ದಲಿತರ ವಿಮೋಚನೆಗೆ ಶಿಕ್ಷಣವೇ ಅಸ್ತ್ರ- ವೆಂಕಟೇಶ ಬೇವಿನಬೆಂಚಿ ಜಯ ಧ್ವಜ ನ್ಯೂಸ್ ,ರಾಯಚೂರು, ಆ.23- ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ದಲಿತರು ಜಾತಿ ದೌರ್ಜನ್ಯ, ಅತ್ಯಾಚಾರ, ಕೊಲೆ - ಸುಲಿಗೆಗೆ ಬಲಿಯಾಗುತ್ತಾ ಬಂದಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ ಶಿಕ್ಷಣವು ಹುಲಿಯ ಹಾಲುದ್ದಿಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎನ್ನುವಂತೆ ದಲಿತರ ಸರ್ವ ವಿಮೋಚನೆಗೆ ಶಿಕ್ಷಣವೇ ಅಸ್ತ್ರ ಎಂದು ಸಾಮಾಜಿಕ ಚಿಂತಕರು ಹಾಗೂ ರಾಯಚೂರು ಆಕಾಶವಾಣಿ ಕೇಂದ್ರ ಕಾರ್ಯಕ್ರಮ ಪ್ರಸಾರ ನಿರ್ವಾಹಕರಾದ ವೆಂಕಟೇಶ ಬೇವಿನಬೆಂಚಿ ಅಭಿಮತ ವ್ಯಕ್ತಪಡಿಸಿದರು. ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಹನುಮಂತಿ ದಿ. ಕೋಳಿ ಹುಸೇನಪ್ಪ ಮ್ಯಾತ್ರಿ ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿ ಹಾಗೂ ಜನತಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ) ಬಲ್ಲಟಗಿ ವತಿಯಿಂದ ಶನಿವಾರ ಆಯೋಜಿಸಿದ್ದ 127 ನೇ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹೋರಾಟಗಾರ ರಾಘವೇಂದ್ರ ಭೋರೆಡ್ಡಿ ಮನ್ಸಾಲಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಮತ್ತು ಅವರ ಮಾರ್ಗ ಹಾಗೂ ಆಶಯಗಳನ್ನು ಮನೆ ಮನೆಗೆ ತಲುಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಖ್ಯಾತ ಬಹುಜನ ಚಿಂತಕರಾದ ಶ್ರೀನಿವಾಸ ಮರೆಡ್ಡಿ, ಉಪನ್ಯಾಸಕ ಎಸ್.ಪ್ಯಾಟೆಪ್ಪ, ರಾಯಚೂರಿನ ಕ...