ಯರಗೇರಾ ತಾಲೂಕು ರಚನೆ ಹೋರಾಟ ಸಮಿತಿಯಿಂದ ಕಂದಾಯ ಸಚಿವರು, ವಿರೋಧ ಪಕ್ಷದ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ
ಜಯ ಧ್ವಜ ನ್ಯೂಸ್, ರಾಯಚೂರು, ಜು.23- ಯರಗೇರಾ ತಾಲೂಕು ಹೋರಾಟ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರರವರನ್ನು ಭೇಟಿಯಾಗಿ ಮನವಿ ಮಾಡಲಾಯಿತು .
ಯರಗೇರಾ ತಾಲೂಕ ಘೋಷಣೆ ಮಾಡಲು ಹೋರಾಟ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಈ ಮನವಿ ಪತ್ರ ಸ್ವೀಕರಿಸಿದ ಸಚಿವರು ಯರಗೇರಾ ತಾಲೂಕ ಘೋಷಣೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಆಶ್ವಾಸನೆ ನೀಡಿದ್ದು ಇತರ ನಾಯಕರು ಸಹ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕರರಾದ ಮಹ್ಮದ್ ನಿಜಾಮುದ್ದೀನ್ , ಸಂಚಾಲಕರಾದ ಬಸವರಾಜ್ ಹೂಗಾರ್ ಮತ್ತು ಪದಾಧಿಕಾರಿಗಳಾದ ಶ್ರೀ ವಿದ್ಯಾನಂದ ರೆಡ್ಡಿ, ಮೆಹಬೂಬ್ ಪಟೇಲ್, ರಾಘವೇಂದ್ರ ಚಾರ್ಯ ಜೋಷಿ ,ಟಿ. ಜನಾರ್ಧನ, ವೈ . ಭೀಮಸೇನ ನಾಯಕ, ಮೂತಿ೯ ಶೆಟ್ಟಿ, ಮಹಮ್ಮದ್ ರಫಿ, ಜಗದೀಶ್ ರೆಡ್ಡಿ,ರಮೇಶ್ ಮಿಲ್ ,ಮಹಾದೇವ ನಾಯಕ್, ನರಸಿಂಹ ಗುಂಜಳ್ಳಿ, ಅನಿಲ್ ಕುಮಾರ್ ಗುಂಜಳ್ಳಿ, ಫಾರೂಕ್ ಎಲ್ಐಸಿ, ಸುನೀಲ್ , ಮುಕ್ತರ , ಇನ್ನಿತರರು ಉಪಸ್ಥಿತರಿದ್ದರು.
Comments
Post a Comment