ಮಂತ್ರಾಲಯ: ರಥ ಸಪ್ತಮಿ ಅಂಗವಾಗಿ ಪಂಚ ರಥೋತ್ಸವ.
ಮಂತ್ರಾಲಯ: ರಥ ಸಪ್ತಮಿ ಅಂಗವಾಗಿ ಪಂಚ ರಥೋತ್ಸವ. ರಾಯಚೂರು,ಜ.28- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಥ ಸಪ್ತಮಿ ಅಂಗವಾಗಿ ಪಂಚ ರಥೋತ್ಸವ ಜರುಗಿತು.
ಪ್ರಾತಕಾಲದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ರಜತ ಗಜವಾಹನ, ರಜತ, ಸುವರ್ಣ, ನವರತ್ನ ,ಕಾಷ್ಟ ರಥೋತ್ಸವಕ್ಕೆ ಚಾಲನೆ ನೀಡಿದರು.ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment