ಮಂತ್ರಾಲಯ: ಶ್ರೀ ಸುಜಯೀಂದ್ರತೀರ್ಥರ ಆರಾಧನಾ ಮಹೋತ್ಸವ.
ಮಂತ್ರಾಲಯ: ಶ್ರೀ ಸುಜಯೀಂದ್ರತೀರ್ಥರ ಆರಾಧನಾ ಮಹೋತ್ಸವ. ರಾಯಚೂರು,ಜ.25- ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಸುಜಯೀಂದ್ರತೀರ್ಥರ ಆರಾಧನೆ ಮಹೋತ್ಸವ ಅಂಗವಾಗಿ ಪ್ರಾತಕಾಲ ರಥೋತ್ಸವಕ್ಕೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಚಾಲನೆ ನೀಡಿ ರಥ ಪೂಜೆ, ಪುಷ್ಪವೃಷ್ಟಿ ಮತ್ತು ಮಂಗಳಾರತಿ ನೆರವೇರಿಸಿದರು.
ಶ್ರೀ ಸುಜಯೀಂದ್ರತೀರ್ಥರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿದರು.
ಪಂಡಿತರಿಂದ ಪ್ರವಚನ ಕಾರ್ಯಕ್ರಮ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment