ಶ್ರೀ ಜೋಡು ವೀರಾಂಜನೇಯ ದೇವಸ್ಥಾನ ಗಣೇಶೋತ್ಸವ ಲಡ್ಡು ಹರಾಜು: ಹನುಮೇಶ ಸರಾಫ್ ಗೆ ಲಭಿಸಿದ ಲಡ್ಡು
ರಾಯಚೂರು,ಸೆ.11- ನಗರದ ಸಾವಿತ್ರಿ ಕಾಲೋನಿ ಶ್ರೀ ಜೋಡು ವೀರಾಂಜನೇಯ ದೇವಸ್ಥಾನ ಯುವಕ ಮಂಡಳಿ ಯವರು ಪ್ರತಿ ವರ್ಷ ದಂತೆ ಈ ವರ್ಷವು ಕೂಡ ಶ್ರೀ ಗಣೇಶ ಉತ್ಸವ ವಿಜೃಂಭಣೆ ಇಂದ ಪ್ರತಿಷ್ಠಾಪನೆ ಮಾಡಿ ಮೂರನೇ ದಿನದ ವಿಸರ್ಜನೆ ಕಾರ್ಯಕ್ರಮಕ್ಕೂ ಮೊದಲು ಈ ಬಾರಿ ಪ್ರಥಮ ಬಾರಿಗೆ ಲಡ್ಡು ಹರಾಜು ನಡೆಸಿದರು. ನಗರದ ಅನೇಕ ಭಕ್ತರು ಪಾಲ್ಗೊಂಡು ಹರಾಜು ಪ್ರಕ್ರಿಯೆ ಅತೀ ಉತ್ಸಾಹ ದಿಂದ ನಡೆದು 10 ಸಾವಿರ ರೂಪಾಯಿಗೆ ನಗರ ಬ್ರಾಹ್ಮಣ ಸಮಾಜ ಮುಖಂಡರು,ಬಿಜೆಪಿಯ ಮುಖಂಡರು, ಲಕ್ಷ್ಮೀ ವೆಂಕಟೇಶ್ವರ ಎಲೆಕ್ಟ್ರಿಕಲ್ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆ ದಾರರು ಆಗಿರುವ ಹನುಮೇಶ್ ಸರಾಫ್ ಹರಾಜಿನಲ್ಲಿ ಭಾಗವಹಿಸಿ ಲಡ್ಡು ಪ್ರಸಾದ ಪಡೆದು ಗಣೇಶನ ಅನುಗ್ರಹಕ್ಕೆ ಪಾತ್ರರಾದರು.
ಜೋಡು ವೀರಾಂಜನೇಯ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ದಾನಪ್ಪ ಯಾದವ್, ಕಾರ್ಯಧ್ಯಕ್ಷ ವೇಣುಗೋಪಾಲ್ ಇನಾಂದಾರ್, ಪಾಂಡುರಂಗ ಜೆ.ಇ,ನರಸಿಂಗ ರಾವ್ ದೇಶ ಪಾಂಡೆ,ಯುವ ಪಡೆಯ ಅಧ್ಯಕ್ಷ ಪ್ರಲಾದ್ ಕುಲಕರ್ಣಿ ಸೇರಿದಂತೆ ಸಾವಿತ್ರಿ ಕಾಲೋನಿಯ ಭಕ್ತರು, ಯುವಕರು ಉಪಸ್ಥಿತರಿದ್ದರು .
Comments
Post a Comment