ದಾಸನಾಗು ವಿಶೇಷನಾಗು ಕಾರ್ಯಕ್ರಮದಲ್ಲಿ ರಮೇಶ್ ಕುಲಕರ್ಣಿ ಗೆ ಸನ್ಮಾನ .  
                                                                                      ಜಯ ಧ್ವಜ ನ್ಯೂಸ್ , ರಾಯಚೂರು, ಆ.22-                                                ನಗರದ ಕರ್ನಾಟಕ ಸಂಘದಲ್ಲಿ ಶ್ರುತಿ ಸಾಹಿತ್ಯ ಮೇಳದ ವತಿಯಿಂದ ಗುರುವಾರ ಸಾಯಂಕಾಲ ನಡೆದ ದಾಸನಾಗು ವಿಶೇಷನಾಗು  ಎಂಬ ವಿನೂತನ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಚುನಾಯಿತ ಪ್ರತಿನಿಧಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಶೃತಿ ಸಾಹಿತ್ಯ ಮೇಳದ ಪ್ರಧಾನ ಕಾರ್ಯದರ್ಶಿಗಳಾದ  ರಮೇಶ್ ಕುಲಕರ್ಣಿ ರವರನ್ನು ಖ್ಯಾತ  ಪ್ರವಚನಕಾರರಾದ   ಸುಸ್ವರಂ ನಾಗರಾಜ ಆಚಾರ್ಯರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ  ಬ್ರಾಹ್ಮಣ ಸಮಾಜದ ಹಿರಿಯರಾದ  ಹನುಮಂತರಾವ್ ಕಲ್ಲೂರಕರ್ , ಕರ್ನಾಟಕ ಸಂಘದ ಅಧ್ಯಕ್ಷರಾದ  ಕೆ. ಶಾಂತಪ್ಪ , ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಜಲ್ದಾರ್,  ಆರ್  ಡಿ ಎ ಮಾಜಿ ಅಧ್ಯಕ್ಷರಾದ  ಕಡಗೋಳ್ ಆಂಜನೇಯ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಶ್ರುತಿ ಸಾಹಿತ್ಯ ಮೇಳದ ಗೌರವ ಅಧ್ಯಕ್ಷರಾದ  ಜಯಲಕ್ಷ್ಮಿ ಮಂಗಳಮೂರ್ತಿ,ಶೃತಿ ಸಾಹಿತ್ಯ ಮೇಳದ ಅಧ್ಯಕ್ಷರಾದ  ಮುರುಳಿಧರ ಕುಲಕರ್ಣಿ, ಜಿ. ಎಂ. ವೀರೇಶ, ವಿಜಯ ಕುಮಾರ್ ಸಜ್ಜನ್, ಮಹಾದೇವಪ್ಪ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog