ಮನೆಗೆ ಕನ್ನ ಹಾಕಿದ ಖದೀಮರು:
    ಲಕ್ಷಾಂತರ  ಮೌಲ್ಯದ ನಗದು ಚಿನ್ನಾಭರಣ ಲೂಟಿ- ಪೂರ್ವ ನಿಯೋಜಿತ ಕೃತ್ಯ ಶಂಕೆ 
       ರಾಯಚೂರು,ಸೆ.15- ನಗರದ ಹೊರವಲಯದ ಆಶಾಪುರ ರಸ್ತೆಯ ಲಕ್ಷ್ಮೀ ನರಸಿಂಹ ಲೇಔಟ್ ಮನೆಯಲ್ಲಿ ದರೋಡೆ ನಡೆದಿದೆ.ನಿನ್ನೆ ರಾತ್ರಿ ಬಸನಗೌಡ ಮಟಮಾರಿ ಎಂಬುವವರ  ಮನೆಗೆ ನುಗ್ಗಿದ ಆಗುಂತಕರು ಚಿನ್ನಾಭರಣ,ನಗದು ದೋಚಿ ಪರಾರಿಯಾಗಿದ್ದಾರೆ.

 ಮುಸುಕು ಧರಿಸಿ ಮನೆಗೆ  ನುಗ್ಗಿದ ಮೂವರು ಕಳ್ಳರು ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ 22 ತೊಲೆ ಚಿನ್ನ,2 ಲಕ್ಷ ನಗದು ಹಣ ಮತ್ತು 2 ಕೆಜಿ ಬೆಳ್ಳಿ ಪೂಜಾ ಸಾಮಾನು ಕಳ್ಳತನವಾಗಿದೆ ಎನ್ನಲಾಗಿದೆ . ಸ್ಥಳಕ್ಕೆ ಪಶ್ಚಿಮ ಠಾಣೆ ಸಿಪಿಐ , ಪಿಎಸ್ಐ , ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ತೆರಳಿ ಕಳ್ಳತನ ನಡೆದ ಬಗ್ಗೆ ಮನೆಯ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ ಜಿಲ್ಲಾಪೊಲೀಸ ವರಿಷ್ಟಾಧಿಕಾರಿ ಪುಟ್ಟಮಾದಯ್ಯ ಅಧಿಕಾರಿಗಳ ತಂಡ ರಚಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ಅಪರಾಧ ಪ್ರಕರಣಕ್ಕೆ ಇಲ್ಲ ಕಡಿವಾಣ: ದಿನೆ ದಿನೆ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೊಲೀಸರು ಅಪರಾಧ ತಡೆಗೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್