Posts

Image
ಮಾತೋಶ್ರೀ ತಪೋವನದಲ್ಲಿ ಸ್ವಾನುಭಾವ ಶಿಬಿರ ಉದ್ಘಾಟ‌ನೆ:                                                  ನಮ್ಮೊಳಗಿನ ಅರಿವಿನ‌ ಕೊರತೆಯಿಂದ ಅಪಾಯಕಾರಿ ಕಡೆ ವಾಲಿದ್ದೇವೆ- ಪ್ರೊ.ಶಿವಾನಂದ‌ ಕೆಳಗಿನಮನಿ ಜಯ ಧ್ವಜ ನ್ಯೂಸ್ ,ರಾಯಚೂರು,ಫೆ.12-  ಇಂದು ನಮ್ಮೊಳಗಿನ ಅರಿವಿನ‌ ಕೊರತೆಯಿಂದ ತಂತ್ರಜ್ಞಾನದ ಪ್ರಭಾವದಿಂದ ಅಪಾಯಕಾರಿ ಕಡೆಗೆ ವಾಲಿದ್ದೇವೆ ಎಂದು ರಾಯಚೂರಿನ ಮಹರ್ಷಿ ವಾಲ್ಮಿಕಿ ವಿವಿಯ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು. ನಗರದ ಹೊರವಲಯದ ಮಾತೋಶ್ರೀ ತಪೋವನದ ಬಸವ ಕಲ್ಯಾಣ ಮಂಟಪದಲ್ಲಿ ಮಾತೋಶ್ರೀ ಶ್ರೀ ನೀಲಮ್ಮ ತಾಯಿಯವರ 24 ನೇ ಪುಣ್ಯಸ್ಮರಣೆ ಹಾಗೂ ಡಬ್ಬೇರು ಮಡುವಿನ  ಪರಮಪೂಜ್ಯ ಸದ್ಗುರು ವಿದ್ಯಾನಂದ ಶರಣರ ಸ್ಮರಣೆ ನಿಮಿತ್ತ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಸೇವಾ ಪ್ರತಿಷ್ಠಾನ ಸಹಯೋ ಗದಲ್ಲಿ ಸ್ವಾನುಭಾವ ಶಿಬಿರ ಉದ್ಘಾಟಿಸಿ ಮಾತನಾಡಿದರು.  ಇವತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯನ ವಿಚಾರ ಅರಿಯಲು ಎಐ ತಂತ್ರಜ್ಞಾನಕ್ಕೆ ಅವಲಂಬನೆ ಹೆಚ್ಚಿದ್ದ ರಿಂದ ನಮ್ಮ ಬದುಕು ಅಪಾಯಕಾರಿಯತ್ತ ಜಾರಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆಂತರಿಕವಾಗಿ ಶೋಧಿಸಿ ಕೊಳ್ಳುವುದು ಬಹಳ ಕಷ್ಟದ ಕೆಲಸ ಇನ್ನೊಬ್ಬರ ಬಗ್ಗೆ ಮಾತನಾಡುವುದೆ  ಹೆ...
Image
  ದಾನಿಗಳಿಂದ 2.5 ಕೋಟಿ ರೂ. ಧನ ಸಹಾಯ ಒಡಂಬಡಿಕೆ-ಎಸ್.ರಘುನಾಥ ಜಯ ಧ್ವಜ ನ್ಯೂಸ್ , ರಾಯಚೂರು, ಫೆ.12- ಅಖಿಲ ಕರ್ನಾಟಕ ಬ್ರಾಹ್ಮಣ  ಮಹಾ ಸಭಾ ಅದ್ಯಕ್ಷರಾದ ಶ್ರೀ ಎಸ್ ರಘುನಾಥ ಅವರು ಶ್ರೀ ವೇದಾಂತ್ ಸಮೀರ್ ರಾವ್ ಅವರ ತಾಯಿ ಶ್ರೀಮತಿ ಪ್ರಭಾ ನಾಗರಾಜನ್ ಅವರ ಜೊತೆ ವಿದ್ಯಾರ್ಥಿ ವೇತನ, ವೃದ್ಧಾಶ್ರಮಕ್ಕೆ ಸಹಾಯ ನೀಡುವ ಬಗ್ಗೆ ಮತ್ತು ವೇದ ಪಾಠಶಾಲೆಗೆ ಸಹಾಯ ಮಾಡುವ ಒಡಂಬಡಿಕೆ ಮಾಡಿಕೊಳ್ಳಲಾಯಿತು.  ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಮತ್ತು ಸಾತಿ ಚಾರಿಟೇಬಲ್ ಫಂಡ್ ಹೆಸರಿನಲ್ಲಿ ಈ ಕಾರ್ಯಕ್ರಮ ಮಾಡಲು ಒಪ್ಪಂದ ಮಾಡಲಾಗಿದೆ. 90 ವರ್ಷದ ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಹಾಗೂ ಅವರ ಸೊಸೆ ಶ್ರೀಮತಿ ಪ್ರಭಾ ನಾಗರಾಜನ್ ಅವರು ಅಧ್ಯಕ್ಷರಾದ ಎಸ್ ರಘುನಾಥ್ ಜೊತೆಯಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಚರ್ಚಿಸಿ ಈ ಕಾರ್ಯಕ್ರಮ ಜಾರಿಗೆ ಬರುವಂತೆ ನಮ್ಮ ಸಮಾಜದ ಬಡವರಿಗೆ ಅನುಕೂಲವಾಗುವ ಚಿಂತನೆ  ನಡೆಸಿ ಅವರು ಕಷ್ಟಪಟ್ಟು ದುಡಿದಿರುವ 2.5 ಕೋಟಿ ರೂ. ಹಣವನ್ನು ಬಸವನಗುಡಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಮತ್ತು ವೇದಾಂತ ಸಮೀರ್ ರಾವ್ ಅವರ ಜಂಟಿ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಂದಿನಿಂದ ಇಡಲಾಗುವಂತೆ ಒಪ್ಪಂದ ಮಾಡಲಾಯಿತು. ಈ ದೊಡ್ಡ ಮೊತ್ತದಿಂದ ಅಂದಾಜು 15 ಲಕ್ಷ ವಾರ್ಷಿಕ ಬಡ್ಡಿ ಬರಲಿದ್ದು ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಉದ್ದೇಶಿಸಿರುವ ಯೋಜನೆಯನ್ನು ಅಖ...
Image
  25 ನೇಯ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್:                              ಶ್ರೀಸೂಗೂರೇಶ್ವರ ಕರಾಟೆ ಸಂಸ್ಥೆಯ ನೇತೃತ್ವ ಜಯ ಧ್ವಜ ನ್ಯೂಸ್ , ರಾಯಚೂರು, ಫೆ.10- ಕರಾಟೆ ಒಂದು ಸಂಪೂರ್ಣ ಕಲಾ ಪ್ರಕಾರವಾಗಿದ್ದು, ಆತ್ಮರಕ್ಷಣೆ, ದೈಹಿಕ ಮತ್ತು ಮಾನಸಿಕ ತರಬೇತಿ, ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಒದಗಿಸುತ್ತದೆ ಹೃದಯ ಸಂಬಂಧಿ ಫಿಟ್ನೆಸ್, ನಮ್ಯತೆ ಮತ್ತು ಒಟ್ಟಾರೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಸೂಗೂರೇಶ್ವರ ಕರಾಟೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಖ್ಯ ತರಬೇತಿದಾರದ ಸೂಗಪ್ಪ. ಎನ್ ಹೇಳಿದರು. ಅವರು ಫೆ.8 ಭಾನುವಾರ  ರಂದು ತೆಲಂಗಾಣ ರಾಜ್ಯ, ಮಕ್ತಲ್ ಜಿಲ್ಲಾ, ನಾರಾಯಣಪೇಟ್ ನ ವೆಂಕಟೇಶ್ವರ ಫಂಕ್ಷನ್ ಹಾಲ್  ನಲ್ಲಿ ಡ್ರ್ಯಾಗನ್ ಶೋಟೊಕಾನ್ ಕರಾಟೆ ಡೋ ಸ್ಪೋರ್ಟ್ ಸಹಯೋಗದಲ್ಲಿ ಆಯೋಜಿಸಿದ 25 ನೇಯ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಭಾಗವಹಿಸಿ ಮಾತನಾಡಿ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಕಟಾ ವಿಭಾಗದಲ್ಲಿ ಒಟ್ಟು   18 ಸ್ಪರ್ಧಿಗಳು ವಿಜೇತರಾದರು 1 ನೇ ಸ್ಥಾನಕ್ಕೆ 09 ಸ್ಪರ್ಧಿಗಳು, 2 ನೇ ಸ್ಥಾನಕ್ಕೆ 06 ಸ್ಪರ್ಧಿಗಳು, 3 ನೇ ಸ್ಥಾನಕ್ಕೆ 03 ಸ್ಪರ್ಧಿಗಳು ವಿಜೇತರಾದರು, ಒಟ್ಟು 05  ಗ್ರ್ಯಾಂಡ್ ಚಾಂಪಿಯನ ಶಿಪ್ ಪದಕ...
Image
  ಫೆ.11ರಂದು ನಗರಕ್ಕೆ ಪ್ರೇಮ ವಾಹಿನಿ ರಥಯಾತ್ರೆ -ಸುಬ್ರಮಣ್ಯಂ.                                                                                                                                               ಜಯ ಧ್ವಜ ನ್ಯೂಸ್, ರಾಯಚೂರು,ಫೆ.9- ಸತ್ಯ ಸಾಯಿ ಸೇವಾ ಆರ್ಗನೈಜೇಷನ್ ಈಶಾನ್ಯ ಕರ್ನಾಟಕ ವಿಭಾಗದಿಂದ ಫೆ.11 ರಂದು ನಗರಕ್ಕೆ ಪ್ರೇಮ ವಾಹಿನಿ ರಥಯಾತ್ರೆ ಆಗಮಿಸಲಿದೆ ಎಂದು ಆಯೋಜಕರಾದ ಸುಬ್ರಹ್ಮಣ್ಯಮ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಅಂದು ಬೆಳಿಗ್ಗೆ 10ಕ್ಕೆ ಶಕ್ತಿ ನಗರದಿಂದ ನಗರದ ಮಾ ಆಶಾಪುರಿ ಕಲ್ಯಾಣ ಮಂಟಪ ತಲುಪಲಿದೆ  ಅಲ್ಲಿ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತದನಂತರ ರಥಯಾತ್ರೆ 1.30ಕ್ಕೆ  ನಗರದ ಗಂಜ್ ವೃತ್ತ, ಸಿಟಿ ಟಾಕೀಸ್ ವೃತ್ತ,ಚಂದ್ರಮೌಳೆಶ್ವರ ವೃತ್ತ, ಬಸವೇಶ್ವರ ವೃತ್ತ ಮೂಲಕ ಸಿಂಧನೂರಿನ...
Image
  ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ - ಚಾಮರಸ ಮಾಲಿಪಾಟೀಲ್.                                           ಜಯ ಧ್ವಜ ನ್ಯೂಸ್ ರಾಯಚೂರು, ಫೆ.9- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಫೆ.12ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತದೆ ಎಂದು ಸಂಯುಕ್ತ ಹೋರಾಟ ರಾಜ್ಯ ಸಂಚಾಲಕ ಚಾಮರಸ್ ಮಾಲಿಪಾಟೀಲ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ನಾಲ್ಕು ಲೇಬರ್ ಕೋಡ್, ವಿಬಿಜಿರಾಮಜಿ ಯೋಜನೆ ಜಾರಿಗೆ ಮುಂದಾಗಿದ್ದು ಕಾರ್ಮಿಕರು, ಬಡವರು, ಕೂಲಿಕಾರರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು ನರೇಗಾ ಬದಲಾಯಿಸಿ ವಿಬಿಜಿರಾಮಜಿ ಜಾರಿಗೊಳಿಸುವುದು ಗ್ರಾಮೀಣ ಪ್ರದೇಶದಲ್ಲಿ ಮರಣ ಶಾಸನವಾಗಲಿದೆ ಎಂದರು. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ ಕಾರ್ಮಿಕರ ಹಕ್ಕು ಕಸಿಯುವ ಹುನ್ನಾರ ಅಡಗಿದೆ ಎಂದರು. ನರೇಗಾದಡಿ ಇದ್ದ ನಿಯಮಗಳನ್ನು ತೆಗೆದು ಹೊಸ ಹೆಸರಿನೊಂದಿಗೆ ಕಾಯ್ದೆ ರೂಪಿಸಿ ಜನರಿಗೆ ಸಂಕಷ್ಟಕ್ಕೆ ದೂಡುತ್ತಿದೆ ಎಂದರು. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ ರಾಜ್ಯ ಸರ್ಕಾರ 6 ನೇ ಗ್ಯಾರಂಟಿಯಾಗಿ ಭೂಮಿ ನೀಡುವ ಬಗ್ಗೆ ಉಲ್ಲೇಖಿಸಿದ್ದು  ಯಾರಿಗೆ ಭೂಮಿ ನೀಡುತ್ತೇವೆ ಎಂದು ...
Image
  ಫೆ. 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಭೆ ಜಯ ಧ್ವಜ ನ್ಯೂಸ್ , ರಾಯಚೂರು, ಪೆ.9- ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಸಹಾಯಕ ಆಯುಕ್ತರಾದ ಶ್ರೀ ಹಂಪಣ್ಣ ಸಜ್ಜನ್ ಹಾಗೂ ತಹಸೀಲ್ದಾರ್ ಶ್ರೀ ಜಗದೀಶ್ ಅವರ ನೇತೃತ್ವದಲ್ಲಿ ಫೆಬ್ರವರಿ 19 ರಂದು ನಡೆಯಲಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಸಂಬಂಧಿಸಿದ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ, ನಗರದ ಖಾಸ್ ಭಾವಿ ಹತ್ತಿರ ಇರುವ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಿಂದ ಮೆರವಣಿಗೆ ಪ್ರಾರಂಭಿಸಿ ರಂಗಮಂದಿರದವರೆಗೆ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಮೆರವಣಿಗೆಯಲ್ಲಿ ಸಾಹಿತಿಗಳು, ವಿವಿಧ ಕಲಾ ತಂಡಗಳು ಭಾಗವಹಿಸಿ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದರು. ಈ ಸಭೆಯಲ್ಲಿ ಮರಾಠ ಸಮಾಜದ ಅಧ್ಯಕ್ಷರು ಹನುಮಂತ್ ಜಗತಾಪ, ರಾಯಚೂರು ಕ್ಷತ್ರಿಯ ಒಕ್ಕೂಟದ ಅಧ್ಯಕ್ಷರು ಅಶೋಕ್ ಕುಮಾರ್ ಮೈದರ್ಕರ್, ಮುಖಂಡರಾದ ಶ್ರೀನಿವಾಸ್ ಪತಂಗೆ, ಭೀಮಣ್ಣ ಜಾಧವ, ಅಂಬಾಜಿ ರಾವು ಮೈದರ್ಕರ್, ಸೂರ್ಯ ರಾವು, ರಘು ನನ್ನೊರೆ, ಅಮಿತ್ ಜಗಟಪ್, ಸತೀಶ್ ಜಗಟಪ್, ಅಮರೇಶ್, ಸಿದ್ದು, ಶರಣು, ಶಿವರಾಮ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಶಾಂತಿ...
Image
  ಜಿಲ್ಲಾ ಉತ್ಸವ ಕಡೆಯ ದಿನ:                    ಕೃಷಿ ,ಆಹಾರ, ಗ್ಯಾರಂಟಿ, ಮತ್ಸ್ಯ ಮೇಳ, ಫಲ ಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಜಂಗುಳಿ .                                                                                                                                                            ಜಯ ಧ್ವಜ ನ್ಯೂಸ್ , ರಾಯಚೂರು, ಫೆ.7- ಮೂರು ದಿನಗಳ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಇಂದು ತೆರೆ ಬೀಳಲಿದ್ದು ಉತ್ಸವದ ಕಡೆಯ ದಿನವಾದ ಇಂದು ಕೃಷಿ ವಿವಿ ಮುಖ್ಯ ವೇದಿಕೆ ಬಳಿ ಸ್ಥಾಪಿತವಾದ ಆಹಾರ ಮೇಳ, ಕೃಷಿ ಮೇಳ ಮತ್ಸ್ಯ ಮೇಳ, ಗ್ಯಾರಂಟಿ ಮೇಳ, ಫಲ ಪುಷ್ಪ ಪ್ರದರ್ಶನ ಸೇರಿದಂತೆ ಕರ ಕುಶಲ ಮತ್ತು ಬಟ್ಟೆ, ಇತರೆ ವಸ್ತುಗಳ ಖರೀದಿ ಭರಾಟೆಯಲ್...