ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅರಳಿದ ಕಮಲ ಜಿಲ್ಲಾ ಬಿಜೆಪಿಯಿಂದ ವಿಜಯೋತ್ಸವ ಜಯ ಧ್ವಜ ನ್ಯೂಸ್, ರಾಯಚೂರು,ಮೇ.5- ಪಶ್ಚಿಮ ಬಂಗಾಳ ಮತ್ತು ಆಸ್ಸಾಂ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿದ್ದ ರಿಂದ ಸೋಮವಾರ ಸಂಜೆ ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತ ದಲ್ಲಿ ಬಿಜೆಪಿ ಪಕ್ಷದ ವತಿಯಿಂದ ವಿಜಯೋತ್ಸವ ಮಾಡಿ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್. ಶಂಕ್ರಪ್ಪ, ಹಿರಿಯ ಮುಖಂಡರಾದ, ರಾಜಕುಮಾರ, ಶಿವಬಸ್ಸಪ್ಪ ಮಾಲಿಪಾಟೀಲ ,ಜಿಲ್ಲಾ ಉಪಾಧ್ಯಕ್ಷರಾದ ಗೋವಿಂದ, ಶಂಕರ್ ರೆಡ್ಡಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರವೀಂದ್ರ ಜಾಲ್ದಾರ್, ರಮಾನಂದ ಯಾದವ, ನಗರ ಅಧ್ಯಕ್ಷರು ಊಟಕೂರು ರಾಘವೇಂದ್ರ, ಶಿವಕುಮಾರ್ ಪ್ರದೀಪ್ ಸಾನಬಾಳ್, ಪಲಗುಲ ನಾಗರಾಜ್, ಚಂದ್ರಶೇಖರ, ರಾಮು ಕಡಗೋಲ್, ನರಸರೆಡ್ಡಿ, ಚಂದ್ರಶೇಖರ, ಶಿವಕುಮಾರ್, ಬಿ.ಗೋವಿಂದ, ಮುಕ್ತಿಯಾರ, ಕೃಷ್ಣಮೂರ್ತಿ, ನರಸಿಂಹ ರೆಡ್ಡಿ, ರಾಮು ನಾಯಕ, ಸುಲೋಚನಾ ಬಸವರಾಜ್, ವಾಣಿಶ್ರೀ , ಅಶ್ವಿನಿ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು, ಮಹಿಳಾ ಘಟಕದ ಪದಾಧಿಕಾರಿಗಳು ಅನೇಕರು ಪಾಲ್ಗೊಂಡಿದ್ದರು.