ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು- ಶಾಸಕ ಬಸನಗೌಡ ದದ್ದಲ್ ಜಯ ಧ್ವಜ ನ್ಯೂಸ್ , ರಾಯಚೂರು. ಜು. 4- ರಾಯಚೂರು ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಥಳಗಳು ಹಾಗೂ ಮೂರು ಮಹತ್ತರವಾದ ಐಲೆಂಡುಗಳು ಇವೆ. ಇಲ್ಲಿಗೆ ಕರ್ನಾಟಕ. ಮಹಾರಾಷ್ಟ್ರ. ತೆಲಂಗಾಣ ಸೇರಿದಂತೆ ಇತರೆ ಹಲವಾರು ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಹೇಳಿದರು ಅವರು ಗ್ರಾಮೀಣ ಕ್ಷೇತ್ರದ ವಿವಿಧ ಪ್ರದೇಶಗಳ ಅಭಿವೃದ್ದಿ ಪರಿಶೀಲನೆ ಭಾಗವಾಗಿ ಕುರುಗಡ್ಡೆ ದತ್ತಾತ್ರೆಯ ದೇವಸ್ಥಾನ ಬಳಿ ನಡೆದ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗಳೊಂದಿಗೆ ಮಾತನಾಡಿದರು. ಇಂದು ನಾವು ಎಲ್ಲರೂ ಒಂದಾಗಿ ಸೇರಿದ್ದೇವೆ. ಮಾಧ್ಯಮದವರನ್ನು ಕೆಲವು ಪ್ರಮುಖ ಪ್ರವಾಸೋದ್ಯಮ ಸ್ಥಳಗಳಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಕರೆದಿದ್ದೇನೆಂದ ಅವರು. ಕಳೆದ ಎಂಟು ವರ್ಷಗಳಿಂದ ನಾನು ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿಯನ್ನು ನೀವು ಸ್ವತಃ ನೋಡಿ, ನಿಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕು ಎಂಬುದು ನಾನು ತಮಗೆಲ್ಲರಿಗೂ ಕರೆದ ಉದ್ದೇಶ ಆಗಿದೆ. ನಮ್ಮ ಕ್ಷೇತ್ರದಲ್ಲಿ ಅತ್ಯ...