ಲಿಂಗಸೂಗೂರು ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗುರುರಾಜ ಗೌಡೂರು, ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿ ಅವಿರೋಧ ಆಯ್ಕೆ

 ಲಿಂಗಸೂಗೂರು ತಾಲ್ಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗುರುರಾಜ ಗೌಡೂರು, ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿ ಅವಿರೋಧ ಆಯ್ಕೆ




ರಾಯಚೂರು,ಜೂ.29-  ಕಾರ್ಯನಿರತ ಪತ್ರಕರ್ತರ ಸಂಘದ ಲಿಂಗಸುಗೂರು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಜಿಲ್ಲಾಧ್ಯಾಕ್ಷ ಆರ್. ಗುರುನಾಥ ಅಧ್ಯಕ್ಷತೆಯಲ್ಲಿ ಇಂದು ಪತ್ರಿಕಾ ಭವನದಲ್ಲಿ ನಡೆಯಿತು. ತಾಲ್ಲೂಕ ಅಧ್ಯಕ್ಷರಾಗಿ ಗುರುರಾಜ ಗೌಡೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಮರಯ್ಯ ಘಂಟಿಯವರು ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷ ಹಟ್ಟಿ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದಯ್ಯಸ್ವಾಮಿ, ಶಿವರಾಜ ಕೆಂಬಾವಿ, ಅಮರೇಶ ಕಲ್ಲೂರು, ಶರಣಯ್ಯ ಒಡೆಯರ್ , ಅಮ್ಜದ್ ಕಂದಗಲ್, ರವಿಕುಮಾರ, ಬಲಭೀಮರಾವ್ ಕುಲಕರ್ಣಿ, ದೇವಣ್ಣ ಕೋಡಿಹಾಳ ಹಾಗೂ ಹಿರಿಯ ಪತ್ರಕರ್ತರಾದ ಬಿ.ಎ.ನಂದಿಕೋಲಮಠ, ಗುರುರಾಜ ಮುತಾಲಿಕ, ಖಾಜಾ ಹುಸೇನ, ಆರ್.ವಿ.ಗುಮಾಸ್ತೆ, ಘನಮಠದಯ್ಯ, ನಾಗರಾಜ ಮಸ್ಕಿ, ಅಮರೇಶ ಬಲ್ಲಟಗಿ ಮತ್ತು ಲಿಂಗಸುಗೂರು, ಮುದಗಲ್ ಮತ್ತು ಹಟ್ಟಿ ಪರ್ತಕರ್ತರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್