ಮಂತ್ರಾಲಯ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭೇಟಿ.                                                                       ಜಯಧ್ವಜ ನ್ಯೂಸ್, ರಾಯಚೂರು,ಅ.22- ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರರವರು  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದರು.   

                  ಕುಟುಂಬ  ಸಮೇತರಾಗಿ ಆಗಮಿಸಿದ ಅವರು ಪ್ರಾರಂಭದಲ್ಲಿ   ಮಂಚಾಲಮ್ಮ ದೇವಿ ದರ್ಶನ ಪಡೆದು  ನಂತರ ರಾಯರ ಬೃಂದಾವನದ ದರ್ಶನ ಪಡೆದು ತದನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಫಲ ಮಂತ್ರಾಕ್ಷತೆ, ಸ್ಮರಣಿಕೆ ಪಡೆದುಕೊಂಡರು.

Comments