ತೇಜಸ್ ವಿಶ್ವಸ್ಥ ಮಂಡಲಿಯಿಂದ ವಿಶ್ವ ಯೋಗ ದಿನ ಆಚರಣೆ: ನಿಯಮಿತವಾಗಿ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ- ಡಾ. ಖೇಣೇದ್


 
ತೇಜಸ್ ವಿಶ್ವಸ್ಥ ಮಂಡಲಿಯಿಂದ ವಿಶ್ವ ಯೋಗ ದಿನ ಆಚರಣೆ:   ನಿಯಮಿತವಾಗಿ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ- ಡಾ. ಖೇಣೇದ್           


ರಾಯಚೂರು,ಜೂ.21- ಪತಂಜಲಿ ಮುನಿಗಳ ಅಷ್ಟಾಂಗ ಯೋಗ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯಪೂರ್ಣ ಹಾಗು ಸಂತೃಪ್ತ ಬದುಕು ನಮ್ಮದಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಮುಖ್ಯಸ್ಥರಾದ ಡಾ. ಕಿರಣ್ ಖೇಣೇದ್ ಅವರು ಹೇಳಿದರು.                                          ಅವರಿಂದು ನಗರದ ಯಾದವ ಸಂಘದ ಮೈದಾನದಲ್ಲಿ ತೇಜಸ್ ವಿಶ್ವಸ್ಥ ಮಂಡಲಿ ಹಾಗು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇಂದು ಆಯೋಜಿಸಿದ್ದ 9 ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪತಂಜಲಿಯ ಸೂತ್ರಗಳನ್ನು ವಿವರಿಸಿ,ಯೋಗ ಎಂದರೆ, ಕೇವಲ ಆಸನ, ಪ್ರಾಣಾಯಾಮ ಮಾತ್ರವಲ್ಲ, ಅದೊಂದು ಜೀವನ ಕಲೆ ಎಂದು ತಿಳಿಸಿದರು.


ಅನುಭವಿ ಯೋಗ ಚಿಕಿತ್ಸಕರಾದ  ರಾಘವೇಂದ್ರ ಗುರುಮಿಟಕಲ್ ಅವರು ಯೋಗಾಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರುಗಳಾದ  ಶಿವಬಸಪ್ಪ ಮಾಲಿಪಾಟೀಲ್,  ನಾಗರಾಜ ಆದೋನಿ ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಭ್ಯಾಸಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್