ಮಂತ್ರಾಲಯ: ಧಾತ್ರಿ ಹೋಮ ಮತ್ತು ಕೋಟಿ ಪುಷ್ಪಾರ್ಚನೆ.
ಮಂತ್ರಾಲಯ: ಧಾತ್ರಿ ಹೋಮ ಮತ್ತು ಕೋಟಿ ಪುಷ್ಪಾರ್ಚನೆ. ರಾಯಚೂರು,ನ.29- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಾರ್ತಿಕ ಮಾಸ ಅಂಗವಾಗಿ ಧಾತ್ರಿ ಹೋಮ ಹಾಗು ಕೋಟಿ ಪುಷ್ಪಾರ್ಚನೆ ಕಾರ್ಯಕ್ರಮ ನೆರವೇರಿತು.
ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ರಾಯರ ಬೃಂದಾವನಕ್ಕೆ ಕೋಟಿ ಪುಷ್ಪಾರ್ಚನೆ ಹಾಗೂ ಧಾತ್ರಿ ಹೋಮ ನೆರವೇರಿಸಿದರು.ಧಾರವಾಡದ ಅಖಿಲ ಭಾರತ ಶ್ರೀ ವಿಜಯ ದಾಸರ ಕ್ಷೇತ್ರ ಆರಾಧನಾ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
Comments
Post a Comment