ವಾರ್ಡ್ ನಂ.22 ರಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಮನವಿ.                                                 ಜಯ ಧ್ವಜ ನ್ಯೂಸ್, ರಾಯಚೂರು,ಮೇ.13-                      ನಗರದ ವಾರ್ಡ್ ನಂ.22ರಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮನವಿ ಮಾಡಿದೆ. ಸಂಘಟನೆ ಸದಸ್ಯರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಮಡ್ಡಿ ಪೇಟೆಯ ಕೆಲ ಪ್ರದೇಶದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಅಲ್ಲದೆ ಬೀದಿ ದೀಪ, ಒಳ ಚರಂಡಿ, ಶೌಚಾಲಯ, ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಕುಂಠಿತವಾಗಿದೆ ಬೀದಿ ನಾಯಿ, ಬಿಡಾಡಿ ದಿನಗಳ ಹಾವಳಿಯಿದ್ದು ಮಹಾನಗರ ಪಾಲಿಕೆ ಕ್ರಮ ವಹಿಸಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ವರಲಕ್ಷ್ಮೀ, ಹೆಚ್.ಪದ್ಮಾ, ಸರೋಜ, ಶಕುಂತಲಾ, ನಾಗಮ್ಮ ಇನ್ನಿತರರು ಉಪಸ್ಥಿತರಿದ್ದರು .   

Comments

Popular posts from this blog