ಒಳ ಮೀಸಲಾತಿ ಜಾರಿಯಾಗುವವರೆಗೂ ಹುದ್ದೆಗಳ ನೇಮಕಾತಿ ಮಾಡದಂತೆ ಮಾದಿಗ ದಂಡೋರಾ ಮನವಿ. ಜಯ ಧ್ವಜ ನ್ಯೂಸ್, ರಾಯಚೂರು,ಫೆ.24- ಒಳ ಮೀಸಲಾತಿ ಜಾರಿಯಾಗುವವರೆಗೂ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ ಮಾಡದಂತೆ ಮಾದಿಗ ದಂಡೋರಾ ಮನವಿ ಮಾಡಿದೆ.
ರಾಜ್ಯ ಸರ್ಕಾರ ಒಳ ಮೀಸಲಾತಿ ಅನ್ವಯ ಈಗಾಗಲೆ ಮೀಸಲಾತಿ ಪ್ರಕಟಿಸಿದೆ ಆದರೆ ಅಲೆಮಾರಿ ಮತ್ತು ಆದಿ ದ್ರಾವಿಡ, ಆದಿ ಕರ್ನಾಟಕ ಮುಂತಾದ ಜಾತಿಗಳ ಮತ್ತು 101 ಜಾತಿಗಳಿಗೆ ಬಹುದೊಡ್ಡ ಆನ್ಯಾಯವಾಗಿದ್ದು ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು ಆದ್ದರಿಂದ ಒಳ ಮೀಸಲಾತಿ ಗೊಂದಲ ಬಗೆಹರಿಯುವವರೆಗೂ ಹುದ್ದೆಗಳ ನೇಮಕಾತಿ ನೇಮಕಾತಿ ಸ್ಥಗಿತಕ್ಕೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ದುಳ್ಳಯ್ಯ ಗುಂಜಳ್ಳಿ, ಸುರೇಶ್ ದುಗನೂರು, ಜಕ್ರಪ್ಪ ಹಂಚಿನಾಳ,ರಂಜಿತ ದಂಡೋರಾ, ಭೀಮೇಶ, ದಾವಿದ,ಮಾರುತಿ, ಇನ್ನಿತರರು ಇದ್ದರು.



Comments
Post a Comment