ಒಳಮೀಸಲಾತಿ ಮಧ್ಯಂತರ ವರದಿ ಖಂಡಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ- ರವೀಂದ್ರನಾಥ್ ಪಟ್ಟಿ
ಜಯಧ್ವಜ ನ್ಯೂಸ್, ರಾಯಚೂರು, ಮಾ.27- ಒಳಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನ ದಾಸ್ ಅವರ ಏಕಸದಸ್ಯ ಆಯೋಗ ಇಂದು ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.ಒಳಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ನವಂಬರನಲ್ಲಿ ರಾಜ್ಯ ಸರ್ಕಾರವು ನಿವೃತ ನ್ಯಾಯಮೂರ್ತಿ ಎಚ್. ಎಸ್. ನಾಗಮೋಹನ ದಾಸ್ ಅದ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.ಈ ಆಯೋಗ ಇಂದು ಮಧ್ಯಂತರ ವರದಿಯನ್ನು ಇಂದು ಸಲ್ಲಿಸಿದೆ.ಪರಿಶಿಷ್ಟ ಜಾತಿಗಳ ಒಳಮೀಸಲಾತಿ ನೀಡುವ ಬಗ್ಗೆ ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದಲ್ಲಿ ವರದಿಯನ್ನು ಆಯೋಗ ನೀಡಿದೆ.ಇದನ್ನು ಛಲವಾದಿ ಮಹಾಸಭಾ ಖಂಡಿಸಿ ಹೊಸ ನೂತನ ಜನಗಣತಿಯನ್ನು ಪ್ರಾರಂಭಿಸುವುದರ ಮೂಲಕ ದತ್ತಾಂಶವನ್ನು ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಈ ಒಳಮೀಸಲಾತಿಯನ್ನು ವಿರೋಧಿಸಿ ಸುಪ್ರೀಂ ಕೋರ್ಟಿಗೆ ಆಪಿಲ್ ಸಲ್ಲಿಸಲಾಗುವುದೆಂದು ಛಲವಾದಿ ಮಹಾಸಭಾ ಹಿರಿಯ ಮುಖಂಡರಾದ ರವೀಂದ್ರನಾಥ್ ಪಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
Post a Comment