ಗೋವಿಂದ ಗಾನ ಕಾರ್ಯಕ್ರಮದಲ್ಲಿ ಹರಿಕಥಾಮೃತಸಾರದ ಪ್ರಸ್ತುತಿ- ಮುರಳೀಧರ ಕುಲಕರ್ಣಿ ಜಯ ಧ್ವಜ ನ್ಯೂಸ್ ರಾಯಚೂರು ,ಸೆ.16 - ನಗರದ ಸ್ಟೇಷನ್ ರಸ್ತೆಯಲ್ಲಿರುವ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಕ್ಟೋಬರ್ 3 ಮತ್ತು 4 ರಂದು ಜರಗುವ ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ ಖ್ಯಾತ ಗಾಯಕ ಡಾ. ಶೇಷಗಿರಿದಾಸ್ ಇವರ ನೇತೃತ್ವದಲ್ಲಿ ಜರಗುವ ಗೋವಿಂದ ಗಾನ ಕಾರ್ಯಕ್ರಮದಲ್ಲಿ ಹರಿಕಥಾಮೃತಸಾರ ಅಭಿಯಾನ ತಂಡ ದ ವತಿಯಿಂದ ಹರಿಕಥಾಮೃತಸಾರದ ಸಾಮೂಹಿಕ ಪ್ರಸ್ತುತಿಯನ್ನು ಆಯೋಜಿಸಲಾಗಿದೆ. ಈ ಸಂಬಂಧ ಇಂದು ಸಂಜೆ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಜವಾಹರ್ ನಗರದಲ್ಲಿ ಪೂರ್ವಭಾವಿ ತಯಾರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುರಳಿಧರ ಕುಲಕರ್ಣಿ ಅವರು ಮಾತನಾಡಿ ಗೋವಿಂದ ಗಾನ ಕಾರ್ಯಕ್ರಮವು ರಾಯಚೂರಿನಲ್ಲಿ ಅತ್ಯಂತ ವರ್ಣ ರಂಜಿತವಾಗಿ ನಡೆಯುವ ಭಕ್ತಿ ಪ್ರಧಾನ ಕಾರ್ಯಕ್ರಮವಾಗಿದೆ. ಇದರಲ್ಲಿ ರಾಯಚೂರಿನ ಎಲ್ಲಾ ಜಾತಿಯ ಜನಾಂಗದವರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ನಾಡಿನ ಖ್ಯಾತ ಗಾಯಕರಿಂದ ದಾಸವಾಣಿ ಸಂಗೀತ ಕಾರ್ಯಕ್ರಮಗಳು ಉಪನ್ಯಾಸಗಳು ವಿಶೇಷವಾಗಿ ಏಕಕಾಲದಲ್ಲೇ ಕೋಲಾಟ, ನೃತ್ಯ, ಚಿತ್ರ ಕುಂಜ, ಸಮೂಹಗಾಯನ ಆಕರ್ಷಣೀಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಈ ಸಂದ...