ನಾಳೆ ಗೋವಿಂದ ಗಾನ ಪೂರ್ವಭಾವಿ ಸಭೆ
ರಾಯಚೂರು,ಸೆ.15- ನಗರದ ಜವಾಹರ್ ನಗರ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಸೆ.16 ರಂದು ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ಗೋವಿಂದ ಗಾನ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 5:30ಕ್ಕೆ ಸಭೆ ಹಮ್ಮಿಕೊಳ್ಳಲಾಗಿದ್ದು ದಯವಿಟ್ಟು ಸಭೆಗೆ ಎಲ್ಲಾ ಭಜನಾ ಮಂಡಳಿಗಳು, ದಾಸಸಾಹಿತ್ಯದ ಬಂಧುಗಳು, ಭಗವಧ್ಭಕ್ತರು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಪೂರ್ವಭಾವಿ ಸಭೆಯಲ್ಲಿ ಖ್ಯಾತಗಾಯಕ ರಾಯಚೂರು ಶೇಷಗಿರಿ ದಾಸ್ ಅವರು ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಮುರಳಿಧರ ಕುಲಕರ್ಣಿ ತಿಳಿಸಿದ್ದಾರೆ.
Comments
Post a Comment