ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳಲ್ಲದವರದೇ ದರ್ಬಾರ್ ಆರೋಪ; ನಿಯಾಮಾವಳಿ ತಿದ್ದುಪಡಿಗೆ ಪಲುಗುಲ ನಾಗರಾಜರಿಂದ ಸಚಿವರಿಗೆ ಪತ್ರ ಜಯ ಧ್ವಜ ನ್ಯೂಸ್ ರಾಯಚೂರು, ಏ.15 - ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಆಶಯಗಳಿಗೆ ತಿಲಾಂಜಲಿ ಇಟ್ಟು ಸಾಹಿತಿಗಳಲ್ಲದವರದೇ ದರ್ಬಾರ್ ನಡೆಯುತ್ತಿದೆ ಎಂದು ಆರೋಪಿಸಿರುವ ಸಾಹಿತಿ ಪಲುಗುಲ ನಾಗರಾಜರವರು ಈ ಬಗ್ಗೆ ಸಾಹಿತ್ಯ ಪರಿಷತ್ತಿನ ನಿಯಮಾವಳಿ ತಿದ್ದುಪಡಿಗೈಯುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರಿಗೆ ಪತ್ರ ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೊದಲನೆಯದಾಗಿ ಚುನಾವಣೆ ನೀತಿ ಬದಲಾಗಬೇಕಿದೆ ತಾಲ್ಲೂಕು ಕಸಾಪ ಸದಸ್ಯರಿಂದಲೇ ಅಧ್ಯಕ್ಷರ ನೇಮಕ ಆಗಬೇಕು ಜಿಲ್ಲೆಯ ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳು ಸೇರಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಆಗಬೇಕು ನಂತರ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಸೇರಿ ರಾಜ್ಯ ಕಸಾಪ ಅಧ್ಯಕ್ಷರ ಆಯ್ಕೆ ಆಗಬೇಕು ಆಗಲೇ ಪ್ರಜಾಪ್ರಭುತ್ವ ವ್ಯವಸ್ಥೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸುವವರು ಕನಿಷ್ಠ 8-10 ಕೃತಿಗಳನ್ನು ಹೊರ ತಂದಿರಬೇಕು ಹಾಗೂ ತಾಲ್ಲೂಕು ಸಮಿತಿ , ಜಿಲ್ಲಾ ಸಮಿತಿ ರಚನೆಯಲ್ಲಿ ಶೇಕಡಾ 80% ಪದಾಧಿಕಾರಿಗಳು ಸಾಹಿತಿಗಳೇ ಆಗಿರಬೇಕು ಮತ್ತು ಪದಾಧಿಕಾರಿಗಳು ಕನಿಷ್ಠ ಒಂದು ಕೃತಿಯನ್ನು ಆದರೂ ರಚ...