ಮಾದಿಗ ದಂಡೋರದಿಂದ ಲಲಿತ ವೃದ್ಧಾಶ್ರಮದಲ್ಲಿ ಮಂದಕೃಷ್ಣ ಮಾದಿಗರವರ ಹುಟ್ಟು ಹಬ್ಬ ಆಚರಣೆ ಜಯ ಧ್ವಜ ನ್ಯೂಸ್ , ರಾಯಚೂರು , ಜು.7 - ಮಾದಿಗ ದಂಡೋರ ರಾಜ್ಯಾಧ್ಯಕ್ಷರು ಬಿ. ನರಸಪ್ಪ ದಂಡೋರ ರವರ ಆದೇಶದ ಮೇರೆಗೆ ಇಂದು ನಗರದ ಲಲಿತಾ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ 32ನೇ ಮಾದಿಗ ದಂಡೋರ ಎಂ ಆರ್ ಪಿ ಎಸ್ ಸಂಘಟನೆಯ ಸಂಸ್ಥಾಪನೆ ದಿನ ಹಾಗೂ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ ಹುಟ್ಟು ಹಬ್ಬ ಆಚರಣೆ ಲಲಿತ ವೃದ್ಧಾಶ್ರಮದಲ್ಲಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಂಜಿತ್ ದಂಡೋರ ಎಂ ಆರ್ ಪಿ ಎಸ್ ಜಿಲ್ಲಾ ಯುವ ಸೇನೆ ಅಧ್ಯಕ್ಷರು ಮಾತನಾಡಿ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ ನಾಯಕತ್ವದಲ್ಲಿ 1994 ರಲ್ಲಿ ಉದ್ಘಾಟನೆಯದ ಮಾದಿಗ ದಂಡೋರ ಎಂ ಆರ್ ಪಿ ಎಸ್ ಸಂಘಟನೆಯ ಹೋರಾಟದ ಹಾದಿ ಇಂದಿಗೆ 32ನೆಯ ವರ್ಷದ ವಾರ್ಷಿಕೋತ್ಸವ ಸಂಸ್ಥಾಪನೆ ದಿನ ಹಾಗೂ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರು ಹುಟ್ಟುಹಬ್ಬ ಮತ್ತು ಅನೇಕ ಸಮಾಜ ತಮ್ಮದೇ ಆದ ಛಾಯೆಯನ್ನು ಮೂಡಿಸಿ. ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಒಳ ಮಿಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ 35 ವರ್ಷಗಳಿಂದ ನಿರಂತರ ಹೋರಾಟದ ಮೂಲಕ ವರ್ಗೀಕರಣವನ್ನು ಸಾಧಿಸಿದ್ದಾರೆ. ಸಾಮಾಜಿಕ ಸೇವೆಯನ್ನು ಗುರುತಿಸಿ 2025ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ...