25 ನೇಯ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್: ಶ್ರೀಸೂಗೂರೇಶ್ವರ ಕರಾಟೆ ಸಂಸ್ಥೆಯ ನೇತೃತ್ವ ಜಯ ಧ್ವಜ ನ್ಯೂಸ್ , ರಾಯಚೂರು, ಫೆ.10- ಕರಾಟೆ ಒಂದು ಸಂಪೂರ್ಣ ಕಲಾ ಪ್ರಕಾರವಾಗಿದ್ದು, ಆತ್ಮರಕ್ಷಣೆ, ದೈಹಿಕ ಮತ್ತು ಮಾನಸಿಕ ತರಬೇತಿ, ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಒದಗಿಸುತ್ತದೆ ಹೃದಯ ಸಂಬಂಧಿ ಫಿಟ್ನೆಸ್, ನಮ್ಯತೆ ಮತ್ತು ಒಟ್ಟಾರೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಸೂಗೂರೇಶ್ವರ ಕರಾಟೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಖ್ಯ ತರಬೇತಿದಾರದ ಸೂಗಪ್ಪ. ಎನ್ ಹೇಳಿದರು. ಅವರು ಫೆ.8 ಭಾನುವಾರ ರಂದು ತೆಲಂಗಾಣ ರಾಜ್ಯ, ಮಕ್ತಲ್ ಜಿಲ್ಲಾ, ನಾರಾಯಣಪೇಟ್ ನ ವೆಂಕಟೇಶ್ವರ ಫಂಕ್ಷನ್ ಹಾಲ್ ನಲ್ಲಿ ಡ್ರ್ಯಾಗನ್ ಶೋಟೊಕಾನ್ ಕರಾಟೆ ಡೋ ಸ್ಪೋರ್ಟ್ ಸಹಯೋಗದಲ್ಲಿ ಆಯೋಜಿಸಿದ 25 ನೇಯ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಭಾಗವಹಿಸಿ ಮಾತನಾಡಿ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಕಟಾ ವಿಭಾಗದಲ್ಲಿ ಒಟ್ಟು 18 ಸ್ಪರ್ಧಿಗಳು ವಿಜೇತರಾದರು 1 ನೇ ಸ್ಥಾನಕ್ಕೆ 09 ಸ್ಪರ್ಧಿಗಳು, 2 ನೇ ಸ್ಥಾನಕ್ಕೆ 06 ಸ್ಪರ್ಧಿಗಳು, 3 ನೇ ಸ್ಥಾನಕ್ಕೆ 03 ಸ್ಪರ್ಧಿಗಳು ವಿಜೇತರಾದರು, ಒಟ್ಟು 05 ಗ್ರ್ಯಾಂಡ್ ಚಾಂಪಿಯನ ಶಿಪ್ ಪದಕ...