ನಾಡಹಬ್ಬ ದಸರಾ ಅಂಗವಾಗಿ ಬಹುಭಾಷಾ ಕವಿಗೋಷ್ಟಿ ಉದ್ಘಾಟನೆ   
                                                                                ಜಯ ಧ್ವಜ ನ್ಯೂಸ್ ,ರಾಯಚೂರು, ಸೆ.30- ಮಹಾನಗರಪಾಲಿಕೆ ಮತ್ತು ಐತಿಹಾಸಿಕ ಕೋಟೆ ಅಧ್ಯಯನ ಸಮಿತಿ ರಾಯಚೂರು ವತಿಯಿಂದ ನಾಡಹಬ್ಬ ದಸರಾ-2025 ಅಂಗವಾಗಿ ಬಹುಭಾಷಾ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಯನ್ನು ಬಸ್ ನಿಲ್ದಾಣ ಎದುರಗಡೆಯಿರುವ  ಮಕ್ಕಾದರವಾಜಾ ದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು  ಜ್ಯೋತಿ ಬೆಳಗಿಸುವ ಮೂಲಕ   ಚಾಲನೆಯನ್ನು ಮಹಾಪೌರರಾದ  ನರಸಮ್ಮ ನರಸಿಂಹಲು ಮಾಡಿಗಿರಿ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಉಪ-ಮಹಾಪೌರರಾದ ಡಾ.  ಸಾಜೀದ ಸಮೀರ,ಮಹಾನಗರ ಪಾಲಿಕೆ ಹಿರಿಯ ಸದಸ್ಯರಾದ  ಜಯಣ್ಣ,ಉಪ-ಆಯುಕ್ತರಾದ  ಸಂತೋಷ ರಾಣಿ, ಹಿರಿಯ ಸಾಹಿತಿಗಳಾದ ಬಾಬು ಬಂಡಾರಿಗಲ್,  ಪತ್ರಕರ್ತರಾದ  ಕೆ.ಸತ್ಯನಾರಾಯಣ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ  ನರಸಿಂಹಲು ಮಾಡಿಗಿರಿ,  ಮಣಿಕಂಠ ,ಕೋಟೆ ಅಧ್ಯಯನ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ  ಬಾಷೆಗಳ ಕವಿಗಳು, ಕಾವ್ಯಾಸಕ್ತರು ಉಪಸ್ಥಿತರಿದ್ದರು.



Comments

Popular posts from this blog