ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದಿಂದ: ಜು.30 ರಂದು ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಸಮಾರಂಭ -ಡಿ.ಕೆ.ಮುರಳೀಧರ್



ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದಿಂದ:   
 
       ಜು.30 ರಂದು  ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ - ಡಿ.ಕೆ.ಮುರಳೀಧರ್                        

ರಾಯಚೂರು,ಜು.29- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದಿಂದ ಜುಲೈ 30 ರಂದು ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ಗಂಟೆಗೆ  ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಸಮಾಜದ ಪ್ರತಿಭಾವಂತ ಆರ್ಥಿಕ ಅಶಕ್ತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದ ಪ್ರದಾನ ಸಂಚಾಲಕ ಡಿ.ಕೆ ಮುರಳೀಧರ್ ಹೇಳಿದರು.


ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ವಹಿಸಲಿದ್ದು , ಖ್ಯಾತ ಆದ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ , ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ  ಸಚಿವರಾದ ಎನ್.ಎಸ್. ಬೋಸರಾಜು, ಸಂಸದರಾದ ರಾಜಾಅಮರೇಶ್ವರ್ ನಾಯಕ್, ಶಾಸಕರುಗಳಾದ ಡಾ.ಶಿವರಾಜ್ ಪಾಟೀಲ್ , ಬಸವನಗೌಡ ದದ್ದಲ್  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ್ ಹಾರನಹಳ್ಳಿ,, ರಾಜ್ಯಉಪಾಧ್ಯಕ್ಷರಾದ ಆನಂದ ಫಡ್ನೀಸ್, ಶುಭಮಂಗಳ ಸುನೀಲ್  ಸೇರಿದಂತೆ  ರಾಜ್ಯ ಹಾಗೂ ಜಿಲ್ಲಾ  ಸಮಿತಿ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು. 


ಈ ಕಾರ್ಯಕ್ರಮದಲ್ಲಿ  ದ್ವಿತೀಯ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್ .ಸಿ ಯಲ್ಲಿ ಅಧಿಕ ಅಂಕ ಪಡೆದ  ಸಮಾಜದ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ , ಆರ್ಥಿಕವಾಗಿ ಹಿಂದುಳಿದ ಸಮಾಜದ 15 ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಪ್ರೋತ್ಸಾಹ ರೂಪದಲ್ಲಿ ವಿದ್ಯಾನಿಧಿ ಸಹಾಯ ನಿಧಿ ವಿತರಣೆ ಹಾಗೂ ಖ್ಯಾತ ವೈದ್ಯರಾದ ಡಾ. ರಾಘವೇಂದ್ರಾಚಾರ್ಯ ವಿ.ಜೋಷಿಯವರಿಗೆ  ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ  ನರಸಿಂಗರಾವ್ ದೇಶಪಾಂಡೆ, ಆನಂದ್ ತೀರ್ಥ ಫಡ್ನೀಸ್ ,  ರಾಘವೇಂದ್ರ ಚೂಡಾಮಣಿ ವಕೀಲರು, ವೇಣುಗೋಪಾಲ್ ಇನಾಂದರ್, ಹನುಮೇಶ್ ರಾವ್ ಸರಾಫ್, ,ರಾಮರಾವ್ ಗಣೇಕಲ ಸೇರಿದಂತೆ ‌ಇತರರು ಇದ್ದರು.

Comments

Popular posts from this blog