ನಗರದಲ್ಲಿ ನಾಳೆ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಂದ ತಪ್ತ ಮುದ್ರಾ ಧಾರಣೆ ರಾಯಚೂರು,ಜು.27- ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ನಾಳೆ ಜು.28, ಭಾನುವಾರದಂದು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ತಪ್ತ ಮುದ್ರಾ ಧಾರಣೆ ನಡೆಯಲಿದೆ . ಚಾರ್ತುಮಾಸದ ಅಂಗವಾಗಿ ನಾಳೆ ಬೆಳಿಗ್ಗೆ 8:30ಕ್ಕೆ ಶ್ರೀಪಾದಂಗಳವರಿಂದ ಶ್ರೀ ಮಠದ ಶಿಷ್ಯರಿಗೆ ಮತ್ತು ಭಕ್ತರಿಗೆ ತಪ್ತ ಮುದ್ರಾ ಧಾರಣೆ ನಡೆಯಲಿದೆ.ಕಾರಣ ಶ್ರೀ ಮಠದ ಶಿಷ್ಯರು ಮತ್ತು ಭಕ್ತರು ಭಾಗವಹಿಸಿ ಗುರುಗಳು ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.
Comments
Post a Comment