ಪ್ರತಿಭಾ ಸುಗಮಸಂಗೀತ ಸಂಸ್ಥೆ ಕಾರ್ಯ ಶ್ಲಾಘನೀಯ -ಎ. ಪಾಪಾರೆಡ್ಡಿ.


Inbox
ಪ್ರತಿಭಾ ಸುಗಮಸಂಗೀತ ಸಂಸ್ಥೆ  ರಾಯಚೂರು ಇದರ ಕಾರ್ಯ ಶ್ಲಾಘನೀಯ
       _ಎ. ಪಾಪಾರೆಡ್ಡಿ.

        ರಾಯಚೂರಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುವ ಮೂಲಕ ಹಾಗು ಸಂಗೀತದ ಕಲೆಯನ್ನು ಯುವಕರಲ್ಲಿ ಬೆಳೆಸುವ ಕಾರ್ಯವನ್ನು ನಗರದ ಪ್ರತಿಭಾ ಸುಗಮಸಂಗೀತ ಸಂಸ್ಥೆ ಅತ್ಯುತ್ತಮವಾದ ಕಾರ್ಯವನ್ನು ಮಾಡುತ್ತಿದೆ ಇದರ ಸೇವೆ ಶ್ಲಾಘನೀಯ ಎಂದು ರಾಯಚೂರಿನ ಮಾಜಿ ಶಾಸಕರಾದ  ಎ.ಪಾಪ ರೆಡ್ಡಿ ಅವರು ಹೇಳಿದರು.
   ಪ್ರತಿಭಾ ಸುಗಮಸಂಗೀತ ಸಂಸ್ಥೆಯು ಸಂಗೀತ ಕ್ಷೇತ್ರವಲ್ಲದೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ  ರಾಯಚೂರಿನ  ಸಹೃದಯರಿಗೆ ಒಳ್ಳೆಯ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುತ್ತದೆ ಹಾಗೂಶ್ರೀ ಡಾ. ಶರಣಪ್ಪ ಗೋನಾಳ ಇವರ ತಂದೆ ತಾಯಿಯ ಸ್ಮರಣಾರ್ಥ ಮಾಡುವ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾರೆಂದು ಅವರು ಹೇಳಿದರು.
   ನಗರದ      ವಿದ್ಯಾನಗರದಲ್ಲಿರುವ ಶ್ರೀ ಶಿವ ಪಾರ್ವತಿ ಗಣೇಶ ಮಂದಿರ ರಾಯಚೂರ ನಲ್ಲಿ ಪ್ರತಿಭಾ ಸುಗಮಸಂಗೀತ ಸಂಸ್ಥೆಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇದೇ 23ರಂದು ಜರುಗಿದ ಸುಗಮ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ಷ.ಬೃ. ಅಭಿನವ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರಪೇಟೆ ಮಠ ರಾಯಚೂರು ಇವರು ದಿವ್ಯ ಸಾನಿಧ್ಯವನ್ನು ವಹಿಸಿ ಡಾಕ್ಟರ್. ಶರಣಪ್ಪ ಗೋನಾಳ್ ಅವರ ಸಾಹಿತ್ಯಕ ,ಸಾಂಸ್ಕೃತಿಕ, ಸಂಗೀತ ವಿಭಾಗದಲ್ಲಿ ಸಾಧನೆಯನ್ನು ಮಾಡಿ ನಾಡಿನಾದ್ಯಂತ ರಾಯಚೂರಿನ ಕೀರ್ತಿಯನ್ನು ಬೆಳಗುವುದರ ಜೊತೆಗೆ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ ಇಂಥ ಸಾಧಕರು ಸಂಗೀತ ಸಂಸ್ಥೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು  ತಮ್ಮ ಆಶೀರ್ವಚನದಲ್ಲಿ ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಬಸವರಾಜ್ ಪಲ್ಯದ ಅಧ್ಯಕ್ಷರು ಶಿವ ಪಾರ್ವತಿ ಗಣಪತಿ ದೇವಸ್ಥಾನ ಇವರು ಮಾತನಾಡಿ ಸಂಗೀತ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ಸಿಗುವುದರ ಜೊತೆಗೆ ಆರೋಗ್ಯವಂತ ಸಮಾಜ ಸೃಷ್ಟಿಸಿ ದಂತಾಗುತ್ತದೆ ಎಂದು ಹೇಳಿದರು.
  ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಬಾಬು ಬಂಡಾರಿಗಲ್, ಹಿರಿಯ ಸಂಗೀತಗಾರರಾದ ಶ್ರೀ ಕರಿಯಪ್ಪ ಮಾಸ್ಟರ್,  ಶಿವ-ಪಾರ್ವತಿ ದೇವಸ್ಥಾನದ ಕಮಿಟಿಯ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಬೋರಡಿ ಹೊಸಪೇಟೆ ದೇವಸ್ಥಾನ ಸಮಿತಿಯ ಸದಸ್ಯರಾದ ಎಲ್. ಹೊರಪೇಟಿ, ಮಾದೇವಪ್ಪ ಏಗನೂರ್, ಶ್ರೀ ನಾಮದೇವ್, ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
     ಕಾರ್ಯಕ್ರಮದಲ್ಲಿ ಪ್ರತಿಭಾ ಸುಗಮ ಸಂಗೀತ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಶರಣಪ್ಪ ಗೋನಾಳ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
    ಸುಗಮ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರತಿಭಾ ಗೋನಾಳ, ಶ್ರೀಮತಿ ಮಹಾಲಕ್ಷ್ಮಿ, ಕುಮಾರಿ ಪ್ರಭಾ ಕಂಬಾರ್, ಶ್ರೀಮತಿ ಜಾನ್ಸಿರಾಣಿ, ಶ್ರೀ ರಾಮ ಗೌಡ ಪಾಟೀಲ್ ಅವರು ಭಾವಗೀತೆ, ಭಕ್ತಿಗೀತೆ, ಜನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
    ವಾದ್ಯಗಾರ ರಾಗಿ ಶ್ರೀ ವೀರೇಂದ್ರ , ಸುಧಾಕರ್ ಅಸ್ಕಿಹಾಳ, ಹಾಗೂ ಸೇತುಮಾಧವ ಕೆರೂರ್ ಇವರು ಭಾಗವಹಿಸಿದ್ದರು.
 ಈ ಸಂದರ್ಭದಲ್ಲಿ ಶ್ರೇಯಸ್ ಜೋಷಿಯವರ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಮನಸೆಳೆಯಿತು.
    ಕಾರ್ಯಕ್ರಮವು ಶ್ರೀ ರಾಮ ಗೌಡ ಪಾಟೀಲ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ಶ್ರೀಮತಿ ಪ್ರತಿಭಾ ಗೋನಾಳ ಸ್ವಾಗತಿಸಿದರು ಶ್ರೀಮುರಳಿ ಕುಲಕರ್ಣಿಯವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Reply
Reply all
Forward
View Gmail in: Mobile | Older version | Desktop
© 2022 Google

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್