ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ, ವಿದ್ಯಾನಿಧಿ ವಿತರಣೆ: ಬ್ರಾಹ್ಮಣರು ತಮ್ಮ ಸ್ವಸಾಮರ್ಥ್ಯದ ಮೇಲೆ ಮುಖ್ಯ ವಾಹಿನಿಗೆ ಬರುವವರಾಗಿದ್ದಾರೆ- ಅಶೋಕ ಹಾರನಹಳ್ಳಿ

 


ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ, ವಿದ್ಯಾನಿಧಿ ವಿತರಣೆ:

ಬ್ರಾಹ್ಮಣರು ತಮ್ಮ ಸ್ವಸಾಮರ್ಥ್ಯದ ಮೇಲೆ ಮುಖ್ಯ ವಾಹಿನಿಗೆ ಬರುವವರಾಗಿದ್ದಾರೆ- ಅಶೋಕ ಹಾರನಹಳ್ಳಿ

ರಾಯಚೂರು,ಜು.30-ಬ್ರಾಹ್ಮಣರು ತಮ್ಮ ಸ್ವ ಸಾಮರ್ಥ್ಯದ ಮೇಲೆ ಮುಖ್ಯ ವಾಹಿನಿಗೆ ಬರುತ್ತಾರೆ ಸಮಾಜದಲ್ಲಿ ಬ್ರಾಹ್ಮಣರಿಗೆ ಉತ್ತಮ ಸ್ಥಾನವಿದ್ದು ಅದನ್ನು ನಾವು ಕಾಪಾಡಿಕೊಂಡು ಹೋಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.

ಅವರಿಂದು ನಗರದ ಜವಾಹರನಗರ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ಬ್ರಾಹ್ಮಣರು ಈ ಹಿಂದೆ ಕೃಷಿ ಅವಲಂಬಿತರಾಗಿದ್ದರು ಕಾಲಾನುಕ್ರಮೇಣ ಅವರು ಕೃಷಿಯಿಂದ ದೂರವಾಗಿ ವಿವಿಧ ವೃತ್ತಿಗಳನ್ನು ಆಯ್ದುಕೊಂಡರು ಸರ್ಕಾರಿ ನೌಕರಿಯನ್ನು ಕೆಲವರು ಮಾಡಿದರು ಬಹುತೇಕರು ಸರ್ಕಾರಿ ನೌಕರಿಗಳಿಂದ ವಂಚಿತರಾದರು ಎಂದ ಅವರು ಬ್ರಾಹ್ಮಣರು ಅನೇಕ ಸುಪ್ರಸಿದ್ದ ವೈದ್ಯರು, ವಕೀಲರು, ಉದ್ಯಮಿಗಳು, ಲೆಕ್ಕಪರಿಶೋಧಕರು ಮುಂತಾದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದರು ಎಂದರು.

ಇತ್ತೀಚೆಗೆ ಬ್ರಾಹ್ಮಣ ಮಹಾಸಭಾದಿಂದ ಕಾನೂನು ಘಟಕ ಸ್ಥಾಪಿಸಿದ್ದೇವೆ ಕಾರಣ ಬ್ರಾಹ್ಮಣರನ್ನು ವಿನಾಕಾರಣ ದೂಷಿಸುತ್ತಾರೆ, ತೆಗಳುತ್ತಾರೆ ಅವರ ಮೇಲೆ ದೌರ್ಜನ್ಯ ನಡೆಯುತ್ತವೆ ಅದನ್ನು ತಡೆಯಲು ಮತ್ತು ಬ್ರಾಹ್ಮಣರಿಗೆ ಕಾನೂನಿನ ರಕ್ಷಣೆ ನೀಡಲು ಕಾನೂನು ಘಟಕ ನಿರಂತರವಾಗಿ ಕಾನೂನು ಸಲಹೆ ಸೂಚನೆ ನೀಡುತ್ತದೆ ಎಂದರು.


ಬ್ರಾಹ್ಮಣರು ತಮ್ಮ ವಿವಿಧ ಸಮಸ್ಯೆಗಳ ನಡುವೆಯೂ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಾರೆ ಲೋಕಕ್ಕೆಲ್ಲ ಒಳಿತನ್ನು ಬಯಸುವ ಬ್ರಾಹ್ಮಣರ ಒಳಿತನ್ನು ಬಯಸುವವರು ಯಾರು ಇಲ್ಲವೆಂದ ಅವರು ಬ್ರಾಹ್ಮಣರು ತಮ್ಮ ಘನತೆ ಗೌರವ ಕಾಪಾಡಿಕೊಳ್ಳಬೇಕು ಶಾಸ್ತ್ರ ವಿಹಿತವಾದದನ್ನು ಮಾಡಬೇಕು ಧರ್ಮಾಚರಣೆಗೆ ಆದ್ಯತೆ ನೀಡಬೇಕೆಂದರು.

ಬ್ರಾಹ್ಮಣರು ಸ್ವಾವಲಂಬಿಗಳಾಗಬೇಕು ನಾವು ಮತ್ತೊಬ್ಬರ ಬಳಿ ಅಂಗಲಾಚದೆ ಸ್ವಂತ ದುಡಿಮೆ, ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ದಾತರಾಗಬೇಕೆಂದು ಸಲಹೆ ನೀಡಿದ ಅವರು ನಮ್ಮ ಸಂಘಟನೆ ನಮ್ಮ ಭದ್ರತೆ ನಾವೆ ಮಾಡಿಕೊಳ್ಳಬೇಕೆಂದರು.

ಸಮಾಜದಲ್ಲಿ ಎಲ್ಲದ್ದಕ್ಕು ನಮ್ಮನ್ನೆ ದೂರುತ್ತಾರೆ ಈ ಹಿಂದೆ ಒಂದು ಕಾಲಕ್ಕೆ ಇದ್ದ ಅಸ್ಪೃಶ್ಯ ಆಚರಣೆ ಈಗ ಇಲ್ಲ ಅದರೂ ನಮ್ಮನ್ನೆ ಗುರಿ ಮಾಡಿ ಟೀಕಿಸುತ್ತಾರೆ ಸಮಾಜದಲ್ಲಿ ಬದಲಾವಣೆ ಆಗಿವೆ ಎಲ್ಲರೂ ಕೂಡಿ ಬಾಳುವ ಅವಕಾಶ ಸಂವಿಧಾನ ನೀಡಿದೆ ಎಂದರು.


ಬ್ರಾಹ್ಮಣರಲ್ಲಿ ಒಗ್ಗಟ್ಟು ಮೂಡಬೇಕು ಬ್ರಾಹ್ಮಣ ಸಮುದಾಯದ ವಿವಿಧ ಮಠಗಳ ಮಠಾಧೀಶರು ಒಂದೆಡೆ ಸೇರಬೇಕೆಂದ ಅವರು ಇದಕ್ಕಾಗಿ ಮುಂದಿನ ದಿನಗಳಲ್ಲಿ ಮಠಾಧೀಶರ ಸಮಾವೇಶ ಮಾಡಲಾಗುತ್ತದೆ ಎಲ್ಲ ಮಠಾಧೀಶರು ತಮ್ಮ ಮತಬೇಧ ಮರೆತು ಒಂದುಗೂಡಿ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂದರು.

ಬ್ರಾಹ್ಮಣರಲ್ಲಿ ಅನೇಕ ವಿದ್ಯಾರ್ಥಿಗಳು ಅತ್ಯಂತ ಬುದ್ದಿವಂತರಿದ್ದಾರೆ ಎಂದ ಅವರು ಕಳೆದ ವರ್ಷ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಕರೆದು ಶೇ.೯೮ ಅಂಕಗಳಿಸದವರಿಗೆ ಪುರಸ್ಕಾರವೆಂದಾಗ ಹೆಚ್ಚಿನ ಸಂಖ್ಯೆಯ ಅರ್ಜಿ ಬಂದವು ನಮ್ಮಲ್ಲಿ ನೂರಕ್ಕೆ ನೂರು ಅಂಕಗಳಿಸುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ ಪ್ರತಿ ವರ್ಷ ಬ್ರಾಹ್ಮಣ ಸಮಾಜ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರಿಗೆ ಪ್ರೋತ್ಸಹಿಸುತ್ತದೆ ಇದು ಶ್ಲಾಘನೀಯ ಕಾರ್ಯ ಈ ವರ್ಷ ಅವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದು ಮಾದರಿ ಕಾರ್ಯವೆಂದರು. ಅದೇ ರೀತಿ ಸಮಾಜದ ಸಾಧಕರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಬ್ರಾಹ್ಮಣರು ಇತರ ಎಲ್ಲ ಸಮಾಜಕ್ಕೆ ಮಾರ್ಗದರ್ಶಕ ಸ್ಥಾನದಲ್ಲಿದ್ದಾರೆ ಅವರು ಎಲ್ಲರ ಹಿತ ಬಯಸುವವರಾಗಿದ್ದಾರೆ ಎಂದರು.


ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ ನಾನು ಇಂದು ಶಾಸಕನಾಗಿ ನಿಮ್ಮ ಮುಂದೆ ನಿಲ್ಲಲು ಬ್ರಾಹ್ಮಣ ಸಮಾಜ ಪ್ರಮುಖ ಕಾರಣವೆಂದ ಅವರು ನನಗೆ ಬ್ರಾಹ್ಮಣ ಸಮಾಜದ ಕೊಡುಗೆ ಅಧಿಕವಾಗಿದ್ದು ನಿಮ್ಮ ಸಮಾಜ ಜನ ಸಂಖ್ಯೆಯಲ್ಲಿ ಚಿಕ್ಕದಿದ್ದರೂ ನೀವು ಪ್ರಜ್ಞಾವಂತರಾಗಿದ್ದೀರಿ ಎಲ್ಲ ಸಮಾಜಗಳಿಗೆ ಮಾರ್ಗದರ್ಶಕರಾಗಿದ್ದೀರಿ ನೀವು ದಾರಿ ತಪ್ಪಿದರೆ ನಿಮ್ಮನ್ನು ಸರಿ ದಾರಿಗೆ ತರುವವರು ಯಾರು ಇಲ್ಲವೆಂದು ಕಿವಿ ಮಾತು ಹೇಳೀದರು.

ನೀವು ಒಗಟ್ಟಾಗಿ ಇದ್ದರೆ ಮಾತ್ರ ನಿಮ್ಮನ್ನು ಸರ್ಕಾರ ಮಾತನಾಡಿಸುತ್ತದೆ ನೀವು ಮಠ ಬೇಧದಿಂದ ಚದುರಿ ಹೋದರೆ ನಿಮ್ಮನ್ನು ಯಾರು ಕೇಳುವುದಿಲ್ಲ ಕೇವಲ ಬ್ರಾಹ್ಮಣ ಸಮಾಜದಲ್ಲಿ ಮಾತ್ರವಲ್ಲ ನಮ್ಮ ಲಿಂಗಾಯಿತ ಸಮಾಜದಲ್ಲಿಯೂ ಮಠ ಬೇಧ, ಉಪ ಪಂಗಡಗಳಿಂದ ಸಮಾಜವು ಛಿದ್ರವಾಗುತ್ತಿದೆ ನಾವು ಅಲ್ಪರಾಗುತ್ತಿದ್ದೆವೆ ಒಂದು ಕಾಲಕ್ಕೆ ಸರ್ಕಾರ ತರುವ ಶಕ್ತಿ ಇರುವ ಬ್ರಾಹ್ಮಣ ಸಮಾಜ, ಲಿಂಗಾಯಿತ ಸಮಾಜದ ಶಾಸಕರು ಕಡಿಮೆ ಸಂಖ್ಯೆಯಲ್ಲಿ ಆರಿಸಿಬರುತ್ತಿದ್ದು ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಿದೆ ಎಂದರು.


ನಾವು ವಿಂಗಡಣೆ ಆದಂತೆಲ್ಲ ಬಲಹೀನರಾಗುತ್ತೇವೆ ನಮ್ಮಲ್ಲಿ ಒಗ್ಗಟ್ಟು ಮೂಡಬೇಕೆಂದ ಅವರು ಮಠಬೇಧಗಳನ್ನು ಮರೆತು ಒಂದಾಗಿ ನಮ್ಮ ಶಕ್ತಿ ಪ್ರದರ್ಶೀಸಬೇಕೆಂದ ಅವರು ಬ್ರಾಹ್ಮಣ ಸಮಾಜದ ಗಾಯಿತ್ರಿ ಭವನ ನಿರ್ಮಾಣ ಇದೆ ವರ್ಷ ಪೂರ್ಣಗೊಳೀಸಲು ಪ್ರಯತ್ನಿಸುತ್ತೇನೆ ಅದರ ಉದ್ಘಾಟನೆ ಈ ವರ್ಷವೆ ಆಗುವಂತೆ ಪ್ರಯತ್ನಿಸುವುದಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಅಖಿಲ ಕಾರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಡಿ.ಕೆ.ಮುರಳಿಧರ್ ಮಾತನಾಡಿ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಜೊತೆಗೆ ಈ ಬಾರಿ ವಿದ್ಯಾನಿಧಿ ಸಹಾಯ ಧನ ವಿತರಣಾ ಯೋಜನೆ ಹಾಕಿಕೊಂಡಿದ್ದು ಈ ಬಾರಿ ಅಲ್ಪ ಪ್ರಮಾಣದ ವಿದ್ಯಾರ್ಥಿಗಳೀಗೆ ನೀಡುತ್ತಿದ್ದೇವೆ ಅದನ್ನು ಮುಂದೆ ಬೃಹತ್ ಪ್ರಮಾಣದಲ್ಲಿ ವಿಸ್ತರಿಸುತ್ತೇವೆಂದ ಅವರು ಶಾಸಕರು ಗ್ರಾಯಿತ್ರಿ ಭವನಕ್ಕೆ ಅನುದಾನ ನೀಡಿದ್ದಾರೆ ಅದನ್ನು ಆದಷ್ಟು ಬೇಗನೆ ಪೂರ್ಣಗೊಳೀಸಲು ಕೋರಿದರು.

ನಾವು ಒಗ್ಗಟ್ಟಾಗಬೇಕೆಂದ ಹೇಳಿದ ಅವರು ಮಠಬೇಧ ಮಾಡದೆ ಎಲ್ಲ ಬ್ರಾಹ್ಮಣರು ಒಂದು ಎಂಬ ಭಾವನೆ ಮೂಡಬೇಕೆಂದ ಅವರು ನಾವು ಚುನಾವಣೆ ವೇಳೆ ಮತದಾನ ಮಾಡದೆ ಸಂಕುಚಿತರಾಗುತ್ತಿದ್ದೇವೆ ನಾವು ಅತ್ಯಧಿಕ ಮತದಾನ ಮಾಡಿ ನಮ್ಮ ಶಕ್ತಿ ಎಲ್ಲ ಪಕ್ಷಗಳು ನಮ್ಮನ್ನು ಪರಿಗಣಿಸುವಂತೆ ಆಗಬೇಕೆಂದ ಅವರು ಬ್ರಾಹ್ಮಣರು ಮತದಾನ ಮಾಡುವುದಿಲ್ಲವೆಂಬ ಕಳಂಕದಿ0ದ ಮುಕ್ತರಾಗಬೇಕೆಂದರು.ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.


ರಾಜ್ಯ ಉಪಾಧ್ಯಕ್ಷ ಡಾ.ಆನಂದ ತೀರ್ಥ ಫಡ್ನೀಸ್ ಮಾತನಾಡಿ ಬ್ರಾಹ್ಮಣರು ಒಗ್ಗಟ್ಟು ಪ್ರದರ್ಶಿಸಿ ಇತರ ಸಮಾಜಗಳಿಗೆ ಮಾದರಿಯಾಗಬೇಕೆಂದರು. ವಿಶೇಷ ಉಪನ್ಯಾಸವನ್ನು ಶ್ರೀಶ ಮುದರಂಗಡಿ ನೀಡಿದರು.

ಸಿಂಧನೂರಿನ ಖ್ಯಾತ ವೈದ್ಯರಾದ ಡಾ.ರಾಘವೇಂದ್ರಾಚಾರ್ಯ ವಿ.ಜೋಷಿಯವರಿಗೆ ವಿಪ್ರಶ್ರೀ ಪ್ರಶಿಸ್ತಿ ನೀಡಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆರ್ಥಿಕ ಅಶಕ್ತ ವಿದ್ಯಾರ್ಥೀಗಳಿಗೆ ವಿದ್ಯಾನಿಧಿ ಸಹಾಯ ನಿಧಿ ವಿತರಿಸಲಾಯಿತು.ವಿಶಿಷ್ಟ ಸಾಧಕರಿಗೆ ಸನ್ಮಾನಿಸಲಾಯಿತು

ವೇದಿಕೆ ಮೇಲೆ ಸಮಾಜದ ಹಿರಿಯರಾದ ನರಸಿಂಗರಾವ್ ದೇಶಪಾಂಡೆ,ಶುಭಮಂಗಳ ಸುನೀಲ್,ಪ್ರಾಣೇಶ ಮುತಾಲಿಕ, ವೆಂಕಟೇಶ ದೇಸಾಯಿ, ಗಿರೀಶ ಕನಕವೀಡು,ಡಿ.ಕೆ.ರೇಖಾ, ಹನುಮೇಶ ಸರಾಫ, ಅರವಿಂದ ಕುಲಕರ್ಣೀ, ರಾಮರಾವ್ ಗಣೇಕಲ, ವಿನೋದ ಸಾಗರ್,ವೇಣುಗೋಪಾಲ ಆಚಾರ್ ಇನಾಂದಾರ್,ಶ್ಯಾಮಾಚಾರ್ ಗಾಣಧಾಳ,ರಾಮಾಚಾರ್ ಜೋಷಿ,   ಶಾಮರಾವ ಕುಲಕರ್ಣೀ, ಮುದ್ದು ರಂಗರಾವ ಮುತಾಲಿಕ , ವಿಜಯಾಚಾರ್ ಇಬ್ರಾಹಂಪೂರು, ಪ್ರಹಲ್ಲಾದ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ, ವಿಷ್ಣುತೀರ್ಥ, ರಾಘವೇಂದ್ರರಾವ್ ಕಲ್ಮಲಾ,ಕೆ. ಪ್ರಹಲ್ಲಾದರಾವ್ ಕಲ್ಮಲಾ,ವೆಂಕಟೇಶ ಕೋಲಾರ್,ಸೇರಿದಂತೆ ವಿವಿಧ ತಾಲೂಕಗಳ ಅಧ್ಯಕ್ಷರು, .ಪದಾಧೀಕಾರಿಗಳು, ಇನ್ನಿತರರು ಇದ್ದರು.

ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯ ಜಯಣ್ಣ, ಮುಖಂಡರಾದ ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ಬಸವರಾಜ ಇನ್ನಿತರರು ಇದ್ದರು.

ಈ ಸಂದರ್ಭದಲ್ಲಿ ಅನಿಲ ಗಾರಲದಿನ್ನಿ, ಸುಬ್ಬರಾವ್,ಜಯಕುಮಾರ್ ದೇಸಾಯಿ ಕಾಡ್ಲೂರು, ಆನಂದ ಕುಲಕರ್ಣೀ, ಶ್ರೀನಿವಾಸ ಇನಾಂದಾರ್,ತಿರುಪತಿ ಜೋಷಿ, ಇನ್ನಿತರರು ಇದ್ದರು. 

ಎಕೆಬಿಎಂಎಸ್ ಜಂಟಿ ಕಾರ್ಯದರ್ಶೀ ರಾಘವೇಂದ್ರ ಚೂಡಾಮಣಿ ಸರ್ವರನ್ನು ಸ್ವಾಗತಿಸಿದರು, ವೆಂಕಟೇಶ ನವಲಿ, ತಾರಾನಾಥ ಜೇಗರಕಲ್, ವಸುಧೇಂದ್ರ ಸಿರವಾರ್, ಪಾಂಡುರಂಗ ಕುರ್ಡಿಕರ್ ನಿರೂಪಿಸಿದರು. ಗುರುಸಾರ್ವಭೌಮ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿಗಳಿಂದ ವೇದಘೋಷ ಮೊಳಗಿತು. ಸಂಗೀತ ವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನೆರವೇರಿತು. ಅಪಾರ ಸಂಖ್ಯೆಯಲ್ಲಿ ವಿಪ್ರ ಸಮಾಜದ ಬಂಧುಗಳು ಭಾಗವಹಿಸಿದ್ದರು.



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್