ಮಂತ್ರಾಲಯ: ಶ್ರೀ ವಾದೀಂದ್ರತೀರ್ಥರ ಆರಾಧನೆ.
ಮಂತ್ರಾಲಯ: ಶ್ರೀ ವಾದೀಂದ್ರತೀರ್ಥರ ಆರಾಧನೆ. ರಾಯಚೂರು,ಮೇ.29- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ವಾದೀಂದ್ರತೀರ್ಥರ ಆರಾಧನೆ ಜರುಗಿತು. ಬೆಳಿಗ್ಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಶ್ರೀ ವಾದೀಂದ್ರತೀರ್ಥರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಂಗಳಾರತಿ ನೆರವೇರಿತು. ಭಜನಾ ತಂಡಗಳಿಂದ ಭಜನೆ ನೆರವೇರಿತು. ವಿದ್ವಾಂಸರು, ಶ್ರೀ ಮಠದ ಸಿಬ್ಬಂದಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment