ಹವಾಮಾನ ವೈಪರೀತ್ಯ : ಇಳಿಯದ ರಾಜ್ಯಪಾಲರ , ಸಚಿವರ ಹೆಲಿಕಾಪ್ಟರ್ ಘಟಿಕೋತ್ಸವಕ್ಕೆ ಗೈರು ಜಯ ಧ್ವಜ ನ್ಯೂಸ್, ರಾಯಚೂರು,ಮೇ.26- ಜಿಟಿ ಜಿಟಿ ಮಳೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ರಾಜ್ಯಪಾಲರು ಹಾಗೂ ಕೃಷಿ ಸಚಿವರ ಹೆಲಿಕಾಪ್ಟರ್ ಇಳಿಯಲು ಅನಾನುಕೂಲತೆ ಕಾರಣದಿಂದ ಕೃಷಿ ವಿವಿ ಯಲ್ಲಿ ಆಯೋಜಿಸಲಾಗಿದ್ದ 14 ನೆ ಘಟಿಕೋತ್ಸವಕ್ಕೆ ಗೈರಾಗಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ವಿವಿ ಸಭಾಂಗಣದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ಬೆಂಗಳೂರಿನಿಂದ ನಿರ್ಗಮಿಸಿದ ಉಭಯರ ಹೆಲಿಕಾಪ್ಟರ್ ಜಿಂದಾಲ್ ವಿಮಾನ ನಿಲ್ದಾಣದಿಂದ ವಾಪಸ್ ಬೆಂಗಳೂರಿನತ್ತ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


Comments
Post a Comment