ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಚಾಲನೆ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ.


 ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಚಾಲನೆ ನೀಡಿದ ಶಾಸಕ ಡಾ.ಶಿವರಾಜ ಪಾಟೀಲ.     ರಾಯಚೂರು,ಜು.21-ಟ್ರಾಕ್ಟರ್ ಚಲಾಯಿಸಿ ನೈರ್ಮಲ್ಯ ವಾಹನಗಳಿಗೆ ಶಾಸಕ ಡಾ.ಶಿವರಾಜ ಪಾಟೀಲ ಚಾಲನೆ ನೀಡಿದರು.                         ಬೆಳಿಗ್ಗೆ ನಗರಸಭೆ ಆವರಣದಲ್ಲಿ ನಗರದಲ್ಲಿ ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಖರೀದಿಸಲಾದ ಐದು ಟ್ರ್ಯಾಕ್ಟರ್ ಮತ್ತು ಒಂದು ಮಿನಿ ಜೆಸಿಬಿಗೆ ಪೂಜೆ ನೆರವೇರಿಸಲಾಯಿತು.   

                         ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ್ ಆಂಜಿನೇಯ್ಯ ಮತ್ತು ಉಪಾಧ್ಯಕ್ಷರಾದ  ನರಸಮ್ಮ ನರಸಿಂಹಲು  ಮಾಡಗಿರಿ ಮತ್ತು  ನಗರ ಸಭೆ ಸದಸ್ಯರು, ಪೌರಾಯುಕ್ತರಾದ ಗುರುಲಿಂಗಪ್ಪ, ನಗರಸಭೆ ಅಧಿಕಾರಿಗಳಾದ ಮಲ್ಲಿಕಾರ್ಜುನ ಸೇರಿದಂತೆ  ಇನ್ನಿತರರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್