Posts

Image
  ಹೆಚ್ ಎ ಎಲ್ ನಿಂದ ಸಿ ಎಸ್ ಆರ್ ನಿಧಿಯಡಿ 50ಕೋಟಿ ರೂ. ವೆಚ್ಚದಲ್ಲಿ ಜಲಾಶಯ ನಿರ್ಮಾಣ ಭೂಮಿಪೂಜೆ :            ಮಂತ್ರಾಲಯದಲ್ಲಿ ಭಕ್ತರಿಗೆ ಬೇಸಿಗೆಯಲ್ಲಿ ನೀರಿನ ದಾಹ ನೀಗಿಸಲಿರುವ  ವ್ಯಾಸತೀರ್ಥ ಜಲಾಶಯ- ಶ್ರೀ  ಸುಬುಧೇಂದ್ರತೀರ್ಥರು                                                                                                                                ಜಯ ಧ್ವಜ ನ್ಯೂಸ್ , ರಾಯಚೂರು, ಜು.30-  ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಬೇಸಿಗೆಯಲ್ಲಿ ನೀರಿನ ದಾಹ ನೀಗಿಸಲು ಮುಂದಿನ ಮೂವತ್ತು ವರ್ಷದ ಅವಧಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯ ಒದಗಿಸಲು ವ್ಯಾಸ ತೀರ್ಥ ಜಲಾಶಯ ನಿರ್ಮಾಣವಾಗಲಿದೆ ಎಂದು    ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು...
Image
ಎಸ್ ಐ ಆರ್  ನಮೂನೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಪೂವಿತಾ ಸೂಚನೆ ಜಯ ಧ್ವಜ ನ್ಯೂಸ್ ,ರಾಯಚೂರು, ಜು.30-  ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಯಚೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ವೇಗವಾಗಿ ಸಾಗುತ್ತಿದ್ದು, ಆಗಸ್ಟ್ 8ರವರೆಗೆ ಅಭಿಯಾನ ಮುಂದುವರಿಯಲಿದೆ. ಉಳಿದಿರುವ ಮತದಾರರು ತಮ್ಮ ಎಣಿಕೆ ನಮೂನೆಗಳನ್ನು ಕೂಡಲೇ ಭಾನುವಾರದೊಳಗೆ ಆನ್‌ಲೈನ್ ಅಥವಾ ಖುದ್ದಾಗಿ ಸಲ್ಲಿಸುವ ಮೂಲಕ ಅಭಿಯಾನದ ಯಶಸ್ವಿಗೆ ಸಹಕಾರಿಸಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು. ಜುಲೈ 30ರ ಗುರುವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಠರಣೆ ಕಾರ್ಯಕ್ರಮವು ರಾಯಚೂರು ಜಿಲ್ಲೆಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಯಶಸ್ವಿಯಾಗಿ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ನೂಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುತಿದೆ. ಪ್ರಸ್ತುತ ಜಿಲೆಯಲ್ಲಿ ಒಟ್ಟು ಮತದಾರರು 17,14,559 ಇದ್ದು, ಅದರಲ್ಲಿ 15,84,491 ಡಿಜಿ...
Image
  ಗುರುಪೂರ್ಣಿಮೆ ಮಹೋತ್ಸವದಲ್ಲಿ ಶೈಕ್ಷಣಿಕ ಸೇವೆಗೆ ಚಾಲನೆ: ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಯೋಜನೆ ಆರಂಭ- ಸಾಯಿ ಕಿರಣ ಆದೋನಿ ಜಯ ಧ್ವಜ ನ್ಯೂಸ್ ,ರಾಯಚೂರು, ಜು.29-  ಗುರುಪೂರ್ಣಿಮೆಯ ಅಂಗವಾಗಿ ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಬುಧವಾರ ಭಕ್ತಿಭಾವದಿಂದ ಗುರುಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀ ಶಿರಡಿ ಸಾಯಿಬಾಬಾರ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಯೋಜನೆಗೂ ಚಾಲನೆ ನೀಡಲಾಯಿತು. ಧ್ಯಾನ ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ ಆದೋನಿ ಮಾತನಾಡಿ, ಗುರುಪೂರ್ಣಿಮೆಯು ಗುರು ಪರಂಪರೆಯನ್ನು ಸ್ಮರಿಸುವ ಪವಿತ್ರ ಹಬ್ಬವಾಗಿದೆ. ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜಮುಖಿ ಸೇವೆಗಳನ್ನು ಕೈಗೊಳ್ಳುವುದು ಸಾಯಿಬಾಬರ ಸಂದೇಶವಾಗಿದೆ ಎಂದು ಹೇಳಿದರು. ಈ ಬಾರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಶಿರಡಿಯಿಂದ ತರಲಾಗಿರುವ ಶ್ರೀ ಸಾಯಿಬಾಬಾ ಧರಿಸಿದ್ದ ಪವಿತ್ರ ಕಾಫ್ನಿಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪವಿತ್ರ ವಸ್ತ್ರದ ಸಮ್ಮುಖದಲ್ಲೇ ಸಮಾಜಕ್ಕೆ ಉಪಯುಕ್ತವಾಗುವ ಶಾಶ್ವತ ಸೇವಾ ಕಾರ್ಯ ಆರಂಭಿಸುವ ಸಂಕಲ್ಪದೊಂದಿಗೆ ಶ್ರೀ ಶಿರಡಿ ಸಾಯಿಬಾಬಾ ಸೇವಾ ಚಾರಿಟೇಬಲ್ ಟ್ರಸ್ಟ್, ಅಮೆರಿಕದ ಸಾಫ್ಟ್‌ವೇರ್ ಇಂಜಿನಿಯರ್ ಅಭಿಲಾಷ್ ಚಕ್ಷಾ, ಸ...
Image
  ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ:      ಪತ್ರಕರ್ತನ ಬೆನ್ನ ಹಿಂದಿನ ಒಳ್ಳೆ ಮಾತು ಪದ್ಮಶ್ರೀ ಪ್ರಶಸ್ತಿ ದೊರೆತಂತೆ- ಶಿವಾನಂದ ತಗಡೂರು.                                             ಜಯ ಧ್ವಜ ನ್ಯೂಸ್, ರಾಯಚೂರು,ಜು.28- ಒಬ್ಬ ಪತ್ರಕರ್ತನ ಬೆನ್ನ ಹಿಂದೆ ಒಳ್ಳೆ ಮಾತುಗಳನ್ನಾಡಿದಾಗ ಅದು  ಪದ್ಮಶ್ರೀ ಪ್ರಶಸ್ತಿ ಸಿಕ್ಕಂತಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯ ಪಟ್ಟರು . ಅವರಿಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ರಾಯಚೂರು ರಿಪೋರ್ಟ್ರರ್ಸ್ ಗಿಲ್ಡ್ ಮತ್ತು ಸಾರ್ವಜನಿಕ ವಾರ್ತಾ ಮತ್ತು ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ ನೆರವೇರಿಸಿ ಆಶಯ ನುಡಿಗಳನ್ನಾಡಿದರು. ಪತ್ರಿಕಾ ಕ್ಷೇತ್ರಕ್ಕೆ ತನ್ನದೆಯಾದ ಘನತೆ ಗೌರವವಿದೆ ಪತ್ರಕರ್ತರ ಕಷ್ಟ ಸುಖಗಳಿಗೆ ಕೆಯುಡ್ಬ್ಲೂಜೆ ಸ್ಪಂದಿಸುತ್ತಿದೆ ಪತ್ರಕರ್ತರು ಬೇಡಿಕೆ ಅನುಗುಣವಾಗಿ ಸರ್ಕಾರಕ್ಕೆ ಮನವಿ  ಮಾಡಿ ಸೌಲತ್ತ...
Image
  ದುಬೈ ಕನ್ನಡಿಗರು ಹೃದಯವಂತರು-ಶ್ರೀದೇವಿ ನಾಯಕ   ಜಯ ಧ್ವಜ ನ್ಯೂಸ್ , ರಾಯಚೂರು,ಜು .28-   ಹೊರನಾಡಿನಲ್ಲಿ ಜೀವಿಸುತ್ತಿರುವ ಕನ್ನಡಿಗರು ಅದರಲ್ಲೂ ದುಬೈ ಅಂತಹ ಶ್ರೀಮಂತ ರಾಷ್ಟ್ರದಲ್ಲಿ ಇರುವಂತ ಕನ್ನಡಿಗರು ನಿಜಕ್ಕೂ ಹೃದಯವಂತರು . ಇಲ್ಲಿ ಜಾತಿ ಧರ್ಮವಿಲ್ಲ ನಾವೆಲ್ಲರೂ ಕನ್ನಡಿಗರೆಂದು ಬಾಳುತ್ತಿರುವುದು  ಹೆಮ್ಮೆಯ ವಿಷಯ ಎಂದು ವಿಶ್ವಕನ್ನಡ ಸಮ್ಮೇಳನ ದುಬೈದ ಸಮ್ಮೇಳನ ಅಧ್ಯಕ್ಷರಾದ ಶ್ರೀದೇವಿ ಆರ್. ವಿ. ನಾಯಕ ಮಾತನಾಡಿದರು.  ಅವರು ದುಬೈಯಲ್ಲಿ ಕನ್ನಡ ಸಾಂಸ್ಕೃತಿಕ ಸಂಘಟನಾ ಸಂಸ್ಥೆ ಹಾಗೂ ಕಲಾ ಸಂಕುಲ ಸಂಸ್ಥೆಯ ರಾಯಚೂರು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಶ್ರೀದೇವಿ ಆರ್ ವಿ ನಾಯಕ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು.  ಅಬುದಾಬಿಯ ಡಾ. ಐಶ್ವರ್ಯ ಅದ್ಭುತವಾಗಿ ಭರತನಾಟ್ಯವನ್ನು ಪ್ರದರ್ಶನ ಮಾಡಿದರು. ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಿ ಅಶ್ವತ್ ಗೀತೆಗಳನ್ನು ಅದ್ಭುತವಾಗಿ ಹಾಡಿದರು. ಬೆಂಗಳೂರಿನ ನಾಟಕಕಾರ ತಂಡ ಸಾಕ್ಷಿಕಲ್ಲು ನಾಟಕವನ್ನು ಈ ಸಮ್ಮೇಳನದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರು. ಕವಿಗೋಷ್ಠಿಯಲ್ಲಿ ಹೊರನಾಡ ಕನ್ನಡಿಗರು ಭಾಗವಹಿಸಿದ್ದರು ಮತ್ತು ಕೊಟ್ರೇಶಿ ಕೂಡ್ಲಿಗಿ ಇವರಿಂದ ಹಾಸ್ಯಸಂಜೆ ತುಂಬಾ ಚೆನ್ನಾಗಿ ನೆರವೇರಿತು.  ಒಂಬತ್ತು ಜನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ...
Image
  ಯುವಜನತೆಯಲ್ಲಿ ಹಸಿರು ಇಂಧನದ ಜಾಗೃತಿಗಾಗಿ ಮನೆಯಲ್ಲೇ ಸೋಲರ್ ಚಾಲಿತ ಕಿರು ಚಲನಚಿತ್ರ ಮಂದಿರ ನಿರ್ಮಿಸಿದ ಅಧ್ಯಾಪಕ ಜಯ ಧ್ವಜ ನ್ಯೂಸ್ , ರಾಯಚೂರು, ಜು.26- ಯುವಜನತೆಯಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಸೋಲಾರ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪತ್ರಕರ್ತ ಹಾಗೂ ಪತ್ರಿಕೋದ್ಯಮ ಅಧ್ಯಾಪಕರೂ ಆದ ಪಟ್ಟಣದ ನಿವಾಸಿ ವಿಜಯ್ ಸರೋದೆ ಅವರು ಸೋಲಾರ್ ಚಾಲಿತ ಗೃಹ ಬಳಕೆಯ ಚಲನಚಿತ್ರ ಮಂದಿರವೊಂದನ್ನು (ಸೋಲಾರ್ ಪವರ್ಡ್ ಹೋಮ್ ಥಿಯೇಟರ್ ಸಿಸ್ಟಮ್) ನಿರ್ಮಿಸಿದ್ದಾರೆ. ಇತ್ತೀಚಿಗೆ ಮನೆಯಲ್ಲಿಯೇ ಸಿನೆಮಾ ಥಿಯೇಟರ್ ನಿರ್ಮಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಅದಕ್ಕಾಗಿ ಜನ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಅದೇ ಒಂದು ದುಬಾರಿ ಮೊಬೈಲ್ ಖರೀದಿಸುವ ಹಣದಲ್ಲಿ ಇಡೀ ಕುಟುಂಬದವರು ಕುಳಿತುಕೊಂಡು ಮನರಂಜನೆ ಪಡೆಯುವ ರೀತಿಯಲ್ಲಿ ಹಸಿರು ಇಂಧನವಾದ ಸೋಲಾರ್ ಚಾಲಿತ ಗೃಹ ಚಲನಚಿತ್ರ ಮಂದಿರವನ್ನು ನಿರ್ಮಿಸಲು ಸಾಧ್ಯವಿದೆ‌ ಎಂದು ಅವರು ತಿಳಿಸುತ್ತಾರೆ. ಗ್ರೀನ್ ರಾಯಚೂರು ಸಂಸ್ಥೆಯ ಮಾಧ್ಯಮ ಸಲಹೆಗಾರರು ಹಾಗೂ ಸ್ವಯಂಸೇವಕ‌ರಾಗಿರುವ ವಿಜಯ್ ಸರೋದೆ ಅವರು ಕಳೆದ ಐದು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ತಮ್ಮ ಮನೆಯನ್ನು ಸೋಲಾರ್ ವಿದ್ಯುತ್ ಮೇಲೆ ನಡೆಯುವಂತೆ ಪರಿವರ್ತನೆ ಮಾಡಿಕೊಂಡಿದ್ದು, ಬಿಸಿನೀರಿಗಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳುವ ಜೊತೆಗೆ ಸೋಲಾರ್ ವಿದ್ಯುತ್ ಮೂಲಕವೇ ಚಾರ್ಜ್ ಆಗುವ ಎಲೆಕ್ಟ್ರಿಕ್ ವಾಹನ ಬಳಸುವ ಮೂಲಕ...
Image
  ಸಂಗೀತವು ಮಕ್ಕಳ ಬುದ್ಧಿವಂತಿಕೆ, ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸುವ ಶಕ್ತಿಶಾಲಿ ಶಿಕ್ಷಣ ಸಾಧನವಾಗಿದೆ- ಶ್ರೀನಿವಾಸ್ ರಾವ್ ಪತಂಗೆ  ಜಯ ಧ್ವಜ ನ್ಯೂಸ್ , ರಾಯಚೂರು,ಜು.26- ಜನನಿ ಕಲಾ ಮತ್ತು ಸಾಂಸ್ಕೃತಿಕ ಯುವ ಬಳಗ (ರಿ). ಯಾಕ್ಲಾಸಪುರ ರಾಯಚೂರು ವತಿಯಿಂದ ಕಲಾ ಸಿರಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವು ನಗರದ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ತಬಲಾ ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಭಾವಸಾರ ಕ್ಷತ್ರಿಯ ಸಮಾಜದ ಗೌರವ ಅಧ್ಯಕ್ಷರಾದ   ಶ್ರೀನಿವಾಸ್ ರಾವ್ ಪತಂಗೆ. ಅವರು ಸಂಗೀತವು ಮಕ್ಕಳ ಬುದ್ಧಿವಂತಿಕೆ, ಸೃಜನಶೀಲತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸುವ ಶಕ್ತಿಶಾಲಿ ಶಿಕ್ಷಣ ಸಾಧನವಾಗಿದೆ ಎಂದರು. ಆದ್ದರಿಂದ ಪ್ರತಿಯೊಂದು ಮಗುವಿಗೂ ಸಂಗೀತ ಶಿಕ್ಷಣದ ಅವಕಾಶ ದೊರೆಯಬೇಕು. ಸಂಗೀತ ಕಲಿಯುವ ಮಕ್ಕಳು ಹೆಚ್ಚು ಏಕಾಗ್ರತೆಯಿಂದ ಓದುತ್ತಾರೆ. ಪಾಠಗಳನ್ನು ನೆನಪಿಡುವ ಸಾಮರ್ಥ್ಯ (ಸ್ಮರಣಶಕ್ತಿ) ಹೆಚ್ಚಾಗುತ್ತದೆ. ಭಾಷಾ ಕೌಶಲ್ಯ, ಶ್ರವಣ ಸಾಮರ್ಥ್ಯ ಮತ್ತು ಗ್ರಹಣಶಕ್ತಿ ವೃದ್ಧಿಯಾಗುತ್ತದೆ." ಎಂದರು ಹಾಗೂ ಅಧ್ಯಕ್ಷತೆಯನ್ನುವಹಿಸಿದ  ಸೂರ್ಯನಾರಾಯಣರಾವ್ ಪೀಸೆ. ಅಧ್ಯಕ್ಷರು ಭಾವಸಾರ ಕ್ಷತ್ರಿಯ ಸಮಾಜ. ಸಂಗೀತದ ಮೂಲಕ ಮಕ್ಕಳಿಗೆ ತಮ್ಮ ಭಾಷೆ, ಸಂಸ್ಕೃತಿ, ಜನಪದ ಪರಂಪರೆ ಮತ್ತು ಮೌಲ್ಯಗಳ ಪರಿಚಯವಾಗುತ...