Posts

Image
  ಗಣೇಶ ಹಬ್ಬದ ಶಾಂತಿ ಪಾಲನಾ ಸಮಿತಿ ಸಭೆ:            ರಾಜ್ಯಕ್ಕೆ ಮಾದರಿಯಾಗುವಂತೆ ಗೌರಿ–ಗಣೇಶ ಹಬ್ಬ ಆಚರಿಸಿ - ಜಿಲ್ಲಾಧಿಕಾರಿ ಪೂವಿತಾ ಜಯ ಧ್ವಜ ನ್ಯೂಸ್ ,ರಾಯಚೂರು ಆ.6 - ಜಿಲ್ಲೆಯಲ್ಲಿ ಗೌರಿ–ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದಯುತವಾಗಿ ರಾಜ್ಯಕ್ಕೆ ಮಾದರಿಯಾಗುವಂತೆ ಆಚರಿಸುವದರ ಜೊತೆಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡುವ ಮೂಲಕ ಪ್ರತಿಯೊಬ್ಬರೂ ಈ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಹೇಳಿದರು. ಅವರಿಂದು  ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಪಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಿಒಪಿ ಹಾಗೂ ರಾಸಾಯನಿಕ ಮಿಶ್ರಿತ ಬಣ್ಣಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ತಾವೆಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ರಾಯಚೂರು ಜಿಲ್ಲೆಯು ಭಾವೈಕ್ಯತೆಗೆ ಹೆಸರು ಪಡೆದಿದೆ. ಎಲ್ಲ ಸಮಾಜದವರು ಭಾವೈಕ್ಯದಿಂದ ಈ ಹಬ್ಬ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬಳಸಬೇಕು. ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶ ಮಂಡಳಿಗಳು ನಿಗಾವಹಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನ...
Image
 ಆ. 8 ರಂದು ನಗರಕ್ಕೆ ಸಚಿವ ಡಾ .ಅಜಯ್ ಧರಂಸಿಂಗ್                                           ಜಯ ಧ್ವಜ ನ್ಯೂಸ್ , ರಾಯಚೂರು , ಆ.6-  ಕರ್ನಾಟಕ ಸರಕಾರದ ಸಚಿವರಾದ ಡಾ.ಅಜಯ್ ಧರಂಸಿಂಗ್ ರವರು ಆ.8ರಂದು ನಗರಕ್ಕಾಗಮಿಸಿ ಬರ ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.  ಅಂದು ಅಪರಾಹ್ನ 3 ಘಂಟೆಗೆ ನಗರದ ನೂತನ ಜಿಲ್ಲಾಧಿಕಾರಿಗಳ ಕಛೇರಿ  ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ.   ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಗಳು, ಮುಂಗಾರು ಹಂಗಾಮಿನ ಬಿತ್ತನೆ ಮತ್ತು ರಸಗೊಬ್ಬರ ಬೇಡಿಕೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಸದರಿ ಸಭೆಗೆ ಅಗತ್ಯ ಮಾಹಿತಿ, ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಸದರಿ ದಿನದಂದು ಅಪರಾಹ್ನ 2:30 ಕ್ಕೆ ಹಾಜರಾಗಲು ಪ್ರಕಟಣೆಯಲ್ಲಿ  ಕೋರಲಾಗಿದೆ.
Image
  ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಬೆಂಗಳೂರಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೃಹತ್ ಪ್ರತಿಭಟನೆ:  ಬ್ರಾಹ್ಮಣರನ್ನ ದೂರವಿಡಬೇಡಿ, ಸಮಾಜ ಕಟ್ಟುವ ಕೆಲಸ ಮಾಡುವವರು ಬ್ರಾಹ್ಮಣರು- ರಘನಾಥ ಜಯ ಧ್ವಜ ನ್ಯೂಸ್ , ರಾಯಚೂರು,ಆ.6-   ಬೆಂಗಳೂರಿನ   ಫೀಡಂ ಪಾರ್ಕ್ ಅವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಮತ್ತು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ರವರು ಮಾತನಾಡಿ ಕಳೆದ 70ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲವೆಂದರು. ಪಕ್ಷದಲ್ಲಿ ನಿರ್ಣಯ ಮಾಡುತ್ತಾರೆ.ಅವರ ಪಕ್ಷದ ನಿಲುವು ಕುರಿತು ನಾವು ಮೂಗು ತುರಿಸುವ ಕೆಲಸ ಮಾಡಲ್ಲ.ಬ್ರಾಹ್ಮಣರನ್ನ ಸಚಿವ ಸಂಪುಟ ವಿಸ್ತರಣೆಯಿಂದ ಹೊರಗಿಡಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನ ವರಗೆ ಬ್ರಾಹ್ಮಣರು ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ.ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಸಚಿವ ಸ್ಥಾನ ಸಿಗದಿರುವುದು ಅನ್ಯಾಯ, ಯಾಕೆ ನಮ್ಮ ಸಮುದಾಯ ಕಡೆಗಣಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ನಮ್ಮ ಸಮುದಾಯದವರು ಇದ್ದಾರೆ. ಸರ್ಕಾರದ ವಿರುದ್ದ ಅಥ...
Image
ದಲಿತ ಪರ ಸಂಘಟನೆಗಳ ಪ್ರತಿಭಟನೆಗೆ ಶಿವರಾಮೇಗೌಡ ಕರವೇ ಬೆಂಬಲ ಜಯ ಧ್ವಜ ನ್ಯೂಸ್ , ರಾಯಚೂರು, ಆ.6- ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡ ಎಸ್ ಮಾರೆಪ್ಪ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅಗಸ್ಟ್ 15ರಂದು ಬೇರೆ ಜಿಲ್ಲೆಯ ಉಸ್ತುವಾರಿಗಳು ಬಂದು ಧ್ವಜಾರೋಹಣ ಮಾಡುವುದಕ್ಕೆ, ವಿರೋಧಿಸಿ ಪ್ರತಿಭಟಿಸುವ ಕುರಿತು ಹೇಳಿರುವ ದಲಿತ ಸಂಘಟನೆಗೆ, ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಸಂಪೂರ್ಣ ಬೆಂಬಲಿಸುತ್ತದೆ. ಅವರೊಡನೆ ಕೂಡಿ ಪ್ರತಿಭಟನೆಗೆ ಜೊತೆಗೂಡುತ್ತದೆ. ದಶಕಗಳಿಂದ ರಾಯಚೂರು ಜಿಲ್ಲೆಗೆ ಅನ್ಯಾಯವೆಸಗುತ್ತಿರುವ, ಸರ್ಕಾರಗಳು ಅದು ಯಾವುದೇ ಸರ್ಕಾರ ಆಗಿರಬಹುದು, ನಿರಂತರವಾಗಿ ಜಿಲ್ಲೆಗೆ ಮಂತ್ರಿ ನೀಡಿದರು ಉಸ್ತುವಾರಿ ನೀಡುವುದಿಲ್ಲ, ಬೇರೆ ಜಿಲ್ಲೆಯ ಉಸ್ತುವಾರಿಗಳನ್ನ ನೇಮಕ ಮಾಡುತ್ತಾರೆ. ಅದಲ್ಲದೆ ಸ್ಥಳೀಯ ಮಂತ್ರಿ ಇದ್ದರೂ ಉಸ್ತುವಾರಿ ನೀಡುವುದಿಲ್ಲ. ರಾಯಚೂರು ಜಿಲ್ಲೆಯು ಮಹತ್ವಕಾಂಕ್ಷಿ ಜಿಲ್ಲೆ ಎಂದು ಕೇಂದ್ರ ಸರ್ಕಾರದಿಂದ ಘೋಷಣೆ ಆಗಿದ್ದರೂ ಕೂಡ  ಡಿಕೆ ಶಿವಕುಮಾರ್ ನೇತೃತ್ವದ ಸರಕಾರ ರಾಯಚೂರು ಜಿಲ್ಲೆಯನ್ನು ಕಡೆಗಣಿಸಿ, ಇಲ್ಲಿಯ ಜನರಿಗೆ ನಾವು ಅಖಂಡ ಕರ್ನಾಟಕದಲ್ಲಿ ಇದಿವೋ ಇಲ್ಲವೋ, ಎಂಬಂತ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಹಾಗಾಗಿ ರಾಯಚೂರು ಜಿಲ್ಲೆಗೆ ಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸ್ಥಳಿಯರಿಗೆ ನೀಡಬೇಕೆಂದು ನಮ್ಮ ಸಂಘಟನೆಯ ಕೂಗಾಗಿರುತ್ತದೆ ಎಂದು ...
Image
  ಸುಂಕೇಶ್ವರಹಾಳ್‌ ಕೊಲೆ ಪ್ರಕರಣದಲ್ಲಿ ಕೆಲ ಅಮಾಯಕರ ಹೆಸರು ಸೇರ್ಪಡೆಗೆ ವಾಲ್ಮೀಕಿ ನಾಯಕ ಸಂಘ ವಿರೋಧ.                       ಜಯ ಧ್ವಜ ನ್ಯೂಸ್, ರಾಯಚೂರು,ಆ.6- ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ್ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲ ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ವಿರೋಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ ಅವರು ಕೊಲೆಯಂತಹ ಹೀನ ಕೃತ್ಯ ಖಂಡನೀಯ ಆದರೆ ಅಮಾಯಕ ನಿರಪರಾಧಿಗಳ ಹೆಸರನ್ನು ಆರೋಪಿ ಸ್ಥಾನದಲ್ಲಿ ಸೇರಿಸಿದ್ದು ಸರಿಯಲ್ಲ ಪತ್ರಕರ್ತರಾದ ಭೀಮರಾಯ ಹದ್ದಿನಾಳ ಕಳೆದ ಮೂರು ದಶಕಗಳಿಂದ ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ ಅವರ ಹೆಸರಿಗೆ‌ ಕಪ್ಪು ಚುಕ್ಕೆ ತರಲು ಮತ್ತು ಇನ್ನಿತರ ಅಮಯಾಕರ ಹೆಸರನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ರಘುವೀರ್ ನಾಯಕ, ನಾರಾಯಣ ನಾಯಕ,ರಾಮು ನಾಯಕ, ರಂಗಸ್ವಾಮಿ ನಾಯಕ, ತಾಯಪ್ಪ ನಾಯಕ,ಗೋಪಾಲ ನಾಯಕ ಇನ್ನಿತರರು ಇದ್ದರು.
Image
ಪಡ್ಡೆ ಹುಡುಗರ ಅಡ್ಡೆಯಾಗುತ್ತಿರುವ ವಾರ್ಡ್ ನಂ.17 ರ ಓಣಿಗಳು:                                                          ನಿಯಂತ್ರಣಕ್ಕೆ ಪೊಲೀಸರ ದಿವ್ಯ ನಿರ್ಲಕ್ಷ್ಯ ಆರೋಪ.                        ಜಯ ಧ್ವಜ ನ್ಯೂಸ್, ರಾಯಚೂರು,ಆ.6- ನಗರದ ವಾರ್ಡ್ ನಂ. 17 ರ ಓಣಿಗಳು ಪಡ್ಡೆ ಹುಡುಗರ ಅಡ್ಡೆಯಾಗಿ ಮಾರ್ಪಡುತ್ತಿದ್ದು ಮುಂದಿನ ದಿನಗಳಲ್ಲಿ ಅಪರಾಧಿಕ ಚಟುವಟಿಕೆಗಳ ತಾಣವಾದರೂ ಅಚ್ಚರಿ ಪಡಬೇಕಾಗಿಲ್ಲ. ವಾರ್ಡ್ ನಂ.17 ಗಾಜಗಾರಪೇಟೆಯ ಚೌಡಮ್ಮಕಟ್ಟೆ ದೇವಸ್ಥಾನ ಪಕ್ಕದ ಓಣಿಯಲ್ಲಿ ದಳವಾಯಿ ಮನೆ ಕಟ್ಟೆ ಮತ್ತು ಅದರ ಎದುರಿನ ಚಿಕ್ಕದಾದ ಓಣಿ  ಪಡ್ಡೆ ಹುಡುಗರು, ಅಪ್ರಾಪ್ತ ವಯಸ್ಕರಿಗೆ ಅಕ್ರಮ ಚಟುವಟಿಕೆ, ಮದ್ಯಪಾನ, ಚಟಗಳ ತಾಣವಾಗಿದೆ.  ಈ  ಪ್ರದೇಶದಲ್ಲಿ  ಸುಸಂಸ್ಕೃತ , ಸಂಭಾವಿತ ಜನಗಳೆ ವಾಸವಿರುವ ಇಲ್ಲಿ ಬೆಳಿಗ್ಗೆ, ಮಧ್ಯಾಹ್ನ  , ಸಂಜೆ ಮತ್ತು  ರಾತ್ರಿಯಾದರಂತೂ  ಹಾವಳಿ ಮಿತಿ ಮೀರುತ್ತದೆ, ಅಕ್ಕ ಪಕ್ಕದ ನಿವಾಸಿಗಳು ಬುದ್ಧಿವಾದ ಹೇಳಿದರೆ ಅದಕ್ಕೆ ಕಿಮ್ಮತ್ತು ನೀಡದೇ  ಆಟಾಟೋಪ ಹೆಚ್ಚಾಗಿದೆ  ಎಂದು ಸ್ಥಳೀಯ ನಿವಾಸಿಗ...
Image
  ಬಹುಮುಖ ಪ್ರತಿಭೆ ಶ್ರೀ ಗೌರಿ ಪಲ್ಲಕ್ಕಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ.   ಜಯ ಧ್ವಜ ನ್ಯೂಸ್ ,ರಾಯಚೂರು. ಆ 5-  ರಾಯಚೂರು ನಗರದ ಎಎಂಇಎಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಕುಮಾರಿ ಶ್ರೀಗೌರಿ ಪಲ್ಲಕ್ಕಿ ತಂದೆ ಗುರುಪಾದಪ್ಪ ಪಲ್ಲಕ್ಕಿ ಇವರು ರಾಷ್ಟ್ರಮಟ್ಟದ  ರಾಷ್ಟ್ರೀಯ ಕಲಾ ರತ್ನ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.   ಭರತನಾಟ್ಯ, ಗಾಯನ, ಚಿತ್ರಕಲೆ, ಯೋಗ ಮುಂತಾದ ಕಲೆಗಳನ್ನು ಒಗ್ಗೂಡಿಸಿಕೊಂಡಿರುವ ಅಪರೂಪದ ಕಲಾವಿದೆಯ ಬಹುಮುಖ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.   ಇದೆ ಆ. 23ರಂದು ರವಿವಾರ  ಗೋವಾ ರಾಜಧಾನಿ ಪಣಜಿಯ ಬ್ರಿಜೇಂಗ್  ಸಭಾಂಗಣದಲ್ಲಿ ನಡೆಯಲಿರುವ ಶ್ರಾವಣ ಬಂತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 10 ಜನ ಸಾಧಕರಿಗೆ  ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಯಚೂರಿನ ಶ್ರೀ ಗೌರಿ ಪಲ್ಲಕ್ಕಿ ಅವರಿಗೆ ಪ್ರಶಸ್ತಿ ಪ್ರದಾನವನ್ನು  ಗೋವಾ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಸಿದ್ದಣ್ಣ ಮೇಟಿ, ಕಲಂಗುಟಿ ಕನ್ನಡ ಸಂಘದ ಅಧ್ಯಕ್ಷರಾದ ಮುರಳಿ ಮೋಹನ ಶೆಟ್ಟಿ ಮತ್ತು ಗೋವಾ  ಸಚಿವರು,   ಶಾಸಕರಿಂದ  ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕದಂಬ ಫೌಂಡೇಶನ್ ಅಧ್ಯಕ್ಷರಾದ ಬಾಳೆಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.