ಕಾಡ್ಲೂರಲ್ಲಿ ಏ.6 ರಂದು  ಶ್ರೀರಾಮನವಮಿ ಉತ್ಸವ 
ರಾಯಚೂರು,ಏ.5- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ನವವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ಸನ್ನಿದಾನದಲ್ಲಿ ಏ.6 ರವಿವಾರದಂದು ಶ್ರೀರಾಮನವಮಿ ಅಂಗವಾಗಿ   ಶ್ರೀರಾಮೋತ್ಸವ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ಸುಪ್ರಭಾತ,  ನಿರ್ಮಾಲ್ಯ ವಿಸರ್ಜನೆ,            ಧ್ವಜಾರೋಹಣ,  ಶ್ರೀ ರಾಮಾಷ್ಠಕ ಸ್ತೋತ್ರ, ವಾಯುಸ್ತುತಿ, ಅಷ್ಟೋತ್ತರ ಪಾರಾಯಣ. ಶ್ರೀರಾಮದೇವರಿಗೆ, ಶ್ರೀಪ್ರಾಣದೇವರಿಗೆ ಅಭಿಷೇಕ, ಅಲಂಕಾರ, ಶ್ರೀ ರಾಮದೇವರ ತೊಟ್ಟಿಲು ಮಹೋತ್ಸವ, ದಾಮೋದರ್ ಆಚಾರ್ ಪುರೋಹಿತ  ಕಾಡ್ಲೂರು ಇವರಿಂದ ಶ್ರೀರಾಮದೇವರ ಕಥೆ  ನಂತರ ನೈವೇದ್ಯ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಕಾಡ್ಲೂರು ಸಂಸ್ಥಾನ ಹಾಗೂ ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಾರೆ.


Comments

Popular posts from this blog