ಮಂತ್ರಾಲಯ: ಯುಗಾದಿ  ಅಂಗವಾಗಿ ವಿಶೇಷ ಪೂಜೆ.
   ಜಯಧ್ವಜ ನ್ಯೂಸ್, ರಾಯಚೂರು,ಮಾ.30-      ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಗಾದಿ ಹಬ್ಬ  ವಿಶ್ವವಸುನಾಮ ಸಂವತ್ಸರ   ಅಂಗವಾಗಿ ವಿಶೇಷ ಪೂಜೆ ನೆರವೇರಿತು. 

     ಬೆಳಿಗ್ಗೆ ಶ್ರೀ ಮನ್ಮೂಲರಾಮದೇವರಿಗೆ ಹಾಗೂ ರಾಯರ ಬೃಂದಾವನಕ್ಕೆ ಹಾಗೂ ಎಲ್ಲಾ ಪೀಠಾಧಿಪತಿಗಳ ಬೃಂದಾವನಕ್ಕೆ  ತೈಲಅಭ್ಯಂಜನ ಮತ್ತು ಮಹಾಮಂಗಳಾರತಿ ನೆರವೇರಿತು ನಂತರ ತುಲಸಿ ಪೂಜೆ , ಗೋಪೂಜೆ ನಡೆಯಿತು.

ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ತೈಲ ಅಭ್ಯಂಜನ, ನಾರೀಕೃತ ನೀರಾಜನ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

Comments

Popular posts from this blog