ಜು. 29 ವರೆಗೆ ನಗರದಲ್ಲಿ ಕೃಷ್ಣಯ್ಯಚೆಟ್ಟಿ ಜ್ಯುವೆಲರ್ಸ್ ನಿಂದ ಆಭರಣ ಪ್ರದರ್ಶನ. ರಾಯಚೂರು,ಜು.26- ನಗರದ ರಂಜಿತಾ ಪ್ಯಾಲೇಸ್ ಹೋಟೆಲ್ ನಲ್ಲಿ ಇಂದಿನಿಂದ ಜು.29 ರವರೆಗೆ ನಡೆಯುವ ಕೃಷ್ಣಯ್ಯಚೆಟ್ಟಿ ಜ್ಯುವೆಲರ್ಸ್ ರವರ ಆಭರಣ ಪ್ರದರ್ಶನಕ್ಕೆ ಮುಖಂಡರಾದ ತ್ರಿವಿಕ್ರಮ ಜೋಷಿ ಚಾಲನೆ ನೀಡಿದರು. ವಿಶಿಷ್ಟ ಕೊಡುಗೆ ಮತ್ತು ಕರಕುಶಲ ವಿನ್ಯಾಸವಿರುವ ವಜ್ರ, ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಪ್ರದರ್ಶನ ಉಚಿತವಾಗಿ ನಡೆಯಲಿದ್ದು ಆಭರಣ ಪ್ರಿಯರು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಈ ಸಂದರ್ಭದಲ್ಲಿ ಕೊಟ್ರೇಶಪ್ಪ ಕೋರಿ, ಹರವಿ ನಾಗನಗೌಡ, ಸೇರಿದಂತೆ ಜ್ಯುವೆಲರ್ಸ್ ಮಾಲಿಕರು, ಸಿಬ್ಬಂದಿಗಳಿದ್ದರು.
Comments
Post a Comment