ಕವಿಪ್ರನಿನಿ: ತಪ್ಪಿತಸ್ಥ ನೌಕರರ ಅಮಾನತ್ತಿಗೆ ಅಂಬಾಜಿರಾವ ಒತ್ತಾಯ

 


ಕವಿಪ್ರನಿನಿ: ತಪ್ಪಿತಸ್ಥ ನೌಕರರ ಅಮಾನತ್ತಿಗೆ ಅಂಬಾಜಿರಾವ ಒತ್ತಾಯ 

ರಾಯಚೂರು,ಮೇ.9- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ದೇಶಕರು ಆಡಳಿತ ಮತ್ತು ಮಾ. ಸಂ. ಹಾಗೂ ಶಿಸ್ತು ಪ್ರಾಧಿಕಾರ ದಿಂದ ದಿನಾಂಕ 30 ಏಪ್ರಿಲ್ 2024 ರಂದು ಕವಿಪ್ರನಿನಿ ಯ 44 ಅಧಿಕಾರಿ /ನೌಕರರ ವಿರುದ್ಧ ಇಲಾಖೆ ವಿಚಾರಣೆ ದಾಖಲಾಗಿದೆ, 10 ದಿನ ದೊಳಗೆ ರಕ್ಷಣಾತ್ಮಕ ಹೇಳಿಕೆ ನೀಡಲು ಅವಕಾಶ ಕೊಟ್ಟಿರುತ್ತಾರೆ ಆದರೇ ಆರೋಪ ಪಟ್ಟಿಯಲ್ಲಿ 2,28,06,760 ರೂ. ಗಳ ನಷ್ಟ ವುಂಟು ಮಾಡಿದ್ದಾರೆ ಎಂದು ಆರೋಪ ಮೇಲ್ನೋಟಕ್ಕೆ ಸಾಭಿತಾಗಿದ್ದು ಎದ್ದು ಕಾಣುತ್ತಿದ್ದರೂ ಈ 44 ಜನರಿಗೆ ಅಮಾನತ್ತು ಮಾಡದೆ ಇಲಾಖೆ ವಿಚಾರಣೆ ಮಾಡಿದರೆ ಸಾಭಿತು ಆಗಲೂ ಹೇಗೆ ಸಾಧ್ಯ? ಹಾಗಾಗಿ ಈ ಕೂಡಲೇ ಅಮಾನತ್ತು ಗೊಳಿಸಿ ಮುಂದಿನ ವಿಚಾರಣೆ ನಡೆಸಬೇಕು ಹಾಗಾದರೆ ನಿಷ್ಪಕ್ಷಪಾತವಾಗಿ ವಿಚಾರಣೆ ಆಗುತ್ತೆ ಇಲ್ಲಾ ವಾದಲ್ಲಿ ಈ 44 ಜನರಿಗೆ ಅಮಾನತ್ತು ಮಾಡದೆ ವಿಚಾರಣೆ ನಡೆಸಿದರೆ ದಾಖಲೆಗಳು ತಿರುಚುವ ಸಂಭವ ತುಂಬಾ ಯಿರುತ್ತದೆ ಎಂದು ಸಮಾಜ ಸೇವಕ ಅಂಬಾಜಿರಾವ ಮೈದರಕರ್ ತಿಳಿಸಿದ್ದಾರೆ.



Comments

Popular posts from this blog