ಗೋವಿಂದ ಗಾನ ಕಾರ್ಯಕ್ರಮ ಅಂಗವಾಗಿ  ಸೆ.18 ರಂದು ಗಾಯಕ ಶೇಷಗಿರಿ ದಾಸರಿಂದ ಸಮೂಹ ಗಾಯನದ ತರಬೇತಿ

 ರಾಯಚೂರು,ಸೆ.11- ನಗರದಲ್ಲಿ ಇದೇ ತಿಂಗಳು ದಿನಾಂಕ 21, 22, ರಂದು  ಸಂಜೆ  ರಂಗಮಂದಿರದಲ್ಲಿ  ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ ಗೋವಿಂದ ಗಾನ ಕಾರ್ಯಕ್ರಮದಲ್ಲಿ ಸಮೂಹ ಗಾಯನವನ್ನು ಪ್ರಸ್ತುತಪಡಿಸಲಾಗುತ್ತಿದೆ. 

  ದಿನಾಂಕ 22 ರಂದು ನಡೆಯುವ ಶ್ರೀವಾರಿ ಉಂಜಾಲ ಸೇವಾ ಸಂದರ್ಭದಲ್ಲಿ ಮಹಿಳಾ ಭಜನಾ ಮಂಡಳಿಗಳಿಂದ , ಹಾಗೂ  ಆಸಕ್ತ ಮಹಿಳೆಯರಿಂದ ಎರಡು ಗೀತೆಗಳನ್ನು ಕಾರ್ಯಕ್ರಮದಲ್ಲಿ ಸಮೂಹ ಗಾಯನವನ್ನು ಮಾಡಿಸಲಾಗುತ್ತದೆ.

 ಇದೇ ದಿನಾಂಕ 18 ರಂದು ಜವಾಹರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಸಂಜೆ 5:30 ರಿಂದ ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ್ ಇವರಿಂದ  ಸಮೂಹ ಗಾಯನದ ತರಬೇತಿಯನ್ನು ನೀಡಲಾಗುವುದು.   ಆಸಕ್ತ ಮಹಿಳೆಯರು ಮತ್ತು ಭಜನಾ ಮಂಡಳಿಯ ಸದಸ್ಯರು ಇದರಲ್ಲಿ ಭಾಗವಹಿಸಬೇಕೆಂದು ಗೋವಿಂದ ಗಾನ ಕಾರ್ಯಕ್ರಮ ಆಯೋಜಕರಾದ ಮುರಳಿಧರ ಕುಲಕರಣಿ  ಕೋರಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್