೆ ಜೋನಲ್ 01ರ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದ್ದು, ನೋಂದಾಯಿತ ಸ್ಥಳೀಯ ಕಲ್ಯಾಣ ಸಂಘ, ವ್ಯಾಪಾರ, ಉದ್ಯಮ ನಡೆಸುವ ಸಂಘ-ಸಂಸ್ಥೆಗಳು ಎನ್.ಜಿ.ಓ. ಸಂಘಗಳು ಸೇರಿದಂತೆ ಇತರೆ ಪ್ರಮುಖ ನಾಗರಿಕರು ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ಶಿವನಗೌಡ ನಾಯಕರಿಂದ ಸಚಿವ ಮಹಾದೇವಪ್ಪ ರವರಿಗೆ ನಿಂದನೆ  ಕ್ರಮಕ್ಕೆ ವಿಳಂಬವೇಕೆ- ವಿಶ್ವನಾಥ್ ಪಟ್ಟಿ.                                                                                              ಜಯ ಧ್ವಜ ನ್ಯೂಸ್ , ರಾಯಚೂರು , ಮಾ.12 -                    ಸಚಿವ ಹೆಚ್.ಸಿ.ಮಹಾದೇವಪ್ಪರವರಿಗೆ ನಿಂದನೆ ಮಾಡಿದ ಮಾಜಿ ಸಚಿವ ಕೆ.ಶಿವನಗೌಡ ನಾಯಕರ ಮೇಲೆ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿರುವುದೇಕೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ ಪ್ರಶ್ನಿಸಿದರು . ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚಿತ್ರದುರ್ಗದಲ್ಲಿ ನಡೆದ ಸಭೆಯೊಂದರಲ್ಲಿ ಮಹಾದೇವಪ್ಪರವರಿಗೆ ಕಪಾಳ ಮೋಕ್ಷ ಮಾಡುತ್ತೇನೆಂದು ಹೇಳಿದ್ದು ಖಂಡನೀಯವಾಗಿದ್ದು ಅವರ ಮೇಲೆ ಕ್ರಮ ವಹಿಸಲು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಪ್ರಕರಣವೇಕೆ  ದಾಖಲಿಸಿಲ್ಲವೆಂದು  ಪೊಲೀಸ್ ಇಲಾಖೆಗೆ ಪ್ರಶ್ನಿಸಿದರು. ಪ್ರಕರಣ ದಾಖಲಿಸಲು ವಿಳಂಬ ಮಾಡಿದರ...
Image
  ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಹೋರಾಟಕ್ಕೆ ಜಯ:                                                                                            91 ಕಾರ್ಮಿಕರಿಗೆ ಬಾಕಿ ವೇತನ ,ಪರಿಹಾರ ಪಾವತಿಗೆ ಆದೇಶ- ಕೆ.ನಾಗಲಿಂಗಸ್ವಾಮಿ.                                                                                                 ಜಯ ಧ್ವಜ ನ್ಯೂಸ್, ರಾಯಚೂರು, ಮಾ.12- ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಬಾಕಿ ವೇತನ ಮತ್ತು ಪರಿಹಾರ ಪಾವತಿಗೆ ಪ್ರಾದೇಶಿಕ ಕಾರ್ಮಿಕ ಉಪ ಆಯುಕ್ತರು ಆದೇಶ ಮಾಡಿದ್ದಾರೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ ಎಐಸಿಸಿಟಿಯು ಕೇಂದ್ರ ಸಮಿತಿ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳ...
Image
  ವಡ್ಲೂರು ಗ್ರಾಮದಲ್ಲಿ ಬಡ ಕುಟುಂಬಗಳಿಗೆ ರೈಕೆಮ್ ನಿಂದ ದಿನಸಿ ಕಿಟ್ ವಿತರಣೆ                                                        ಜಯ ಧ್ವಜ ನ್ಯೂಸ್ , ರಾಯಚೂರು ,ಮಾ.12-      ರೈಕೆಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ವಡ್ಲೂರು ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಮೂರು ತಿಂಗಳ ಜೀವನೋಪಾಯಕ್ಕೆ ಬೇಕಾಗುವ ದಿನಸಿ ರೇಷನ್ ಕಿಟ್ಟನ್ನು ವಿತರಣೆ ಮಾಡಲಾಯಿತು. ಸಾಮಾಜಿಕ ಕಳಕಳಿ :ರಾಯ್ ಕಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಾಕಷ್ಟು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಬಡವರಿಗೆ ಜೀವನ ನಡೆಸಲು ಆಗದ ಕುಟುಂಬದ ಗಳಿಗೆ   ಇದೇ ರೀತಿಯಾದ ಹಲವು ಸೇವೆಗಳನ್ನು ಮಾಡುತ್ತಲೇ ಬಂದಿದೆ ವಡ್ಲೂರು ಗ್ರಾಮದಲ್ಲಿ  ಉಚಿತ ಕಣ್ಣಿನ ಚಿಕಿತ್ಸೆ ಕಳೆದ ವಾರದ ಹಿಂದೆ ಹಮ್ಮಿಕೊಳ್ಳಲಾಗಿತ್ತು ಅದೇ ರೀತಿಯಾಗಿ ಇಂದು 10 ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ ಮಾಡಲಾಯಿತು. ಕಂಪನಿಯ ಮುಖ್ಯಸ್ಥರಾದ ಪ್ರಹ್ಲಾದ್ ರಾವ್, ನಾಗಭೂಷಣ್, ಲೀಗಲ್ ಅಡ್ವೈಸರ್ ಸ್ಫೂರ್ತಿ, ಕಲ್ಯಾಣ  ಕರ್ನಾಟಕ ರೈತ ಸಂಘ ರಾಜ್ಯದ್ಯಕ್ಷರಾದ ಜಿಂದಪ್ಪ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸೂಗೂರೆಡ್ಡಿ ಗೌಡ   ಸೇರಿದಂತೆ ಅನ...
Image
  ಮಧ್ಯಪ್ರಾಚ್ಯ ಯುದ್ಧೋನ್ಮಾದ ಸ್ಥಿತಿ ಮುಂದುವರಿಕೆ:                               ಎಲ್ ಪಿ ಜಿ ಗ್ಯಾಸ್ ಪೂರೈಕೆ ಸಂಕಷ್ಟಕ್ಕೆ ಹೋಟೆಲ್ ಉದ್ಯಮೆದಾರರ ಆತಂಕ.                                                                                                                 ಜಯ ಧ್ವಜ ನ್ಯೂಸ್, ರಾಯಚೂರು, ಮಾ.12-    ಇರಾನ್ ದೇಶದ ಮೇಲೆ   ಅಮೇರಿಕಾ ಹಾಗೂ ಇಸ್ರೇಲ್  ಸಮರ ಸಾರಿದ್ದು ಕಳೆದ ಕೆಲವು ದಿನಗಳಿಂದ ಯುದ್ಧ ನಡೆಯುತ್ತಿದ್ದು ಗಲ್ಫ್ ದೇಶಗಳಿಂದ ಭಾರತಕ್ಕೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ವಾಗಿದ್ದು ಇದರಿಂದ ದೇಶಾದ್ಯಂತ ಅನಿಲ ವಿತರಣಾ ವ್ಯವಸ್ಥೆಯಲ್ಲಿ ಬಾಧೆ ಉಂಟಾದ ಪರಿಣಾಮ ಗ್ರಹ ಬಳಿಕೆ ಮತ್ತು ವಾಣಿಜ್ಯ ಬಳಿಕೆ ಅನಿಲ ಸಿಲೆಂಡರ್ ದರದಲ್ಲಿ ಏರಿಕೆಯಾಗಿದ್ದು ಅಲ್ಲದೆ ಕಮರ್ಷಿಯಲ್ ಅನಿಲ ಸಿಲಿಂಡರ್ ವಿತರಣೆಯಲ್ಲಿ...
Image
  ಒಳ ಮೀಸಲಾತಿ ಸಮರ್ಪಕ ಜಾರಿಗೆ ಆಗ್ರಹಿಸಿ ರಾಯಚೂರು ಬಂದ್ ಯಶಸ್ವಿ :                                                     ಬಸ್ ಸ್ಟ್ಯಾಂಡ್ ಬಿಕೋ; ವ್ಯಾಪಾರ ವಹಿವಾಟು ಸ್ಥಗಿತ.                                                                                                               ಜಯ ಧ್ವಜ ನ್ಯೂಸ್,  ರಾಯಚೂರು ಮಾ.11- ಒಳ ಮೀಸಲಾತಿ ಸಮರ್ಪಕ ಜಾರಿಗೆ ಆಗ್ರಹಿಸಿ ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ರಾಯಚೂರು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಿಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು ಸರ್ಕಾರದ ನಡೆಯನ್ನು ಖಂಡಿಸಿದರು. ದಲಿತರ ದಶಕಗಳ ಹೋರಾಟದ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಘೋಷಣೆಯಾಗಿದ್ದು ಅದನ್ನು ನ್ಯಾಯಯುತ...
Image
  ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ:  ರಾಷ್ಟ್ರೀಯ  ವಿಜ್ಞಾನ ದಿನ ಆಚರಣೆ ಮತ್ತು ಉಪನ್ಯಾಸಮಾಲೆ: ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆ ಅಪಾರ - ಪ್ರೊ.ಎಂ.ವೆಂಕಟೇಶ್ವರಲು ಜಯ ಧ್ವಜ ನ್ಯೂಸ್ ,ರಾಯಚೂರು,ಮಾ.೧೦- ಪ್ರಾಚೀನ ಕಾಲದಿಂದಲೂ ನಮ್ಮ ದೇಶ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಕೊಡುಗೆಗಳನ್ನು ಕೊಟ್ಟಿದೆ. ಖಗೋಳದಿಂದ ಹಿಡಿದು ಜ್ಯೋತಿಷ್ಯಶಾಸ್ತçದವರೆಗೂ ಅನೇಕ ರೀತಿಯಿಂದ ವಿಜ್ಞಾನ ಆವಿಷ್ಕಾರಗಳಾಗಿವೆ. ವಿಜ್ಞಾನ ಹೇಗೆ ಬೆಳೆಯಿತು ಎಂದರೆ ಗ್ರಹಿಕೆಯಿಂದ ಮಾತ್ರ ಬೆಳೆಯಿತು ಎಂದು ತುಮಕೂರಿನ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ವೆಂಕಟೇಶ್ವರಲು ಉದ್ಘಾಟಕ ನುಡಿಗಳನ್ನಾಡಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗಗಳ ವತಿಯಿಂದ ಮಂಗಳವಾರದಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಅಂಗವಾಗಿ ವಿಶೇಷ ಉಪನ್ಯಾಸಮಾಲೆ ಕಾರ್ಯಕ್ರಮವನ್ನು ಡಾ.ಸಿ.ವಿ.ರಾಮನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಒಂದು ಆಲೋಚನೆಯ ಸಾಮರ್ಥ್ಯವನ್ನು ಒಳಗೊಂಡಿದೆ. ಡಾ.ಸಿ.ವಿ.ರಾಮನ್‌ರ ಪ್ರಾಮಾಣಿಕತೆ, ಶಿಸ್ತು, ಶ್ರಮ ಇಂದಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಲಿಯಬೇಕು. ವಿಕ್ರಂ ಸಾರಾಬಾಯಿ, ಎಂ.ಎಸ್.ಸ್ವಾಮಿನಾಥನ್ ಇವರೆಲ್ಲರೂ ಪ್ರಸಿದ್ಧ ವಿಜ್ಞಾನಿಗಳು. ಯುವಕರು ಉತ್ತಮ ಆಲೋಚನೆಯಿಂದ ಮಾತ್ರ ಮುಂದೆಬರಲು ಸಾಧ್ಯ. ವಿದ್ಯಾರ್ಥಿಗಳಲ್ಲಿರ...