ಕೇಂದ್ರ ಸರಕಾರದ ಬಲವಂತದ ಭೂಸ್ವಾಧೀನ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ‘ಜೈಲ್ ಭರೋ’ ಚಳುವಳಿ ಪ್ರತಿಭಟನೆ ಜಯ ಧ್ವಜ ನ್ಯೂಸ್ , ರಾಯಚೂರು,ಆ.10- ಕೇಂದ್ರ ಸರಕಾರದ ಬಲವಂತದ ಭೂಸ್ವಾಧೀನ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ನಡೆಯುತ್ತಿರುವ ‘ಜೈಲ್ ಭರೋ’ ಚಳುವಳಿಯ ಭಾಗವಾಗಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು, ಜೈಲ್ ಗೆ ಬೃಹತ್ ಮೆರವಣೆಗೆ ತೆರಳುತ್ತಿರುವ ವೇಳೆ ಹಲವು ರೈತ ಮುಖಂಡರು ಹಾಗೂ ಮಹಿಳಾ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಈ ಪ್ರತಿಭಟನೆಯಲ್ಲಿ ಗಿರಿಯಪ್ಪ ಪೂಜಾರಿ, ನರಸಣ್ಣ ನಾಯಕ, ಶಬ್ಬೀರ, ರಮೇಶ ವೀರಾಪೂರು,ರುದ್ರಪ್ಪ ನಾಯಕ, ವರಲಕ್ಷೀ, ಎಚ್. ಪದ್ಮಾ, ಕೆ.ಜಿ. ವಿರೇಶ, ರಮಾದೇವಿ, ಶರಣಬಸವ, ಸಂಗಯ್ಯ ಸ್ವಾಮಿ, ರಂಗನಾಥ, ಸಾಜೀದ್, ಮಹೇಶ ಚಿಕಲಪರವಿ, ಮಲ್ಲನಗೌಡ, ವೀರೇಶ ಬಿ.ಎನ್. ಬಸಲಿಂಗಪ್ಪ ನಗನೂರು, ಬಸತರಾಯ ಗೌಡ, ಸೇರಿದಂತೆ ಅನೇಕರು ಬಂಧನಕ್ಕೊಳಗಾದರು.