Posts

Image
  ಕುಲಶಾಸ್ತ್ರೀಯ ಅಧ್ಯಯನದಂತೆ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಸಿಎಂಗೆ ಮನವಿ  ಜಯ ಧ್ವಜ ನ್ಯೂಸ್ ,ರಾಯಚೂರು, ಫೆ.14 - 'ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತು  ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡು 2018ರಿಂದ ಬಾಕಿಯಿರುವ ಕಡತಕ್ಕೆ ರಾಜ್ಯ ಸರ್ಕಾರದ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅಖಿಲ ಕರ್ನಾಟಕ ಹೆಳವ ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾಜ ರಾಜ್ಯಾದ್ಯಕ್ಷ ನಾಗರಾಜ ಗುರೂಜಿ ಅವರು ಮನವಿ ಸಲ್ಲಿಸಿದರು. ಹೆಳವ ಸಮಾಜವು ಶತಮಾನಗಳಿಂದಲೂ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಹಿಂದುಳಿತವನ್ನು ಅನುಭವಿಸುತ್ತ ಬಂದಿದೆ.ಈ ವಾಸ್ತವ ಸ್ಥಿತಿಯನ್ನು ಗುರುತಿಸಿ ನ್ಯಾಯ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿರುವ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ವತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮಾನವಶಾಸ್ತ್ರ ವಿಭಾಗದ ಡಾ.ಎಲ್.ಶ್ರೀನಿವಾಸರವರು ಕರ್ನಾಟಕದ ಪಿಚ್ಚಿಗುಂಟ್ಲ, ಹೆಳವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಳಿಸಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಗೆ 2018 ರಲ್ಲಿ ವರದಿ ಸಲ್ಲಿಸಿದ್ದಾರೆ. 2018 ರಿಂದಲೂ ಈ ಮಹತ್ವದ ಕಡತವು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ಕಚೇರಿಯಲ್ಲಿ ಅನುಮೋದನೆಗಾಗಿ ಕಾಯುತ್ತಿದೆ ಎಂಬುದು ಅತ್ಯಂ...
Image
ವಾರದ ವಿಶೇಷ ರೈಲು ಸಂಚಾರ ವಿಸ್ತರಣೆ - ಡಾ. ಬಾಬುರಾವ್ ಜಯ ಧ್ವಜ ನ್ಯೂಸ್ ,ರಾಯಚೂರು, ಫೆ.14- ದಕ್ಷಿಣ ಮಧ್ಯ ರೈಲ್ವೆಯು ಸೊಲ್ಲಾಪೂರ- ಅನಕಪಲ್ಲೆ ವಾರದ ವಿಶೇಷ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.  ಈ ಕುರಿತು ಹೇಳಿಕೆ ನೀಡಿರುವ ಅವರು,  ಹೋಳಿ  ಉತ್ಸವ ಮತ್ತು ಮುಂಬರುವ ಬೇಸಿಗೆ ಹಂಗಾಮು  ಸಮಯದಲ್ಲಿ ಹೆಚ್ಚುವರಿ ಜನದಟ್ಟಣೆಯನ್ನು ನಿಯಂತ್ರಿಸಲು ದಕ್ಷಿಣ ಮಧ್ಯ ರೈಲ್ವೆ ( ಎಸ್ಸಿಆರ್ ) ಯು ಸೋಲಾಪುರ್-ಅನಕಾಪಲ್ಲೆ ಸಂಪರ್ಕಿಸುವ ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಿಸಿದೆ, ಸೌಕರ್ಯಮಯ ಕೋಚ್ ಸೌಲಭ್ಯಗಳೊಂದಿಗೆ. ಪ್ರಯಾಣಿಕರಿಗೆ ತಮ್ಮ ಪ್ರಯಾಣವನ್ನು ಮುಂಚಿತವಾಗಿ ಕಾಯ್ದಿರಿಸಲು  ಮತ್ತು ಸುಗಮ ಹಾಗೂ ಅನುಕೂಲಕರ ಪ್ರಯಾಣ ಅನುಭವಕ್ಕಾಗಿ ಈ ಹೆಚ್ಚುವರಿ ಸೇವೆಗಳನ್ನು ಒದಗಿಸಲಾಗಿದ್ದು, ಸದುಪಯೋಗಪಡಿಸಿಕೊಳ್ಳಲು ಕೋರಿದೆ ಎಂದು ಹೇಳಿದ್ದಾರೆ.  ರೈಲು ಸಂಖ್ಯೆ 01477/ 01478 ಸೊಲಾಪುರ್ - ಅನಕಪಲ್ಲೆ - ಸೊಲಾಪುರ್ ವಿಶೇಷ ರೈಲುಗಳು  ವಿಜಯವಾಡಾ ಮೂಲಕ  ಸಂಚರಿಸಲಿದ್ದು ಒಟ್ಟು 38 ಸೇವೆಗಳನ್ನು ಒದಗಿಸಲಿವೆ. ಪ್ರತಿ ಶುಕ್ರವಾರ ಸೋಲಾಪೂರ-ಅನಾಕಪಲ್ಲೆ (01477 ಸಂಖ್ಯೆಯ ) ರೈಲು ಮಾರ್ಚ್ 6 ರಿಂದ ಪ್ರಾರಂಭವಾಗಿ ಜುಲೈ 10 ರವರೆಗೆ  19 ಸೇವೆಗಳನ್ನು ಒದಗಿಸಲಿದೆ. ಅದೇರೀತಿ ಪ್ರತಿ  ಶನಿವಾರ ಅನಾಕಪಲ್ಲೆ- ಸೋಲಾಪೂರ ( ...
Image
  ಕರ್ನಾಟಕ ರಾಜ್ಯ ಕೈಗಾರಿಕಾ, ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಿಂದ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ:                        ಶೇ.31ರಷ್ಟು ಕಾಮಗಾರಿ ಪೂರ್ಣ; ಒಂದುವರೆ ವರ್ಷದಲ್ಲಿ ಸಂಪೂರ್ಣ -ನಂಜಯ್ಯನಮಠ ಜಯ ಧ್ವಜ ನ್ಯೂಸ್ ,ರಾಯಚೂರು, ಫೆ. 13 -  ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ಜಿ.ನಂಜಯ್ಯನಮಠ ಅವರು ಇಂದು ರಾಯಚೂರಿನ ಹೊರವಲಯದ ಯರಮರಸ್ ಬಳಿಯ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ 322 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯು ಈಗಾಗಲೇ ಶೇ.31ರಷ್ಟು ಪೂರ್ಣವಾಗಿದೆ. ಬರುವ ಎರಡೂವರೆ ತಿಂಗಳಲ್ಲಿ ರನ್ ವೇ ಕಾಮಗಾರಿಯು ಪೂರ್ಣವಾಗಲಿದೆ. ಈ  ವರ್ಷದಲ್ಲಿ ಮಳೆ ನಿರಂತರವಾಗಿ ಸುರಿದ ಕಾರಣ ರನ್ ವೇ ಕಾಮಗಾರಿಯು ಮಂದಗತಿಯಲ್ಲಿ ಸಾಗಿತ್ತು ಎಂದು ತಿಳಿಸಿದರು. ಒಟ್ಟಾರೆ ಮುಂದಿನ ಒಂದೂವರೆ ವರ್ಷದ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದರು.  ಏಗನೂರು ಗ್ರಾಮದಲ್ಲಿ 30 ಮನೆಗಳು ಬೇರೆಡೆಗೆ ಶಿಫ್ಟ್ ಮಾಡಲು ಮೂರು ಎಕರೆ ಜಮೀನು ಹಾಗೂ ದಂಡ ಗ್ರಾಮದಲ್ಲಿನ 108 ಮನೆಗಳು ಶಿಫ್ಟ್ ...
Image
  ಕ್ಯಾನ್ಸರ್ ಬಗ್ಗೆ ಭಯ ಬೇಡ ಜಾಗೃತಿಯಿರಲಿ:                    ಮಣಿಪಾಲ್ ಆಸ್ಪತ್ರೆಯಿಂದ ಅತ್ಯಾಧುನಿಕ ಚಿಕಿತ್ಸೆ -ಡಾ. ವಿಕ್ರಂ ಮಯ್ಯ ಜಯ ಧ್ವಜ ನ್ಯೂಸ್ ,ರಾಯಚೂರು,ಫೆ.13- ಆಧುನಿಕ ತಂತ್ರಜ್ಞಾನ ಆಧಾರಿತ ಜೀವನಕ್ಕೆ ಜಗತ್ತು ಹೊಂದಿಕೊಳ್ಳುತ್ತಿರುವಂತೆ, ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲೂ ಹೊಸ ತಂತ್ರಜ್ಞಾನಗಳ ಬಳಕೆಯಾಗುತ್ತದೆ. ತಂತ್ರಜ್ಞಾನ,  ನಿಖರತೆ ಮತ್ತು ರೋಗಿಗಳ ಅಗತ್ಯತೆಗಳನ್ನು ಆಳವಾಗಿ ಅರ್ಥೈಸಿಕೊಳ್ಳುವ ಮೂಲಕ  ಗುಣಮಟ್ಟದ ಚಿಕಿತ್ಸೆಗೆ ಸಹಕಾರಿಯಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ಯಲಹಂಕದ ರೇಡಿಯೇಷನ್  ಆಂಕಾಲಜಿ ವಿಭಾಗದ ಪ್ರಮುಖ ಸಲಹೆಗಾರ ಡಾ. ವಿಕ್ರಮ್ ಮಯ್ಯ ಮತ್ತು ಸರ್ಜಿಕಲ್ ಆಂಕಾಲಜಿ ವಿಭಾಗದ ಸಲಹೆಗಾರ ಡಾ. ಆರನ್ ಫರ್ನಾಂಡಿಸ್ ಹೇಳಿದರು ಅವರಿಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಸಮಗ್ರ ಮತ್ತು ರೋಗಿಯನ್ನು ಕೇಂದ್ರೀಕರಿಸಿದ ಕ್ಯಾನ್ಸರ್ ಆರೈಕೆಯ ಹೊಸ ತಂತ್ರಜ್ಞಾನದ ಬಗ್ಗೆ   “ಕ್ಯಾನ್ಸರ್ ಆರೈಕೆ ಮತ್ತು ಚಿಕಿತ್ಸೆಯಲ್ಲಿ ಹೊಸ ದಿಕ್ಕುಗಳು” ಎಂಬುದರ ಬಗ್ಗೆ ಮಾತನಾಡಿದರು. ನಮ್ಮ ರಾಜ್ಯ ಕ್ಯಾನ್ಸರ್ ಪೀಡಿತ 7ನೇ ಸ್ಥಾನದಲ್ಲಿದೆ ಎಂದು ಅವರು ರಾಜ್ಯ ದಲ್ಲಿ ಸಾಕ್ಷರತೆ ಪ್ರಮಾಣ ಉತ್ತಮವಾಗಿರುವುದು ರಿಂದ ಇಲ್ಲಿ ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವಿದೆ ಆದ್ದರಿಂದ ಬೇರೆ ರ...
Image
ಮಾತೋಶ್ರೀ ತಪೋವನದಲ್ಲಿ ಸ್ವಾನುಭಾವ ಶಿಬಿರ ಉದ್ಘಾಟ‌ನೆ:                                                  ನಮ್ಮೊಳಗಿನ ಅರಿವಿನ‌ ಕೊರತೆಯಿಂದ ಅಪಾಯಕಾರಿ ಕಡೆ ವಾಲಿದ್ದೇವೆ- ಪ್ರೊ.ಶಿವಾನಂದ‌ ಕೆಳಗಿನಮನಿ ಜಯ ಧ್ವಜ ನ್ಯೂಸ್ ,ರಾಯಚೂರು,ಫೆ.12-  ಇಂದು ನಮ್ಮೊಳಗಿನ ಅರಿವಿನ‌ ಕೊರತೆಯಿಂದ ತಂತ್ರಜ್ಞಾನದ ಪ್ರಭಾವದಿಂದ ಅಪಾಯಕಾರಿ ಕಡೆಗೆ ವಾಲಿದ್ದೇವೆ ಎಂದು ರಾಯಚೂರಿನ ಮಹರ್ಷಿ ವಾಲ್ಮಿಕಿ ವಿವಿಯ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು. ನಗರದ ಹೊರವಲಯದ ಮಾತೋಶ್ರೀ ತಪೋವನದ ಬಸವ ಕಲ್ಯಾಣ ಮಂಟಪದಲ್ಲಿ ಮಾತೋಶ್ರೀ ಶ್ರೀ ನೀಲಮ್ಮ ತಾಯಿಯವರ 24 ನೇ ಪುಣ್ಯಸ್ಮರಣೆ ಹಾಗೂ ಡಬ್ಬೇರು ಮಡುವಿನ  ಪರಮಪೂಜ್ಯ ಸದ್ಗುರು ವಿದ್ಯಾನಂದ ಶರಣರ ಸ್ಮರಣೆ ನಿಮಿತ್ತ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಸೇವಾ ಪ್ರತಿಷ್ಠಾನ ಸಹಯೋ ಗದಲ್ಲಿ ಸ್ವಾನುಭಾವ ಶಿಬಿರ ಉದ್ಘಾಟಿಸಿ ಮಾತನಾಡಿದರು.  ಇವತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯನ ವಿಚಾರ ಅರಿಯಲು ಎಐ ತಂತ್ರಜ್ಞಾನಕ್ಕೆ ಅವಲಂಬನೆ ಹೆಚ್ಚಿದ್ದ ರಿಂದ ನಮ್ಮ ಬದುಕು ಅಪಾಯಕಾರಿಯತ್ತ ಜಾರಿದೆ ಎಂದು ಕಳವಳ ವ್ಯಕ್ತಪಡಿಸಿದರು. ಆಂತರಿಕವಾಗಿ ಶೋಧಿಸಿ ಕೊಳ್ಳುವುದು ಬಹಳ ಕಷ್ಟದ ಕೆಲಸ ಇನ್ನೊಬ್ಬರ ಬಗ್ಗೆ ಮಾತನಾಡುವುದೆ  ಹೆ...
Image
  ದಾನಿಗಳಿಂದ 2.5 ಕೋಟಿ ರೂ. ಧನ ಸಹಾಯ ಒಡಂಬಡಿಕೆ-ಎಸ್.ರಘುನಾಥ ಜಯ ಧ್ವಜ ನ್ಯೂಸ್ , ರಾಯಚೂರು, ಫೆ.12- ಅಖಿಲ ಕರ್ನಾಟಕ ಬ್ರಾಹ್ಮಣ  ಮಹಾ ಸಭಾ ಅದ್ಯಕ್ಷರಾದ ಶ್ರೀ ಎಸ್ ರಘುನಾಥ ಅವರು ಶ್ರೀ ವೇದಾಂತ್ ಸಮೀರ್ ರಾವ್ ಅವರ ತಾಯಿ ಶ್ರೀಮತಿ ಪ್ರಭಾ ನಾಗರಾಜನ್ ಅವರ ಜೊತೆ ವಿದ್ಯಾರ್ಥಿ ವೇತನ, ವೃದ್ಧಾಶ್ರಮಕ್ಕೆ ಸಹಾಯ ನೀಡುವ ಬಗ್ಗೆ ಮತ್ತು ವೇದ ಪಾಠಶಾಲೆಗೆ ಸಹಾಯ ಮಾಡುವ ಒಡಂಬಡಿಕೆ ಮಾಡಿಕೊಳ್ಳಲಾಯಿತು.  ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಮತ್ತು ಸಾತಿ ಚಾರಿಟೇಬಲ್ ಫಂಡ್ ಹೆಸರಿನಲ್ಲಿ ಈ ಕಾರ್ಯಕ್ರಮ ಮಾಡಲು ಒಪ್ಪಂದ ಮಾಡಲಾಗಿದೆ. 90 ವರ್ಷದ ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಹಾಗೂ ಅವರ ಸೊಸೆ ಶ್ರೀಮತಿ ಪ್ರಭಾ ನಾಗರಾಜನ್ ಅವರು ಅಧ್ಯಕ್ಷರಾದ ಎಸ್ ರಘುನಾಥ್ ಜೊತೆಯಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಚರ್ಚಿಸಿ ಈ ಕಾರ್ಯಕ್ರಮ ಜಾರಿಗೆ ಬರುವಂತೆ ನಮ್ಮ ಸಮಾಜದ ಬಡವರಿಗೆ ಅನುಕೂಲವಾಗುವ ಚಿಂತನೆ  ನಡೆಸಿ ಅವರು ಕಷ್ಟಪಟ್ಟು ದುಡಿದಿರುವ 2.5 ಕೋಟಿ ರೂ. ಹಣವನ್ನು ಬಸವನಗುಡಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಮತ್ತು ವೇದಾಂತ ಸಮೀರ್ ರಾವ್ ಅವರ ಜಂಟಿ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಂದಿನಿಂದ ಇಡಲಾಗುವಂತೆ ಒಪ್ಪಂದ ಮಾಡಲಾಯಿತು. ಈ ದೊಡ್ಡ ಮೊತ್ತದಿಂದ ಅಂದಾಜು 15 ಲಕ್ಷ ವಾರ್ಷಿಕ ಬಡ್ಡಿ ಬರಲಿದ್ದು ಬ್ರಿಗೇಡಿಯರ್ ಎಸ್ ವಿ ಪ್ರೇಮನಾಥ್ ಉದ್ದೇಶಿಸಿರುವ ಯೋಜನೆಯನ್ನು ಅಖ...
Image
  25 ನೇಯ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್:                              ಶ್ರೀಸೂಗೂರೇಶ್ವರ ಕರಾಟೆ ಸಂಸ್ಥೆಯ ನೇತೃತ್ವ ಜಯ ಧ್ವಜ ನ್ಯೂಸ್ , ರಾಯಚೂರು, ಫೆ.10- ಕರಾಟೆ ಒಂದು ಸಂಪೂರ್ಣ ಕಲಾ ಪ್ರಕಾರವಾಗಿದ್ದು, ಆತ್ಮರಕ್ಷಣೆ, ದೈಹಿಕ ಮತ್ತು ಮಾನಸಿಕ ತರಬೇತಿ, ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಒದಗಿಸುತ್ತದೆ ಹೃದಯ ಸಂಬಂಧಿ ಫಿಟ್ನೆಸ್, ನಮ್ಯತೆ ಮತ್ತು ಒಟ್ಟಾರೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಸೂಗೂರೇಶ್ವರ ಕರಾಟೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಖ್ಯ ತರಬೇತಿದಾರದ ಸೂಗಪ್ಪ. ಎನ್ ಹೇಳಿದರು. ಅವರು ಫೆ.8 ಭಾನುವಾರ  ರಂದು ತೆಲಂಗಾಣ ರಾಜ್ಯ, ಮಕ್ತಲ್ ಜಿಲ್ಲಾ, ನಾರಾಯಣಪೇಟ್ ನ ವೆಂಕಟೇಶ್ವರ ಫಂಕ್ಷನ್ ಹಾಲ್  ನಲ್ಲಿ ಡ್ರ್ಯಾಗನ್ ಶೋಟೊಕಾನ್ ಕರಾಟೆ ಡೋ ಸ್ಪೋರ್ಟ್ ಸಹಯೋಗದಲ್ಲಿ ಆಯೋಜಿಸಿದ 25 ನೇಯ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಭಾಗವಹಿಸಿ ಮಾತನಾಡಿ ಓಪನ್ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಕಟಾ ವಿಭಾಗದಲ್ಲಿ ಒಟ್ಟು   18 ಸ್ಪರ್ಧಿಗಳು ವಿಜೇತರಾದರು 1 ನೇ ಸ್ಥಾನಕ್ಕೆ 09 ಸ್ಪರ್ಧಿಗಳು, 2 ನೇ ಸ್ಥಾನಕ್ಕೆ 06 ಸ್ಪರ್ಧಿಗಳು, 3 ನೇ ಸ್ಥಾನಕ್ಕೆ 03 ಸ್ಪರ್ಧಿಗಳು ವಿಜೇತರಾದರು, ಒಟ್ಟು 05  ಗ್ರ್ಯಾಂಡ್ ಚಾಂಪಿಯನ ಶಿಪ್ ಪದಕ...