Posts

Image
ಬೀದಿ ನಾಯಿಗಳ ದಾಳಿ ತಡೆಗೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ-ಜಿಲ್ಲಾಧಿಕಾರಿ ಪೂವಿತಾ ಎಸ್. ಜಯ ಧ್ವಜ ನ್ಯೂಸ್ ,ರಾಯಚೂರು. ಜು. 21- ಬೀದಿ ನಾಯಿಗಳಿಂದ ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ದಾಳಿ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಇಂದು ಸಭೆ ಕರೆಯಲಾಗಿದ್ದು ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮರು ಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಹೇಳಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ  ಮಾತನಾಡಿದರು. ಈ ಹಿಂದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಗಾಯಗೊಂಡಿರುವ ಹಾಗೂ ಕೆಲವು ದುರ್ಘಟನೆಗಳಲ್ಲಿ ಮಕ್ಕಳ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ, ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ  ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಬೀದಿ ನಾಯಿಗಳಿಗೆ ಆಹಾರ ಹಾಕುವವರು ಹಾಗೂ ಮಟನ್ ಅಂಗಡಿಗಳ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ನಿಯಮ ಬಾಹಿರವಾಗಿ ವಿಲೇವಾರಿ ಮಾಡುವವರ ವಿರುದ್ಧ ದಂಡ ವಿಧಿಸಲು ಕ್ರಮ ಕೈಗೊಳ್ಳಲ...
Image
  ಎಸ್ ಆರ್ ಪಿ ಎಸ್  ಪದವಿ ಪೂರ್ವ ಕಾಲೇಜಿನಲ್ಲಿ ಚೆಸ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ  ಜಯ‌ಧ್ವಜ ನ್ಯೂಸ್  ,ರಾಯಚೂರು,ಜು.21- ನಗರದ ತಾರಾನಾಥ್ ಶಿಕ್ಷಣ ಸಂಸ್ಥೆಯ ಎಸ್ ಆರ್ ಪಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಯಚೂರು ನಗರದ ವಿವಿಧ ಶಾಲೆಗಳ 12 ವರ್ಷದೊಳಗಿನ, 14 ವರ್ಷದೊಳಗಿನ ಹಾಗೂ 16 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಚೆಸ್ ಪಂದ್ಯಾವಳಿ -2026 ಆಯೋಜಿಸಲಾಗಿತ್ತು. 12ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ  ಎಸ್ ಆರ್ ಸುಖಾಣಿ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿ ಕು.ರೋನಿತ್ ಪ್ರಥಮ ಸ್ಥಾನವನ್ನು ಪಡೆದರೆ, ಐಡಿಪಿಎಸ್ ಶಾಲೆಯ ವಿದ್ಯಾರ್ಥಿ ಕು. ಸಮ್ಯಕ್ ಜೈನ ದ್ವೀತಿಯ ಸ್ಥಾನ ಪಡೆದರೆ, ರೆಸ್ ಕಾನ್ಸೆಪ್ಟ್ ಶಾಲೆಯ ವಿದ್ಯಾರ್ಥಿ ಕು.ಅನಂತ ಜವಾರ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 14 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ  ಐಡಿಪಿಎಸ್ ಶಾಲೆಯ ವಿದ್ಯಾರ್ಥಿ ಕು.ಹರ್ಷಿತ ಪ್ರಥಮ ಸ್ಥಾನವನ್ನು ಪಡೆದರೆ,  ರೆಸ್ ಚಾಣಾಕ್ಶ ಜಿಯೋ ನೆಕ್ಷ್ಟ  ಶಾಲೆಯ ವಿದ್ಯಾರ್ಥಿ ಕು. ಸಂಜಯ ಮೇಟಿ ದ್ವೀತಿಯ ಸ್ಥಾನ ಪಡೆದರೆ, ವಿದ್ಯಾಭಾರತಿ ಸಿಬಿಎಸ್‌ಸಿ  ಶಾಲೆಯ ವಿದ್ಯಾರ್ಥಿ ಕು.ಅಖಿಲೇಶ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಕು.ಮ...
Image
ಕೆ ಎಸ್ ಸಿ ಎ: ಕಲಬುರ್ಗಿಯಲ್ಲಿ ಜು.23ರಂದು ಕ್ರಿಕೆಟ್ ಆಟಗಾರರ ಆಯ್ಕೆ ಪರೀಕ್ಷೆ  .                                                                ಜಯ ಧ್ವಜ ನ್ಯೂಸ್  , ರಾಯಚೂರು , ಜು.21-  ಕೆ ಎಸ್ ಸಿ ಎ ೨೩ ವರ್ಷದೊಳಗಿನ ಬಾಲಕರ ಮುಕ್ತ ಆಯ್ಕೆ ಪರೀಕ್ಷೆಗಳು ೨೦೨೬–೨೭ನೇ ಸಾಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ  ರಾಯಚೂರು ವಲಯದ ೨೩ ವರ್ಷದೊಳಗಿನ ಬಾಲಕರ ಮುಕ್ತ ಆಯ್ಕೆ ಪರೀಕ್ಷೆಗಳು ಕೆಳಕಂಡ ವೇಳಾಪಟ್ಟಿಯಂತೆ ಕಲಬುರಗಿಯ ಕೆಬಿಎನ್ ಮೈದಾನದಲ್ಲಿ ನಡೆಯಲಿವೆ.  ದಿನಾಂಕ: ೨೩-೦೭-೨೦೨೬, ವರದಿ ಸಮಯ: ಬೆಳಿಗ್ಗೆ ೮:೦೦ ಗಂಟೆ ಅರ್ಹತೆ ಹಾಗೂ ಷರತ್ತುಗಳು  ೧. ಆಯ್ಕೆ ಪರೀಕ್ಷೆಗಳು ಅರ್ಹ ೨೩ ವರ್ಷದೊಳಗಿನ ಎಲ್ಲಾ ಆಟಗಾರರಿಗೆ ಮುಕ್ತವಾಗಿವೆ.  ೨. ೦೧-೦೯-೨೦೦೭ ಅಥವಾ ನಂತರ ಜನಿಸಿದ ಪಟುಗಳ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಬೆಂಗಳೂರು ನೀಡಿರುವ ನಿರ್ದೇಶನದಂತೆ ೨೩ ಇಂಟರ್ ಝೋನಲ್ ಟೂರ್ನಮೆಂಟ್‌ಗಳು ಒಂದೇ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿವೆ.  ೩. ೦೧-೦೯-೨೦೦೩ ಅಥವಾ ನಂತರ ಜನಿಸಿದ ಆಟಗಾರರು ಮಾತ್ರ ಆಯ್ಕೆಗೆ ಅರ್ಹರು.  ೪. ವರದಿ ಮಾಡುವ ಸಮಯದಲ್ಲಿ ...
Image
  ಕರ್ನಾಟಕಕ್ಕೆ ಅಮೃತ ಭಾರತ ಎಕ್ಸ್ ಪ್ರೆಸ್ ಟ್ರೈನ್ ಅಗತ್ಯತೆ ಇದೆ- ಡಾ. ಬಾಬುರಾವ್  ಜಯ ಧ್ವಜ ನ್ಯೂಸ್ ,ರಾಯಚೂರು,ಜು.21- ಕರ್ನಾಟಕ ರಾಜ್ಯಕ್ಕೆ ಅಮೃತ ಭಾರತ ಎಕ್ಸ ಪ್ರೆಸ್ ಟ್ರೈನ್ ಅಗತ್ಯತೆ ಇದ್ದು ರೈಲ್ವೆ ಸಚಿವ ಅಶ್ವಿನ್ ವೈಷ್ಣವಿ ಹಾಗೂ ರಾಜ್ಯ ಖಾತೆ ರೈಲ್ವೆ ಸಚಿವ ವಿ. ಸೋಮಣ್ಣ ಅವರುಗಳು ಈ ಬೇಡಿಕೆಯನ್ನು ಪರಿಗಣಿಸಬೇಕೆಂದು ಕರ್ನಾಟಕದ ಜನತೆಯ ಪರವಾಗಿ  ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಮನವಿ ಮಾಡಿದ್ದಾರೆ. ರಾಜ್ಯದ ದಕ್ಷಿಣ ತುದಿ  ಚಾಮರಾಜನಗರದಿಂದ ಉತ್ತರದ ತುತ್ತತುದಿ ಬೀದರ್ ವರೆಗೆ ಈ ಅಮೃತ ಭಾರತ ಎಕ್ಸ್ ಪ್ರೆಸ್ ಟ್ರೈನ್ ಸಂಚರಿಸುವಂತೆ ಮಾರ್ಗಸೂಚಿ ಅನುಸರಿಸಬೇಕು. ಹೀಗಾದಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ,ಬೆಂಗಳೂರು, ಯಲಹಂಕ, ಹಿಂದೂಪುರ, ಧರ್ಮಾವರಂ, ಗುಂತಕಲ್, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಗಳಿಗೆ ಒಂದೇ ಟ್ರೈನ್ ನಿಂದ ಸಂಪರ್ಕ ದೊರೆತಂತಾಗುತ್ತದೆ. ಈ ರೈಲು ಸೌಲಭ್ಯದಿಂದ ವಿದ್ಯಾರ್ಥಿಗಳಿಗೆ, ಕುಟುಂಬಗಳಿಗೆ, ಪ್ರವಾಸಿಗರಿಗೆ ಉದ್ಯೋಗಿಗಳಿಗೆ ನೇರ ಪ್ರಯಾಣದ ಅವಕಾಶ ದೊರೆತಂತಾಗುತ್ತದೆ. ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತಂತಾಗುತ್ತದೆ. ಇದಲ್ಲದೆ ಈ ರೈಲು ಸಂಚಾರದಿಂದ ದಕ್ಷಿಣ ಮೈಸೂರು ಭಾಗ ಹಾಗೂ ಕಲ್ಯಾಣ ಕರ್ನಾಟಕದ ಭಾಗಗಳೆರಡಕ್ಕೂ ಅನುಕೂಲವಾದಂತಾಗುತ್ತದೆ. ಹಲವು ರೈಲುಗಳನ್ನು ಬದಲಾಯಿಸಿ ಪ್ರಯಾಣಿಸುವ ಪ್ರಯಾಸಕ್ಕೂ ಬ್ರೇಕ್ ಬೀಳಲಿದ...
Image
  ನಗರದಲ್ಲಿ ಮೂಲಸೌಕರ್ಯಕ್ಕೆ ಮಹಾನಗರ ಪಾಲಿಕೆ ಆದ್ಯತೆ ನೀಡಲಿ- ಅಮರೇಗೌಡ ಪಾಟೀಲ.                              ಜಯ ಧ್ವಜ ನ್ಯೂಸ್, ರಾಯಚೂರು,ಜು.21 - ನಗರದಲ್ಲಿ ನಿವಾಸಿಗಳಿಗೆ ಮೂಲಸೌಕರ್ಯ ನೀಡಲು ಮಹಾನಗರ ಪಾಲಿಕೆ ಆದ್ಯತೆ ನೀಡಬೇಕೆಂದು ಜಿಲ್ಲಾ ನಾಗರೀಕರ ಸಮಿತಿ ಅಧ್ಯಕ್ಷ ಅಮರೇಗೌಡ ಪಾಟೀಲ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದಲ್ಲಿ ನಾಗರೀಕರ ಸೌಲಭ್ಯ ದೊರಕಿಸಿಕೊಡಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದರು. ಸ್ವಚ್ಚ, ಸುಂದರ , ಸುರಕ್ಷಿತ ನಗರಕ್ಕಾಗಿ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದರು. ಸುಗಮ ರಸ್ತೆ , ವೈಜ್ಞಾನಿಕ ಸ್ಪೀಡ್ ಬ್ರೇಕರ್, ಬೀದಿದೀಪ ಸಮರ್ಪಕ ನಿರ್ವಹಣೆ,ಸುರಕ್ಷಿತ ಪಾದಚಾರಿ ಯೋಗ್ಯ ಫುಟ್ ಪಾತ್, ಶುದ್ಧ ಕುಡಿಯುವ ನೀರು, ಮಳೆನೀರು ನಿರ್ವಹಣೆ, ಕಸ ವಿಲೇವಾರಿ ಲೋಪ ದೋಷ ಸರಿಪಡಿಸಿ ಸೂಕ್ತ ರೀತಿಯಲ್ಲಿ ಕಸ ಸಂಗ್ರಹ ಹಾಗೂ ಪರಿಸರ ಸ್ನೇಹಿ ವಿಲೇವಾರಿ, ಹೊಸ ಮನೆ ನಿರ್ಮಾಣ ವೇಳೆ ಸೋಲಾರ್ ಪ್ಯಾನಲ್ ಅಳವಡಿಕೆ, ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಒತ್ತು ಹಾಗೂ ಕಡ್ಡಾಯ ನಿಯಮ ಪಾಲನೆ, ಉದ್ಯಾನವನಗಳು ಅಭಿವೃದ್ಧಿ ಹಾಗೂ ಪುನಶ್ಚೇತನ,ಸೈನ್ ಬೋರ್ಡ್ ,ಅಂಗಡಿ , ವ್ಯಾಪಾರ ಕೇಂದ್ರಗಳಲ್ಲಿ   ಕನ್ನಡಕ್ಕೆ ಆದ್ಯತೆ ನೀಡಬೇಕು,  ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಬೇ...
Image
  ಜು. 26 ದುಬೈಯಲ್ಲಿ ವಿಶ್ವಕನ್ನಡ ಸಮ್ಮೇಳನ ಆಯೋಜನೆ: ಸಮ್ಮೇಳನಾಧ್ಯಕ್ಷರಾಗಿ  ಶ್ರೀದೇವಿ ನಾಯಕ. ಜಯ ಧ್ವಜ ನ್ಯೂಸ್  , ರಾಯಚೂರು ಜು 21-   ಕಲಾ ಸಂಕುಲ ಸಂಸ್ಥೆ ಹಾಗೂ  ದುಬೈ ಸಾಂಸ್ಕೃತಿಕ ಸಂಘಟನೆ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಜು. 26 ರಂದು ದುಬೈಯಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ಸಿನ ಕಾರ್ಯದರ್ಶಿಗಳಾಗಿರುವ ಶ್ರೀದೇವಿ ಆರ್ ವಿ ನಾಯಕ ಇವರು  ಸಮ್ಮೇಳನಾಧ್ಯಕ್ಷರಾಗಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಮಾರುತಿ ಬಡಿಗೇರ್ ತಿಳಿಸಿದ್ದಾರೆ.  ಈ ಸಮ್ಮೇಳನದಲ್ಲಿ ಕರ್ನಾಟಕದಿಂದ 40 ಜನ ಕಲಾವಿದರು ಹಿರಿಯ ಗಣ್ಯರು ಭಾಗವಹಿಸಲಿದ್ದಾರೆ. ದುಬೈ ಕನ್ನಡಿಗರಿಂದ ಮತ್ತು ಕರ್ನಾಟಕದ ಕಲಾವಿದರಿಂದ ಭರತನಾಟ್ಯ ನಾಟಕ ಹಾಗೂ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.  ವಿಶ್ವ ಕನ್ನಡ ಸಮ್ಮೇಳನದ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಶ್ರೀದೇವಿ ಆರ್ ವಿ ನಾಯಕ ಆಯ್ಕೆ ಆಗಿರುವುದು ಸಂತಸದ ವಿಷಯ.  ದುಬೈಯ್ಯ ಖ್ಯಾತ ಉದ್ಯಮಿ ಶೇಕ್ ಡಾ. ಬು.ಅಬ್ದುಲ್ಲ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಅಬುದಾಬಿ ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮಶೆಟ್ಟಿ. ರಾಯಚೂರಿನ ಉದ್ಯಮಿ ಈ ಆಂಜನೇಯ. ಮಲ್ಲಿಕಾರ್ಜುನಯ್ಯ ಹಿರೇಮಠ ಕರಡಕಲ್ ಹಾಗೂ ದುಬೈ ಕನ್ನಡ ಸಾಂಸ್ಕೃತಿಕ  ಸಂಘಟನಾ ಸಂಸ್ಥೆ ಅಧ್ಯಕ್ಷರಾದ ಶೋಧನಾ ಪ್ರಸಾ...
Image
  ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ರವರಿಗೆ ಜೆಡಿಎಸ್ ಪಕ್ಷದಿಂದ ಭಾವಪೂರ್ಣ ಶ್ರದ್ಧಾಂಜಲಿ                                                                       ಜಯ ಧ್ವಜ ನ್ಯೂಸ್, ರಾಯಚೂರು,ಜು.21- ಜಾತ್ಯತೀತ ಜನತಾದಳದ ಪಕ್ಷದ ವತಿಯಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪತ್ನಿ  ಚೆನ್ನಮ್ಮ ನಿಧನ ನಿಮಿತ್ತ ನಗರದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.                          ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರದ್ದಾಂಜಲಿ ಸಲ್ಲಿಸಿದರು. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ ವಿರುಪಕ್ಷಿ ಮಾತನಾಡಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ, “ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋದಾಗೆಲ್ಲಾ, ತಾಯಿ ಚೆನ್ನಮ್ಮ ಅವರು ನಮ್ಮ ಬಗ್ಗೆ ಪ್ರೀತಿಯಿಂದ ವಿಚಾರಿಸುತ್ತಿದ್ದರು. ನಮಗೆ ಊಟ ಬಡಿಸಿ, ನಮ್ಮ ಕ್ಷೇಮ ಸಮಾಚಾರಗಳನ್ನು ಕೇಳಿ ಕಳುಹಿಸುತ್ತಿದ್ದರು” ಎಂದ...