ಕಾಡ್ಲೂರಲ್ಲಿ ಡಿ.24 ರಿಂದ 26 ರವರೆಗೆ ಶ್ರೀ ಹನುಮದ ವ್ರತ ಕಾರ್ಯಕ್ರಮ : ನಾಳೆ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರಿಗೆ ಲಕ್ಷ ಪುಷ್ಪಾರ್ಚನೆ

 


 


ಕಾಡ್ಲೂರಲ್ಲಿ ಡಿ.24 ರಿಂದ 26 ರವರೆಗೆ ಶ್ರೀ ಹನುಮದ ವ್ರತ ಕಾರ್ಯಕ್ರಮ:     ನಾಳೆ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರಿಗೆ ಲಕ್ಷ ಪುಷ್ಪಾರ್ಚನೆ                                                         ರಾಯಚೂರು,ಡಿ. 23-ಶ್ರೀ ವನವಾಸಿ ರಾಮ ದೇವರ,  ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಮುಖ್ಯಪ್ರಾಣ ದೇವರ ಹಾಗೂ ಶ್ರೀ ಸ್ವಯಂಭೂ ರುದ್ರ ದೇವರ ಸನ್ನಿಧಾನ, ಕೃಷ್ಣ ನದಿ ತೀರ, ಕಾಡ್ಲೂರಲ್ಲಿ ಡಿ.24 ರಿಂದ 26ರವರೆಗೆ ಶ್ರೀ ಹನುಮದ್ ವ್ರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂದರೆ ಶ್ರೀ ಶೋಭನಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ದ್ವಾದಶಿ/ತ್ರಯೋದಶಿ ರವಿವಾರ, ದಿ.24, ದಿ.25 ಚತುರ್ದಶಿ ಸೋಮವಾರ ದಂದು ಹಾಗೂ ದಿನ.26 ಹುಣ್ಣಿಮೆ ಮಂಗಳವಾರ ದಂದು ಕಾಡ್ಲೂರು ಸಂಸ್ಥಾನ ದ ವತಿಯಿಂದ ಶ್ರೀ ಹನುಮದ್ ವ್ರತ ಕಾರ್ಯಕ್ರಮನ್ನು ಆಚರಿಸಲಾಗುತ್ತಿದೆ.


ಕಾರ್ಯಕ್ರಮಗಳ ವಿವರ :

ದ್ವಾದಶಿ/ತ್ರಯೋದಶಿ (ರವಿವಾರ, ದಿ. 24.12.2023), ಶ್ರೀ ಹನುಮದ್ ವ್ರತ



ಬೆಳಿಗ್ಗೆ 5:30 ಕ್ಕೆ ಧ್ವಜಾರೋಹಣ

⁠5:45 ಕ್ಕೆ ನಿರ್ಮಾಲ್ಯ

 ⁠6 ಕ್ಕೆ ಪಂಚಾಮೃತ ಅಭಿಷೇಕ, ವಾಯುಸ್ತುತಿ, ಅಷ್ಟೋತ್ತರ

 ⁠7 ಕ್ಕೆ ಶ್ರೀ ಮುಖ್ಯಪ್ರಾಣ ದೇವರಿಗೆ ಲಕ್ಷ ಪುಷ್ಪಾರ್ಚನೆ

8 ಕ್ಕೆ ಹನುಮದ್ ವ್ರತ ಪೂಜೆ, ಕಥೆ

8:30 ಕ್ಕೆ ರಜತ ಕವಚ ಅಲಂಕಾರ, ಮಹಾಮಂಗಳಾರತಿ

 ⁠9 ಕ್ಕೆ ತೀರ್ಥಪ್ರಸಾದ ನಂತರ

ಸಾಯಂಕಾಲ 5:30 ಕ್ಕೆ ಶ್ರೀ ವಿಜಯದಾಸರ ವಂಶಸ್ಥರಿಂದ ಹರಿನಾಮ ಸಂಕೀರ್ತನೆ

 ⁠7 ಕ್ಕೆ ಪಲ್ಲಕ್ಕಿ ಉತ್ಸವ

7:30 ಕ್ಕೆ ದೀಪೋತ್ಸವ, ತೆಪ್ಪೋತ್ಸವ, ಕೃಷ್ಣಾರತಿ - ಕೃಷ್ಣ ನದಿಗೆ ಆರತಿ


ಚತುರ್ದಶಿ (ಸೋಮವಾರ, ದಿ. 25.12.2023)


 ⁠6 ಕ್ಕೆ ನೀರ್ಮಾಲ್ಯ

 ⁠7 ಕ್ಕೆ ಪಂಚಾಮೃತ ಅಭಿಷೇಕ, ವಾಯುಸ್ತುತಿ, ಅಷ್ಟೋತ್ತರ

8 ಕ್ಕೆ ಶ್ರೀ ಸ್ವಯಂಭೂ ರುದ್ರ ದೇವರಿಗೆ ಸಹಸ್ರ ಬಿಲ್ವಪತ್ರಿಕೆ ಸಮರ್ಪಣೆ

9 ಕ್ಕೆ ಕಾಡ್ಲೂರು ಸಂಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಿದ ಶ್ರೀ ರಾಘವೇಂದ್ರ ಮಕ್ಕಳ ಕೂಟದ (Play Area) ಉದ್ಘಾಟನೆ

 ⁠10 ಕ್ಕೆ ವೇ॥ಮೂ॥ ಶ್ರೀ ಗುರಾಚಾರ್ಯ ಜೋಶಿ ಅವರಿಂದ ಕಾಡ್ಲೂರು ಸಂಸ್ಥಾನದ ಪುರಾತನ ಪ್ರತಿಮೆಗಳ ಪೂಜೆ - ಪ್ರತಿಮಾರ್ಚನೆ ನಡೆಯಲಿದೆ.



11 ಕ್ಕೆ ರಜತ ಕವಚ ಅಲಂಕಾರ, ಮಹಾಮಂಗಳಾರತಿ ಮಧ್ಯಾಹ್ನ 12 ಕ್ಕೆ ಕಾಡ್ಲೂರು ಸಂಸ್ಥಾನ ಗೌರವ ಪುರಸ್ಕಾರ ಪ್ರದಾನ ಕಾರ್ಯಕ್ರಮ

1 ಕ್ಕೆ ತೀರ್ಥಪ್ರಸಾದ



ಸಾಯಂಕಾಲ 5:30 ಕ್ಕೆ ಕು. ವೈಷ್ಣವಿ ದೇಶಪಾಂಡೆ ಅವರಿಂದ ಸಂಗೀತ ಕಾರ್ಯಕ್ರಮ

7 ಕ್ಕೆ ಪಲ್ಲಕಿ ಉತ್ಸವ

 ⁠7:30 ಕ್ಕೆ ದೀಪೋತ್ಸವ, ತೆಪ್ಪೋತ್ಸವ, ಕೃಷ್ಣಾರತಿ - ಕೃಷ್ಣ ನದಿಗೆ ಆರತಿ

  

ಹುಣ್ಣಿಮೆ (ಮಂಗಳವಾರ, ದಿ. 26.12.2023)


 ⁠6 ಕ್ಕೆ ನಿರ್ಮಾಲ್ಯ

⁠7 ಕ್ಕೆ ಪಂಚಾಮೃತ ಅಭಿಷೇಕ, ವಾಯುಸ್ತುತಿ, ಅಷ್ಟೋತ್ತರ

10 ಕ್ಕೆ ವೇ॥ ಮೂ॥ ಶ್ರೀ ದಾಮೋಧರಾಚಾರ್ಯ ಪುರೋಹಿತ ಅವರಿಂದ ಶ್ರೀ ಸತ್ಯನಾರಾಯಣ ಪೂಜೆ, ಕಥೆ*


11 ಕ್ಕೆ ರಜತ ಕವಚ ಅಲಂಕಾರ, ಮಹಾಮಂಗಳಾರತಿ ⁠ಮಧ್ಯಾಹ್ನ 12 ಕ್ಕೆ ತೀರ್ಥಪ್ರಸಾದ ಸಾಯಂಕಾಲ 5:30 ಕ್ಕೆ ಪಲ್ಲಕಿ ಉತ್ಸವ

⁠6:30 ಕ್ಕೆ ದೀಪೋತ್ಸವ, ತೆಪ್ಪೋತ್ಸವ, ಕೃಷ್ಣಾರತಿ - ಕೃಷ್ಣ ನದಿಗೆ ಆರತಿ ಎಲ್ಲ ಸದ್ಭಕ್ತರು ಈ ಮೂರು ದಿನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾಡ್ಲೂರು ಸಂಸ್ಥಾನದ ರಂಗರಾವ ದೇಸಾಯಿ, ಜಯಕುಮಾರ ದೇಸಾಯಿ,ವಿಜಯ ಕುಮಾರ್ ದೇಸಾಯಿ ಹಾಗೂ ಕಾಡ್ಲೂರು ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಾರೆ.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್