ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ : ದುರ್ಗಾಷ್ಟಮಿ ಅಂಗವಾಗಿ ಚಂಡಿಹೋಮ

 


ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನ : ದುರ್ಗಾಷ್ಟಮಿ ಅಂಗವಾಗಿ ಚಂಡಿಹೋಮ                     ರಾಯಚೂರು,ಅ.22- ತಾಲೂಕಿನ ಸುಕ್ಷೇತ್ರ ಮಮದಾಪುರ ಶ್ರೀ ಮಾತಾ ಗಧಾರ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ 10ನೇ ವರ್ಷದ ವೈಭವದ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ  ಇಂದು ದುರ್ಗಾಷ್ಟಮಿ ದಿನದಂದು ಬೆಳಿಗ್ಗೆ 6 :00 ಗಂಟೆಗೆ ದೇವಸ್ಥಾನದ ಯುವ ಬಳಗದ ಅಚ್ಚುಮೆಚ್ಚಿನ ವೈದಿಕ ರತ್ನ ಶ್ರೀ   ಬಸವರಾಜ ಸ್ವಾಮಿ ಹಿರೇಮಠ ಮನ್ಸಲಾಪುರ ಹಾಗೂ  ಶ್ರೀ  ಚನ್ನಬಸಯ್ಯ ಶಾಸ್ತ್ರಿಗಳು ಕೆಂಗಲ್ ಹಿರೇಮಠ, ಮಾಡ ಶಿರವಾರ ಇವರ ನೇತೃತ್ವದಲ್ಲಿ ಚಂಡಿಹೋಮ ಕಾರ್ಯಕ್ರಮ ಜರಗಿತು. 

           ದಿವ್ಯಸಾನಿದ್ಯವನ್ನು  ಶ ಬ್ರ ಶ್ರೀ ಶಾಂತಮಲ್ಲ ಶಿವಚಾರ್ಯ ಮಹಾಸ್ವಾಮಿಗಳು 108 ಸಾವಿರ ದೇವರ ಸಂಸ್ಥಾನ ಕಿಲ್ಲೇಬ್ರಹನ್ಮಠ ರಾಯಚೂರು ಹಾಗೂ ಸಾನಿದ್ಯ  ವೇ ಮೂ॥ ಪರಮ ಪೂಜ್ಯ ಶ್ರೀ ಡಾ. ಕ್ಷೀರಲಿಂಗ ಮಹಾಸ್ವಾಮಿಗಳು ಸುಕ್ಷೇತ್ರ ಚೇಗುಂಟ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್