
ಸನ್ನಿ ರೋನಾಲ್ಡ್ ಗಡಿಪಾರು ಪ್ರಕರಣದಲ್ಲಿ ರವಿ ಬೋಸರಾಜು ಕೈವಾಡವೆಂದು ಜೆ ಬಿ ರಾಜು ಮಾಡಿರುವ ಆರೋಪದಲ್ಲಿ ಹುರುಳಿಲ್ಲ -ನರಸಿಂಹಲು ಮಾಡಗಿರಿ. ಜಯ ಧ್ವಜ ನ್ಯೂಸ್, ರಾಯಚೂರು, ಜು.30- ಸನ್ನಿ ರೋನಾಲ್ಡ್ ಗಡಿಪಾರು ಪ್ರಕರಣದಲ್ಲಿ ರವಿ ಬೋಸರಾಜು ಕೈವಾಡವಿದೆ ಎಂದು ದಲಿತ ಮುಖಂಡರಾದ ಜೆಬಿ ರಾಜು ಮಾಡಿರುವ ಆರೋಪದಲ್ಲಿ ಹುರುಳಿಲ್ಲವೆಂದು ಕಾಂಗ್ರೆಸ್ ಮುಖಂಡ ಹಾಗೂ ಆರ್ ಡಿ ಎ ಸದಸ್ಯ ನರಸಿಂಹಲು ಮಾಡಗಿರಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸನ್ನಿ ರೋನಾಲ್ಡ್ ಸಮಾಜದಲ್ಲಿ ಭಯ ಭೀತಿ ಮತ್ತು ಪೊಲೀಸರ ಮೇಲೆ ಹಲ್ಲೆಯತ್ನ ಪ್ರಕರಣ ಮುಂತಾದವುಗಳಿಂದ ಕಾನೂನು ಕೈಗೆತ್ತಿಕೊಂಡಿದ್ದರಿಂದ ಅವರನ್ನು ಗಡಿಪಾರು ಮಾಡಲಾಗಿದೆ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ನೀಡಿದ್ದರಿಂದಲೆ ಸಹಾಯಕ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದಾರೆ ಇದರಲ್ಲಿ ರವಿ ಬೋಸರಾಜು ಒತ್ತಡ ಹೇಗೆ ಮಾಡಲು ಸಾಧ್ಯವೆಂದು ಪ್ರಶ್ನಿಸಿದರು. ಬಹಿರಂಗವಾಗಿ ತಲ್ವಾರ್ ಹಿಡಿದು ಹೂಂಕರಿಸಿದ ಸನ್ನಿ ರೋನಾಲ್ಡ್ ಕಾನೂನು...