ಮಾತೋಶ್ರೀ ತಪೋವನದಲ್ಲಿ ಸ್ವಾನುಭಾವ ಶಿಬಿರ ಉದ್ಘಾಟನೆ: ನಮ್ಮೊಳಗಿನ ಅರಿವಿನ ಕೊರತೆಯಿಂದ ಅಪಾಯಕಾರಿ ಕಡೆ ವಾಲಿದ್ದೇವೆ- ಪ್ರೊ.ಶಿವಾನಂದ ಕೆಳಗಿನಮನಿ ಜಯ ಧ್ವಜ ನ್ಯೂಸ್ ,ರಾಯಚೂರು,ಫೆ.12- ಇಂದು ನಮ್ಮೊಳಗಿನ ಅರಿವಿನ ಕೊರತೆಯಿಂದ ತಂತ್ರಜ್ಞಾನದ ಪ್ರಭಾವದಿಂದ ಅಪಾಯಕಾರಿ ಕಡೆಗೆ ವಾಲಿದ್ದೇವೆ ಎಂದು ರಾಯಚೂರಿನ ಮಹರ್ಷಿ ವಾಲ್ಮಿಕಿ ವಿವಿಯ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು. ನಗರದ ಹೊರವಲಯದ ಮಾತೋಶ್ರೀ ತಪೋವನದ ಬಸವ ಕಲ್ಯಾಣ ಮಂಟಪದಲ್ಲಿ ಮಾತೋಶ್ರೀ ಶ್ರೀ ನೀಲಮ್ಮ ತಾಯಿಯವರ 24 ನೇ ಪುಣ್ಯಸ್ಮರಣೆ ಹಾಗೂ ಡಬ್ಬೇರು ಮಡುವಿನ ಪರಮಪೂಜ್ಯ ಸದ್ಗುರು ವಿದ್ಯಾನಂದ ಶರಣರ ಸ್ಮರಣೆ ನಿಮಿತ್ತ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಸೇವಾ ಪ್ರತಿಷ್ಠಾನ ಸಹಯೋ ಗದಲ್ಲಿ ಸ್ವಾನುಭಾವ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇವತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯನ ವಿಚಾರ ಅರಿಯಲು ಎಐ ತಂತ್ರಜ್ಞಾನಕ್ಕೆ ಅವಲಂಬನೆ ಹೆಚ್ಚಿದ್ದ ರಿಂದ ನಮ್ಮ ಬದುಕು ಅಪಾಯಕಾರಿಯತ್ತ ಜಾರಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆಂತರಿಕವಾಗಿ ಶೋಧಿಸಿ ಕೊಳ್ಳುವುದು ಬಹಳ ಕಷ್ಟದ ಕೆಲಸ ಇನ್ನೊಬ್ಬರ ಬಗ್ಗೆ ಮಾತನಾಡುವುದೆ ಹೆ...