ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಮುದ್ರಾಧಾರಣೆ. ಜಯ ಧ್ವಜ ನ್ಯೂಸ್, ರಾಯಚೂರು,ಜು.17- ಉತ್ತರಾಧಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನಗರಕ್ಕೆ ದಿಗ್ವಿಜಯಗೈದರು. ಬೆಳಿಗ್ಗೆ ನಗರದ ಎನ್ ಜಿ ಓ ಕಾಲೋನಿ ವೆಂಕಟರಮಣ ದೇವಸ್ಥಾನದಲ್ಲಿ ಮುದ್ರಾ ಧಾರಣೆ ನೆರವೇರಿಸಿದರು. ಸರತಿ ಸಾಲಿನಲ್ಲಿ ನಿಂತು ಶಿಷ್ಯರು ಹಾಗೂ ಭಕ್ತರು ಮುದ್ರಾ ಪಡೆದರು. ನಂತರ ಶ್ರೀಪಾದಂಗಳವರು ನೆರೆದ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿದರು....
Popular posts from this blog
ನೆನಗುದಿಗೆ ಬಿದ್ದಿರುವ ಜಿಲ್ಲೆಯ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಿ- ಡಾ. ಬಾಬುರಾವ್ ಜಯ ಧ್ವಜ ನ್ಯೂಸ್,ರಾಯಚೂರು,ಮಾ.11- ಜಿಲ್ಲೆಯ ಪ್ರಮುಖ ರೈಲ್ವೆ ಯೋಜನೆಗಳಾದ ಗಿಣಿಗೇರಾ-ಮೆಹಬೂಬ್ ನಗರ ಮತ್ತು ಗದಗ-ವಾಡಿ ರೈಲ್ವೆ ಮಾರ್ಗವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರು ಪ್ರಯತ್ನಿಸಬೇಕು ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ. ಬಾಬುರಾವ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ರೈಲ್ವೆ ಸಚಿವರಾಗಿದ್ದವರು ತಮ್ಮ ರಾಜ್ಯಗಳಿಗೆ ಅನೇಕ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಅವುಗಳನ್ನು ಅನುಷ್ಠಾನಗೊಳಿಸಿದ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಮಹತ್ವದ ಖಾತೆಯನ್ನು ಹೊಂದಿರುವ ವಿ.ಸೋಮಣ್ಣನವರಿಗೆ ಈ ಒಂದು ಸುವರ್ಣಾವಕಾಶ ಸಿಕ್ಕಿದ್ದು ಅದನ್ನು ಅವರು ಸದುಪಯೋಗಪಡಿಸಿಕೊಂಡು ರಾಜ್ಯದಲ್ಲಿ ನೆನಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಿ ಜನಮನ್ನಣೆ ಗಳಿಸುವ ಸದಾವಕಾಶ ಇದೆ. ಒಳ್ಳೆ ರಾಜಕಾರಣಿ ಹಾಗು ಕ್ರಿಯಾಶೀಲ ಮಂತ್ರಿ ಎಂಬ ಖ್ಯಾತಿ ಗಳಿಸಿದ್ದಾರೆ ಹಾಗಾಗಿ ಸೋಮಣ್ಣನವರು ನಮ್ಮ ಭಾಗದಲ್ಲಿ 25 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಗಿಣಿಗೇರಾ- ಮಹೆಬೂಬ್ ನಗರ ಹಾಗೂ ಗದಗ-ವಾಡಿ ರೈಲು ಮಾರ್ಗಗಳಿಗೆ ವೇಗವನ್ನು ಕಲ್ಪಿಸಿ ತಮ್ಮ ಅಧಿಕಾರಾವಧಿಯಲ್ಲಿ ಪೂರ...
ಜಿಲ್ಲಾಡಳಿತದಿಂದ ಆದಿ ಗುರು ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ: ಯುವ ಪೀಳಿಗೆ ಶಂಕರಾಚಾರ್ಯರ ಬಗ್ಗೆ ಅರಿತುಕೊಳ್ಳಬೇಕು- ದತ್ತಾತ್ರೇಯ ಜೋಷಿ. ಜಯಧ್ವಜ ನ್ಯೂಸ್ ರಾಯಚೂರು,ಮೇ.2- ಇಂದಿನ ಯುವ ಪೀಳಿಗೆ ಆದಿ ಗುರು ಶ್ರೀ ಶಂಕರಾಚಾರ್ಯರ ಬಗ್ಗೆ ಅರಿತುಕೊಳ್ಳಬೇಕು ಎಂದು ದತ್ತಾತ್ರೇಯ ಪಂಡಿತ ಜೋಷಿ ಹೇಳಿದರು. ಅವರಿಂದು ಜಿಲ್ಲಾಡಳಿತ, ಜಿ.ಪಂ, ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಾರರಾಗಿ ಮಾತನಾಡಿದರು. 8ನೇ ಶತಮಾನದಲ್ಲಿ ವೈದಿಕ ಪರಂಪರೆ ಹಾಗೂ ಸನಾತನ ಹಿಂದೂ ಧರ್ಮದ ಉಳಿವಿಗಾಗಿ ದೇಶಾದ್ಯಂತ ಕಾಲ್ನಡಿಗೆಯಲ್ಲಿ ನಡೆದು ದೇಶದ ನಾಲ್ಕು ದಿಕ್ಕಿನಲ್ಲಿ ಚತುರಾಮ...

Comments
Post a Comment