Posts

Showing posts from May, 2023

ಮುಂಗಾರು ಪ್ರವೇಶ: ನಗರದಲ್ಲಿ ತಂಪೆರದ ಮಳೆರಾಯ.

Image
  ಮುಂಗಾರು ಪ್ರವೇಶ: ನಗರದಲ್ಲಿ ತಂಪೆರದ ಮಳೆರಾಯ.             ರಾಯಚೂರು ,ಮೇ.31- ನಗರದಲ್ಲಿ  ಮುಂಗಾರು ಮಳೆ ಪ್ರವೇಶದಿಂದ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರದ  ವಾತಾವರಣ ನಿರ್ಮಾಣವಾಗಿದೆ.                                        ಕಳೆದ ಒಂದು ತಿಂಗಳಿನಿಂದ ಮಳೆಯಾಗದೆ ಬೇಸಿಗೆ ಬೇಗೆಯಿಂದ ಬಳಲುತ್ತಿದ್ದ ಜನ, ಜಾನುವಾರುಗಳಿಗೆ ನಿಟ್ಟುಸಿರು ಬಿಡುವಂತಾಗಿದೆ.  ಭಾರಿ ಗುಡುಗು, ಸಿಡಿಲು, ಗಾಳಿಯಿಂದ ಕೂಡಿದ್ದು ಮಳೆ ಒಂದೆಡೆ ತಂಪೆರೆಯುವ ಮತ್ತೊಂದೆಡೆ ರಸ್ತೆಗಳಲ್ಲಿ ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.                                     ಸಕಾಲಕ್ಕೆ ಮುಂಗಾರು ಪ್ರವೇಶದಿಂದ ರೈತರಿಗೆ ಆಶಾದಾಯಕವಾಗಿದ್ದು ಕೃಷಿ ಚಟುವಟಿಕೆ ಗರಿಗೆದರಲಿದೆ.

ಎಸ್. ಬಿ . ಐ ಫೌಂಡೇಶನ್ ಮತ್ತು ಎ.ಪಿ.ಡಿ ವತಿಯಿಂದ ಜೀವನಚಕ್ರ ವಿಧಾನ ಯೋಜನೆ ಉದ್ಘಾಟನೆ .

Image
  ಎಸ್ .  ಬಿ  .  ಐ   ಫೌಂಡೇಶನ್    ಮತ್ತು   ಎ . ಪಿ . ಡಿ   ವತಿಯಿಂದ   ಜೀವನಚಕ್ರ     ವಿಧಾನ   ಯೋಜನೆ   ಉದ್ಘಾಟನೆ   .   ರಾಯಚೂರು,ಮೇ.31-   ಎಸ್ .  ಬಿ .  ಐ   ಫೌಂಡೇಶನ್ ,  ಎ . ಪಿ . ಡಿ   ಮತ್ತು   ಜಿಲ್ಲಾ   ವಿಕಲಚೇತನರ   ಕಲ್ಯಾಣ   ಇಲಾಖೆ   ಸಂಯೋಜನೆ   ಇಂದ   ಜೀವನಾಚಕ್ರ   ವಿಧಾನ   ಯೋಜನೆಯನ್ನು   ಉದ್ಘಾಟನೆ   ಮಾಡಲಾಯಿತು .   ಈ   ಸಂದರ್ಭದಲ್ಲಿ   ಮುಖ್ಯ   ಉದ್ಘಾಟಕರಾಗಿ   ಆಗಮಿಸಿರುವ   ಅಧ್ಯಕ್ಷರು   ಮತ್ತು   ಮುಖ್ಯ   ಕಾರ್ಯನಿರ್ವಾಹಕ   ಅಧಿಕಾರಿ   ಗಳು   ಆಗಿರುವ   ಲಲಿತ್   ಮೋಹನ   ಎಸ್ .  ಬಿ .  ಐ    ಫೌಂಡೇಶನ್   ಮುಂಬೈ   ಯೋಜನೆಯನ್ನು   ಉದ್ಘಾಟನೆ   ಮಾಡಿದರು .         ಜಿಲ್ಲಾ   ವಿಕಲಚೇತನರ   ಕಲ್ಯಾಣ   ಅಧಿಕಾರಿಗಳಾದ   ಶ್ರೀ   ಶರಣ   ಗೌಡ   ಅವರು   ಕಾರ್ಯಕ್ರಮವನ್ನು   ಉದ್ದೇಶಿಸಿ   ಮಾತನಾಡಿದರು ,  ಈ   ಸಂದರ್ಭದಲ್ಲಿ  20  ಜನ   ವಿಶೇಷ   ಚೇತನ   ಮಕ್ಕಳಿಗೆ   ಕಲಿಕಾ   ಸಾಮಗ್ರಿಗಳು 15  ಜನರಿಗೆ   ಸಾಧನ   ಸಲಕರಣೆಗಳನ್ನು   ವಿತರಿಸಲಾಯಿತು  ಮತ್ತು   ಇಬ್ಬರಿಗೆ   ತಮ್ಮ   ಜೀವನೋಪಾಯಕ್ಕಾಗಿ   ಹಣಕಾಸಿನ   ನೆರವನ್ನು   ನೀಡಲಾಯಿತು .  ಈ   ಸಂದರ್ಭದಲ್ಲಿ   ರಾಕೇಶ್   ಜಾ ,  ಎ . ಪಿ . ಡಿ   ಸಂಸ್ಥೆಯ   ಸಿ . ಇ . ಒ   ಆದ   ಡಾ .  ಸೆಂದಿಲ್ ,  ಸುನಿಲ್   ಕುಮಾರ್ ,  ಜ್ಯೋತಿಕಾ ,  ಪ್ರೇರಣಾ   ರಮೇಶ್   ಗೊಂಗಿಡಿ ,  ವಿ . ಆರ್ .  ಡೆಬ್ಲುಗಳು   ಮತ್ತು   ಯೋಜ

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರ ಸಭೆ: ಅಂತರ್ಜಲ ಸಮೃದ್ಧಿ, ಕೆರೆಗಳ ಅಭಿವೃದ್ಧಿಗೆ ಕ್ರಮ- ಎನ್.ಎಸ್ ಬೋಸರಾಜು

Image
  ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರ ಸಭೆ:     ಅಂತರ್ಜಲ ಸಮೃದ್ಧಿ, ಕೆರೆಗಳ ಅಭಿವೃದ್ಧಿಗೆ ಕ್ರಮ- ಎನ್.ಎಸ್ ಬೋಸರಾಜು ರಾಯಚೂರು,ಮೇ.30-ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ  ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾಗಿ ಎನ್.ಎಸ್ ಬೋಸರಾಜು ಅವರು ಅಧಿಕಾರ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ವಿಕಾಸಸೌದದಲ್ಲಿ  ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬೆಂಗಳೂರಿನ ವಿಕಾಸಸೌಧದ ಸಣ್ಣ ನೀರಾವರಿ ಇಲಾಖೆಯ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಾಂದರ್ಭಿಕ ಸಭೆಯಲ್ಲಿ ಮಾತನಾಡಿ, ಸಣ್ಣ ನೀರಾವರಿಯ ಮೇಲೆ ಅವಲಂಬನೆಯಾಗಿರುವ ರೈತರಿಗೆ ಬೆಳೆಗಳಿಗೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಸೂಚಿಸಿದರು‌. ಅಂತರ್ಜಲ ಸಮೃದ್ಧಿಗಾಗಿ ಕೆರೆಗಳ ನಿರ್ಮಾಣ ಹಾಗೂ ಈಗಿರುವ ಕೆರೆಗಳ ವಾಸ್ತವ ಪರಿಸ್ಥಿತಿಯ ವರದಿ ಪಡೆದು  ಅಧಿಕಾರಿಗಳೊಂದಿಗೆ ಸಾಂದರ್ಭಿಕವಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಯತೀಶ್ ಚಂದ್ರನ್ ಸೇರಿ ಅನೇಕ ಅಧಿಕಾರಿಗಳು ಇದ್ದರು.

ಪ್ರಧಾನಿ ಮೋದಿಯವರ 9 ವರ್ಷದ ಆಡಳಿತದಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ: ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ- ಅಮರೇಶ್ವರನಾಯಕ

Image
  ಪ್ರಧಾನಿ ಮೋದಿಯವರ 9 ವರ್ಷದ ಆಡಳಿತದಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ: ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ-ಅಮರೇಶ್ವರನಾಯಕ ರಾಯಚೂರು,ಮೇ.೩೦- ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ ಎಂದು ಸಂಸದ ಅಮರೇಶ್ವರ ನಾಯಕ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ೯ ವರ್ಷದ ಆಡಳಿತದಲ್ಲಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ ಎಂದ ಅವರು ಬಡವರ ಪರ, ರೈತರ ಪರ ಹಾಗೂ ಮಹಿಳೆಯರ ಪರ ಮತ್ತು ಯುವಕರ ಪರ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ವಿಶೇಷ ಒತ್ತು ನೀಡಿದ್ದಾರೆ ಎಂದರು. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ನೀಡಿದ್ದಾರೆ ಇಡಿ ದೇಶಕ್ಕೆ ಕೋವಿಡ್ ವ್ಯಾಕ್ಸಿನ್ ದೊರಕಿಸಿಕೊಟ್ಟಿದ್ದಾರೆ ಅಲ್ಲದೆ ವಿದೇಶಗಳಿಗೆ ವ್ಯಾಕ್ಸಿನ ನೀಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದರು. ರಕ್ಷಣಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ ದೇಶದ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದಾರೆ ಭಾರತೀಯ ಸೈನಿಕರ ಮನೋಬಲ ವೃದ್ದಿಸಿದ್ದಾರೆ ಎಂದ ಅವರು ನೂತನ ಸಂಸತ್ತು ಭವನ ನಿರ್ಮಿಸಿ ಇಡಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು. ಬ್ರಿಟೀಷರ ಕಾಲದ ವ್ಯವಸ್ಥೆಯನ್ನು ಬದಲಿಸಿ ದೇಶಿ ಸಂಸ್ಕೃತಿಗೆ ಪ್ರಧಾನ್ಯತೆ ನೀಡುತ್ತದ್ದಾರೆಂದ ಅವರು ನೂತನ ಸಂಸತ್ತು ಭವನ ಈ ಹಿಂದಿನ ಅನುಭವ ಮಂಟಪದ ಕಲ್ಪನೆಗೆ ತಕ್ಕದ್ದಾಗಿದೆ ಬಸವಣ್ಣ ಸೇರಿದಂತ

ಕಲುಷಿತ ನೀರು ಕುಡಿದು ಅಸ್ವಸ್ಥ- ಸಿಎಂ ಪರಿಹಾರದ ಭರವಸೆ: ಜಿಲ್ಲೆಯಾದ್ಯಂತ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಪರಿಶೀಲಿಸಲು ಸಚಿವ ಎನ್.ಎಸ್ ಬೋಸರಾಜು ಸೂಚನೆ.

Image
  ಕಲುಷಿತ ನೀರು ಕುಡಿದು ಅಸ್ವಸ್ಥ- ಸಿಎಂ ಪರಿಹಾರದ ಭರವಸೆ:                ಜಿಲ್ಲೆಯಾದ್ಯಂತ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಪರಿಶೀಲಿಸಲು ಸಚಿವ ಎನ್.ಎಸ್ ಬೋಸರಾಜು ಸೂಚನೆ. ರಾಯಚೂರು,ಮೇ.29- ಜಿಲ್ಲೆಯ ದೇವದುರ್ಗ ತಾಲೂಕಿನ ರೇಖಲಮರಡಿ ಹಾಗೂ ಲಿಂಗಸ್ಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ ವಿಷಪೂರಿತ ಆಹಾರ, ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಮುಂಜಾಗ್ರತೆ ಕ್ರಮವನ್ನು ವಹಿಸಬೇಕು ಅಲ್ಲದೇ ಜಿಲ್ಲೆಯ ಜನರಿಗೆ ಸರಬರಾಜಾಗುವ ಕುಡಿಯುವ ನೀರನ್ನು ಪರಿಶೀಲಿಸಿ ವರದಿ ನೀಡುವಂತೆ ಸಚಿವರಾದ ಎನ್.ಎಸ್ ಬೋಸರಾಜು ಅವರು ಜಿಲ್ಲಾಡಳಿತಕ್ಕೆ  ಸೂಚನೆ ನೀಡಿದ್ದಾರೆ. ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡ ಘಟನೆಗೆ ತಿಳಿದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಅಲ್ಲದೆ ಇಂದು ಬೆಳಗ್ಗೆ ಪರಸ್ಥಿತಿ ತಿಳಿದು ಈಗಾಗಲೆ ಅಸ್ವಸ್ಥರಾಗಿರುವವರಿಗೆ ಜಿಲ್ಲಾ ರಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಡಿಹೆಚ್ಓ ಅವರಿಗೆ ದೂರವಾಣಿ ಮುಖಾಂತರ ಮಾತನಾಡಿ ಸೂಚನೆ ನೀಡಿದರು. ಗಾಗಲೆ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಮಗುವಿಗೆ ಸರ್ಕಾರದಿಂದ ಪರಿಹಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ಜಿಲ್ಲೆಯಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ

ಬಲಿಷ್ಟ ಪ್ರಜಾಪ್ರಭುತ್ವಕ್ಕೆ ಪ್ರಜಾಪ್ರತಿನಿಧಿ ಕಾಯ್ದೆ ತಿದ್ದುಪಡಿ ಅಗತ್ಯ

Image
  ಬ ಲಿಷ್ಟ ಪ್ರಜಾಪ್ರಭುತ್ವಕ್ಕೆ ಪ್ರಜಾಪ್ರತಿನಿಧಿ ಕಾಯ್ದೆ ತಿದ್ದುಪಡಿ ಅಗತ್ಯ  ದೇಶ ಸ್ವಾತಂತ್ರö್ಯಗೊಂಡು ೭೫ ವರ್ಷಗಳು ಸಂದಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ  ಸದಾಶಯಗಳ ‘ನಮ್ಮ ಸಂವಿಧಾನ’ವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಅಳವಡಿಸಿಕೊಂಡು ಇಲ್ಲಿಗೆ ೭೩ ವರ್ಷಗಳು  ಕಳೆದಿವೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಷ್ಠಾನದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವೈಜ್ಞಾನಿಕವಾಗಿ  ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಜಗತ್ತಿನಲ್ಲಿಯೇ ಭಾರತವು ಒಂದು ಬಲಿಷ್ಟ ಪ್ರಜಾಪ್ರಭುತ್ವ ರಾಷ್ಟçವಾಗಿ  ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ. ಆದರೆ, ಇನ್ನೂ ಪರಿಣಾಮಕಾರಿಯಾಗಿ ಸಾಧಿಸಬೇಕಾದದ್ದು ಬೆಟ್ಟದಷ್ಟಿದೆ.  ವೈವಿಧ್ಯಮಯವಾಗಿರುವ ಭಾರತ ದೇಶ ಅನೇಕ ವೈಶಿಷ್ಠತೆಗಳಿಂದ ಜಗತ್ತಿನ ಗಮನವನ್ನು ಸೂಜಿಗಲ್ಲಿನಂತೆ  ಸೆಳೆಯುತ್ತಿದೆ. ಸ್ವಾತಂತ್ರö್ಯ ಪೂರ್ವದಲ್ಲಿ ಭಾರತದ ಹಲವಾರು ಪ್ರದೇಶಗಳನ್ನು ಅನೇಕ ರಾಜರು ವಂಶಪಾರಂಪರ್ಯವಾಗಿ  ಆಳ್ವಿಕೆ ಮಾಡುತ್ತಾ ಬಂದಿದ್ದರು. ಅವರಲ್ಲಿ ಮೊಘಲರು, ಡಚ್ಚರು, ಪೋರ್ಚುಗೀಸರು ಮತ್ತು ಬ್ರೀಟಿಷರು ಇದ್ದರು. ಆಗ  ಈ ದೇಶದಲ್ಲಿ ಏಕಸ್ವರೂಪದ ಸರ್ಕಾರವಾಗಲಿ, ಆಳ್ವಿಕೆಗಳಾಗಲಿ ಇರಲಿಲ್ಲ. ಸ್ವಾತಂತ್ರö್ಯದ ಸಂಭ್ರಮದಲ್ಲಿರುವಾಗಲೇ  ದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣೀಕ, ರಾಜಕೀಯ, ಅಸ್ಪçಶ್ಯತೆ, ಕಂದಾಚಾರ, ಮೌಢ್ಯಗಳು, ಅಸಮಾನತೆಗಳು  ಅಂದಿನ ರಾಜಕೀಯ ನೇತಾರರಿಗೆ ಬಹು ದೊಡ್ಡ ಸವಾಲಾಗಿದ್ದವು. ಆಗ ದೇಶದ

ಕಲುಷಿತ ನೀರು ಕುಡಿದು ಅಸ್ವಸ್ಥ- ಸಿಎಂ ಪರಿಹಾರದ ಭರವಸೆ: ಜಿಲ್ಲೆಯಾದ್ಯಂತ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಪರಿಶೀಲಿಸಲು ಸಚಿವ ಎನ್.ಎಸ್ ಬೋಸರಾಜು ಸೂಚನೆ.

Image
  ಕಲುಷಿತ ನೀರು ಕುಡಿದು ಅಸ್ವಸ್ಥ- ಸಿಎಂ  ಪರಿಹಾರದ ಭರವಸೆ:      ಜಿಲ್ಲೆಯಾದ್ಯಂತ ಜನರಿಗೆ  ಶುದ್ಧ   ಕುಡಿಯುವ  ನೀರು ಸರಬರಾಜು ಪರಿಶೀಲಿಸಲು ಸಚಿವ ಎನ್.ಎಸ್ ಬೋಸರಾಜು ಸೂಚನೆ . ರಾಯಚೂರು,ಮೇ.29- ಜಿಲ್ಲೆಯ ದೇವದುರ್ಗ ತಾಲೂಕಿನ ರೇಖಲಮರಡಿ ಹಾಗೂ ಲಿಂಗಸ್ಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ  ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆ ನೀಡಿ ಮುಂಜಾಗ್ರತೆ ಕ್ರಮವನ್ನು ವಹಿಸಬೇಕು ಅಲ್ಲದೇ ಜಿಲ್ಲೆಯ ಜನರಿಗೆ ಸರಬರಾಜಾಗುವ ಕುಡಿಯುವ ನೀರನ್ನು ಪರಿಶೀಲಿಸಿ ವರದಿ ನೀಡುವಂತೆ ಸಚಿವರಾದ ಎನ್.ಎಸ್ ಬೋಸರಾಜು ಅವರು ಜಿಲ್ಲಾಡಳಿತಕ್ಕೆ  ಸೂಚನೆ ನೀಡಿದ್ದಾರೆ.  ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡ ಘಟನೆ ತಿಳಿದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಅಲ್ಲದೆ ಇಂದು ಬೆಳಗ್ಗೆ ಪರಸ್ಥಿತಿ ತಿಳಿದು ಈಗಾಗಲೆ ಅಸ್ವಸ್ಥರಾಗಿರುವವರಿಗೆ ಜಿಲ್ಲಾ ರಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಡಿಹೆಚ್ಓ ಅವರಿಗೆ ದೂರವಾಣಿ ಮುಖಾಂತರ ಮಾತನಾಡಿ ಸೂಚನೆ ನೀಡಿದರು.  ಈಗಾಗಲೆ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಮಗುವಿಗೆ ಸರ್ಕಾರದಿಂದ ಪರಿಹಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗಮನಕ್ಕೆ ತರಲಾಗಿದೆ. ಜಿಲ್ಲೆಯಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ವಾಸ್ತವ ಸ್ಥಿತಿ

ಮಂತ್ರಾಲಯ: ಶ್ರೀ ವಾದೀಂದ್ರತೀರ್ಥರ ಆರಾಧನೆ.

Image
  ಮಂತ್ರಾಲಯ: ಶ್ರೀ ವಾದೀಂದ್ರತೀರ್ಥರ ಆರಾಧನೆ.        ರಾಯಚೂರು,ಮೇ.29- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ವಾದೀಂದ್ರತೀರ್ಥರ ಆರಾಧನೆ ಜರುಗಿತು.     ಬೆಳಿಗ್ಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ರಥೋತ್ಸವಕ್ಕೆ ಚಾಲನೆ ನೀಡಿದರು.             ನಂತರ ಶ್ರೀ ವಾದೀಂದ್ರತೀರ್ಥರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಂಗಳಾರತಿ ನೆರವೇರಿತು.                        ಭಜನಾ ತಂಡಗಳಿಂದ ಭಜನೆ ನೆರವೇರಿತು. ವಿದ್ವಾಂಸರು, ಶ್ರೀ ಮಠದ ಸಿಬ್ಬಂದಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ : ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು- ಚಂದ್ರಶೇಖರ್ ಭಂಡಾರಿ

Image
  ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ :                               ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು- ಚಂದ್ರಶೇಖರ್ ಭಂಡಾರಿ  ರಾಯಚೂರು,ಮೇ.28-  ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ್ ಭಂಡಾರಿ ಹೇಳಿದರು. ಅವರಿಂದು ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ಆಯೋಜಿಸಿದ್ದ 10ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.  ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಕನ್ನಡ ಭಾಷೆಗೆ ಆದ್ಯತೆ ಕೊಟ್ಟು ಕನ್ನಡದ  ಅಸ್ಮಿತೆ ಕಾಪಾಡಬೇಕು ಎಂದರು. ಕನ್ನಡ ಭಾಷೆ ಸುಮಧುರವಾದ ಭಾಷೆ ಅಷ್ಟೇ ಅಲ್ಲ. ಶ್ರೇಷ್ಠ ಭಾಷೆಯಾಗಿದೆ.  ಆ ಭಾಷೆಯನ್ನು ಇನ್ನು ಉತ್ಕೃಷ್ಟಕ್ಕೆ ಬೆಳೆಸಲು ನಾವೆಲ್ಲ ಶ್ರಮಿಸಬೇಕು  ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಯಚೂರಿನ ಮಾನಸಿಕ ರೋಗ ತಜ್ಞ ವೈದ್ಯರಾದ ಡಾ. ಮನೋಹರ್ ವೈ ಪತ್ತಾರ ಅವರು  ಮಾತನಾಡುತ್ತ, ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಭೆಯನ್ನು ಹೊರ ಹಾಕಬೇ

10ನೇ ತರಗತಿ ಕನ್ನಡ ಭಾಷೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ: ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು- ಚಂದ್ರಶೇಖರ್ ಭಂಡಾರಿ

Image
   10ನೇ ತರಗತಿ ಕನ್ನಡ ಭಾಷೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ:                                    ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು- ಚಂದ್ರಶೇಖರ್ ಭಂಡಾರಿ                       ರಾಯಚೂರು,ಮೇ.28-  ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ್ ಭಂಡಾರಿ ಹೇಳಿದರು.                                                                                  ಅವರಿಂದು ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ಆಯೋಜಿಸಿದ್ದ 10ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.  ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಕನ್ನಡ ಭಾಷೆಗೆ ಆದ್ಯತೆ ಕೊಟ್ಟು ಕನ್ನಡದ  ಅಸ್ಮಿತೆ ಕಾಪಾಡಬೇಕು ಎಂದರು. ಕನ್ನಡ ಭಾಷೆ ಸುಮಧುರವಾದ ಭಾಷೆ ಅಷ್ಟೇ ಅಲ್ಲ. ಶ್ರೇಷ್ಠ ಭಾಷೆಯಾಗಿದೆ.ಆ ಭಾಷೆಯನ್ನು ಇನ್ನು ಉತ್ಕೃಷ್ಟ ಮಟ್ಟಕ್ಕೆ ಬೆಳೆಸಲು ನಾವೆಲ್ಲ ಶ್ರಮಿಸಬೇಕು  ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಯಚೂರಿನ ಮಾನಸಿಕ ರೋಗ ತಜ್ಞ ವೈದ್ಯರಾದ ಡಾ. ಮನೋಹರ

10ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ: ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು- ಚಂದ್ರಶೇಖರ್ ಭಂಡಾರಿ

Image
  10ನೇ ತರಗತಿ ಕನ್ನಡ ಭಾಷೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ:                                    ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು- ಚಂದ್ರಶೇಖರ್ ಭಂಡಾರಿ                    ರಾಯಚೂರು,ಮೇ.28-  ಕನ್ನಡ ಭಾಷೆಯ ಶ್ರೀಮಂತಿಕೆಯಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ್ ಭಂಡಾರಿ ಹೇಳಿದರು.                                                                                  ಅವರಿಂದು ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ಆಯೋಜಿಸಿದ್ದ 10ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.  ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೆ ಕನ್ನಡ ಭಾಷೆಗೆ ಆದ್ಯತೆ ಕೊಟ್ಟು ಕನ್ನಡದ  ಅಸ್ಮಿತೆ ಕಾಪಾಡಬೇಕು ಎಂದರು. ಕನ್ನಡ ಭಾಷೆ ಸುಮಧುರವಾದ ಭಾಷೆ ಅಷ್ಟೇ ಅಲ್ಲ. ಶ್ರೇಷ್ಠ ಭಾಷೆಯಾಗಿದೆ.ಆ ಭಾಷೆಯನ್ನು ಇನ್ನು ಉತ್ಕೃಷ್ಟ ಮಟ್ಟಕ್ಕೆ ಬೆಳೆಸಲು ನಾವೆಲ್ಲ ಶ್ರಮಿಸಬೇಕು  ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಯಚೂರಿನ ಮಾನಸಿಕ ರೋಗ ತಜ್ಞ ವೈದ್ಯರಾದ ಡಾ. ಮನೋಹರ್ ವೈ

ಭಾರಿ ಗಾತ್ರದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ದೆ: ಜೂನ್ 3 ರಿಂದ ಮೂರು ದಿನ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ- ಎ.ಪಾಪಾರೆಡ್ಡಿ

Image
ಭಾರಿ ಗಾತ್ರದ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ದೆ :  ಜೂನ್ 3ರಿಂದ ಮೂರು ದಿನ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ- ಎ.ಪಾಪಾರೆಡ್ಡಿ ರಾಯಚೂರು, ಮೇ.27-ಕಾರಹುಣ್ಣಿಮೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮುನ್ನೂರುಕಾಪು ಸಮಾಜದಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಜೂ.3 ರಿಂದ 5ರ ವರೆಗೆ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಮುನ್ನೂರುಕಾಪು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಪಾಪಾರೆಡ್ಡಿ ತಿಳಿಸಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮುಂಗಾರು ಸಾಂಸ್ಕೃತಿಕ ಹಬ್ಬ ನಡೆಸಲಾಗುತ್ತಿದೆ. ಜೂನ್ 3ರಂದು ಬೆಳಿಗ್ಗೆ 8ಕ್ಕೆ ಎತ್ತುಗಳಿಂದ 1. 1/2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ನೂತನ ಪ್ರವಾಸೋದ್ಯಮ  ಸಚಿವ ಎನ್.ಎಸ್. ಬೋಸರಾಜು ಉದ್ಘಾಟನೆ ಮಾಡಲಿದ್ದಾರೆ. ಜೂನ್ 4 ರಂದು 2 ಟನ್ ಭಾರವಾದ ಕಲ್ಲು ಎಳೆಯುವ ಅಖಿಲ ಭಾರತ ಮುಕ್ತ ಅವಕಾಶ ಇರಲಿದೆ ಇದಕ್ಕೆ ನಗರ ಶಾಸಕ ಡಾ.ಶಿವರಾಜ ಪಾಟೀಲ ಚಾಲನೆ ನೀಡುವರು ಎಂದರು. ಜೂನ್ 5ರಂದು ನಡೆಯುವ 2.5 ಟನ್ ಭಾರವಾದ ಕಲ್ಲು ಎಳೆಯುವ ಸ್ಫರ್ಧೆಗೆ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಚಾಲನೆ ನೀಡಲಿದ್ದಾರೆ.   ಜೂನ್ 4 ರಂದು ಎತ್ತುಗಳ ಬೃಹತ್ ಮೆರವಣಿಗೆ, ಗ್ರಾಮೀಣ ಶೈಲಿಯ ಕಲಾರೂಪಕ ವೀರಗಾಸೆ, ಕತ್ತಿವರಸೆ,ಡೊಳ್ಳು ಕುಣಿತ, ಗಾಲಿಹಲಗೆ, ಕರಡಿ ಮಜಲು, ಕಂಸಾಲೆ ಹಾಗೂ ವಿವಿಧ ಕಲಾವಿದರೊಂದಿಗೆ ಮೆರವಣಿಗೆ ನಡೆಯಲಿ

ದಶಕಗಳ ನಂತರ ಜಿಲ್ಲೆಗೆ ದೊರೆತ ಮಂತ್ರಿ ಸ್ಥಾನ: ಕ್ಯಾಬಿನೆಟ್ ಸಚಿವರಾಗಿ ಬೋಸರಾಜು ಪ್ರಮಾಣ ವಚನ ಸ್ವೀಕಾರ: ಪ್ರವಾಸೋದ್ಯಮ ,ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಹಂಚಿಕೆ

Image
ದಶಕಗಳ ನಂತರ ಜಿಲ್ಲೆಗೆ ದೊರೆತ ಮಂತ್ರಿ ಸ್ಥಾನ:                                                          ಕ್ಯಾಬಿನೆಟ್ ಸಚಿವರಾಗಿ ಬೋಸರಾಜು ಪ್ರಮಾಣ ವಚನ ಸ್ವೀಕಾರ : ಪ್ರವಾಸೋದ್ಯಮ ,ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಹಂಚಿಕೆ   ರಾಯಚೂರು,ಮೇ.27 - ಅದೃಷ್ಟ ಖುಲಾಯಿಸಿತು ಎಂದರೆ ಯಾವ ಅಡೆತಡೆಯು ನಿಲ್ಲುವುದಿಲ್ಲವೆಂಬುದಕ್ಕೆ ಸಾಕ್ಷಿ   ಎನ್ ಎಸ್ ಬೋಸರಾಜು ರವರಿಗೆ ದೊರೆತ ಮಂತ್ರಿ ಸ್ಥಾನ .              ರಾಜಕೀಯದಲ್ಲಿ ಹೀಗೆ ಆಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಇದಕ್ಕೆಲ್ಲ ಸಾಕ್ಷಿ ಎಂಬಂತೆ  ಪ್ರಸ್ತುತ ಎಐಸಿಸಿ ಕಾರ್ಯದರ್ಶಿ, ತೆಲಂಗಾಣ ಕಾಂಗ್ರೆಸ್  ಉಸ್ತುವಾರಿ ಆಗಿರುವ ಎನ್. ಎಸ್ ಬೋಸರಾಜು, ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ  ಪ್ರಮಾಣ ವಚನ ಸ್ವೀಕರಿಸಿದ್ದಾರೆ ಅವರಿಗೆ ಪ್ರವಾಸೋದ್ಯಮ , ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ನೀಡಲಾಗಿದ್ದು ಹಲವು ದಶಕಗಳ ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂತ್ರಿ ಸ್ಥಾನ ಲಭಿಸಿದೆ.   ಹಿಂದುಳಿದ ವರ್ಗಕ್ಕೆ ಸೇರಿರುವ ಅವರನ್ನು ಹೈಕಮಾಂಡ್ ಅವರ ಪಕ್ಷ ನಿಷ್ಠೆ ,ಸಂಘಟನೆ ಮನಗೊಂಡು  ಸಚಿವ ಸ್ಥಾನ ನೀಡಿದ್ದು ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಲಾಗಿದೆ.   ಬೋಸರಾಜು ರಾಜಕೀಯ ಹೆಜ್ಜೆ ಗುರುತುಗಳು: 1972-1976  ರಾಯಚೂರು ಜಿಲ್ಲೆ,  ಯುವ ಕಾಂಗ್ರೆಸ್ ಅಧ್ಯಕ್ಷ,  1976-1980  ರಾಯಚೂರು ತಾಲೂಕು ಕಾಂಗ್ರೆಸ್

ಸುಳ್ಳು ದೂರಿನ ಬಗ್ಗೆ ಕಿವಿಗೊಡಬೇಡಿ: ಬೋಸರಾಜುಗೆ ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತೇವೆ- ನರಸಿಂಹಲು ಮಾಡಗಿರಿ

Image
  ಸುಳ್ಳು ದೂರಿನ ಬಗ್ಗೆ ಕಿವಿಗೊಡಬೇಡಿ: ಬೋಸರಾಜುಗೆ ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತೇವೆ-ನರಸಿಂಹಲು ಮಾಡಗಿರಿ ರಾಯಚೂರು,ಮೇ.೨೬-ನೂತನ ಮಂತ್ರಿ ಮಂಡಲ ವಿಸ್ತರಣೆ ವೇಳೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರು, ಮಾಜಿ ವಿಧಾನ ಪರಿಷತ್ ಸದಸ್ಯರು, ಎಐಸಿಸಿ ಕಾರ್ಯದರ್ಶಿಗಳಾದ ಎನ.ಎಸ್.ಬೋಸರಾಜರವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡರಾದ ನರಸಿಂಹಲು ಮಾಡಗಿರಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ೪೫ ವರ್ಷಗಳ ಸುಧೀರ್ಘ ರಾಜಕಾರಣದಲ್ಲಿರುವ ಬೋಸರಾಜುರವರಿಗೆ ಹೈಕಮಾಂಡ್ ಮನ್ನಣೆ ನೀಡಿ ಸಚಿವ ಸ್ಥಾನ ನೀಡಬೇಕೆಂದ ಅವರು ಮಾನ್ವಿ ಕ್ಷೇತ್ರದಿಂದ ಎರೆಡು ಬಾರಿ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸದ್ಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿರುವ ಬೋಸರಾಜುರವರಿಗೆ ಸಚಿವ ಸ್ಥಾನ ನೀಡಬೇಕು ಎಂದರು. ಪಕ್ಷ ಸಂಘಟನೆ ಬಗ್ಗೆ ತಮ್ಮದೆ ರೀತಿಯಲ್ಲಿ ಶ್ರಮಿಸಿರುವ ಅವರು ಇತ್ತೀಚೆಗೆ ರಾಹುಲ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ ಜೋಡೊ ಪಾದಯಾತ್ರೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದ ಅವರು ಕೆಲವರು ಅವರ ರಾಜಕೀಯ ಏಳ್ಗೆ ಸಹಿಸದೆ ಇಲ್ಲ ಸಲ್ಲದ ಅರೋಪ ಮತ್ತು ದೂರು ನೀಡುವ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದು ಇದಕ್ಕೆ ಹೈಕಮಾಂಡ್ ಕಿವಿಗೊಡಬಾರದೆಂದರು. ನಗರ ಕ್ಷೇತ್ರದಲ್ಲಿ ಟಿಕೆಟ್ ಅಕಾಂಕ್ಷಿಯಾಗಿದ್ದ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತು ಆದರೂ ಪಕ್ಷದ ಅಧಿಕೃತ ಅಭ್

ಪ್ರಜಾವಾಣಿ ಜಿಲ್ಲಾ ವರದಿಗಾರರಿಗೆ ಬೀಳ್ಕೊಡುಗೆ ಸಮಾರಂಭ: ಜಿಲ್ಲೆಯ ಜನರು ವಿಶಾಲ ಮನೋಭಾವದವರು- ನಾಗರಾಜ ಚಿನಗುಂಡಿ

Image
  ಪ್ರಜಾವಾಣಿ ಜಿಲ್ಲಾ ವರದಿಗಾರರಿಗೆ ಬೀಳ್ಕೊಡುಗೆ ಸಮಾರಂಭ: ಜಿಲ್ಲೆಯ ಜನರು ವಿಶಾಲ ಮನೋಭಾವದವರು- ನಾಗರಾಜ ಚಿನಗುಂಡಿ ರಾಯಚೂರು,ಮೇ.೨೬-ಜಿಲ್ಲೆಯ ಜನರು ವಿಶಾಲ ಮನೋಭಾವದವರು ಎಂದು ಪ್ರಜಾವಾಣಿ ನಿರ್ಗಮಿತ ಜಿಲ್ಲಾ ವರದಿಗಾರರಾದ ನಾಗರಾಜ ಚಿನಗುಂಡಿ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ‍್ಟರ‍್ಸ್ ಗಿಲ್ಡ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ಬೀಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನಾನು ಸುಮಾರು ೬ ವರ್ಷ ಅವಧಿ ಸೇವೆ ಸಲ್ಲಿಸಿದ್ದು ಇಲ್ಲಿನ ಜನರು ಅತ್ಯಂತ ಸ್ನೇಹ ಶೀಲರು ,ಹೃದಯ ವೈಶಾಲ್ಯ ಉಳ್ಳವರು ಆಗಿದ್ದು ಪತ್ರಕರ್ತರಿಗೆ ಗೌರವ ನೀಡುವವರಾಗಿದ್ದಾರೆ ಎಂದ ಅವರು ಹತ್ತು ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಇಲ್ಲಿನ ಜನರ ಸಹಕಾರ ಮುಖ್ಯವಾಗಿತ್ತು ಎಂದರು. ಅಧಿಕಾರಿಗಳು ಸಹ ಸುದ್ದಿ ಮಾಡಲು ಮಾಹಿತಿ ಕೇಳಿದಾಗ ಮಾಹಿತಿ ನೀಡಿ ಸಮಸ್ಯೆಗಳ ನಿವಾರಣೆಗೆ ಸಹಕರಿಸಿದ್ದರು ಎಂದ ಅವರು ಇಲ್ಲಿಂದ ಬೇರೆಡೆ ವರ್ಗಾವಣೆಯಾಗಿ ಹೋಗುವುದು ಹೃದಯ ಭಾರವಾಗಿದೆ ಇಲ್ಲಿಯ ಜನರ ಸರಳತೆ ಬಗ್ಗೆ ಕೊಂಡಾಡಿದರು. ಪತ್ರಕರ್ತ ಮಿತ್ರರು ಸಹ ನನಗೆ ಅತ್ಯಂತ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿದ್ದರು ಎಂದ ಅವರು ಸಹದ್ಯೋಗಿಗಳ ಒಡನಾಟ ಮೆಲಕು ಹಾಕಿದರು. ರಾಯಚೂರು ರಿಪೋರ‍್ಟ್ರ‍್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ಪತ್ರಕರ್ತರ ಕೆಲಸ ಅನಿಶ್ಚಿತತೆಯಿಂದ ಕೂಡಿದ ವೃತ್ತಿಯಾಗಿದೆ ಪ್ರಮಾಣಿ