Posts

Image
  ಮಾನಸಿಕವಾಗಿ ಭಾವನಾತ್ಮಕವಾಗಿ ಸದೃಡರಾಗಬೇಕಾಗಿದೆ     - ಕಿಲ್ಲೆ ಶ್ರೀಗಳು.                                                        ಜಯ ಧ್ವಜ ನ್ಯೂಸ್ ರಾಯಚೂರು. ಮಾ.14 - ಜಿಲ್ಲಾ ‌ಕಾರಾಗೃಹ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನಸಿಕವಾಗಿ ಭಾವನಾತ್ಮಕವಾಗಿ ಸದೃಡರಾಗಬೇಕಾಗಿದೆ ಎಂದು ಸಾವಿರ ದೇವರ ಸಂಸ್ಥಾನ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಅವರಿಂದು ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ,ಜಿಲ್ಲಾ ಕಾರಾಗೃಹ ಅಧಿಕಾರಿ ಮತ್ತು ಸಿಬ್ಬಂದಿಯವರ ಕುಟುಂಬ ಕಲ್ಯಾಣ ದಿನಾಚರಣೆ 2026 ಕಾರ್ಯ ಕ್ರಮವನ್ನು ಜ್ಯೋತಿ ಬೆಳಗಿಸಿ ಮಾತಾನಾಡಿದರು.ಹೆಚ್ಚುವರಿ ಪೋಲಿಸ್ ವರಿಷ್ಟಾದಿಕಾರಿ ಕುಮಾರ ಸ್ವಾಮಿ ಮಾತಾನಾಡುತ್ತಾ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಚರಣೆಯ ನ್ನು ಆಚರಿಸಬೇಕೆಂದು ಅಭಿಪ್ರಾಯ ಪಟ್ಟರು ಇಂತಹ ಕಾರ್ಯಕ್ರಮಗಳಿಂದ ಮಾನಸಿಕ ಸ್ಥೈರ್ಯ ಕೊಡುತ್ತದೆ ಎಂದರು.ಕರ್ತವ್ಯದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಲು ಅವಕಾ‌ಶ ನೀಡಿತ್ತಾ ಕುಟುಂಬ ಸದಸ್ಯರು ಒಂದಾಗಲು ಕರೆ ಕೊಟ್ಟರು. 2011 ರಿಂದ ಕಾರಾಗ್ರಹ ಅದಿಕಾರಿ‌ ಸಿಬ್ಬಂದಿಯವರ ಕುಟುಂಬ ಕಲ್ಯಾ ಣ ಇಲಾಖೆ ಕಲ್ಯಾಣ ದಿ...
Image
   ನಗರದ ವಾರ್ಡ ನಂ.02 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಭೂಮಿ‌ ಪೂಜೆ‌  ಜಯ ಧ್ವಜ ನ್ಯೂಸ್, ರಾಯಚೂರು, ಮಾ.14- ವಾರ್ಡ ನಂ. 2 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ್ ರವರು ಭೂಮಿ ಪೂಜೆ ನೆರವೇರಿಸಿದರು.  ಆಶಾಪುರ ಮುಖ್ಯ ರಸ್ತೆಯಿಂದ ಎಫ್.ಸಿ.ಐ. ಕಾಂಪೌಂಡವರೆಗೆ ಸಿಸಿ‌ ರಸ್ತೆ ನಿರ್ಮಾಣಕ್ಕೆ 50.00 ಲಕ್ಷ ರೂ ಅನುದಾನ ಒದಗಿಸಲಾಗಿದೆ, ಅಖಿಲ್ ಅಪಾರ್ಟಮೆಂಟ್ ನಿಂದ ಏನಕ್ಲೇವ ಫೇಸ್-01 ಅಪಾರ್ಟ್ಮೆಂಟ್ ವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ 30.00 ಲಕ್ಷ ಅನುದಾನ‌ ಒದಗಿಸಲಾಗಿದೆ,  ಅದೇ ರೀತಿ ವಾರ್ಡಿನ ವಿಜಯನಗರ ಬಡಾವಣೆಯಲ್ಲಿ ಸಿಸಿ‌ ರಸ್ತೆ ಮತ್ತು ಚರಂಡಿ‌ ನಿರ್ಮಾಣಕ್ಕೆ  1.00 ಕೋ ರೂ ಅನುದಾನ ಒದಗಿಸಲಾಗಿದೆ ಹಾಗೂ ವಾರ್ಡಿನ ಆಫಿಸರ್ ಕಾಲೋನಿ ಯಲ್ಲಿ 2.00 ಕೋ ರೂ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ‌ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.    ಭೂಮಿ ಪೂಜೆ ನೆರವೇರಿಸಿ ಮಾತನಾಡಿದ  ಎ.ವಸಂತಕುಮಾರ ಅವರು ರಾಯಚೂರು ನಗರವು ವೇಗವಾಗಿ ಬೆಳೆಯುತ್ತಿದ್ದು ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವದರಿಂದ  ಕೆಕೆಆರ್.ಡಿಬಿ ಮೂಲಕ ಸಾಕಷ್ಟು ಅನುದಾನ‌ ಒದಗಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ‌ ನೀಡಲಾಗುತ್ತಿದೆ, ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಬೇಕೆಂದು ಹ...
Image
  ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಆದ್ಯತೆಯಿಲ್ಲ:            ಜಿಲ್ಲೆಯ ಶಾಸಕರಲ್ಲಿ ಇಚ್ಚಾಶಕ್ತಿ ಕೊರತೆ- ಮಾಲಿಪಾಟೀಲ .                                                                      ಜಯ ಧ್ವಜ ನ್ಯೂಸ್, ರಾಯಚೂರು, ಮಾ. 13-  ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಆದ್ಯತೆ ನೀಡಲಾಗಿಲ್ಲವೆಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಕೃಷಿಗೆ ಪ್ರಾಧಾನ್ಯತೆ ನೀಡಲಾಗಿಲ್ಲವೆಂದರು. ಜಿಲ್ಲೆಯಲ್ಲಿ ರೈತರ ಸಂಕಷ್ಟಕ್ಕೆ ಯಾರು ಸ್ಪಂದಿಸುತ್ತಿಲ್ಲವೆಂದ ಅವರು ಫೇಕ್ ಜಿಪಿಎಸ್ ಸರ್ವೆಯಿಂದ ರೈತರು ಬೆಳೆದ ಬೆಳೆ ಹಾಗೂ ನೊಂದಣಿಯಾದ ಬೆಳೆ ತದ್ವಿರುದ್ಧವಾಗಿದೆ ಎಂದು ದೂರಿದರು. ಖರೀದಿ ಕೇಂದ್ರಗಳು ತೆರೆದಿಲ್ಲ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅನೇಕ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ರೈತರ ಸಂಕಷ್ಟ ಆಲಿಸುವವರು ಯಾರು ಎಂದರು.ತುಂಗಭದ್ರಾ ಗೇಟ್ ಅಳವಡಿಕೆ ಕಾರ್ಯ ಒಂದೆಡೆಯಾದರೆ ಮತ್ತೊಂದೆಡೆ ಕಾಲು...
Image
  ಮಾ 16 ರಂದು ಪಾಲಿಕೆ ಮುಂಗಡ ಪತ್ರ ಪೂರ್ವಭಾವಿ ಸಭೆ                     ಜಯ ಧ್ವಜ ನ್ಯೂಸ್ ,ರಾಯಚೂರು ಮಾ. 12-     ಮಹಾನಗರ ಪಾಲಿಕೆಯಿಂದ 2026-27ನೇ ಸಾಲಿನ ಮುಂಗಡ ಪತ್ರವನ್ನು ತಯಾರಿಸಲು ಮಾರ್ಚ್ 16ರ ಬೆಳಿಗ್ಗೆ 10.30 ಗಂಟೆಗೆ ಜೋನಲ್ 01ರ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದ್ದು, ನೋಂದಾಯಿತ ಸ್ಥಳೀಯ ಕಲ್ಯಾಣ ಸಂಘ, ವ್ಯಾಪಾರ, ಉದ್ಯಮ ನಡೆಸುವ ಸಂಘ-ಸಂಸ್ಥೆಗಳು ಎನ್.ಜಿ.ಓ. ಸಂಘಗಳು ಸೇರಿದಂತೆ ಇತರೆ ಪ್ರಮುಖ ನಾಗರಿಕರು ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
  ಶಿವನಗೌಡ ನಾಯಕರಿಂದ ಸಚಿವ ಮಹಾದೇವಪ್ಪ ರವರಿಗೆ ನಿಂದನೆ  ಕ್ರಮಕ್ಕೆ ವಿಳಂಬವೇಕೆ- ವಿಶ್ವನಾಥ್ ಪಟ್ಟಿ.                                                                                              ಜಯ ಧ್ವಜ ನ್ಯೂಸ್ , ರಾಯಚೂರು , ಮಾ.12 -                    ಸಚಿವ ಹೆಚ್.ಸಿ.ಮಹಾದೇವಪ್ಪರವರಿಗೆ ನಿಂದನೆ ಮಾಡಿದ ಮಾಜಿ ಸಚಿವ ಕೆ.ಶಿವನಗೌಡ ನಾಯಕರ ಮೇಲೆ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿರುವುದೇಕೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ ಪ್ರಶ್ನಿಸಿದರು . ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚಿತ್ರದುರ್ಗದಲ್ಲಿ ನಡೆದ ಸಭೆಯೊಂದರಲ್ಲಿ ಮಹಾದೇವಪ್ಪರವರಿಗೆ ಕಪಾಳ ಮೋಕ್ಷ ಮಾಡುತ್ತೇನೆಂದು ಹೇಳಿದ್ದು ಖಂಡನೀಯವಾಗಿದ್ದು ಅವರ ಮೇಲೆ ಕ್ರಮ ವಹಿಸಲು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಪ್ರಕರಣವೇಕೆ  ದಾಖಲಿಸಿಲ್ಲವೆಂದು  ಪೊಲೀಸ್ ಇಲಾಖೆಗೆ ಪ್ರಶ್ನಿಸಿದರು. ಪ್ರಕರಣ ದಾಖಲಿಸಲು ವಿಳಂಬ ಮಾಡಿದರ...
Image
  ತುಂಗಭದ್ರಾ ನೀರಾವರಿ ಕಾರ್ಮಿಕ ಸಂಘದ ಹೋರಾಟಕ್ಕೆ ಜಯ:                                                                                            91 ಕಾರ್ಮಿಕರಿಗೆ ಬಾಕಿ ವೇತನ ,ಪರಿಹಾರ ಪಾವತಿಗೆ ಆದೇಶ- ಕೆ.ನಾಗಲಿಂಗಸ್ವಾಮಿ.                                                                                                 ಜಯ ಧ್ವಜ ನ್ಯೂಸ್, ರಾಯಚೂರು, ಮಾ.12- ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಬಾಕಿ ವೇತನ ಮತ್ತು ಪರಿಹಾರ ಪಾವತಿಗೆ ಪ್ರಾದೇಶಿಕ ಕಾರ್ಮಿಕ ಉಪ ಆಯುಕ್ತರು ಆದೇಶ ಮಾಡಿದ್ದಾರೆ ಎಂದು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ ಎಐಸಿಸಿಟಿಯು ಕೇಂದ್ರ ಸಮಿತಿ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಹೇಳ...
Image
  ವಡ್ಲೂರು ಗ್ರಾಮದಲ್ಲಿ ಬಡ ಕುಟುಂಬಗಳಿಗೆ ರೈಕೆಮ್ ನಿಂದ ದಿನಸಿ ಕಿಟ್ ವಿತರಣೆ                                                        ಜಯ ಧ್ವಜ ನ್ಯೂಸ್ , ರಾಯಚೂರು ,ಮಾ.12-      ರೈಕೆಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ವಡ್ಲೂರು ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಮೂರು ತಿಂಗಳ ಜೀವನೋಪಾಯಕ್ಕೆ ಬೇಕಾಗುವ ದಿನಸಿ ರೇಷನ್ ಕಿಟ್ಟನ್ನು ವಿತರಣೆ ಮಾಡಲಾಯಿತು. ಸಾಮಾಜಿಕ ಕಳಕಳಿ :ರಾಯ್ ಕಮ್ ಮೆಡಿಕೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಾಕಷ್ಟು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಬಡವರಿಗೆ ಜೀವನ ನಡೆಸಲು ಆಗದ ಕುಟುಂಬದ ಗಳಿಗೆ   ಇದೇ ರೀತಿಯಾದ ಹಲವು ಸೇವೆಗಳನ್ನು ಮಾಡುತ್ತಲೇ ಬಂದಿದೆ ವಡ್ಲೂರು ಗ್ರಾಮದಲ್ಲಿ  ಉಚಿತ ಕಣ್ಣಿನ ಚಿಕಿತ್ಸೆ ಕಳೆದ ವಾರದ ಹಿಂದೆ ಹಮ್ಮಿಕೊಳ್ಳಲಾಗಿತ್ತು ಅದೇ ರೀತಿಯಾಗಿ ಇಂದು 10 ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ ಮಾಡಲಾಯಿತು. ಕಂಪನಿಯ ಮುಖ್ಯಸ್ಥರಾದ ಪ್ರಹ್ಲಾದ್ ರಾವ್, ನಾಗಭೂಷಣ್, ಲೀಗಲ್ ಅಡ್ವೈಸರ್ ಸ್ಫೂರ್ತಿ, ಕಲ್ಯಾಣ  ಕರ್ನಾಟಕ ರೈತ ಸಂಘ ರಾಜ್ಯದ್ಯಕ್ಷರಾದ ಜಿಂದಪ್ಪ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸೂಗೂರೆಡ್ಡಿ ಗೌಡ   ಸೇರಿದಂತೆ ಅನ...