ವಿವಿಧ ಗಜಾನನ ಮಂಡಳಿಗಳಿಗೆ ರವಿ ಭೋಸರಾಜು ಭೇಟಿ: ಪ್ರತಿಷ್ಠಾಪನೆಯಲ್ಲಿ ಭಾಗಿ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಕೆ.
ರಾಯಚೂರು,ಸೆ.7-ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ವಿಘ್ನವಿನಾಯಕ ಮಂಡಳಿಗಳಿಗೆ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಭೇಟಿ ನೀಡಿ ಶ್ರೀ ಗಜಾನನ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿ ವಿಶೇಷ ಪೂಜೆ, ಮಹಾ ಮಂಗಳಾರತಿ ಮಾಡಿ ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ವಿವಿಧ ಬಡಾವಣೆಗಳಾದ ಗಣೇಶ ಕಟ್ಟೆ, ಗಂಜ್ ವೃತ್ತ, ತೀನ್ ಕಂದಿಲ್, ಏಕ್ಮಿನಾರ್, ಚಂದ್ರಮೌಳೆಶ್ವರ ವೃತ್ತ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ಶ್ರೀ ಗಜಾನನ ಮಂಡಳಿಗಳಿಗೆ ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿ ನೀಡಿ. ಗಜಾನನ ಮೆರವಣಿಗೆಯಲ್ಲಿ ಭಾಗಿಯಾದರು.
ಪ್ರತಿಷ್ಠಾಪನೆಯ ನಂತರ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಗಜಾನನು ನಾಡಿನ ಸಮಸ್ತ ಜನರ ಸಂಕಷ್ಟಗಳನ್ನ ದೂರ ಮಾಡಿ, ಆರೋಗ್ಯ ಸುಖ ಶಾಂತಿ, ಸಮೃದ್ಧಿ ಕರುಣಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಗಣೇಶ ಮೂರ್ತಿ ಪ್ರತಿಷ್ಟಾಪನೆಯ ಮೆರವಣಿಗೆಯಲ್ಲಿ ರವಿ ಬೋಸರಾಜು ಅವರು ಹೆಜ್ಜೆಹಾಕಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ತಿಮ್ಮಾರಡ್ಡಿ, ಗೋವಿಂದ ರಡ್ಡಿ, ಶ್ರೀನಿವಾಸ ರಡ್ಡಿ, ಪ್ರವೀಣ ಪೋಗಲ್, ಪ್ರತಾಪರಡ್ಡಿ, ಅರುಣದೋತರಬಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment