Posts

Image
  ಭಾರತೀಯ ರೈಲ್ವೆ - ದಿವ್ಯಾಂಗಜನ ರಿಯಾಯಿತಿ ಕಾರ್ಡ್ ಆನ್ಲೈನ್ ನಲ್ಲಿ ಲಭ್ಯ  - ಡಾ.ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಜೂ.18- ಭಾರತೀಯ ರೈಲ್ವೆ ಈಗ ದಿವ್ಯಾಂಗಜನ ಪ್ರಯಾಣಿಕರಿಗೆ ರೈಲ್ವೆ ರಿಯಾಯಿತಿ ಫೋಟೋ ಗುರುತಿನ ಚೀಟಿ ನೀಡಿಕೆ ಮತ್ತು ನವೀಕರಣವನ್ನು ಸೌಲಭ್ಯವನ್ನು ಇನ್ನು ಮುಂದೆ  ಸಂಪೂರ್ಣ ಆನ್ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ಅವರು ತಿಳಿಸಿದ್ದಾರೆ.  ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಅವರು,  ಸಂಪೂರ್ಣ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ, ದಾಖಲೆ ಅಪ್ಲೋಡ್, ಸ್ಥಿತಿ ಪರಿಶೀಲನೆ, ಅನುಮೋದಿತ ಕಾರ್ಡ್ ಡೌನ್ಲೋಡ್ - ಎಲ್ಲವೂ ಡಿಜಿಟಲೀಕರಣ ಮಾಡಲಾಗಿದೆ.   ರೈಲ್ವೆ ಕಚೇರಿಗೆ ಹೋಗುವ ಅಗತ್ಯವಿಲ್ಲ:  ಮೊದಲು ರೈಲ್ವೆ ಕಚೇರಿಗೆ ಹೋಗಬೇಕಿತ್ತು. ಅಲ್ಲಿಂದ ಡಿವಿಜನಲ್ ಕಚೇರಿಗೆ ರವಾನೆ ಆಗಿ ಅಲ್ಲಿ ಪರಿಶೀಲನೆ ಮಾಡಿ ಕಾರ್ಡ್ ನೀಡಲಾಗುತ್ತಿತ್ತು. ಹಲವು ದಿನಗಳ ಕಾಲ ಕಾಯಬೇಕಾಗಿತ್ತು.  ಈಗ ಡಿಜಿಟಲ್ ಆಗಿ ಆಗುತ್ತದೆ  ರೈಲು ಟಿಕೆಟ್ನಲ್ಲಿ ರಿಯಾಯಿತಿ ಪಡೆಯಲು ಅರ್ಹರಾದ ದಿವ್ಯಾಂಗಜನ ಪ್ರಯಾಣಿಕರು ಆನ್ಲೈನ್ ಅರ್ಜಿ ಸಲ್ಲಿಸಲು ವೆಬ್ಸೈಟ್: http://divyangjanid.indianrail.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಭಾರತ ಸರಕಾರದ ನೈಋತ್ಯ ರೈಲ್ವೆ ದಿವ್ಯಾಂಗಜನರಿಗೆ ಈಗ ಸಿಹಿ ಸುದ್ಧಿ ನೀಡಿದ್ದು  ಕರ್ನ...
Image
  ನಾಳೆ ಮುನ್ನೂರು ಕಾಪು ಸಮಾಜದಿಂದ    ಪಾರ್ವತಮ್ಮರವರ ಶ್ರದ್ಧಾಂಜಲಿ ಕಾರ್ಯಕ್ರಮ.                                                                    ಜಯಧ್ವಜ ನ್ಯೂಸ್ ರಾಯಚೂರು, ಜೂ.18- ನಿನ್ನೆ ನಿಧನರಾದ ಮಾಜಿ ಶಾಸಕ ಎ.ಪಾಪಾರೆಡ್ಡಿರವರ ಧರ್ಮಪತ್ನಿ ಪಾರ್ವತಮ್ಮರವರ ಶ್ರದ್ಧಾಂಜಲಿ ಕಾರ್ಯಕ್ರಮ ಜೂ.19 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಗದ್ವಾಲ್ ರಸ್ತೆಯ ಮುನ್ನೂರು ಕಾಪು ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ  ಆಯೋಜಿಸಲಾಗಿದೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ  ಮುನ್ನೂರು ಕಾಪು ಸಮಾಜದ ಹಿರಿಯರು, ಮುಖಂಡರು, ಪದಾಧಿಕಾರಿಗಳು, ಸದಸ್ಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗಲಿದ ಪಾರ್ವತಮ್ಮರವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಮುನ್ನೂರು ಕಾಪು ಸಮಾಜದ ಅಧ್ಯಕ್ಷರಾದ ಬೆಲ್ಲಂ ನರಸರೆಡ್ಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.
Image
  ಕಲ್ಯಾಣ ಕರ್ನಾಟಕ ಮನೋವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಡಾ. ಮನೋಹರ್ ಪತ್ತಾರ್ ಆಯ್ಕೆ.   ಜಯ ಧ್ವಜ ನ್ಯೂಸ್ ,ರಾಯಚೂರು ಜೂ. 17-   ರಾಯಚೂರು ನಗರದ ಮಾನಸಿಕ ಮತ್ತು ನರರೋಗ ತಜ್ಞರಾದ ಡಾ. ಮನೋಹರ್ ವೈ ಪತ್ತಾರ್ ಇವರು ಕಲ್ಯಾಣ ಕರ್ನಾಟಕ ಮನೋವೈದ್ಯಕೀಯ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಂದ ಮನೋರೋಗ ತಜ್ಞ ವೈದ್ಯರು ರಾಯಚೂರು ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಡಾ. ಮನೋಹರ್ ವೈ  ಪತ್ತಾರ್ ರಾಯಚೂರು,  ಉಪಾಧ್ಯಕ್ಷರಾಗಿ ಡಾ. ಬಾಬುರಾವ್ ಮಾರ್ಕಲ್ ಬೀದರ್, ಗೌರವ ಕಾರ್ಯದರ್ಶಿಯಾಗಿ ಡಾ. ವಿನಯ್ ಕುಮಾರ್, ಖಜಾಂಚಿಯಾಗಿ ಡಾ. ಶರಣಬಸವರಾಜ ರಾಯಚೂರು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Image
  ಮಾಜಿ ಶಾಸಕ ಎ. ಪಾಪಾರೆಡ್ಡಿಯವರಿಗೆ ಪತ್ನಿ ವಿಯೋಗ                                                                          ಜಯ ಧ್ವಜ ನ್ಯೂಸ್ , ರಾಯಚೂರು,ಜೂ.17- ನಗರದ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ರವರ ಧರ್ಮಪತ್ನಿ ಎ.ಪಾರ್ವತಮ್ಮರವರು ಇಂದು ಬೆಳಗಿನ ಜಾವ 3:30ಕ್ಕೆ ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3:30ಕ್ಕೆ ಮುನ್ನೂರು ಕಾಪು ಸಮಾಜದ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Image
  ಕಾಲೋನಿ ನಿವಾಸಿಗಳಿಂದ ಸನ್ಮಾನ.                                                                 ಜಯ ಧ್ವಜ ನ್ಯೂಸ್, ರಾಯಚೂರು,ಜೂ.16- ಜಿ.ಡಿ.ಸೋಮೇಶ್ವರ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಮತ್ತು ಬಿಜೆಪಿಯ ಮುಖಂಡರಾದ ಬಿ.ಶಿವರೆಡ್ಡಿ ಇವರಿಗೆ ಅಲ್ಲಮಪ್ರಭು ಕಾಲೋನಿ ಮತ್ತು ಶ್ರೀನಿವಾಸ್ ಕಾಲೋನಿ ನಿವಾಸಿಗಳಿಂದ ಸನ್ಮಾನ ಮಾಡಲಾಯಿತು.                           ಈ ಸಂದರ್ಭದಲ್ಲಿ ಮೋದಿ ಕೃಷ್ಣಮೂರ್ತಿ. ರಾಯಪ್ಪ ಮಾಸ್ಟರ್ .ಬಾಶುಮಿಯ್ಯಾ .ಮಲ್ಲೇಶ್ ದಳವಾಯಿ .ದೇವೇಂದ್ರಪ್ಪ. ಶ್ರೀನಿವಾಸ್ ಕಾಲೋನಿ ಮುಖಂಡರಾದ ತಿಮ್ಮಣ್ಣ ಯಾದವ್.ಸಿದ್ದಣ್ಣ. ವೀರೇಶ್ ನಾಗಲದಿನ್ನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Image
  ರಕ್ತದಾನದ ಮಹತ್ವ ತಿಳಿಸುವ ಕಾರ್ಯವಾಗಲಿ- ಎಸ್ಪಿ ಅರುಣಾಂಗ್ಷು ಗಿರಿ ಜಯ ಧ್ವಜ ನ್ಯೂಸ್ , ರಾಯಚೂರು, ಜೂನ್.16 - ಅಪಘಾತದಿಂದ ಹಾಗೂ ಕಾಯಿಲೆಯಿಂದ ಪ್ರಾಣಾಪಾಯದಲ್ಲಿ ಇರುವವರ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಹೇಳಿದರು. ಜೂನ್ 16ರ ಮಂಗಳವಾರ ದಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ ರಾಯಚೂರು, ಲಯನ್ಸ್ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ, ರೆಡ್ ರಿಬ್ಬನ್ ಕ್ಲಬ್, ಎನ್.ಎಸ್.ಎಸ್. ಎನ್.ಸಿ.ಸಿ, ರಾಯಚೂರು ಜಿಲ್ಲೆಯ ಎಲ್ಲ ರಕ್ತ ಕೇಂದ್ರಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಪ್ರತಿದಿನ ಸೂಕ್ತ ಗುಂಪಿನ ರಕ್ತದ ಕೊರತೆಯಿಂದ, ಅಪಘಾತದಲ್ಲಿ ತೀವ್ರ ತರಹದ ಗಾಯದಿಂದ ರಕ್ತಸ್ರಾವವಾಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ಇದ್ದು, ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜ...
Image
  ಗಿಡ ನೆಡುವ ಮೂಲಕ ಜನ್ಮದಿನ ಆಚರಣೆ ಸ್ಪೂರ್ತಿದಾಯಕ- ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ್ ಜಯ ಧ್ವಜ ನ್ಯೂಸ್ ರಾಯಚೂರು , ಜೂ.16 - ಗ್ರೀನ್ ರಾಯಚೂರು ಗೌರವಾಧ್ಯಕ್ಷರಾದ ಶ್ರೀ ಕೊಂಡ ಹನುಮೇಶ್ ಕುಮಾರ್ ಅವರು ತಮ್ಮ 52ನೇ ಜನ್ಮದಿನದ ಅಂಗವಾಗಿ 52 ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಿದರು. ರಾಯಚೂರು ವಲಯ ಅರಣ್ಯಾಧಿಕಾರಿ ಶ್ರೀ ರಾಜೇಶ್ ನಾಯಕ್ ಅವರು ಮಾತನಾಡಿ, “ಗಿಡ ನೆಟ್ಟು ಜನ್ಮದಿನ ಆಚರಿಸುವುದು ಅತ್ಯಂತ ಸ್ಪೂರ್ತಿದಾಯಕ ಕಾರ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಜನ್ಮದಿನ ಹಾಗೂ ಇತರೆ ವಿಶೇಷ ಸಂದರ್ಭಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು. ಇಂತಹ ಕಾರ್ಯಗಳಿಂದ ಹಸಿರೀಕರಣ ಹೆಚ್ಚಾಗಿ ಆರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು” ಎಂದು ಹೇಳಿದರು. ಶ್ರೀ ಕೊಂಡ ಹನುಮೇಶ್ ಕುಮಾರ್ ಅವರು ತಮ್ಮ ತಂದೆ, ಗ್ರೀನ್ ರಾಯಚೂರು ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ ಕೊಂಡ ಕೃಷ್ಣಮೂರ್ತಿ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಈ ಬಾರಿಯೂ ತಮ್ಮ 52ನೇ ಜನ್ಮದಿನವನ್ನು 52 ಗಿಡಗಳನ್ನು ನೆಡುವ ಮೂಲಕ ವಿಶೇಷವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಗ್ರೀನ್ ರಾಯಚೂರು ಸದಸ್ಯರು...