ಸೂರ್ಯ ಗ್ರಹಣ : ದೇವಸ್ಥಾನ, ಮಠಗಳಲ್ಲಿ ಗ್ರಹಣ ಶಾಂತಿ ಹೋಮ.

 

ಸೂರ್ಯ ಗ್ರಹಣ : ದೇವಸ್ಥಾನ, ಮಠಗಳಲ್ಲಿ ಗ್ರಹಣ ಶಾಂತಿ ಹೋಮ.  ರಾಯಚೂರು,ಅ.25- ಸೂರ್ಯ ಗ್ರಹಣ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ರಾಯರ ಬೃಂದಾವನಕ್ಕೆ ಮಂಗಳಾರತಿ ನೆರವೇರಿಸಿದರು.                                     ಗ್ರಹಣ ಶಾಂತಿ ಮತ್ತು ನವಗ್ರಹ ಶಾಂತಿ ಹೋಮ ನೆರವೇರಿಸಲಾಯಿತು .                      

ತಾಲೂಕಿನ  ಕಾಡ್ಲೂರು ಕೃಷ್ಣಾ ನದಿ ತೀರದ  ಶ್ರೀ ವನವಾಸಿ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಸ್ತೋತ್ರಗಳ ಪಠಣ, ಮಂಗಳಾರತಿ ನೆರವೇರಿತು ಗ್ರಾಮದ ವಿಪ್ರ ಬಾಂಧವರು ಭಾಗವಹಿಸಿದ್ದರು.


ನಗರದ ಜವಾಹರ ನಗರ ರಾಯರ ಮಠದಲ್ಲಿ , ಗಾಜಗಾರಪೇಟೆ ಉತ್ತರಾಧಿ ಮಠದಲ್ಲಿ ಹೋಮ ನೆರವೇರಿತು ಮಾರುತಿ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.   

                     ಎನ್ ಜಿ ಓ ಕಾಲೋನಿ ವೆಂಕಟರಮಣ ದೇವಸ್ಥಾನ, ಜೋಡು ವೀರಾಂಜಿನೇಯ ದೇವಸ್ಥಾನ,

ಮಾಧವ ತೀರ್ಥ ಮಠ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ   

ಹೋಮ ನೆರವೇರಿತು. 
ಭಕ್ತರು ದೇವರ ನಾಮಸ್ಮರಣೆಯಲ್ಲಿ ತೊಡಗಿದ್ದರು. ಗ್ರಹಣ ಮೋಕ್ಷ ನಂತರ ನದಿ, ಭಾವಿಗಳಲ್ಲಿ ಜನರು ಸ್ನಾನಗೈದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್