ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೋರಾಟಗಾರರ ಪ್ರಶ್ನೆ ಜಯ ಧ್ವಜ ನ್ಯೂಸ್ ,ರಾಯಚೂರು,ಸೆ.1- ಜಿಲ್ಲೆಗೆ ಮಂತ್ರಿ ಮತ್ತು ಉಸ್ತುವಾರಿ ವಂಚಿತರಾಗಿರುವುದನ್ನು ಖಂಡಿಸಿ, ಸ್ವಾತಂತ್ರೋತ್ಸವದ ದಿನದಂದು ಖಂಡಿಸಿ, ಗೋ - ಬ್ಯಾಕ್ ಘೋಷಣೆ ಯೊಂದಿಗೆ ಪ್ರತಿಭಟಿಸಿದಾಗ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹೋರಾಟಗಾರರನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕಿರುವುದನ್ನು ಖಂಡಿಸಿ ಮನವಿ ಪತ್ರ ಸಲ್ಲಿಸಲಾಯಿತು. ಡಾ.ಅಜಯ್ ಸಿಂಗ್ ರವರ ಸಚಿವ ಸ್ಥಾನಕ್ಕೆ ಯಾವುದೇ ವಿರೋಧ ಇಲ್ಲ. ಆದರೆ ಡಿಕೆ ಶಿವಕುಮಾರ್ ಅವರ ಘನ ಸರಕಾರದಲ್ಲಿ ಜಿಲ್ಲೆಯ ತಮ್ಮ ಕಾಂಗ್ರೆಸ್ ಪಕ್ಷದ ನಾಲ್ಕು ಚುನಾಯಿತ ಜನಪ್ರತಿನಿಧಿಗಳು, ನಾಲ್ಕು ವಿಧಾನ ಪರಿಷತ್ ಸದಸ್ಯರು ಹೊಂದಿದ್ದರು, ನಮ್ಮ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವದು ಅತ್ಯಂತ ಖೇದಕರ ಸಂಗತಿಯಾಗಿದೆ. ಡಿ ಕೆ ಶಿವಕುಮಾರವರ ಮುಖ್ಯಮಂತ್ರಿಗಳಾದ ನಂತರ ಕೇವಲ ಎರಡು ತಿಂಗಳ ಒಳಗಾಗಿ ಜಿಲ್ಲೆಯ ಮಾನವಿ, ದೇವದುರ್ಗ ಮತ್ತು ಲಿಂಗಸೂಗರ ಈ ಮೂರು ತಾಲೂಕಿನ ಹಳ್ಳಿಗಳಲಿ, ದಲಿತರ ಬಿಬಿತ್ಸ, ಅಮಾನುಷ ಕೊಲೆಗೀಡಾದ, ನಾಡಿನ ಮುಖ್ಯ ಮಂತ್ರಿಗಳು, ಗ್ರಹ ಮಂತ್ರಿಗಳು ಹಾಗೂ ತಾವು (ಉಸ್ತುವಾರಿ) ಜಿಲ್ಲೆಗೆ ಭೇಟಿ ನೀಡಲಿಲ್ಲ. ಕೆಲ ಅಧಿಕಾರಿಗಳಿಂದ ತಿಳಿದು ಬಂದದು ಏನೆಂದರೆ, ವಿಧಾನ ಸಭೆಯು ಸದನ ಇರುವದರಿಂದ ಸದ್ಯ ಬರಲ್ಲ ಎಂಬ ವಿಚಾರ ವ್ಯಕ್ತವಾಯಿತು. ಆದರೆ ಹೋರಾಟಗಾರರ ಪ್ರಶ್ನೆ ನೇರವಾಗಿ ತಮ್ಮ ಸರ್ಕಾರಕ್ಕೆ?? ತ...