Posts

Image
  ಶ್ರೀ ಮಾತೆ ಬಾಲಮಾರೆಮ್ಮ ದೇವಸ್ಥಾನದ ಅಭಿವೃದ್ದಿಗೆ 40 ಲಕ್ಷ ರೂ.ಅನುದಾನ ನೀಡಿದ ವಸಂತ ಕುಮಾರ  ಜಯ ಧ್ವಜ ನ್ಯೂಸ್ , ರಾಯಚೂರು , ಆ.11-  ವಿಧಾನ ಪರಿಷತ್ ಸದಸ್ಯರಾದ ಎ.ವಸಂತ್ ಕುಮಾರ್ ರವರು   ಬಾಲ ಮಾರಮ್ಮ ದೇವಸ್ಥಾನ ಅಭಿವೃದ್ಧಿಗೆ 40 ಲಕ್ಷ ರೂ. ಅನುದಾನ ನೀಡಿದರು. ಇಂದು ಬೆಳಿಗ್ಗೆ ಶ್ರೀ ಬಾಲ ಮಾರಮ್ಮ ದೇವಸ್ಥಾನ ಸಮಿತಿಯವರ ವಿಶೇಷ ಆಹ್ವನದ ಮೇರೆಗೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಾಲಮಾರಮ್ಮ ದೇವಿಯ ಆಶೀರ್ವಾದ ಪಡೆದು ಮಾತನಾಡಿದ ಅವರು ಸಮಿತಿಯವರ ವಿನಂತಿಯ ಮೇರೆಗೆ ದೇವಸ್ಥಾನದ ಅಭಿವೃದ್ದಿಗೆ 2026-27 ನೇ ಸಾಲಿನ ಎಂ. ಎಲ್. ಸಿ  ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ದೇವಸ್ಥಾನದ ಅಭಿವೃದ್ದಿಗೆ 40 ಲಕ್ಷ ಅನುದಾನ ನೀಡುತ್ತಿರುವುದಾಗಿ ತಿಳಿಸಿದರು.  ದೇವಸ್ಥಾನಕ್ಕೆ ಅನುಧಾನ ನೀಡಿದ್ದಕ್ಕೆ ದೇವಸ್ಥಾನ ಸಮಿತಿ ಅಧ್ಯಕ್ಷರು ಸಮಿತಿ ಸದಸ್ಯರು ವಿಧಾನ ಪರಿಷತ್ ಸದಸ್ಯರನ್ನು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಆರ್ ಡಿ ಎ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಕೆ ಟಿ ನರಸಣ್ಣ ಅಧ್ಯಕ್ಷರು ಬಾಲ ಮಾರೆಮ್ಮ ದೇವಸ್ಥಾನ ಸಮಿತಿ, ಡಿ ಕೆ ಮುರುಳಿ ಯಾದವ್, ತಿಮ್ಮಪ್ಪ ಕೋರ್ಟ್, ಬಂಕ ಶಿವಪ್ಪ, ಪ್ರಕಾಶ್ ವಕೀಲರು,  ಶ್ರೀನಿವಾಸ, ಸುರೇಂದ್ರ , ಮಾರಪ್ಪ ಸೆಂಟ್ರಿಂಗ್, ಬಂಕ ರಾಮು, ತಲಾರ್ ಶಂಕರ್, ಟೈಲರ್ ಹಣಮಂತು, ಡಾ, ನಾಗೇಶ್, ಮೇಸ್ತ್ರಿ ಹನಮಂತು, ಹಾಲ್ವಿ ನ...
Image
  ಬೆಂಗಳೂರು-ಮುಂಬೈ  ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲೇ ಪ್ರಾರಂಭ- ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಆ.11 - ಬೆಂಗಳೂರು-ಮುಂಬೈ  ವಂದೇ ಭಾರತ ಸ್ಲೀಪರ್ ರೈಲು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ.ಬಾಬುರಾವ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ವೇಗದ ರೈಲು ಸಂಪರ್ಕವನ್ನು ಕೊಡುಗೆ ನೀಡಲು ಮುಂದಾಗಿದ್ದು ಕಲ್ಯಾಣ ಕರ್ನಾಟಕ ಜನತೆಗೆ ಸಿಹಿ ಸುದ್ಧಿ ನೀಡಿದೆ. ದಕ್ಷಿಣ ಪಶ್ಚಿಮ ರೈಲೈ ವಂದೇ ಭಾರತ ಸ್ಲೀಪರ್ ರೈಲುಗಳ ಸಂಚಾರಕ್ಕೆ ಸಿದ್ಧತೆ ನಡೆಸಿದ್ದು ಬೆಂಗಳೂರು-ಮುಂಬೈ ಮಾರ್ಗದಲ್ಲಿ ಶೀಘ್ರದಲ್ಲೇ ಪ್ರೀಮಿಯಂ ರಾತ್ರಿ ಸೇವೆ ಆರಂಭಿಸಲಿದೆ‌ ಬೆಂಗಳೂರು ರೈಲು ನಿಲ್ದಾಣ ವನ್ನು ಸಂಜೆ 6ಗಂಟೆಗೆ ನಿರ್ಗಮಿಸುವ ಈ ರೈಲು ರಾತ್ರಿ 9.25ಕ್ಕೆ  ಗುಂತಕಲ್,10.55ಕ್ಕೆ ರಾಯಚೂರು, ಮಧ್ಯ ರಾತ್ರಿ 12.40ಕ್ಕೆ  ಕಲಬುರಗಿ,ತಡರಾತ್ರಿ 2.05ಕ್ಕೆ ಸೊಲ್ಲಾಪುರ, ಬೆಳಗಿನ ಜಾವ 5.50ಕ್ಕೆ ಪುಣೆ,ಬೆಳಿಗ್ಗೆ 8.30ಕ್ಕೆ ಮುಂಬೈ ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ ಎಂದು ಅವರು ಹೇಳಿದ್ದಾರೆ. ಈ ರೈಲು ಓಡಿಸುವಂತೆ ಈ ಭಾಗದ ಜನರ ಪರವಾಗಿ ರೈಲ್ವೆ ಸಚಿವರಲ್ಲಿ ಮಾಡಿಕೊಂಡ ಮನವಿಗೆ ಈಗ ಸ್ಪಂದನೆ ಸಿಕ್ಕಿದ್ದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಅವರು ಕಲ್ಯಾಣ ಕರ್ನಾಟಕ ಜನತೆ ಇದರ ಪ್ರಯೋಜನ ಪಡೆಯಲು ಪ್ರಕಟಣೆಯಲ್ಲಿ ಕೋರಿದ್ದಾರೆ.
Image
  ಕೇಂದ್ರ ಸರಕಾರದ ಬಲವಂತದ ಭೂಸ್ವಾಧೀನ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ  ‘ಜೈಲ್ ಭರೋ’ ಚಳುವಳಿ ಪ್ರತಿಭಟನೆ ಜಯ ಧ್ವಜ ನ್ಯೂಸ್ , ರಾಯಚೂರು,ಆ.10- ಕೇಂದ್ರ ಸರಕಾರದ ಬಲವಂತದ ಭೂಸ್ವಾಧೀನ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ನಡೆಯುತ್ತಿರುವ ‘ಜೈಲ್ ಭರೋ’ ಚಳುವಳಿಯ ಭಾಗವಾಗಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು, ಜೈಲ್ ಗೆ ಬೃಹತ್ ಮೆರವಣೆಗೆ ತೆರಳುತ್ತಿರುವ ವೇಳೆ ಹಲವು ರೈತ ಮುಖಂಡರು ಹಾಗೂ ಮಹಿಳಾ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಈ ಪ್ರತಿಭಟನೆಯಲ್ಲಿ  ಗಿರಿಯಪ್ಪ ಪೂಜಾರಿ, ನರಸಣ್ಣ ನಾಯಕ, ಶಬ್ಬೀರ, ರಮೇಶ ವೀರಾಪೂರು,ರುದ್ರಪ್ಪ ನಾಯಕ, ವರಲಕ್ಷೀ, ಎಚ್. ಪದ್ಮಾ, ಕೆ.ಜಿ. ವಿರೇಶ, ರಮಾದೇವಿ, ಶರಣಬಸವ, ಸಂಗಯ್ಯ ಸ್ವಾಮಿ, ರಂಗನಾಥ, ಸಾಜೀದ್, ಮಹೇಶ ಚಿಕಲಪರವಿ, ಮಲ್ಲನಗೌಡ, ವೀರೇಶ ಬಿ.ಎನ್. ಬಸಲಿಂಗಪ್ಪ ನಗನೂರು, ಬಸತರಾಯ ಗೌಡ, ಸೇರಿದಂತೆ ಅನೇಕರು ಬಂಧನಕ್ಕೊಳಗಾದರು.
Image
  ಆ.28 ರಂದು ಗಬ್ಬೂರಲ್ಲಿ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಸಮಾರಂಭ:                    ಪ್ರೊ.ಮಲ್ಲೇಪುರಂ.ಜಿ ವೆಂಕಟೇಶ ,ರಘುನಾಥರೆಡ್ಡಿ ಮನ್ಸಲಾಪೂರು ,ಖಾಸೀಮ್ ಮಲ್ಲಿಗೆ ಮಡುವು ರವರಿಗೆ ಲಭಿಸಿದ ಪ್ರಶಸ್ತಿ -ಬಸವರಾಜ ಸಿನ್ನೂರ  ಜಯ ಧ್ವಜ ನ್ಯೂಸ್ ,ರಾಯಚೂರು, ಆ.10- ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠವು ಕೊಡಮಾಡುವ" ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.28ರಂದು ಆಯೋಜಿಸಲಾಗಿದೆ ಎಂದು  ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸದಸ್ಯ ಬಸವರಾಜ ಸಿನ್ನೂರ ಹೇಳಿದರು.                          ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.      ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಅವರ ಅಧ್ಯಾತ್ಮಿಕ ಗುರುಗಳಾದ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಹೆಸರಿನಲ್ಲಿ ಕುಮಾರಸ್ವಾಮಿಗಳವರ ಹುಟ್ಟುಹಬ್ಬವಾದ ನೂಲಹುಣ್ಣಿಮೆಯಂದು ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಗಣನ...
Image
ವಾರ್ಡ್ ನಂ. 5ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಸಂತ ಕುಮಾರ್ ಭೂಮಿಪೂಜೆ.                                ಜಯ ಧ್ವಜ ನ್ಯೂಸ್ ,  ರಾಯಚೂರು, ಆ.10- ನಗರದ ವಾರ್ಡ್ ನಂ.5ರ ಡ್ಯಾಡಿ ಕಾಲೋನಿ ಪ್ರದೇಶದ ನೀರಿನ ಟ್ಯಾಂಕ್ ಹತ್ತಿರ ಚರಂಡಿ, ಫೇವರ್ ಬ್ಲಾಕ್ ಮೂಲಸೌಕರ್ಯ ನಿರ್ಮಾಣಕ್ಕೆ ಕಲ್ಯಾಣ‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 35 ಲಕ್ಷ ರೂ ಅನುದಾನದಲ್ಲಿ  ಭೂಮಿ ಪೂಜೆಯನ್ನು ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಅವರು ನೇರವೇರಿಸಿದರು.           ನಂತರ ಮಾತನಾಡಿದ  ಅವರು ರಾಯಚೂರು ನಗರವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಮೂಲಭೂತ ಸೌಕರ್ಯ ಒದಗಿಸುವದು ನಮ್ಮ ಕರ್ತವ್ಯವಾಗಿದ್ದು, ಹಂತ ಹಂತವಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಈ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ತೆಗೆದುಕೊಳ್ಳುವದು ಅವಶ್ಯಕತೆ ಇದೆ, ಆ ಹಿನ್ನಲೆಯಲ್ಲಿ ನಾನು ಇನ್ನೂ ಹೆಚ್ಚಿನ ಕಾಮಗಾರಿ ಕೈಗೆತ್ತಿಕೊಳ್ಳಲು ಅನುದಾನ ಒದಗಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ, ಅಬ್ದುಲ್ ಕರೀಂ, ಬಸವರಾಜ ದರೂರು, ರಾಮಕೃಷ್ಣ ನಾಯಕ, ಡಿ.ಕೆ.ಮುರಳಿ ಯಾದವ, ಜೆ.ಸತ್ಯಾನಾಥ, ಕೆ.ಅಸ್ಲಂ ಪಾಶಾ, ಡ...
Image
  ಕೊಲೆ ಪ್ರಕರಣದಲ್ಲಿ ದುರುದ್ದೇಶದಿಂದ ಹಿರಿಯ ಸಂಪಾದಕ ಭೀಮರಾಯ ಹದ್ದಿನಾಳ ಅವರನ್ನು ಸಿಲುಕಿಸುವ ಪ್ರಯತ್ನ, ಕಾಣದ ಶಕ್ತಿಗಳ ಕೈವಾಡ ಆರೋಪ:                        ದೋಷಾರೋಪಣೆ ಪಟ್ಟಿಯಿಂದ ಕೈ ಬಿಡದಿದ್ದರೆ ಉಗ್ರ ಹೋರಾಟ-ರಘುವೀರ ನಾಯಕ.                                  ಜಯ ಧ್ವಜ ನ್ಯೂಸ್ ,ರಾಯಚೂರು,ಆ.10- ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದಿರುವ ಕೊಲೆ ಪ್ರಕರಣದಲ್ಲಿ ನಿರಪರಾಧಿಯಾದ ಹಾಗೂ ಒಬ್ಬ ಹಿರಿಯ ಪ್ರಾಮಾಣಿಕ ಪತ್ರಕರ್ತ ಮತ್ತು ಸಂಪಾದಕ ಭೀಮರಾಯ ಹದ್ದಿನಾಳ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ್ ನಾಯಕ ದೂರಿದರು. ಅವರಿಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಕರಣಕ್ಕೆ ಭೀಮರಾಯ ಸಂಬಂಧವೇ ಇಲ್ಲದಿದ್ದರೂ ಕೊನೆಯ ಮತ್ತು 8 ನೇ ಆರೋಪಿಯನ್ನಾಗಿ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ಎರಡು ಬಾರಿ ಎಫ್ ಐ ಆರ್ ತಿದ್ದುಪಡಿ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಒಂದು ಎಫ್ ಐ ಆರ್ ಮತ್ತು ಸಂಜೆ 6 ಗಂಟೆಗೆ ಒಂದು ಎಫ್ ಐ ಆರ್ ಆಗಿದೆ. 3 ಗಂಟೆಗೆ ಮಾಡಲಾದ ಎಫ್ ಐ ಆರ್ ನಲ್ಲಿ ಅವರ ಹೆಸರು ಇರಲಿಲ್ಲ. ಆದರೆ, ಸಂಜೆ 6 ಗಂಟ...
Image
ಮಂತ್ರಾಲಯದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ 14ನೇ ಚಾತುರ್ಮಾಸ್ಯ ದೀಕ್ಷೆ ಆರಂಭ ಜಯ ಧ್ವಜ ನ್ಯೂಸ್ , ರಾಯಚೂರು, ಆ.10 - ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮಂತ್ರಾಲಯದಲ್ಲಿ ತಮ್ಮ 14ನೇ ಚಾತುರ್ಮಾಸ್ಯ ದೀಕ್ಷೆಯನ್ನು ಭಕ್ತಿಪೂರ್ವಕವಾಗಿ ಆರಂಭಿಸಿದರು. ಈ ಪವಿತ್ರ ಸಂದರ್ಭದಲ್ಲಿ ಶ್ರೀಪಾದಂಗಳವರು ಸಾಂಪ್ರದಾಯಿಕ ಚಾತುರ್ಮಾಸ್ಯ ದೀಕ್ಷೆಯ ವಿಧಿ-ವಿಧಾನಗಳನ್ನು ನೆರವೇರಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳವರು, ಶ್ರೀ ವಾದೀಂದ್ರ ತೀರ್ಥರು ಹಾಗೂ ಮಠದಲ್ಲಿರುವ ಎಲ್ಲಾ ಬೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಾತುರ್ಮಾಸ್ಯ ಅವಧಿಯಲ್ಲಿ ಮಂತ್ರಾಲಯದ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳು ಭಕ್ತರಲ್ಲಿ ಧಾರ್ಮಿಕ ಭಾವನೆ, ಆಧ್ಯಾತ್ಮಿಕ ಚಿಂತನೆ ಹಾಗೂ ಸೇವಾ ಮನೋಭಾವವನ್ನು ಹೆಚ್ಚಿಸುವುದರ ಜೊತೆಗೆ ಮಂತ್ರಾಲಯದ ಭಕ್ತಿಮಯ ವಾತಾವರಣವನ್ನು ಮತ್ತಷ್ಟು ಶ್ರೀಮಂತಗೊಳಿಸಲಿವೆ. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು. ಭಕ್ತರಿಗೆ ಆಶೀರ್ವಚನ ನೀಡಿ, ಚಾತುರ್ಮಾಸ್ಯದ ಮಹತ್ವ ಹಾಗೂ ಆಧ್ಯಾತ್ಮಿಕ ಆಚರಣೆಗಳ ಕುರಿತು ಸಂದೇಶ ನೀಡಿದರು. ಚಾತುರ್ಮಾಸ್ಯ ದೀಕ್ಷೆಯ ಹಿನ...