ಶ್ರೀರಂಗಂ ಕ್ಷೇತ್ರಕ್ಕೆ ಶ್ರೀ ಸುಬುಧೇಂದ್ರತೀರ್ಥರ ಭೇಟಿ.
ಶ್ರೀರಂಗಂ ಕ್ಷೇತ್ರಕ್ಕೆ ಶ್ರೀ ಸುಬುಧೇಂದ್ರತೀರ್ಥರ ಭೇಟಿ. ರಾಯಚೂರು,ಜೂ.28- ತಮಿಳು ನಾಡಿನ ಶ್ರೀರಂಗಂ ಕ್ಷೇತ್ರಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಭೇಟಿ ನೀಡಿದರು. ಪವಿತ್ರ ಕಾವೇರಿ ನದಿಯಲ್ಲಿ ದಂಡೋದಕ ಸ್ನಾನ ಮಾಡಿ ಶ್ರೀ ರಂಗನಾಥ ದೇವರ ದರ್ಶನ ಪಡೆದರು. ನಂತರ ಶ್ರೀ ಸುಮತೀಂದ್ರತೀರ್ಥರ ಸನ್ನಿದಾನದಲ್ಲಿ ಶ್ರೀ ಮನ್ಮೂಲರಾಮ ದೇವರ ಪೂಜೆ ನೆರವೇರಿಸಿದರು. ಭಕ್ತರಿಗೆ ಹಾಗೂ ಶಿಷ್ಯರಿಗೆ ಮುದ್ರಾ ಧಾರಣೆ ಹಾಗೂ ಫಲ ಮಂತ್ರಾಕ್ಷತೆ ನೀಡಿದರು.
Comments
Post a Comment