ಕ್ರಿಸ್-ಮಸ್ ಅಂಗವಾಗಿ ವಿವಿಧ ಚರ್ಚ್ ಗಳಿಗೆ ಭೇಟಿ: ಸಿಹಿ ಹಂಚಿ ಶುಭ ಕೋರಿದ ಎನ್.ಎಸ್‌ ಬೋಸರಾಜು

 


ಕ್ರಿಸ್-ಮಸ್ ಅಂಗವಾಗಿ ವಿವಿಧ ಚರ್ಚ್ ಗಳಿಗೆ ಭೇಟಿ: ಸಿಹಿ ಹಂಚಿ ಶುಭ ಕೋರಿದ ಎನ್.ಎಸ್‌ ಬೋಸರಾಜು

ರಾಯಚೂರು,ಡಿ.24- ಜಗತ್ತಿನಲ್ಲಿ ಸುಖ, ಶಾಂತಿ, ಪ್ರೀತಿ,  ತ್ಯಾಗ, ಸಹೋದರತ್ವ ಸಾರಿದ ಯೇಸು ಕ್ರಿಸ್ತನ ಜನ್ಮದಿನದ ನಿಮತ್ಯ ಎಐಸಿಸಿ ಕಾರ್ಯದರ್ಶಿಗಳಾದ ಎನ್.ಎಸ್ ಬೋಸರಾಜು ಅವರು ನಗರದ ವಿವಿಧ ಚರ್ಚ್ ಗಳಿಗೆ ಭೇಟಿ‌ ನೀಡಿ ಧರ್ಮಗುರುಗಳಿಗೆ ಸಿಹಿ ಹಂಚುವ ಮೂಲಕ ಕ್ರಿಸ್-ಮಸ್ ಹಬ್ಬ ಹಾಗೂ ಹೊಸ ವರ್ಷದ ಶುಭಾಷಯಗಳು ತಿಳಿಸಿದರು.             ನಗರದ ಮೆಥೋಡಿಸ್ಟ್ ಚರ್ಚ್, ಇನ್ಫೆಂಟ್ ಜೀಸಸ್, ಕ್ಯಾಥೋಲಿಕ್ ಚರ್ಚ್ ಸೇರಿದಂತೆ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ, ಮೆಥೋಡಿಸ್ಟ್ ಚರ್ಚ್ ರೆವೆರಂಡ್ ಸೀಮೋನ್,  ಇನ್ಫೆಂಟ್ ಜೀಸಸ್ ನ ಪೌಲ್ ರಾಜ್ ಫಾದರ್, ಅಗಾಪೆ ಚರ್ಚ್ ನ ಫಾಸ್ಟರ್ ವರಪ್ರಸಾದ್ ಹಾಗೂ ಫಾದರ್ ರಾಜು ಸೇರಿದಂತೆ ವಿವಿಧ ಚರ್ಚ್ ನ ಧರ್ಮಗುರುಗಳಿಗೆ ಸಿಹಿ ಹಂಚಿ ಸನ್ಮಾನಿಸಿ ಗೌರವದಿಂದ ಶುಭಾಷಯಗಳು ತಿಳಿಸಿದರು.   


                                               ಈ ಸಂದರ್ಭದಲ್ಲಿ ಕಾಂಗ್ರೆಸ್ ನ ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು, ಬಿ ರಮೇಶ್, ಮಹ್ಮದ್ ಶಾಲಂ ಸೇರಿದಂತೆ ಇತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್