Posts

Image
  ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರಿಗೆ 55ನೇ ಜನ್ಮದಿನದ  ಸಂಭ್ರಮಾಚರಣೆ ಜಯಧ್ವಜ ನ್ಯೂಸ್ , ರಾಯಚೂರು,ಏ.11- ನಗರದ ಅಂಬೇಡ್ಕರ್ ವೃತ್ತದ ಖಾಸಗಿ ಹೋಟೆಲ್ ನಲ್ಲಿ ಮಾದಿಗ ದಂಡೋರ  ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಮಾದಿಗ ದಂಡೋರ  ರಾಜ್ಯಾಧ್ಯಕ್ಷರು ಬಿ.ನರಸಪ್ಪ ದಂಡೋರ ರವರ 55ನೇ ಹುಟ್ಟು ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಕಂಡ ಒಳ ಮೀಸಲಾತಿಯ ವರ್ಗೀಕರಣದ  ಹೋರಾಟಗಾರ, ನೇರ ನುಡಿಯ ಸರದಾರ, ಕಷ್ಟಗಳಿಗೆ ಸ್ಪಂದಿಸುವ ಹೃದಯವಂತ ನಾಯಕ, ಸಮುದಾಯದ ಏಳಿಗೆಗಾಗಿ ಸುಮಾರು 35 ವರ್ಷಗಳಿಂದ ನಿರಂತರ ಹೋರಾಟದಲ್ಲಿ ಭಾಗಿಯಾಗಿ ತನ್ನ ಕುಟುಂಬ ತ್ಯಾಗ, ಆರೋಗ್ಯದಲ್ಲಿ ಏರುಪೇರಾದರೂ ಕೂಡ ನೊಂದ ಸಮುದಾಯಗಳಿಗೆ ಅನ್ಯಾಯವಾಗಬಾರದು ಎಂದು ಮುಂದುವರೆದು 101 ಜಾತಿಗಳಿಗೆ ನ್ಯಾಯವನ್ನು ಒದಗಿಸಲು ಸರ್ಕಾರಕ್ಕೆ ಸೆಡ್ಡು ನ್ಯಾಯಯುತವಾದ ಪಾಲನ್ನು ಪಡೆದೆ ತೀರುತ್ತೇವೆ ಎಂದು ಪಣತೊಟ್ಟು ನಿಂತಿರುವ ಧೀಮಂತ ನಾಯಕ ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರ 55ನೇ ಹುಟ್ಟುಹಬ್ಬವನ್ನು ಜಿಲ್ಲೆ ಮತ್ತು ತಾಲೂಕಿನ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳು ಹಿರಿಯ ಹೋರಾಟಗಾರರು ಬುದ್ಧಿಜೀವಿಗಳು ಎಲ್ಲಾ ಪಕ್ಷದ ರಾಜಕೀಯ ಪ್ರತಿನಿಧಿಗಳು ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿ  ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.
Image
  ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿಗೆ ಒಲಿದ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ  ಜಯ ಧ್ವಜ ನ್ಯೂಸ್ ರಾಯಚೂರು  , ಏ.10- ಕರ್ನಾಟಕ ಲೇಖಕಿಯರ ಸಂಘದ, 2025 ನೇ ಸಾಲಿನ ಸಂಶೋಧನಾ ಪ್ರಶಸ್ತಿಗೆ ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಅವರ ರಾಯಚೂರು ಕೋಟೆಗೆ ನರಬಲಿ ಬಾಳೆ ಸಂಗಮ್ಮ ಮತ್ತು ಬಸರೆಡ್ಡಿ ಮಲ್ಲವ್ವ ಕೃತಿ ಭಾಜನವಾಗಿದೆ.                          ಏ.9 ರಂದು ಬೆಂಗಳೂರಿನ  ನಯನ ಸಭಾಂಗಣದಲ್ಲಿ   ಕಾರ್ಯಕ್ರಮ ನೆರವೇರಿತು.    ಕಾರ್ಯಕ್ರಮ ಉದ್ಘಾಟನೆಯನ್ನು  ಶ್ರೀಮತಿ ಸಭಿಹ ಭೂಮಿಗೌಡ ನೆರವೇರಿಸಿದರು.  ಪ್ರಶಸ್ತಿಯನ್ನು ಪ್ರೊ ಎಸ ಜಿ ಸಿದ್ದರಾಮಯ್ಯ , ಮಾಜಿ ಅಧ್ಯಕ್ಷರು ಕನ್ನಡ ಪುಸ್ತಕ ಪ್ರಾಧಿಕಾರ ಇವರು ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತರ ಪರಿಚಯ : ನಗರದ ಹಮದರ್ದ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿ ಅವರು ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಕರ್ನಾಟಕ ಯುಗಪುರುಷ ಪಂ ತಾರಾನಾಥರು, ಹೃದಯಕ್ಕೆ ಹತ್ತಿರಾದವರು, ಮೌನ ಮಿಡಿದಾಗ, ನಿಜಾಂ ಕರ್ನಾಟಕದ ಪಂ.ಡಿ ಎಂ ಸೂಗವೀರ ಶರ್ಮ ಮೊದಲಾದ ಕೃತಿಗಳು ಪ್ರಮುಖವಾಗಿವೆ. ಗುಲ್ಬರ್ಗ ವಿಶ್ವ ವಿದ್ಯಾಲಯದ ಪುಸ್ತಕ ಪ್ರಶಸ್ತಿ...
Image
  ಖರ್ಗೆ ಕುರಿತು ಹಿಮಂತ್ ಬಿಸ್ವ ಶರ್ಮಾ ಹೇಳಿಕೆ ಖಂಡನೀಯ:      ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಗೆಲುವು ಖಚಿತ- ವಸಂತ ಕುಮಾರ್.                                                                                                                           ಜಯ ಧ್ವಜ ನ್ಯೂಸ್, ರಾಯಚೂರು, ಏ.10- ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದು ಖಂಡನೀಯವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎ.ವಸಂತ ಕುಮಾರ್ ಹೇಳಿದರು. ಅವರಿಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಹಿಮಂತ್ ಶರ್ಮಾ ಈ ಹಿಂದೆ ಕಾಂಗ್ರೆಸ್ ನಲ್ಲಿದ್ದರು ಅವರು ಮಂತ್ರಿ ಸಹ ಆಗಿದ್ದರು ಅವರು ಭ್ರಷ್ಟಾಚಾರ ಎಸಗಿದ್ದರಿಂದ ಅವರ ಮೇಲೆ ಸಿಬಿಐ ತನಿಖೆ ಸಹ ನಡೆಯ...
Image
  ಕನ್ನಡದ ಹಿರಿಯ ನಟ ಅಶೋಕ್ ರವರಿಗೆ ಕಲಾ ಸಂಕುಲ ಸಂಸ್ಥೆಯಿಂದ ಸನ್ಮಾನ.   ಜಯ ಧ್ವಜ ನ್ಯೂಸ್ ,ರಾಯಚೂರು ಏ.10.   ಕನ್ನಡ ಚಲನಚಿತ್ರ ರಂಗದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿದ ಅಶೋಕ ಅವರಿಗೆ ಇಂದು ರಾಯಚೂರು ನಗರದ ಖಾಸಗಿ ಹೋಟೆಲ್ ನಲ್ಲಿ ಕಲಾ ಸಂಕುಲ ಸಂಸ್ಥೆ ಕಾರ್ಯದರ್ಶಿ ಮಾರುತಿ ಬಡಿಗೇರ್ ಸನ್ಮಾನಿಸಿ ಗೌರವಿಸಿದರು..  ಅಶೋಕ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯ ನಟ 74 ವಯಸ್ಸಾಗಿದ್ದರೂ ಇನ್ನೂ ಹೀರೋ ತರ ಕಂಗೊಳಿಸುತ್ತಿದ್ದಾರೆ. ತಮ್ಮ ಕಲಾತ್ಮಕ ಪಾತ್ರಗಳಿಗೆ ಹೆಸರಾಗಿರುವ ಅಶೋಕ್ ಸನಾದಿ ಅಪ್ಪಣ್ಣ,ರಂಗನಾಯಕಿ, ಕ್ರಾಂತಿಯೋಗಿ ಬಸವಣ್ಣ,ಮುಗಿಲ ಮಲ್ಲಿಗೆ, ಮನೆಗೆ ಬಂದ ಮಹಾಲಕ್ಷ್ಮಿ ಅಶೋಕ ಚಕ್ರ,ವರದಕ್ಷಿಣೆ ತಾಯಿಯ ಮಡಿಲಲ್ಲಿ ಹಲವಾರು ಚಲನಚಿತ್ರದಲ್ಲಿ ನಟರಾಗಿ ನಟಿಸಿರುವ ಅಶೋಕ್ ಅವರು ಇಂದು ರಾಯಚೂರಿಗೆ ಆಗಮಿಸಿದ್ದರು. ಕಲಾ ಸಂಕುಲ ಸಂಸ್ಥೆ 2011ರಲ್ಲಿ ರಾಯಚೂರಿನಲ್ಲಿ ದೇಶಿ ಸಂಭ್ರಮ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಅಶೋಕ್ ಅವರನ್ನು ಆಹ್ವಾನಿಸಲಾಗಿತ್ತು. ಬಹು ವರ್ಷಗಳ ನಂತರ ಮತ್ತೆ ರಾಯಚೂರಿಗೆ ಬಂದಿದ್ದು ತುಂಬಾ ಖುಷಿಯಾಯಿತು ಎಂದರು.  ಈ ಸಂದರ್ಭದಲ್ಲಿ ಕಲಾ ಸಂಕುಲ ಸಂಸ್ಥೆಯ ನಿರ್ದೇಶಕರಾದ ಮೌನೇಶ ವಡವಾಟಿ. ಡಾ. ಷಣ್ಮುಖ ಚಲವಾದಿ  ಇನ್ನಿತರರಿದ್ದರು. ಇದೆ ವೇಳೆ ರೇಖಾ ಬಡಿಗೇರ್ ಬರೆದಿರುವ ಉದೋ ಉದೋ ಕೃತಿಯನ್ನು ನಟ ಅಶೋಕ್ ಅವರಿಗೆ ನೀಡಲಾಯಿತು.
Image
ಶಂಕರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ.                                                               ಜಯ ಧ್ವಜ ನ್ಯೂಸ್ , ರಾಯಚೂರು, ಏ.9- ಶ್ರೀ ಆದಿ ಶಂಕರಾಚಾರ್ಯರ ಜಯಂತಿಯನ್ನು ಪ್ರತಿ ವರ್ಷದಂತೆ ಈ ಬಾರಿಯೂ ಸಹ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಇದರ ಪೂರ್ವಭಾವಿ ತಯಾರಿಯ ದೃಷ್ಠಿಯಿಂದ ಇಂದು ರಾಯಚೂರಿನ‌‌ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು  ಶಂಕರ ಮಠದ  ಪದಾಧಿಕಾರಿಗಳು, ಶಂಕರ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಬ್ರಾಹ್ಮಣ ಸಮಾಜದ ಜಿಲ್ಲಾ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅಖಿಲ‌ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ‌ ಪ್ರತಿನಿಧಿ ಶ್ರೀ ರಮೇಶ‌ ಕುಲಕರ್ಣಿ, ಶ್ರೀ ಕೃಷ್ಣಮೂರ್ತಿ  ಹೆಬ್ಸೂರ್ ಸೇರಿದಂತೆ ಶಂಕರ್ ಮಠ ಹಾಗೂ ಶಂಕರ್ ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ಬ್ರಾಹ್ಮಣ  ಸಮಾಜದ ಪ್ರಮುಖರು ಭಾಗವಹಿಸಿದ್ದರು.
Image
  ಗೋಶಾಲೆ ಜಮೀನು ಕಬಳಿಕೆ ತಡೆ  ಡಿಸಿ ಆದೇಶ ಸ್ವಾಗತಾರ್ಹ- ಎಂ.ವಿರುಪಾಕ್ಷಿ.                                                         ಜಯ ಧ್ವಜ ನ್ಯೂಸ್, ರಾಯಚೂರು ,ಏ.9- ನಗರದ ಗೋಶಾಲೆಗೆ ಸಂಬಂಧಿಸಿದ ಆಸ್ತಿ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿರುವ ಆದೇಶ ಸ್ವಾಗತಾರ್ಹವಾಗಿದೆ ಎಂದು ಗೋ ರಕ್ಷಾ ಸಮಿತಿಯ ಎಂ.ವಿರುಪಾಕ್ಷಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 89 ವರ್ಷ ಹಳೆಯ ಗೋಶಾಲೆಯ 4 ಎಕರೆ ಜಮೀನು ಭೂಗಳ್ಳರ ಪಾಲಾಗುವುದನ್ನು ತಡೆದು ಜಿಲ್ಲಾದಿಕಾರಿಗಳು ಆದೇಶಿಸಿದ್ದಾರೆ ಎಂದರು. ಕೆಲ ಪಟ್ಟಭದ್ರರು ರಾಜಕಾರಣಿಗಳ ಕೃಪಾಕಟಾಕ್ಷದಿಂದ ಕೋಟ್ಯಾಂತರ ಬೆಲೆ ಬಾಳುವ ಭೂಮಿಯನ್ನು ತಮ್ಮ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ತಮ್ಮದಾಗಿಸಿಕೊಂಡರು ಬೃಹತ್ ವಾಣಿಜ್ಯ ಸಮುಚ್ಚಯ ನಿರ್ಮಿಸಿದ್ದರು ಇದೀಗ ಜಿಲ್ಲಾಧಿಕಾರಿಗಳು ಅದನ್ನು ತಡೆದಿದ್ದಾರೆ ಎಂದರು . ಒಂದು ವಾರದಲ್ಲಿ ಮಹಾನಗರ ಪಾಲಿಕೆ ಅಕ್ರಮ ಕಟ್ಟಡ ನೆಲಸಮ ಮಾಡಬೇಕೆಂದ ಅವರು ಇಂತಹ ಅಕ್ರಮದಲ್ಲಿ ಶಾಮಿಲಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮಲಿಯಾಬಾದ ಗೋಶಾಲೆ ಸಂಬಂಧಿಸಿದಂತೆ ನೂರಾರು ಎಕರೆ ಜಮೀನು ಒತ್ತುವರಿಯಾಗಿದೆ ಕಲ್ಲು ಕಂಕರ ತಯಾರಿಕೆ ಘಟಕಗಳು ತಲೆಯತ್ತಿವೆ ಮುಂ...
Image
  ಶಿವಸೇನಾ ವತಿಯಿಂದ ಏ.11 ರಂದು ಮಾತೃವಂದನ ಕಾರ್ಯಕ್ರಮ -ರಾಜಾಚಂದ್ರ .                                      ಜಯ ಧ್ವಜ ನ್ಯೂಸ್ ರಾಯಚೂರು,ಏ.9-                 ಶಿವಸೇನಾ(ಏಕನಾಥ ಶಿಂಧೆ  ಬಣ  ) ದಿಂದ ಏ.11 ರಂದು ನಗರದಲ್ಲಿ ಮಾತೃವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಸೇನಾ ಜಿಲ್ಲಾ ಅಧ್ಯಕ್ಷ ರಾಜಾ ಚಂದ್ರ ರಾಮನಗೌಡ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 5ಕ್ಕೆ ನಗರದ ರಾಮಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗಸ್ವಾಮಿಜೀ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆಂದರು. ರಾಷ್ಟ್ರೀಯತೆ, ದೇಶಭಕ್ತಿ ಜಾಗೃತಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದರು.             ಈ ಸಂದರ್ಭದಲ್ಲಿ ಹರೀಶ್ ಮಡಿವಾಳ,ಪ್ರಭು, ವಿರೇಂದ್ರ ಗೌಳಿ, ಸಂತೋಷ ಗುಡಿ ಇದ್ದರು.