ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ( ದಿಶಾ) ಸಭೆ: ನಿಮ್ಮ ಪಾಂಡಿತ್ಯ ತೋರಿಸಲು ಬರಬೇಡಿ-ಜಿ.ಕುಮಾರ ನಾಯಕ. ರಾಯಚೂರು,ಅ.25- ಸಭೆಯಲ್ಲಿ ನನಗೆ ನಿಮ್ಮ ಪಾಂಡಿತ್ಯ ತೋರಿಸಬೇಡಿ ಎಂದು ಅಧಿಕಾರಿಗೆ ಸಂಸದ ಜಿ.ಕುಮಾರ ನಾಯಕ ತರಾಟೆ ತೆಗೆದುಕೊಂಡು ನರ್ಸಿಂಗ್ ನಡೆಯಿತು. ಇಂದು ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ( ದಿಶಾ) ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿ ಸಮಜಾಯಿಷಿ ನೀಡಿದಾಗ ಗ್ರಾಂ ಆದ ಸಂಸದರು ನಿಗದಿತ ವೇಳೆ ಪೂರ್ಣವಾಗಿದ್ದರೂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟುತ್ತಿರುವ ಹೆದ್ದಾರಿ ಸೇತುವೆ ನಿರ್ಮಾಣ ಕಾಮಗಾರಿ ಏಕೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಪ್ರಶ್ನಿಸಿದರು ಆಗ ಅಧಿಕಾರಿ ತಾಂತ್ರಿಕ ಅಡಚಣೆ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬ ಬಗ್ಗೆ ವಿವಿರಿಸಿದಾಗ ಸಂಸದರು ಅಧಿಕಾರಿಗಳು ಮುಂಚಿತವಾಗಿ ಇದೆಲ್ಲವನ್ನು ನಿರೀಕ್ಷಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಕಾಮಗಾರಿ ಪ್ರಗತಿ ಕುಂಠಿತವಾಗಲು ನಿಮ್ಮಂತಹ ಅಧಿಕಾರಿಗಳಿಗೆ ಕಾರಣವೆಂದು ತರಾಟೆ ತೆಗೆದುಕೊಂಡರು. ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ ಹೈದರಾಬಾದ್ ರಸ್ತೆಯಲ್ಲಿ ದಿನ ನಿತ್ಯ ಅಪಘಾತಗಳು ಸಂಭವಿಸಿ ಅಮಾಯಕರು ಸಾವನ್ನಪ್ಪುತ್ತಿದ್ದಾರೆ ಹೆದ್ದಾರಿ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇನ್ನು ಮುಂದೆ ಅಪಘಾತವಾದಲ್ಲಿ ಅಧಿಕಾರಿಗಳು ಮೇಲೆಯೂ ಪ್ರಕರಣ ದಾಖಲಿಸಿ ಆಗ ಅವರು ಎಚ್ಚೆತ್ತುಕೊಳ್ಳುತ್ತಾರೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ ಈಗಾಗಲೆ ಅವರಿಗೆ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಆದರೂ ಅವರು ಮಾಡಿಲ್ಲವೆಂದು ಸಭೆಯ ಗಮನಕ್ಕೆ ತಂದರು.
ನೆನಗುದಿಗೆ ಬಿದ್ದಿರುವ ಜಿಲ್ಲೆಯ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಿ- ಡಾ. ಬಾಬುರಾವ್ ಜಯ ಧ್ವಜ ನ್ಯೂಸ್,ರಾಯಚೂರು,ಮಾ.11- ಜಿಲ್ಲೆಯ ಪ್ರಮುಖ ರೈಲ್ವೆ ಯೋಜನೆಗಳಾದ ಗಿಣಿಗೇರಾ-ಮೆಹಬೂಬ್ ನಗರ ಮತ್ತು ಗದಗ-ವಾಡಿ ರೈಲ್ವೆ ಮಾರ್ಗವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರು ಪ್ರಯತ್ನಿಸಬೇಕು ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಾ. ಬಾಬುರಾವ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ರೈಲ್ವೆ ಸಚಿವರಾಗಿದ್ದವರು ತಮ್ಮ ರಾಜ್ಯಗಳಿಗೆ ಅನೇಕ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಅವುಗಳನ್ನು ಅನುಷ್ಠಾನಗೊಳಿಸಿದ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಮಹತ್ವದ ಖಾತೆಯನ್ನು ಹೊಂದಿರುವ ವಿ.ಸೋಮಣ್ಣನವರಿಗೆ ಈ ಒಂದು ಸುವರ್ಣಾವಕಾಶ ಸಿಕ್ಕಿದ್ದು ಅದನ್ನು ಅವರು ಸದುಪಯೋಗಪಡಿಸಿಕೊಂಡು ರಾಜ್ಯದಲ್ಲಿ ನೆನಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಿ ಜನಮನ್ನಣೆ ಗಳಿಸುವ ಸದಾವಕಾಶ ಇದೆ. ಒಳ್ಳೆ ರಾಜಕಾರಣಿ ಹಾಗು ಕ್ರಿಯಾಶೀಲ ಮಂತ್ರಿ ಎಂಬ ಖ್ಯಾತಿ ಗಳಿಸಿದ್ದಾರೆ ಹಾಗಾಗಿ ಸೋಮಣ್ಣನವರು ನಮ್ಮ ಭಾಗದಲ್ಲಿ 25 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಗಿಣಿಗೇರಾ- ಮಹೆಬೂಬ್ ನಗರ ಹಾಗೂ ಗದಗ-ವಾಡಿ ರೈಲು ಮಾರ್ಗಗಳಿಗೆ ವೇಗವನ್ನು ಕಲ್ಪಿಸಿ ತಮ್ಮ ಅಧಿಕಾರಾವಧಿಯಲ್ಲಿ ಪೂರ...
Comments
Post a Comment