ಕೃಷ್ಣಗಿರಿ ಹಿಲ್ಸ್ ಬಡಾವಣೆಯಲ್ಲಿ ಕಳ್ಳರ ಚಲನ ವಲನ ಶಂಕೆ: ನಿವಾಸಿಗಳು ಭಯ ಭೀತ. ಜಯ ಧ್ವಜ ನ್ಯೂಸ್, ರಾಯಚೂರು,ಜು.24- ನಗರದ ಹೊರ ವಲಯದ ಕೃಷ್ಣಗಿರಿ ಹಿಲ್ಸ್ ನಲ್ಲಿ ನಿನ್ನೆ ರಾತ್ರಿ ಕಳ್ಳರ ಚಲನ ವಲನ ಶಂಕೆ ವ್ಯಕ್ತವಾಗಿದ್ದು ನಿವಾಸಿಗಳಲ್ಲಿ ಭಯ ಭೀತಿ ಹುಟ್ಟಿಸಿದೆ.
ನಾಲ್ಕೈದು ಮುಸುಕು ಧಾರಿಗಳು ಮನೆಗಳ ಮುಂದೆ ಓಡಾಡುವ ಮತ್ತು ಮನೆಯೊಂದರ ಒಳಕ್ಕೆ ಹೊಕ್ಕು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸ್ ಇಲಾಖೆ ಸೂಕ್ತವಾಗಿ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಅಂಬಾಜಿರಾವ್ ಮೈದರಕರ್ ಒತ್ತಾಯಿಸಿದ್ದಾರೆ.
Comments
Post a Comment