ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆ: ಅಪಾರ ಬೆಂಬಲಿಗರೊಂದಿಗೆ ಎಸ್. ರಘುನಾಥ್ ನಾಮಪತ್ರ ಸಲ್ಲಿಕೆ ಜಯಧ್ವಜ ನ್ಯೂಸ್ ರಾಯಚೂರು ಮಾ.27- ಇಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಎಸ್. ರಘುನಾಥ್ ಇವರು ಅಪಾರ ಸಂಖ್ಯೆಯ
ಬೆಂಬಲಿಗರರೊಂದಿಗೆ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ ದಿಂದ ಮೆರವಣಿಗೆ ಮೂಲಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಛೇರಿಗೆ ಆಗಮಿಸಿ ಬೆಳಗ್ಗೆ 11:30ಕ್ಕೆ ನಾಮಪತ್ರ ಸಲ್ಲಿಸಿದರು .
ಈ ಸಂದರ್ಭದಲ್ಲಿ ಹಿರಿಯರಾದ ಲಕ್ಷ್ಮಿಕಾಂತ್ ,ಜಗನ್ನಾಥ್ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ , ನಾರಾಯಣರಾವ್ ಕುಲಕರ್ಣಿ ಪುರತಿಪ್ಲಿ , ವಿ. ಕಿಶನ್ ರಾವ್ , ಕೃಷ್ಣರಾವ್ ತಿಂಥಣಿ, ಹನುಮೇಶ್ ಮಾನ್ವಿಕರ್, ಶ್ರೀರಾಜ್ ಕುಲಕರ್ಣಿ ,ಪ್ರಶಾಂತ ಕಿನ್ನಾಳ ಇನ್ನಿತರರು ಉಪಸ್ಥಿತರಿದ್ದರು.
Comments
Post a Comment