ಮೌಲಾನಾ ಆಜಾದ್ ಭವನ ನಿರ್ಮಾಣಕ್ಕೆ ಎ.ವಸಂತಕುಮಾರ ಮನವಿ. ರಾಯಚೂರು,ಆ.31- ಜಿಲ್ಲೆಯಲ್ಲಿ ಮೌಲಾನಾ ಆಜಾದ್ ಭವನ ನಿರ್ಮಾಣ ಮಾಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ರವರಿಗೆ ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ ಮನವಿ ಮಾಡಿದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ಕಛೇರಿ ಮತ್ತು ಜಿಲ್ಲಾ ವಕ್ಫ್ ಕಛೇರಿ ಒಂದೆ ಸೂರಿನಡಿ ಬರುವಂತೆ ಮೌಲಾನಾ ಆಜಾದ್ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿ ಕಾಲಮಿತಿಯಲ್ಲಿ ಜಾರಿ ಮಾಡುವಂತೆ ಅವರು ಕೋರಿದರು.
Comments
Post a Comment