Posts

Image
  ರಾಯಚೂರು ನಗರ ಸ್ವಚ್ಚತೆಗೆ ಸಾರ್ವಜನಿಕರು ಕೈ ಜೋಡಿಸಬೇಕು- ಜುಬಿನ್ ಮೋಹಪಾತ್ರ ಜಯ ಧ್ವಜ ನ್ಯೂಸ್ ,ರಾಯಚೂರು. ಜು. 14- ರಾಯಚೂರು ನಗರ ಸ್ವಚ್ಚತೆಗೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮಿಸಿದರೆ ಸಾಲದು ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ ಹೇಳಿದರು.  ಅವರು ಮಂಗಳವಾರ ರಾಯಚೂರು ನಗರದ ಲಿಂಗಸೂಗುರ ರಸ್ತೆಯಲ್ಲಿ ರಸ್ತೆ ಸ್ವಚ್ಚಗೊಳಿಸುವ ಎರಡು ಮೆಕ್ಯಾನಿಕಲ್ ವಾಹನಗಳ ಪ್ರಾತ್ಯಕ್ಷಿಕೆ ವೀಕ್ಷಣೆಯ ನಂತರ ಈ ಕುರಿತು ಮಾಹಿತಿ ನೀಡಿ ಮಾತನಾಡಿದರು. ರಾಯಚೂರು ಮಹಾನಗರ  ಪಾಲಿಕೆ ವ್ಯಾಪ್ತಿಯಲ್ಲಿ ಎರಡು ಮೆಕ್ಯಾನಿಕಲ್ ಸ್ವೀಫರ್ ವಾಹನಗಳನ್ನು ಕರೆಸಿ ಡೆಮೊ ಮಾಡಲಾಗಿದೆ ಈ ವಾಹನಗಳಿಂದ ಮಳೆಗಾಲದಲ್ಲಿ ಕಸವನ್ನು ತೆಗೆಯಲು ಅನುಕೂಲವಾಗಲಿದೆ.ರಾಯಚೂರು ನಗರದ ಜನಸಂಖ್ಯೆ ದಿನೆ- ದಿನೆ ಹೆಚ್ಚಾಗುತ್ತಿರುವುದರಿಂದ ಇಂತಹ ವಾಹನಗಳಿಂದ ಅನುಕೂಲವಾಗಲಿದೆ ಇವುಗಳ ಸಾಮರ್ಥ್ಯ ಮೂರುವರೆ ಕ್ಯೂಬಿಕ್ ಮೀಟರ್ ಇದೆ. ಪ್ರಭಾತ್ ಡಿಸೈನ್ ಮತ್ತು ಚೆಲೆಂಜರ್ ಈ ಎರಡು ಕಂಪನಿಗಳು ಭಾಗವಹಿಸಿ ನಮಗೆ ಡೊಮೊ ತೋರಿಸಿವೆ. ಡೆಮೆ ಫಲಿತಾಂಶದ ನಂತರ ಒಂದು ತಿಂಗಳ ನಂತರ ಮತ್ತೊಂದು ಈ ವಾಹನ ತರೆಸುತ್ತೆವೆ ಎಂದರು. ಈ ಹಿಂದೆ ತಾವು ನೋಡಿದ್ದಿರಿ ನಮ್ಮ ಪೌರ ಕಾರ್ಮಿಕರು ಪ್ರತಿದಿನ 40 ರಿಂದ 60 ಜನರು ನಗರದಲ್ಲಿ ಕಸ ಗುಡಿಸಿ ಧೂಳು ಎತ್ತುತ್ತಿದ್ದರು. ಅದನ್ನು ಬೇರೆಕಡೆ ಸಾಗಿಸದೆ ಅಲ್ಲೆ ಒಂ...
Image
  ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ: ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ- ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಜಯ ಧ್ವಜ ನ್ಯೂಸ್ ,ರಾಯಚೂರು ಜು. 13- ಜಿಲ್ಲೆಯಲ್ಲಿ ಕುಡಿಯುವ ನೀರು, ಘನತ್ಯಾಜ ನಿರ್ವಹಣೆ, ಕೆರೆಗಳ ಸಂರಕ್ಷಣೆ ಸೇರಿದಂತೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲೆಯ ಅಧಿಕಾರಿಗಳು ಶ್ರಮಿಸಬೇಕೆಂದು ಕರ್ನಾಟಕ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜುಲೈ 13ರ ಸೋಮವಾರ ದಂದು ರಾಯಚೂರು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು. ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಾಲಕಾಲಕ್ಕೆ ಒದಗಿಸಲು ಸ್ವತ: ಸುಪ್ರೀಂ ಕೋರ್ಟ್ ನಿರ್ದೇಶನವಿದ್ದು, ಸಂಬಂಧಿಸಿದ ಅಧಿಕಾರಿಗಳು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಒದಗಿಸುವ ಮೂಲಕ ಜನರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ವಾತಾವರಣವನ್ನು ನಿರ್ಮಾಣ ಮಾಡಲು ಅಧಿಕಾರಿಗಳು ಶ್ರಮಿಸಬೇಕು. ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಕಾಲಕಾಲಕ್ಕೆ ಒದಗಿಸಬೇಕೆಂದರು. ಜಿಲ್ಲೆಯಲ್ಲಿ ಮರಳುಗಾರಿಕೆ, ಅರಣ್ಯ ಸಂರಕ್ಷಣೆ ಹಾಗೂ ಗ್ರಾಮೀಣ ಭಾಗದ ಅಂಗಡಿ ಹಾಗೂ ಪಾನ್ ಬೀಡಾ ಅಂಗಡಿಗಳಲ್ಲಿ ಮದ್ಯ ಮಾರಾಟದ ಕುರಿತು ನಿಗಾ ನಿರ್ವಹಿಸಬೇಕು. ಆಕ್ರಮ ಮದ್...
Image
ಮೇಘಾಲಯ ರಾಜ್ಯಪಾಲರಿಂದ ಕುಲಪತಿ ಶಿವಾನಂದ ಕೆಳಗಿನಮನಿ ಇವರಿಗೆ ಪ್ರಶಸ್ತಿ ಪ್ರದಾನ .   ಜಯ ಧ್ವಜ ನ್ಯೂಸ್ ,ರಾಯಚೂರು ಜು. 13- ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನ ಮನಿ ಇವರಿಗೆ ಮೇಘಾಲಯದ ಶಿಲಾಂಗಿನ ಲೋಕಭವನದಲ್ಲಿ  ರವಿವಾರ ಸಂಜೆ    ನಡೆದ  ರಾಷ್ಟ್ರಮಟ್ಟದ  ಹೆಮ್ಮೆಯ ಸಾಧಕರು ಪ್ರಶಸ್ತಿಯನ್ನು ಮೇಘಾಲಯ ರಾಜ್ಯಪಾಲರಾದ ಗೌರವಾನ್ವಿತ ಸಿ ಎಚ್ ವಿಜಯಶಂಕರ್ ಪ್ರದಾನ ಮಾಡಿದರು.  ರಾಯಚೂರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಒಂದು ವರ್ಷವಾಗಿದ್ದು ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶೈಕ್ಷಣಿಕವಾಗಿ ಆಡಳಿತಾತ್ಮಕವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಗೌರವಾನ್ವಿತ ಕುಲಪತಿಗಳಾದ ಶಿವಾನಂದ ಕೆಳಗಿನಮನಿ ಈ ಪ್ರಶಸ್ತಿ ಲಭಿಸಿದ್ದು ಅವರ ಅಪಾರ ಅಭಿಮಾನಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಖುಷಿ ತಂದಿದೆ.  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೇಘಾಲಯ ರಾಜ್ಯ ಸರ್ಕಾರದ ವಿಶೇಷ ಅಧಿಕಾರಿಗಳು ಮತ್ತು ವಿಶ್ವವಾಣಿ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ವಿಶ್ವೇಶ್ವರಭಟ್ ಇನ್ನಿತರರಿದ್ದರು .
Image
    ಪ್ರೊ.ಶಿವಾನಂದ ಕೆಳಗಿನಮನಿರವರಿಗೆ ಮೇಘಾಲಯ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ ಜಯ ಧ್ವಜ ನ್ಯೂಸ್ , ರಾಯಚೂರು,ಜು.13- ಜನಶಕ್ತಿ ವಿಶ್ವಸ್ಥ ಮಂಡಳಿ ಲೋಕ ಧ್ವನಿ ‘ನಮ್ಮ ಹೆಮ್ಮೆಯ ಸಾಧಕರು ಪ್ರಶಸ್ತಿ’ಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಆಯ್ಕೆಯಾಗಿದ್ದು, ಇದೇ ಜುಲೈ ೧೧ ರಂದು ಶನಿವಾರ ಶಿಲ್ಲಾಂಗ್‌ನ ಲೋಕಭವನದಲ್ಲಿ ಹಮ್ಮಿಕೊಂಡಿದ್ದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲರಾದ ಸಿ.ಎಚ್.ವಿಜಯಶಂಕರ್ ಅವರು ಕುಲಪತಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರಿಗೆ ಪ್ರಶಸ್ತಿ ಒಲಿದಿರುವುದಕ್ಕೆ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಚನ್ನಪ್ಪ, ಕುಲಸಚಿವರು(ಮೌಲ್ಯಮಾಪನ) ಪ್ರೊ.ಜ್ಯೋತಿ ಧಮ್ಮ ಪ್ರಕಾಶ್, ಹಣಕಾಸು ಅಧಿಕಾರಿ, ಉಪಕುಲಸಚಿವರು, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರು, ವಿವಿಧ ವಿಭಾಗಗಳ ನಿಕಾಯ ಡೀನರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ .
Image
  ಅಭಿಮಾನಿಗಳ ಆಶೀರ್ವಾದ ಸಾಕೆಂದು ಪದ್ಮಭೂಷಣ ತಿರಸ್ಕಾರ ಮಾಡಿದ ಶ್ರೇಷ್ಠ ಗಾಯಕಿ ಎಸ್ ಜಾನಕಿ.   ಜಯ ಧ್ವಜ ನ್ಯೂಸ್ ,ರಾಯಚೂರು ಜು.12-   ವಿವಿಧ ಭಾಷೆಗಳಲ್ಲಿ ಸುಮಾರು 40,000ಕ್ಕೂ ಅಧಿಕ ಗೀತೆಗಳನ್ನು ಹಾಡಿ ಕನ್ನಡದಲ್ಲಿ 3000ಕ್ಕೂ ಅಧಿಕ ಗೀತೆಗಳಿಗೆ ಜೀವಕಳೆ ತಂದು ಎಲ್ಲರ ಹೃದಯದಲ್ಲಿರುವ ಗಾನಕೋಗಿಲೆ ಎಸ್ ಜಾನಕಿರವರು ನನಗೆ ಅಭಿಮಾನಿಗಳೇ ಸಾಕು, ಅವರ ಆಶೀರ್ವಾದ ಒಂದೇ ಸಾಕು ಎಂದು ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕಾರ ಮಾಡಿದ ಗಾಯಕಿ ಎಲ್ಲರಿಗೂ ಸ್ಪೂರ್ತಿದಾಯಕರಾಗಿದ್ದರು ಎಂದು ಕಲಾ ಸಂಕುಲ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಮಾರುತಿ ಬಡಿಗೇರ್ ಅಭಿಪ್ರಾಯಪಟ್ಟರು.  ಅವರು ರವಿವಾರ ಸಂಜೆ ರಾಯಚೂರು ನಗರದ ಮನರಂಜನ ಕೇಂದ್ರದಲ್ಲಿ ಆಕಾಶ್ ಸಿಂಗಿಂಗ್ ಕರೋಕೆ ಸ್ಟುಡಿಯೋದವರು ಹಮ್ಮಿಕೊಂಡಿದ್ದ ಎಸ್ ಜಾನಕಿ ಅಮ್ಮನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆಂಧ್ರದಲ್ಲಿ ಜನಿಸಿದರೂ, ಕರ್ನಾಟಕದ ಮೈಸೂರಿನಲ್ಲಿ ಕೊನೆ ಉಸಿರೆಳೆದು ಮೈಸೂರಿನಲ್ಲಿ ಅಂತ್ಯಕ್ರಿಯೆ ಆಗಿರೋದು ಅವರು ಕನ್ನಡ ನಾಡಿನ ಮೇಲೆ ಇಟ್ಟ ಒಂದು ಗೌರವ ಕನ್ನಡಿಗರು ಅವರಿಗೆ ಕೊಟ್ಟಂತ ಗೌರವ ಅಭಿಮಾನ ಅವಿಸ್ಮರಣೆಯವೆಂದರು. 88 ವರ್ಷದವರೆಗೆ ಇದ್ದ ಜಾನಕಿ ಅಮ್ಮ ಅವರಿಗೆ ಸಂಗೀತವೇ ಒಂದು ರೋಗ ನಿರೋಧಕ ಶಕ್ತಿಯಾಗಿತ್ತು. ಪ್ರೇಮಗೀತೆಗಳು, ವಿರಹ ಗೀತೆಗಳು, ಭಕ್ತಿ ಗೀತೆಗಳು , ಜಾನಪದ ಗೀತೆಗಳು ಹಲವಾರು ಗೀತೆಗಳನ್ನು ಹಾಡಿ  ಜನಮನ ಗೆದ್ದರು. ರೇಡಿಯೋ ಮತ್ತ...
Image
  ಮಾಜಿ ಶಾಸಕ ಸೈಯದ್ ಯಾಸೀನ್ ಅವರ ನಿಧನಕ್ಕೆ  ಗೃಹ ಸಚಿವ ಪ್ರಿಯಾಂಕ ಖರ್ಗೆ , ಮಾಜಿ ಸಚಿವ ಎನ್.ಎಸ್. ಬೋಸರಾಜು  ಶ್ರದ್ಧಾಂಜಲಿ: ಸೈಯದ್ ಯಾಸೀನ್ ಅವರ ಕುಟುಂಬಕ್ಕೆ ಹಾಗೂ ಬೆಂಬಲಿಗರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ- ಎನ್ಎಸ್ ಬೋಸರಾಜು ಜಯ ಧ್ವಜ ನ್ಯೂಸ್ , ರಾಯಚೂರು, ಜು.12- ಮಾಜಿ ಶಾಸಕ ಸೈಯದ್ ಯಾಸೀನ್ ಅವರ ನಿಧನಕ್ಕೆ ಮಾಜಿ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯರಾದ ಎನ್.ಎಸ್. ಬೋಸರಾಜು ಅವರು ಗೃಹ ಸಚಿವ ಪ್ರಿಯಾಂಕ ಖರ್ಗೆ, ಲೋಕಸಭಾ ಸದಸ್ಯರಾದ ಜಿ ಕುಮಾರ ನಾಯಕ ಅವರೊಂದಿಗೆ ಭೇಟಿ ನೀಡಿ ತೀವ್ರ ಸಂತಾಪ ವ್ಯಕ್ತಪಡಿಸಿ ಅಂತಿಮ ದರ್ಶನ ಪಡೆದರು. ಸೈಯದ್ ಯಾಸೀನ್  ಅವರ ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು. ಬಳಿಕ ಯಾಸೀನ್ ಅವರ ಕುಟುಂಬದ ಸದಸ್ಯರಿಗೆ, ಅವರ ಅಭಿಮಾನಿಗಳಿಗೆ ಸಾಂತ್ವನ ಹೇಳಿ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದರು. ಸೈಯದ್ ಯಾಸೀನ್ ಅವರು ಜನಪರ ನಾಯಕನಾಗಿ ಸಾರ್ವಜನಿಕ ಜೀವನದಲ್ಲಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿದೆ. ಅವರ ಅಗಲಿಕೆಯು ಜಿಲ್ಲೆಯ ರಾಜಕೀಯ ಹಾಗೂ ಸಾರ್ವಜನಿಕ ಜೀವನಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎನ್.ಎಸ್. ಬೋಸರಾಜು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಯವಂತರಾವ್ ಪತಂಗೆ, ಚಂದ್ರಶೇಖರ್ ನಾಯಕ್ ಸೇರಿ ಅನೇಕರು ಉಪಸ್ತಿತರಿದ್ದರು.
Image
ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ.                                              ಜಯ ಧ್ವಜ ನ್ಯೂಸ್ ,  ರಾಯಚೂರು,ಜು.12-                           ಮಾಜಿ ಶಾಸಕ ಸೈಯದ ಯಾಸೀನ(74 )ಅವರು  ಅನಾರೋಗ್ಯದ ಕಾರಣ ಇಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಸೈಯದ ಯಾಸೀನ ಅವರು ಪತ್ನಿ, ನಾಲ್ಕು ಜನ ಗಂಡು ಮಕ್ಕಳು ಹಾಗೂ ಅಪಾರ‌ ಬಂದು, ಬಳಗ, ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಸೈಯದ ಯಾಸೀನ ಅವರು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ ಅವರ ಅಳಿಯರಾಗಿದ್ದು, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಆರು ಸಲ‌ ಸ್ಪರ್ಧಿಸಿದ್ದರು, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಅಯ್ಕೆಯಾಗಿದ್ದರು, 1999 ಹಾಗೂ 2008ರಲ್ಲಿ ಶಾಸಕರಾಗಿ ಅಯ್ಕೆಯಾಗಿದ್ದರು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ‌ಸಲ್ಲಿಸಿದ್ದರು, ಕೆಪಿಸಿಸಿಯ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷರಾಗಿ ಪಕ್ಷ ಸಂಘಟನೆಯ ಜವಾಬ್ದಾರಿಯು ಸಹ ನಿರ್ವಹಿಸಿದ್ದರು. ಅವರ ಅಂತ್ಯಕ್ರಿಯೆ   ನಗರದ ಕಮಲಿವಾಲೆ‌ ಬಾಬಾ ಕಬರಸ್ಥಾನದಲ್ಲಿ ನಾಳೆ ಮಧ್...