Posts

Image
  ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ :            ಸಾರ್ವಜನಿಕರು ಉತ್ಸಾಹ ದಿಂದ ಪಾಲ್ಗೊಳ್ಳಿ- ನಿತೀಶ್.ಕೆ.                                                                                                                        ಜಯ ಧ್ವಜ ನ್ಯೂಸ್ , ರಾಯಚೂರು ,ಫೆ.3-    ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಳುವಂತೆ ಜಿಲ್ಲಾಧಿಕಾರಿ ನಿತೀಶ್. ಕೆ  ಹೇಳಿದರು.        ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿದ್ಧತೆ ಕಾರ್ಯ ಕುರಿತು ವಿವರಿಸಲು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.5,6,7 ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಈಗಾಗಲೆ ಸಿದ್ಧತೆ ಭರದಿಂದ ನಡೆದಿದ್ದು ಕಾರ್ಯಕ್ರ...
Image
  ರೈಲ್ವೆಗೆ ದಾಖಲಾರ್ಹ ಅನುದಾನ ನೀಡಿರುವ ಬಜೆಟ್ ಸ್ವಾಗತಾರ್ಹ- ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ , ರಾಯಚೂರು, ಫೆ.2- ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ೨೦೨೬-೨೭ ನೇ ಸಾಲಿನ ಆಯ- ವ್ಯಯದಲ್ಲಿ ರೈಲ್ವೆ ಇಲಾಖೆಗೆ ಬಂಪರ್ ಕೊಡುಗೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ರೈಲ್ವೆ ಸಲಹಾ ಮಂಡಳಿಯ ಮಾಜಿ ಸದಸ್ಯ ಡಾ.ಬಾಬುರಾವ್ ಹರ್ಷ ವ್ಯಕ್ತಪಡಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ರೈಲ್ವೆ ಇಲಾಖೆಗೆ ರೂ.೨.೯೩ ಲಕ್ಷ ಕೋಟಿ ಒದಗಿಸಿದ್ದಲ್ಲದೆ ೭ ಹೊಸ ಸೂಪರ್ ಫಾಸ್ಟ್‌ ರೈಲು ಓಡಿಸಲು ಮುಂದಾಗಿರುವುದು. ಅದರಲ್ಲಿ ಎರಡು ರೈಲುಗಳು ರಾಜ್ಯಕ್ಕೆ ಸಿಕ್ಕಿರುವುದು ಸಂತಸದ ವಿಚಾರವಾಗಿದೆ.ಇದರಲ್ಲಿ ಕಲ್ಯಾಣ ಕರ್ನಾಟಕಕ್ಕೂ ಪಾಲು ಸಿಕ್ಕಿದ್ದು ಖುಷಿಯ ವಿಷಯವಾಗಿದೆ ಎಂದರು. ಕರ್ತವ್ಯ ಮಂತ್ರದೊಂದಿಗೆ ದೇಶದ ವಿಕಸಿತದ ಗುರಿ ಹೊಂದಿರುವ ಬಜೆಟ್ ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ‌. ಆಶಾದಾಯಕ ಬಜೆಟ್ ಇದಾಗಿದ್ದು, ವಿದೇಶಗಳಿಗೆ ಪ್ರಯಾಣಿಸುವ ಭಾರತೀಯರ ಮೇಲಿನ ತೆರಿಗೆಯನ್ನು ಪ್ರತಿಶತ ಎರಡರಷ್ಟು ಕಡಿಮೆ ಮಾಡಿದ್ದಾರೆ. ಮಾರ್ಚ್ 31ರವರೆಗೆ ಟ್ಯಾಕ್ಸ್ ಫೈಲ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಬೆಂಗಳೂರು ಹೈದರಾಬಾದ್, ಬೆಂಗಳೂರು ಚೆನ್ನೈ ಹೈಸ್ಪೀಡ್​ ಕಾರಿಡಾರ್ ನೀಡಿದ್ದಾರೆ. ಸಿಗರೇಟ್ ಮತ್ತು ಔಷಧಗಳ ಮೇಲೆ ತೆರಿಗೆ ಕಡಿಮೆ ಮಾಡುವ ಮೂಲಕ ಜನರಿಗೆ ಅಗ್ಗ ಮಾಡಿದ್ದಾರೆ. ಬಡವರ ಪರವಾದ, ಆಶಾದಾಯಕ ಬಜೆಟ್ ಇದ...
Image
  ಮಕ್ಕಳ ಹಬ್ಬ ಅದ್ದೂರಿ ಪ್ರಾರಂಭ:                          ಜಾದೂ, ಗಾಳಿಪಟ, ಕೀಟ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮ.                                                                                                                                           ಜಯ ಧ್ವಜ ನ್ಯೂಸ್ , ರಾಯಚೂರು,ಫೆ.2- ಎಡೆದೊರೆನಾಡು ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಎರೆಡು ದಿನಗಳ ಮಕ್ಕಳ ಹಬ್ಬಕ್ಕೆ ಅದ್ದೂರಿ ಚಾಲನೆ ಸಿಕ್ಕಿದ್ದು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳ ಕಲರವ ಕಂಡು ಬರುತ್ತಿದೆ. ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಜಾದೂ ಪ್ರದರ್ಶನಕ್ಕೆ ಮಕ್ಕಳು ಮಂತ್ರಮುಗ್ಧರಾಗಿದ್ದಾರೆ. ಮತ್ತೊಂದೆಡೆ ಗಾಳಿ ಪಟಗಳ ಹಾರಾಟ, ಮಾಸ್ಕ್  ತಯಾರಿ, ಗೊಂಬೆಗಳು , ಕೀಟ ಪ್ರದರ್ಶನ...
Image
  ಜಿಲ್ಲಾಡಳಿತದಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿ:              ಮಡಿವಾಳ ಮಾಚಿದೇವರು ತಿಳಿಸಿದ ಮಾರ್ಗದಲ್ಲಿ ನಡೆಯಿರಿ- ಪರಮೇಶ್ವರ ಸಾಲಿಮಠ ಜಯ ಧ್ವಜ ನ್ಯೂಸ್ ,ರಾಯಚೂರು ಫೆ. 1- ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ತೋರಿದ ಹಾದಿಯಲ್ಲಿ ಮಡಿವಾಳ ಮಾಚಿದೇವರು ನಡೆದು, ಎಲ್ಲ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕೆಂದು ಸೀತಾ ಸುಬ್ಬರಾಜು ಸ್ಮಾರಕ ಮಹಾವಿದ್ಯಾಲಯದ ವಿಶಾಂತ್ರ ಪ್ರಾಚಾರ್ಯರಾದ ಪರಮೇಶ್ವರ ಸಾಲಿಮಠ ಅವರು ಹೇಳಿದರು.  ಫೆ.01ರ ಭಾನುವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಡಿವಾಳ ಮಾಡಿದೇವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.  ಸಾಮಾಜಿಕ ವ್ಯವಸ್ಥೆಯ ಕೆಳ ಸ್ಥರದಲ್ಲಿದ್ದ ಜಾತಿಯ ಜನಕ್ಕೆ ವಿದ್ಯೆ ಕಲಿಯಲು ಅವಕಾಶ ಇಲ್ಲದ ದಿನಗಳಲ್ಲಿ ಸಾಕಷ್ಟು ವಿಷಯಗಳನ್ನು ಅಧ್ಯಯನ ಮಾಡಿ ಪಾಂಡಿತ್ಯ ಗಳಿಸಿದ್ದವರು ವೀರ ಗಣಾಚಾರಿ ಮಡಿವಾಳ ಮಾಚಿದೇವರು. ಬಸವಣ್ಣನವರು ಮಾಚಿದೇವರನ್ನು ತಂದೆ ಎಂದು ಕರೆದಿದ್ದರು. ಇದು ಮಾಚಿದೇವರ ಮೇಲಿರುವ ಬಸವಣ್ಣನವರ ಗೌರವದ ಪ್ರತೀಕ ಎಂದು ಹೇಳಿದರು. ಮಡಿವಾಳ ಕುಲದಲ್ಲಿ ಹುಟ್ಟಿದ್ದರೂ ಮಾಚಯ್ಯ ಉತ್ತಮ ಶಿಕ್ಷಣ ಮತ್ತು...
Image
  ವಿರಾಟ್ ಹಿಂದು ಸಮ್ಮೇಳನ ಉದ್ಘಾಟನೆ:        ಹಿಂದುತ್ವದಲ್ಲಿ ಎಲ್ಲವನ್ನು ಸ್ವೀಕರಿಸುವ ಮನೋಭಾವವಿದೆ- ಡಾ.ಪಾಂಡುರಂಗ ಆಪ್ಟೆ                                                                                                                      ಜಯ ಧ್ವಜ ನ್ಯೂಸ್ , ರಾಯಚೂರು, ಫೆ.1 -      ಹಿಂದುತ್ವದಲ್ಲಿ ಎಲ್ಲವನ್ನು ಸ್ವೀಕರಿಸುವ ಮನೋಭಾವ ಅಡಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗದ ಸಹ ಕಾರ್ಯವಾಹ ಡಾ.ಪಾಂಡುರಂಗ ಆಪ್ಟೆ ಹೇಳಿದರು. ಅವರಿಂದು ನಗರದ ಯಾದವ ಸಮಾಜದ ಕೃಷ್ಣ ದೇವಸ್ಥಾನ ಮೈದಾನದಲ್ಲಿ   ಗಾಜಗಾರಪೇಟೆ ಉಪನಗರದ ವಿರಾಟ್ ಹಿಂದು ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು. ಹಿಂದುತ್ವಕ್ಕೆ ತನ್ನದೆಯಾದ ಮನ್ನಣೆಯಿದೆ ಋಷಿ ಮುನಿಗಳು ಸಾಧು ಸಂತರ ತಪೋ ನಿಷ್ಟತೆ ಅಡಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಹಿಂದು ಪರಂಪರೆಯಲ್ಲಿ ನಿರ್ಜೀವ...
Image
ರಾಯಚೂರು ಉತ್ಸವದ ಜ್ಯೋತಿ ರಥಯಾತ್ರೆಗೆ ವಿದ್ಯುಕ್ತ ಚಾಲನೆ ಜಯ ಧ್ವಜ ನ್ಯೂಸ್ ,ರಾಯಚೂರು ಫೆ.1 ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಅಂಗವಾಗಿ ಜಿಲ್ಲಾಡಳಿತ‌ ರೂಪಿಸಿರುವ ಜ್ಯೋತಿ ರಥಯಾತ್ರೆಗೆ ಇಂದು ಚಾಲನೆ ಸಿಕ್ಕಿತು. ನಗರದ ಐತಿಹಾಸಿಕ ಕರ್ನಾಟಕ ಸಂಘದ ಆವರಣದಿಂದ ರಥಯಾತ್ರೆ ಆರಂಭಗೊಂಡಿತು. ರಥಯಾತ್ರೆ ಚಾಲನೆ ಹಿನ್ನೆಲೆಯಲ್ಲಿ ಕರ್ನಾಟಕ ಸಂಘದ ಆವರಣದಲ್ಲಿ ಬೆಳಗ್ಗೆ ಹಬ್ಬದ ಸಂಭ್ರಮ ಕಂಡು ಬಂದಿತು. ಹೂವು, ತಳಿರು ತೋರಣಗಳಿಂದ ಶೃಂಗರಿಸಿದ್ದ ರಥವು ಗಮನ ಸೆಳೆಯಿತು.  ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಒಂದೇ ಬಣ್ಣದ ಸೀರೆ ಧರಿಸಿ ಆಗಮಿಸಿ ಕಾರ್ಯಕ್ರಮದ‌ ಕಳೆ ಹೆಚ್ಚಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಈ ರಥಯಾತ್ರೆಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಚಾಲನೆ ನೀಡಿದರು. ಜಿಲ್ಲಾಡಳಿತದ ಸೂಚನೆ ಹಿನ್ನೆಲೆ,  ರಜೆ ದಿನವಾದ ಭಾನುವಾರವೂ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ತಮ್ಮತಮ್ಮ ಕಚೇರಿಯ ಸಿಬ್ಬಂದಿಯೊಂದಿಗೆ ಆಗಮಿಸಿದ್ದರು. ಜ್ಯೋತಿ ರಥಯಾತ್ರೆ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥಯಾತ್ರೆಯನ್ನು ಯಶಸ್ವಿಗೊಳಿಸಿದರು.  ನಗರದ ಪ್ರಯುಖ ರಸ್ತೆಗಳಲ್ಲಿ ಜಾಥಾ: ನಗರದ ಬಂಗಾರ ಬಜಾರ್, ಸದರ್ ಬಜಾರ್, ಹಳೆ ನಗರಸಭೆ ಕಚೇರಿ ಮುಂಭಾಗ, ಕೇಂದ್ರ ಬಸ್ ನಿಲ್ದಾಣ, ಅಂಬೇಡ್ಕರ್ ವ...
Image
ಎ.ವಸಂತ ಕುಮಾರ್ ರಿಂದ ನಾಮ ಫಲಕ ಉಧ್ಘಾಟನೆ:    ಶೀಘ್ರದಲ್ಲಿ ಅನುದಾನ ಒದಗಿಸುವ ಭರವಸೆ.                ಜಯ ಧ್ವಜ ನ್ಯೂಸ್ , ರಾಯಚೂರು, ಫೆ.1- ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ.ವಸಂತಕುಮಾರ ಅವರು ಇಂದು ಶ್ರೀ ನಂದೀಶ್ವರ ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ ದೇವಸ್ಥಾನ  ಆವರಣದ ಹೊರಗಡೆ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ನಿಗದಿಗೊಳಿಸಲಾದ ಸ್ಥಳದ ನಾಮಪಲಕ ಉದ್ಘಾಟಿಸಿದರು. ಕಲ್ಯಾಣ ಮಂಟಪ ನಿರ್ಮಾಣ ಮಾಡಲು ದೇವಸ್ಥಾನದ ಆಧೀನದಲ್ಲಿ 80*120 ಅಡಿ ಸ್ಥಳವನ್ನು ಮೀಸಲಿಡಲಾಗಿದ್ದು, ದೇವಸ್ಥಾನದ ಸ್ವಾಮಿಜಿಗಳು ಆದಷ್ಟು ಶೀಘ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲು 2.00ಕೋ ರೂ ಅನುದಾನ‌ ಒದಗಿಸಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ವಿಧಾನ‌ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಮುಂದಿನ ಎರಡು ಮೂರು ತಿಂಗಳಲ್ಲಿ ಅನುದಾನ‌ ಒದಗಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಯಕರಾದ ಈಶಪ್ಪ, ಕೆಪಿಸಿಸಿ ವಕ್ತಾರರಾದ ಡಾ.ರಝಾಕ ಉಸ್ತಾದ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಡಿ.ಕೆ. ಮುರಳಿ ಯಾದವ, ರಮೇಶ‌ರೋಸ್ಲಿ, ಜೆ.ಸತ್ಯನಾಥ, ಮೊಹಮ್ಮದ ರಫಿ ಹಾಗೂ ಇತರರು ಉಪಸ್ಥಿತರಿದ್ದರು.