ಹೆಚ್ ಪಿ ಇ ಎಲ್ ಸ್ವತಂತ್ರ ನಿರ್ದೇಶಕರಾಗಿ ಗಿರೀಶ್ ಕನಕವೀಡು ಮುಂದುವರಿಕೆ. ಜಯ ಧ್ವಜ ನ್ಯೂಸ್, ರಾಯಚೂರು, ಏ.25- ಭಾರತ ಸರ್ಕಾರದ ಪ್ರತಿಷ್ಠಿತ ಹೆಮಿಸ್ಪಿಯರ್ ಪ್ರಾಪರ್ಟೀಸ್ ಇಂಡಿಯಾ ಲಿಮಿಟೆಡ್ ಸ್ವತಂತ್ರ ನಿರ್ದೇಶಕರಾಗಿದ್ದ ಭಾರತಿಯ ಜನತಾ ಪಕ್ಷದ ಮುಖಂಡರು ಹಾಗು ಬ್ರಾಹ್ಮಣ ಸಮಾಜದ ಮುಖಂಡರು ಆಗಿರುವ ಇವರನ್ನು ಮತ್ತೆ ಮುಂದುವರಿಸಲಾಗಿದೆ. ಆಡಳಿತ ನಿರ್ವಹಣೆ ಹಾಗೂ ನಾಯಕತ್ವ ಅಂಶ ಮನಗೊಂಡು ಇವರನ್ನು ಮುಂದುವರೆಸಲಾಗಿದೆ ಕಳೆದ ಮೂರು ದಶಕಗಳಿಂದ ಇವರು ರಾಜಕೀಯ ಜೀವನದಲ್ಲಿದ್ದು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Comments
Post a Comment