Posts

Image
  ಗಾಯತ್ರಿ ಭವನ: ಬಾಗಿಲು ಚೌಕಟ್ಟು ಸ್ಥಾಪನೆ.                                                                 ಜಯ ಧ್ವಜ ನ್ಯೂಸ್ , ರಾಯಚೂರು, ಏ.23-  ಇಂದು ನಗರದ ನವೋದಯ ಆಸ್ಪತ್ರೆ ಹತ್ತಿರ ಇರುವ ಬ್ರಾಹ್ಮಣ ಸಮಾಜದ ಹೆಮ್ಮೆಯ ಗಾಯತ್ರಿ ಭವನದ ನೂತನ ಬಾಗಿಲು ಚೌಕಟ್ಟು ಕೂಡಿಸಲಾಯಿತು. ಈಗಾಗಲೆ ಅನೇಕ ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದ ಹಿರಿಯರ ಸಹಕಾರದೊಂದಿಗೆ ಗಾಯತ್ರಿ ಭವನ ಕಟ್ಟಡದ ಕಾಮಗಾರಿ ಭರದಿಂದ ಸಾಗಿದ್ದು ಇಂದು ಮುಖ್ಯ ದ್ವಾರ ಚೌಕಟ್ಟು ಸ್ಥಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ  ಸಂದರ್ಭದಲ್ಲಿ ಎಕೆಬಿಎಂಎಸ್ ರಾಯಚೂರು ಜಿಲ್ಲಾ ಪ್ರತಿನಿಧಿ ರಮೇಶ ಕುಲಕರಣಿ, ಜಿಲ್ಲಾ ಸಂಚಾಲಕ  ವೇಣುಗೋಪಾಲ ಇನಾಮ್ದಾರ್, ಕಾರ್ಯಧ್ಯಕ್ಷರಾದ ವೆಂಕಟೇಶ್ ದೇಸಾಯಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಜಯಕುಮಾರ ಗಬ್ಬೂರು, ನಗರ ಸಂಚಾಲಕರಾದ ರಾಮರಾವ್ ಗಣೆಕಲ್, ಹಿರಿಯರಾದ ನಂದಾಪುರ ಶ್ರೀನಿವಾಸ, ಪ್ರಾಣೇಶ ಮುತಾಲಿಕ್, ಡಾ.ಆನಂದ್ ತೀರ್ಥ ಪಡ್ನೀಸ್ ,ಟಿ ರಮೇಶ್ ,ಕೋಲಾರ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಹಾಗೂ ವಿಷ್ಣು ತೀರ್ಥ ಸಿರವಾರ, ರಮಾಕಾಂತ್ ರಾವ್ ಗುಂಜಳ್ಳಿ, ಕಿಶನ್ ರಾವ್ ಎಲ್.ಕೆ. ದ...
Image
ಗಾಯತ್ರಿ ಭವನ: ಬಾಗಿಲು ಚೌಕಟ್ಟು ಸ್ಥಾಪನೆ.                                                                 ಜಯ ಧ್ವಜ ನ್ಯೂಸ್ , ರಾಯಚೂರು, ಏ.23-  ಇಂದು ನಗರದ ನವೋದಯ ಆಸ್ಪತ್ರೆ ಹತ್ತಿರ ಇರುವ ಬ್ರಾಹ್ಮಣ ಸಮಾಜದ ಹೆಮ್ಮೆಯ ಗಾಯತ್ರಿ ಭವನದ ನೂತನ ಬಾಗಿಲು ಚೌಕಟ್ಟು ಕೂಡಿಸಲಾಯಿತು. ಈಗಾಗಲೆ ಅನೇಕ ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದ ಹಿರಿಯರ ಸಹಕಾರದೊಂದಿಗೆ ಗಾಯತ್ರಿ ಭವನ ಕಟ್ಟಡದ ಕಾಮಗಾರಿ ಭರದಿಂದ ಸಾಗಿದ್ದು ಇಂದು ಮುಖ್ಯ ದ್ವಾರ ಚೌಕಟ್ಟು ಸ್ಥಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ  ಸಂದರ್ಭದಲ್ಲಿ ಎಕೆಬಿಎಂಎಸ್ ರಾಯಚೂರು ಜಿಲ್ಲಾ ಪ್ರತಿನಿಧಿ ರಮೇಶ ಕುಲಕರಣಿ, ಜಿಲ್ಲಾ ಸಂಚಾಲಕ  ವೇಣುಗೋಪಾಲ ಇನಾಮ್ದಾರ್, ಕಾರ್ಯಧ್ಯಕ್ಷರಾದ ವೆಂಕಟೇಶ್ ದೇಸಾಯಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಜಯಕುಮಾರ ಗಬ್ಬೂರು, ನಗರ ಸಂಚಾಲಕರಾದ ರಾಮರಾವ್ ಗಣೆಕಲ್, ಹಿರಿಯರಾದ ನಂದಾಪುರ ಶ್ರೀನಿವಾಸ, ಪ್ರಾಣೇಶ ಮುತಾಲಿಕ್, ಡಾ.ಆನಂದ್ ತೀರ್ಥ ಪಡ್ನೀಸ್ ,ಟಿ ರಮೇಶ್ ,ಕೋಲಾರ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಹಾಗೂ ವಿಷ್ಣು ತೀರ್ಥ ಸಿರವಾರ, ರಮಾಕಾಂತ್ ರಾವ್ ಗುಂಜಳ್ಳಿ, ಕಿಶನ್ ರಾವ್ ಎಲ್.ಕೆ. ದೊಡ್ಡಿ, ...
Image
  ಆದಿಕವಿ ಶ್ರೀ ವಾಲ್ಮೀಕಿ ವಿವಿ : ಶ್ರೀ ಭಗೀರಥ ಜಯಂತಿ ಆಚರಣೆ ತಪೋನಿಷ್ಠೆಗೆ ಆದರ್ಶ ಮಹರ್ಷಿ ಭಗೀರಥ - ಪ್ರೊ.ಪಿ.ಭಾಸ್ಕರ್ ಜಯ ಧ್ವಜ ನ್ಯೂಸ್. ರಾಯಚೂರು,ಏ.23- ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತರುವಲ್ಲಿ ಮಹರ್ಷಿ ಭಗೀರಥರ ಪಾತ್ರ ಅಪ್ರತಿಮವಾದುದು, ಪೂರ್ವಜರ ಆತ್ಮಕ್ಕೆ ಶಾಂತಿ ಒದಗಿಸಿದ ಭಗೀರಥರ ಸಾಹಸವನ್ನು ಈ ದಿನವು ಅಸಾಧಾರಣ ಪರಿಶ್ರಮ, ಛಲ ಮತ್ತು ಸಮರ್ಪಣಾ ಮನೋಭಾವವನ್ನು ಸಂಕೇತಿಸುತ್ತದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ವಾಣಿಜ್ಯ ನಿಕಾಯದ ಡೀನರಾದ ಪ್ರೊ.ಪಿಭಾಸ್ಕರ್ ಅವರು ತಿಳಿಸಿದರು. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‌ನಲ್ಲಿ ಶ್ರೀ ಭಗೀರಥ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿದ ಅವರು, ಹಿಂದೂ ಪುರಾಣಗಳಲ್ಲಿ ಛಲಬಿಡದ ರಾಜಋಷಿಯಾಗಿ ಪರಿಚಿತರಾದ ಇವರು ಸಕಲ ಜೀವರಾಶಿಗೆ ಅನುಕೂಲವಾಗುವಂತೆ ನಮ್ಮ ದೇಶದ ಜೀವನದಿ ಅಷ್ಟೆ ಅಲ್ಲದೇ ಗಂಗೆಯನ್ನು ಹಿಮಾಲಯದಿಂದ ಭೂಮಿಗೆ ತಂದು ಜೀವಧಾತುಗಳಿಗೆ ಸನ್ಮಾರ್ಗವನ್ನು ಕಲ್ಪಿಸಿದ ಮಹಾಪುರುಷರು. ಪ್ರಯತ್ನ ಪರಾಕಾಷ್ಠೆಯ ಭಗೀರಥ ಪ್ರಯತ್ನವೆಂದು ಜನಜನಿತವಾಗಿದ್ದು ತನ್ನ ಸಾಹಸಕ್ಕೆ ಗುರುಭಕ್ತಿಗೆ ತಪೋನಿಷ್ಠೆಗೆ ಆದರ್ಶವಾಗಿ ಕಂಗೊಳಿಸುತ್ತಾರೆ ಎಂದು ಅವರು ಹೇಳಿದರು.   ಕಾರ್ಯಕ್ರಮದಲ್ಲಿ ವಿಜ್ಞಾನ ನಿಕಾಯ ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಕಲಾ ನಿಕಾಯ ಡೀನರಾದ ಡ...
Image
ನಗರದಲ್ಲಿ ತಾಪಮಾನ ಏರಿಕೆ: ಸಾರ್ವಜನಿಕರ ರಕ್ಷಣೆಗಾಗಿ ಶಾಶ್ವತ ನೆರಳು ಹಾಗೂ ನೀರಿನ ವ್ಯವಸ್ಥೆಗೆ ಪ್ರಗತಿಪರ ಸಂಘಟನೆಗಳ ಒತ್ತಾಯ   ಜಯ ಧ್ವಜ ನ್ಯೂಸ್ , ರಾಯಚೂರು,ಏ.23- ನಗರದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ, ಇಂದು ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಮಾನವೀಯ ದೃಷ್ಟಿಕೋನದಿಂದ  ಸಂಘಟನೆಗಳ ಪ್ರತಿನಿಧಿಗಳು ನಗರದ ಪ್ರಮುಖ ವೃತ್ತಗಳಾದ ಬಸವೇಶ್ವರ ವೃತ್ತ ಹಾಗೂ ಗಂಜ್ ವೃತ್ತಗಳಿಗೆ ಭೇಟಿ ನೀಡಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಿಲ್ಲುವ ವಾಹನ ಸವಾರರಿಗೆ ಶಾಶ್ವತ ನೆರಳು ಒದಗಿಸುವ ಉದ್ದೇಶದಿಂದ ಪರದೆ (ಶೇಡ್) ವ್ಯವಸ್ಥೆಯನ್ನು ಪರಿಶೀಲಿಸಿ, ಸೂಕ್ತ ಸಲಹೆಗಳನ್ನು ನೀಡಿದರು. ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಲ್ಲಿ ಸಿಗ್ನಲ್‌ಗಳಲ್ಲಿ ನಿಂತುಕೊಳ್ಳುವ ನಾಗರಿಕರಿಗೆ ನೆರಳು ಸೌಲಭ್ಯ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇದಾದ ನಂತರ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ ಪ್ರತಿನಿಧಿ ಮಂಡಳಿ, ಈ ಕಾಮಗಾರಿಯನ್ನು ಆದ್ಯತೆಯಿಂದ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿತು. ಜೊತೆಗೆ, ನಗರದಲ್ಲಿನ ಜನನಿಭೀಡ ಪ್ರದೇಶಗಳಲ್ಲಿ ನೀರಿನ ಅರವಟ್ಟಿಗೆ (ಕುಡಿಯುವ ನೀರಿನ ತಾತ್ಕಾಲಿಕ ಕೇಂದ್ರಗಳು) ವ್ಯವಸ್ಥೆ ಮಾಡಬೇಕು ಹಾಗೂ ಪ್ರಮುಖ ರಸ್ತೆಗಳ ಮೇಲೆ ನೀರಿನ ಟ್ಯಾಂಕರ್ ಅಥವಾ ಅಗ್ನಿಶಾಮಕ ವಾಹನಗಳ ಮೂಲಕ ...
Image
  ಸ್ಟೇಶನ ರಸ್ತೆಯಲ್ಲಿ ನಿರಂತರ ಅಪಘಾತ; ರಿಂಗ್ ರಸ್ತೆಗೆ ಬಾಬುರಾವ್ ಒತ್ತಾಯ ಜಯ ಧ್ವಜ ನ್ಯೂಸ್ ,ರಾಯಚೂರು,ಏ.23-  ರಾಷ್ಟ್ರೀಯ ಹೆದ್ದಾರಿ 167ರ ದುಸ್ಥಿತಿ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಭಿವೃದ್ಧಿಯ ಸಂಕೇತವಾಗಬೇಕಾದ ಈ ರಸ್ತೆ ಇದೀಗ ಅಪಘಾತಗಳ ಸಾವಿನ ಬಲೆಯಾಗಿ ಪರಿಣಮಿಸಿದೆ. ನವೋದಯ ವೈದ್ಯಕೀಯ ಶಿಕ್ಷಣ ಸಂಸ್ಥೆ ವೃತ್ತದಿಂದ ಹೈದರಾಬಾದ್ ಬೈಪಾಸ್ ವರೆಗೆ ಹರಡುವ ಈ ಹೆದ್ದಾರಿಯಲ್ಲಿ ಇದುವರೆಗೆ ಸುಮಾರು 800ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವುದು ಆತಂಕಕಾರಿ ಸಂಗತಿಯಾಗಿದ್ದು, ಇತ್ತೀಚೆಗೆ ನಡೆದ ಅಪಘಾತದಲ್ಲಿ  ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆಗೆ  ಸಮಾಜ ಸೇವಕ ಹಾಗೂ ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಡಾ. ಬಾಬುರಾವ್ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಹಾಗೂ ವಾಹನ ಸವಾರರ ಪ್ರಕಾರ, ಹೆದ್ದಾರಿಯ ಕಿರಿದಾದ ವಿನ್ಯಾಸ, ಸಮರ್ಪಕ ದಾರಿದೀಪಗಳ ಕೊರತೆ, ಎಚ್ಚರಿಕಾ ಸೂಚನಾ ಫಲಕಗಳ ಅಭಾವ ಹಾಗೂ ನಿಯಂತ್ರಣರಹಿತ ವೇಗದ ಸಂಚಾರವೇ ಅಪಘಾತಗಳ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಬೆಳಕಿನ ಕೊರತೆಯಿಂದ ದೃಶ್ಯತೆ ಕುಂದಿ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಹೆದ್ದಾರಿಯ ಹಲವು ಭಾಗಗಳಲ್ಲಿ ಅಪಾಯಕಾರಿ ತಿರುವುಗಳು ಮತ್ತು ವಿಭಜನೆ ಇಲ್ಲದ ರಸ್ತೆಯ ಕಾರಣದಿಂದ ಮುಖಾಮುಖಿ ಡಿಕ್ಕಿಗಳು ಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಸ್ಥಳಗಳು...
Image
  ಹೆಲ್ಮೆಟ್ ಧರಿಸಿ ಜೀವ ಕಾಪಾಡಿಕೊಳ್ಳಿ - ಎಸ್ಪಿ ಅರುಣಾಂಗ್ಶು ಗಿರಿ  ಜಯ ಧ್ವಜ ನ್ಯೂಸ್ ರಾಯಚೂರು, ಏ.23- ಬೈಕ್ ಸವಾರರು ತಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ರಾಯಚೂರು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶುಗಿರಿ ಹೇಳಿದರು.      ಅವರಿಂದು ರಾಯಚೂರು ಜಿಲ್ಲಾ ಪೊಲೀಸ್ ಮತ್ತು ರಾಯ್ ಕೆಮ್ ಮೆಡಿಕೇರ್  ಲಿಮಿಟೆಡ್ ಕಂಪನಿ ಸಹಯೋಗದಲ್ಲಿ ವಡ್ಲೂರು  ಸರ್ಕಲ್ ಎಸ್ ಬಿ ಐ ಬ್ಯಾಂಕ್ ಆವರಣದಲ್ಲಿ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.     ದೇಹದ ಯಾವುದೇ ಭಾಗಕ್ಕೂ ಪೆಟ್ಟಾದರೂ ಚಿಕಿತ್ಸೆ ಪಡೆಯಬಹುದು, ಆದರೆ ಮನುಷ್ಯನ ತಲೆಗೆ ಪೆಟ್ಟಾದರೆ  ಜೀವ ಹೋಗುವ ಸಂಭವವಿರುತ್ತದೆ ಎಲ್ಲರೂ ಹೆಲ್ಮೆಟ್ ಧರಿಸಬೇಕು   ಬೈಕ್ ಸವಾರನಾ ತಲೆ ಒಂದು ಮೊಟ್ಟೆ ಇದ್ದಂತೆ ಮೊಟ್ಟೆ  ಒಡೆದರೆ ಅದನ್ನು ಜೋಡಿಸಲು ಆಗುವುದಿಲ್ಲವೋ ಅದೇ ರೀತಿಯಾಗಿ ಮನುಷ್ಯನ ತಲೆಯೂ ಒಂದು ಮೊಟ್ಟೆ ಇದ್ದಂತೆ  ಆದ್ದರಿಂದ ತಲೆಗೆ ಪೆಟ್ಟಾಗದಂತೆ ಕಾಪಾಡಿಕೊಳ್ಳುವುದು  ಪ್ರತಿಯೊಬ್ಬ ಬೈಕ್ ಸವಾರನ  ಕರ್ತವ್ಯವಾಗಿದೆ ಎಂದು ಹೇಳಿದರು. ಪೊಲೀಸರು ಎಷ್ಟೇ ಬೈಕ್ ಸವಾರರಿಗೂ ದಂಡ  ಹಾಕಿದರು ಹೆಲ್ಮೆಟ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿಲ...
Image
  ಸಿಯಾತಲಾಬ್‌ ಕೊಳಗೇರಿ ಅಭಿವೃದ್ಧಿ ನಿಗಮ ಮನೆ ನಿರ್ಮಾಣ ಕಾಮಗಾರಿ ವೀಕ್ಷಣೆ :                  ಮನೆಗಳ ನಿರ್ಮಾಣ ವಿಳಂಬವಾದರೆ ಅಧಿಕಾರಿಗಳೆ ಹೊಣೆ- ಎ.ವಸಂತಕುಮಾರ                                                                                                                                                                                                      ಜಯ ಧ್ವಜ ನ್ಯೂಸ್ ,ರಾಯಚೂರು, ಏ.23 -   ನಗರದ ಸಿಯಾತಲಾಬ್ ಪ್ರದೇಶಕ್ಕೆ ಇಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಭೇಟಿ ನೀಡಿ...