Posts

Image
  ದಾಸ ಪರಂಪರೆಯನ್ನು ಬೆಳೆಸಿದ ಮಹನೀಯರು ಶ್ರೀ ಶಾಮ ಸುಂದರ ದಾಸರು- ಮುರಳೀಧರ ಕುಲಕರ್ಣಿ                                                ಜಯ ಧ್ವಜ ನ್ಯೂಸ್ ,ರಾಯಚೂರು,ಏ.26- ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಿನ್ನೆ ಸಂಜೆ ವರಕವಿಗಳು ದಾಸ ಶ್ರೇಷ್ಠರಾದ ಶ್ರೀ ಶಾಮಸುಂದರ ದಾಸರ ಆರಾಧನೆಯನ್ನು ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜ್ರಂಭಣೆಯಿಂದ ಆಚರಿಸಲಾಯಿತು.  ಆರಾಧನೆಯ ಕಾರ್ಯಕ್ರಮದಲ್ಲಿ ಉಪನ್ಯಾಸಗಳು ದಾಸವಾಣಿ ಕಾರ್ಯಕ್ರಮಗಳು ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮಗಳು ಜರಗಿದವು.                            ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಉಪನ್ಯಾಸವನ್ನು ನೀಡಿ ಶ್ರೀ ಶಾಮ ಸುಂದರ ದಾಸರು ಮಾನವಿಯ ಗುಂಡಾಚಾರ್ಯರೆಂದು ಪ್ರಸಿದ್ಧಿಯಾಗಿದ್ದರು ಇವರು ಜಗನ್ನಾಥದಾಸರಿಂದ ಸ್ವಪ್ನಾಂಕಿತವನ್ನು ಪಡೆದು ಶಾಮ ಸುಂದರ ವಿಠಲ ಎಂಬ ಅಂಕಿತದಿಂದ ನೂರಾರು ಸಂಕೀರ್ತನೆಗಳನ್ನು, ಸುಳಾದಿಗಳನ್ನು, ಬಯಲಾಟಗಳನ್ನು,ಲಾವಣಿ ಪದಗಳನ್ನು, ಗೀಗಿ ಪದಗಳನ್ನು, ಶೋಬಾನಗೀತೆಗಳನ್ನು, ಜೋಗುಳ ಗೀತೆಗಳನ್ನು, ಕೋಲಾಟ ಪದಗಳನ್ನು ರಚಿಸಿ ಹರಿದಾಸ ಶ್ರೇಷ್ಠ ...
Image
ವಸಂತ ಕುಮಾರ್ ರಿಂದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ                                                                                 ಜಯ ಧ್ವಜ ನ್ಯೂಸ್ ,ರಾಯಚೂರು, ಏ.26 -  ನಗರ ವಿಧಾನ ಸಭಾ ಕ್ಷೇತ್ರದ ಬಾಯಿದೊಡ್ಡಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಭೂಮಿ ಪೂಜೆ ನೆರವೇರಿಸಿದರು. ಬಾಯಿದೊಡ್ಡಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಯ 30 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ‌ ಮಾಡಲು ಇಂದು ಭೂಮಿ‌ ಪೂಜೆ‌ ನೆರವೇರಿಸಿ ಮಾತನಾಡಿದ ಎ.ವಸಂತಕುಮಾರ ಅವರು ಇಂದಿಗೂ ನಗರ ವಿಧಾನ‌ ಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮೂಲಭೂತ‌ ಸೌಕರ್ಯಗಳ ಕೊರತೆ ಸಾಕಷ್ಟು ಇದ್ದು, ನಾಗರೀಕರಿಗೆ ರಸ್ತೆ, ಚರಂಡಿ, ಕುಡಿಯುವ‌ ನೀರು ಒದಗಿಸುವದು ನಮ್ಮ ಸರಕಾರದ‌ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಇನ್ನೂ ಹಚ್ಚಿನ‌ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ‌ ಕರೀಮ, ಯೋಜನಾ ಆಯೋಗದ ಸದಸ್ಯ ಡಾ.ರ...
Image
  ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಹಿಳೆಯರು ಸ್ಪರ್ಧಿಸಲಿ-ರೇಖಾ ಬಡಿಗೇರ್    ಜಯ ಧ್ವಜ ನ್ಯೂಸ್ ,ರಾಯಚೂರು ಏ.26.   ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಚುನಾವಣೆ ಹತ್ತಿರ ಬರುತ್ತಿದ್ದು ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಮಹಿಳೆಯರು ಸ್ಪರ್ಧೆ ಮಾಡಲಿ ಎಂದು ಸಾಹಿತಿ ರೇಖಾ ಬಡಿಗೇರ್ ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲಾ  ಹಾಗೂ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಅನೇಕ ಮಹಿಳಾ ಸಾಹಿತಿಗಳಿದ್ದಾರೆ.  ಅಲ್ಲದೇ ಕಸಾಪದಲ್ಲಿ ಇದುವರೆಗೆ ಜಿಲ್ಲೆಯ ಮಹಿಳೆಯರಿಗೆ ತಾಲೂಕು ಅಧ್ಯಕ್ಷ ಸ್ಥಾನ ಅಥವಾ  ಪದಾಧಿಕಾರಿಗಳ ಸ್ಥಾನಕ್ಕಷ್ಡೇ ಸೀಮಿತಗೊಳಿಸುತ್ತಾ ಬರಲಾಗಿದೆ. ನಾಮಕೇವಾಸ್ತೆ ನೇಮಕ ಮಾಡುವುದು ನಡೆಯುತ್ತಿದೆ.   ಜಿಲ್ಲಾಧ್ಯಕ್ಷ ಚುನಾವಣೆಗೆ  ಪುರುಷರೇ ಸ್ಪರ್ಧೆ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆ ಈ ಬಾರಿ ಹೆಚ್ಚಿನ ಸಂಖ್ಯೆಯ ಮಹಿಳೆಯರೂ ಸ್ಪರ್ಧೆ ಗಿಳಿಯಬೇಕಿದೆ.  ಮಹಿಳೆಯರು ಜಿಲ್ಲಾಧ್ಯಕ್ಷರಾದಾಗ ಜಿಲ್ಲೆಯಲ್ಲಿ ಮಹಿಳೆಯರಿಗೂ ಒಂದು ಉನ್ನತ ಸ್ಥಾನಮಾನ ದೊರೆಯಲಿವೆ. ಹಾಗಾಗಿ, ಮಹಿಳೆಯರೂ  ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಬೇಕಿದೆ ಎಂದಿದ್ದಾರೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬ ಮಹಿಳೆಯರಿಗೂ ಇದೆ. ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಧ್ಯಕ್...
Image
  ಹರಿದಾಸ ಸಾಹಿತ್ಯಕ್ಕೆ ವಿಶಿಷ್ಟ  ಕೊಡುಗೆ ನೀಡಿದವರು ಶ್ರೀಶೇಷ ದಾಸರು -ಮುರಳಿಧರ ಕುಲಕರ್ಣಿ   ಜಯ ಧ್ವಜ ನ್ಯೂಸ್ , ರಾಯಚೂರು, ಏ.25- ಗದ್ವಾಲ ಸಂಸ್ಥಾನ ರಾಜನಿಂದ ಅವಮಾನಿತಗೊಂಡು, ಜೀವನದಲ್ಲಿ  ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದಂತ ಶೇಷಪ್ಪನವರು  ಚಿಂತ್ರವಲ್ಲಿಯ ಪ್ರಾಣದೇವರ ಸೇವೆಯನ್ನು ಮಾಡಿ ಶ್ರೀ ವಿಜಯದಾಸರ ಅನುಗ್ರಹದಿಂದ ಶೇಷ ದಾಸರಾಗಿ ದಾಸ ಸಾಹಿತ್ಯಕ್ಕೆ ವಿಶೇಷ ಶ್ರೇಷ್ಠ ಕೊಡುಗೆ ನೀಡಿದ ಮಹನೀಯರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.  ಅವರು ನಿನ್ನೆ ದಾಸ ಶ್ರೇಷ್ಠರಾದ ಶ್ರೀ ಶೇಷ ದಾಸರ 208ನೆಯಆರಾಧನೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.     ಶ್ರೀಶೇಷ ದಾಸರು 43 ಸುಳಾದಿಗಳನ್ನು, 14 ಉಗಾ ಭೋಗ ಗಳನ್ನು, 4 ಪದ್ಯಗಳನ್ನು, ಪಂಚ ಪ್ರಮೇಯಗಳನ್ನು ,ಗದ್ಯಗಳನ್ನು ,ಶ್ರೀ ವಿಜಯರಾಯರ  ಚಕ್ರಾಬಾಜ್ಜ ಮಂಡಲ ವಿವರವನ್ನು ರಚಿಸಿದ್ದಾರೆ. ಇವುಗಳಲ್ಲಿ ಪ್ರಾರ್ಥನಾ ಸುಳಾದಿ, ಜ್ಞಾನ ಯಜ್ಞ ಸುಳಾದಿ,ವಾರದ ಸುಳಾದಿ, ಶ್ರೀ ಲಕ್ಷ್ಮೀದೇವಿ ,ಸುಳಾದಿ ಮುಂತಾದವುಗಳೆಲ್ಲ ತುಂಬಾ ಪ್ರಸಿದ್ಧಿಯನ್ನು ಪಡೆದಿವೆ, ಎಂದು ಹೇಳಿದರು.   ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರುರವರು ಮಾತನಾಡಿ, ದೈವಾಂಶ ಸಂಭೂತರಾದ ಶ್ರೀ ಶೇಷ ದಾಸರು ಜನಸಾಮಾನ್ಯರಿಗೆ ಸನ್ಮಾರ್ಗದ ಹಾದಿ ತೋರಿಸುವ ಕಾರ್ಯವನ್...
Image
  ಸಿಇಟಿ ಪರೀಕ್ಷೆಯಲ್ಲಿ ಜನಿವಾರ ನಿರ್ಬಂಧ ಖಂಡನೀಯ- ಪಲಗುಲ ನಾಗರಾಜ ಜಯ ಧ್ವಜ ನ್ಯೂಸ್ , ರಾಯಚೂರು, ಏ.24- ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಧರಿಸಿದ್ಧ ಜನಿವಾರ ತೆಗೆಸಿದ್ದು ರಾಜ್ಯ ಸರ್ಕಾರದ ನೀತಿ ಖಂಡನೀಯ  ಎಂದು ಆರ್ಯವೈಶ್ಯ ಸಮಾಜದ ಚಿಂತಕ ಪಲುಗುಲ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ದೇಶ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ ಭೂಮಿ ಆಗಿರುತ್ತದೆ. ಆಯಾ ಜಾತಿಗಳಲ್ಲಿ ಅವರದೇ ಆದ ಸಂಪ್ರದಾಯ ಇರುತ್ತದೆ ಹಾಗಂತ ಪರೀಕ್ಷೆ ಬರೆಯುವಾಗ ಹೀಗೆಯೇ ಬರಬೇಕು ಎಂದು ಮುಂಚೆಯೇ ಆದೇಶ ಹೊರಡಿಸಬೇಕು ಅದು ಬಿಟ್ಟು ಪರೀಕ್ಷೆ ಪ್ರವೇಶಿಸುವಾಗ ಜನಿವಾರ ಹಾಕಬಾರದು,ಉಡುದಾರ ಹಾಕಬಾರದು ಎನ್ನುವ ಕಟ್ಟಪ್ಪಣೆ ಒಂದು ಸಮುದಾಯವನ್ನು ಅವಮಾನ ಮಾಡಿದಂತೆ ಆಗುತ್ತದೆ. ಇತ್ತೀಚೆಗೆ ವಿಶೇಷ ತಂತ್ರಜ್ಞಾನದ ಸಲಕರಣೆ ಬಂದು ಪರೀಕ್ಷೆಯಲ್ಲಿ ಗೊಂದಲ ಸೃಷ್ಟಿಸುತ್ತವೆ ಆದರೆ ಅದೇ ಮಾನದಂಡ ಇಟ್ಟುಕೊಂಡು ಜನಿವಾರ ಹಾಕಬಾರದು ಎನ್ನುವ ನೀತಿ ಸರಿಯಲ್ಲ, ಜನಿವಾರದಲ್ಲಿ ಏನಾದರೂ ತಂತ್ರಜ್ಞಾನದ ಸಾಧನ ಇಟ್ಟುಕೊಂಡು ಬರಲು ಸಾಧ್ಯವೇ ?. ಪರೀಕ್ಷೆ ಹೆಸರಲ್ಲಿ ಜಾತಿಗೆ ಅವಮಾನ ಮಾಡುವುದು ಖಂಡಿಸಲಾಗುತ್ತದೆ. ಜನಿವಾರ , ಉಡುದಾರ ಪರೀಕ್ಷೆಗೆ ಅಡ್ಡ ಬರುವುದೇ ಈ ಹಿಂದೆಯೂ ಜನಿವಾರ ತೆಗೆಸಿದರೆ ಮಾತ್ರ ಪರೀಕ್ಷೆಗೆ ಅವಕಾಶ ಎಂದಿದ್ದರು ಆದರೆ ಭವಿಷ್ಯ ಕಂಡುಕೊಳ್ಳುವ ನಿಟ್ಟಿನಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯಗಳನ್ನು ಬಿಡುವ ಮನಸ್ಸಿಲ್ಲದಿದ್ದರು ಬದುಕು ಕಟ್...
Image
  ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 21ನೇ ಸ್ಥಾನಕ್ಕೆ ಜಿಗಿತ : ಬಿ.ವಿ.ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಖದೇವ್ ಗೆ 625 ಕ್ಕೆ 625 ಅಂಕ: ಸಚಿವ ಬೋಸರಾಜು  ಶ್ಲಾಘನೆ ಜಯ ಧ್ವಜ ನ್ಯೂಸ್ ,ರಾಯಚೂರು, ಏ. 23-  ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆಯು ಅತ್ಯುತ್ತಮ ಸಾಧನೆ ತೋರಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕಳೆದ ವರ್ಷ  30ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ 94.41% ಫಲಿತಾಂಶದೊಂದಿಗೆ ಬರೋಬ್ಬರಿ 9 ಸ್ಥಾನಗಳ ಬೃಹತ್ ಜಿಗಿತ ಕಂಡು 21ನೇ ಸ್ಥಾನಕ್ಕೆ ಏರಿದೆ. ಈ ಅಭೂತಪೂರ್ವ ಸಾಧನೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ  ಎನ್.ಎಸ್. ಬೋಸರಾಜು ಅವರು  ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಮಾನ್ವಿ ತಾಲೂಕಿನ ಬಿ.ವಿ.ಆರ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಖದೇವ್ ಅವರು 625 ಕ್ಕೆ 625 ಪೂರ್ಣ ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಹಾಗೂ ಇಡೀ ರಾಜ್ಯಕ್ಕೆ ಕೀರ್ತಿ ತಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಸುಖದೇವ್ ಅವರ ಈ ಅಸಾಧಾರಣ ಸಾಧನೆಗೆ ಸಚಿವರು ವಿಶೇಷವಾಗಿ ಶ್ಲಾಘಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವ ಎನ್.ಎಸ್. ಬೋಸರಾಜು ಅವರು, "ರಾಯಚೂರು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಅತ್ಯುತ್ತಮಗೊಳ್ಳುತ್ತಿರುವುದಕ್ಕೆ ಈ ಫಲಿತಾ...
Image
  ಗಾಯತ್ರಿ ಭವನ: ಬಾಗಿಲು ಚೌಕಟ್ಟು ಸ್ಥಾಪನೆ.                                                                 ಜಯ ಧ್ವಜ ನ್ಯೂಸ್ , ರಾಯಚೂರು, ಏ.23-  ಇಂದು ನಗರದ ನವೋದಯ ಆಸ್ಪತ್ರೆ ಹತ್ತಿರ ಇರುವ ಬ್ರಾಹ್ಮಣ ಸಮಾಜದ ಹೆಮ್ಮೆಯ ಗಾಯತ್ರಿ ಭವನದ ನೂತನ ಬಾಗಿಲು ಚೌಕಟ್ಟು ಕೂಡಿಸಲಾಯಿತು. ಈಗಾಗಲೆ ಅನೇಕ ಜನಪ್ರತಿನಿಧಿಗಳ ಅನುದಾನ ಹಾಗೂ ಸಮಾಜದ ಹಿರಿಯರ ಸಹಕಾರದೊಂದಿಗೆ ಗಾಯತ್ರಿ ಭವನ ಕಟ್ಟಡದ ಕಾಮಗಾರಿ ಭರದಿಂದ ಸಾಗಿದ್ದು ಇಂದು ಮುಖ್ಯ ದ್ವಾರ ಚೌಕಟ್ಟು ಸ್ಥಾಪನೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ  ಸಂದರ್ಭದಲ್ಲಿ ಎಕೆಬಿಎಂಎಸ್ ರಾಯಚೂರು ಜಿಲ್ಲಾ ಪ್ರತಿನಿಧಿ ರಮೇಶ ಕುಲಕರಣಿ, ಜಿಲ್ಲಾ ಸಂಚಾಲಕ  ವೇಣುಗೋಪಾಲ ಇನಾಮ್ದಾರ್, ಕಾರ್ಯಧ್ಯಕ್ಷರಾದ ವೆಂಕಟೇಶ್ ದೇಸಾಯಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಜಯಕುಮಾರ ಗಬ್ಬೂರು, ನಗರ ಸಂಚಾಲಕರಾದ ರಾಮರಾವ್ ಗಣೆಕಲ್, ಹಿರಿಯರಾದ ನಂದಾಪುರ ಶ್ರೀನಿವಾಸ, ಪ್ರಾಣೇಶ ಮುತಾಲಿಕ್, ಡಾ.ಆನಂದ್ ತೀರ್ಥ ಪಡ್ನೀಸ್ ,ಟಿ ರಮೇಶ್ ,ಕೋಲಾರ ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಹಾಗೂ ವಿಷ್ಣು ತೀರ್ಥ ಸಿರವಾರ, ರಮಾಕಾಂತ್ ರಾವ್ ಗುಂಜಳ್ಳಿ, ಕಿಶನ್ ರಾವ್ ಎಲ್.ಕೆ. ದ...