Posts

Showing posts from January, 2025
Image
  ಮಾನವ ಕುಲಕ್ಕೆ ಸ್ಪೂರ್ತಿ ತುಂಬಿದ ಭಕ್ತಿ ಪಂಥದ ಮಹಾ ಚೇತನ ಶ್ರೀ ಪುರಂದರ ದಾಸರು- ಮುರಳಿಧರ ಕುಲಕರ್ಣಿ   ಜಯಧ್ವಜ ನ್ಯೂಸ್ , ರಾಯಚೂರು, ಜ.29-                ಮಾನವ ಜನ್ಮ ದೊಡ್ಡದು ಅದನ್ನು ಹಾನಿ ಮಾಡಲು ಬೇಡ ಹುಚ್ಚಪ್ಪ ಗಳಿರಾ ! ಎಂದು ಸಾರುತ್ತ ಮೂಲಭೂತವಾಗಿ ಮಾನವ ಧರ್ಮ ಮಾನವೀಯತೆಗಳ ಸಾಹಿತ್ಯವನ್ನು ನೀಡಿ ಮನಕುಲಕ್ಕೆ ಹೊಸ ಸ್ಪೂರ್ತಿಯನ್ನು ತುಂಬಿದ ದಾಸರೆ ಪುರಂದರದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಅವರು ಹೇಳಿದರು.           ಅವರು  ನಗರದ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ   ಬುದುವಾರ  ಸಂಜೆ ಜರುಗಿದ ಶ್ರೀ ಪುರಂದರ ದಾಸರ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ ಮಾತ ನಾಡಿದರು.      ಈಸಬೇಕು ಇದ್ದು ಜಯಿಸಬೇಕು, ಎಂದು ಆತ್ಮಸ್ಥೈರ್ಯವನ್ನು ತುಂಬುತ್ತಾ, ಸಾಲ ಮಾಡಲಿ ಬೇಡ ಸಾಲದೆಂದೆನ ಬೇಡ,  ಸಂಸಾರವೆಂಬ ಸೌಭಾಗ್ಯ ನನಗಿರಲಿ ಎಂಬ ಸಾಮಾಜಿಕ ಮೌಲ್ಯವನ್ನು ಬಿತ್ತಿದರು. ಅದೇ ರೀತಿ ಸಮಾಜದಲ್ಲಿರುವ ಹಲವಾರು ಅಂಕುಡೊಂಕುಗಳನ್ನು ಎದೆಗಾರಿಕೆಯಿಂದ ಖಂಡಿಸಿದ ಮಹಾನುಭಾವರು ಶ್ರೀ ಪುರಂದರ ದಾಸರು ಎಂದ ಅವರು  ಹೇಳಿದರು.       ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಮಕಲಾ ಪರಿಷತ್ತಿನ ಅಧ್ಯಕ್ಷರಾದ  ವೆಂಕಟರಾವ್...
Image
ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ  ಉಪೇಂದ್ರ ಕೇಶವರಾವ್ ಸಾರಥ್ಯದ ಆರ್ ವಿ  ಟಿವಿಗೆ ಶುಭಾಶೀರ್ವಾದ                                                                            ಜಯ ಧ್ವಜ ನ್ಯೂಸ್, ರಾಯಚೂರು ಜ.29-                                       ಕಲ್ಯಾಣ ಕರ್ನಾಟಕ ಭಾಗದ ಕ್ರೀಯಾಶೀಲ ಹಿರಿಯ  ಸಂಪಾದಕ ಮತ್ತು ಕಲ್ಬುರ್ಗಿ ವಿಭಾಗೀಯ ಪತ್ರಕರ್ತ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಉಪೇಂದ್ರ ಕೇಶವರಾವ್ ಅವರ ಸಾರಥ್ಯದ  RVTV ಚಾನಲ್ ಐದು ವರ್ಷ ಪೂರೈಸಿದ್ದಕ್ಕೆ ಉಪೇಂದ್ರ ಇವರಿಗೆ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು  ಶೇಷ ವಸ್ತ್ರ ಹೊದಿಸಿ, ಮಂತ್ರಾಕ್ಷತೆ ನೀಡಿ ಆರ್ ವಿ ಟೀವಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು  ಶುಭ ಹಾರೈಸಿ ಆಶೀರ್ವದಿಸಿದರು.
Image
  ವಾರ್ತಾ ಇಲಾಖೆಯ ನೂತನ ಬಸ್‌ಗೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಹಸಿರು ನಿಶಾನೆ ಜಯಧ್ವಜ ನ್ಯೂಸ್ ,ರಾಯಚೂರು ಜ.24- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2024-25ನೇ ಸಾಲಿನಲ್ಲಿ ರಾಯಚೂರಿನ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಮಂಜೂರಾದ ನೂತನ ಮಿನಿ ಬಸ್‌ಗೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಹಸಿರು ನಿಶಾನೆ ತೋರಿದರು. ಜನವರಿ 24ರಂದು, ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಬಸ್ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು, ಹೂವು, ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಬಸ್‌ನ ಪ್ರವೇಶ ದ್ವಾರದಲ್ಲಿ ರಿಬ್ಬನ್ ಕತ್ತರಿಸಿ ಪತ್ರಕರ್ತರೊಂದಿಗೆ ಬಸ್ ಏರಿದರು. ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಮಾನವಿ ಶಾಸಕರಾದ ಹಂಪಯ್ಯ ನಾಯಕ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ್, ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಜಿಲ್ಲಾ...
Image
  ಭಕ್ತಿಯ ಸೇತುವೆ ನಿರ್ಮಿಸಿ ಗೋವಿಂದನನ್ನು ತೋರಿಸಿದ ದಾಸರು  ಗೋಪಾಲ ದಾಸರು- ಮುರಳಿಧರ ಕುಲಕರ್ಣಿ .        ಜಯಧ್ವಜ ನ್ಯೂಸ್ , ರಾಯಚೂರು,ಜ.23- ಭಕ್ತಿಯಲ್ಲಿ ಭಾಗಣ್ಣ ನೆಂದು ಪ್ರಸಿದ್ಧಿಯಾಗಿದ್ದ, ದಾಸ ಶ್ರೇಷ್ಠರಾದ ಶ್ರೀ ಗೋಪಾಲದಾಸರು ಭಕ್ತಿ ಮಾರ್ಗದ ಮೂಲಕ ಪ್ರತಿಯೊಬ್ಬರಿಗೂ  ಭಕ್ತಿ ಸೇತುವೆಯನ್ನು ನಿರ್ಮಿಸಿ ಪರಮಾತ್ಮನಾದ ಗೋವಿಂದ ನನ್ನು ತೋರಿಸಿಕೊಟ್ಟ ವರೇಣ್ಯರು ಎಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಅವರು ಹೇಳಿದರು.    ಅವರು ನಿನ್ನೆ ಬುಧವಾರ ಸಂಜೆ ರಾಯಚೂರು ನಗರದ ಜವಾಹರ ನಗರದ ಬಯಲುಆಂಜನೇಯ ದೇವಸ್ಥಾನದಲ್ಲಿ ಜರುಗಿದ ಶ್ರೀ ಗೋಪಾಲ ದಾಸರ ಮಧ್ಯರಾಧನೆಯ  ಕಾರ್ಯಕ್ರಮದಲ್ಲಿ ಮಾತನಾಡಿದರು.   ದಾಸ ಸಾಹಿತ್ಯದ ಎರಡನೇ ಘಟ್ಟದಲ್ಲಿ ಈ ಸಾಹಿತ್ಯಕ್ಕೆ  ಸೈಧ್ಯಾಂತಿಕ ಮಹತ್ವ ಕೊಟ್ಟು ನೂರಾರು ಸಂಕೀರ್ತನೆಗಳನ್ನು,  ಉಗಾಭೋಗಗಳನ್ನು,ಸುಳಾದಿಗಳನ್ನು, ಮುಂಡಿಗೆಗಳನ್ನು, ಚಕ್ರಾಬ್ಜ ಮಂಡಲದ ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದಂತಹ ಪ್ರಾತಸ್ಮರಣೀಯ ಹರಿದಾಸರಾಗಿದ್ದಾರೆ.  ಇವರು  ಶ್ರೀ ವಿಜಯದಾಸರ ಶಿಷ್ಯರಾಗಿ, ಶ್ರೀ ಜಗನ್ನಾಥ ದಾಸರ ಗುರುಗಳಾಗಿ ದಾಸ ಪರಂಪರೆಯನ್ನು ಬೆಳೆಸಿದ ದಾಸ ಚತುಷ್ಠಿಯರಲ್ಲಿ ಒಬ್ಬರಾಗಿದ್ದಾರೆ. ಎಂದು ಹೇಳಿದರು.     ಈ ಕಾರ್ಯಕ್ರಮದಲ್ಲಿ  ರವೀಂದ್ರ...
Image
  ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಜ.15 ರಿಂದ ಫೆ.12ರವರಗೆ  57 ನೇ ವರ್ಷದ 29 ದಿನಗಳ ಮಹಾನ್ ಜ್ಞಾನಸತ್ರ ಕಾರ್ಯಕ್ರಮ : ಫೆ.5 ರಂದು ಬೃಹತ್ ಶೋಭಾಯಾತ್ರೆ ಸೇರಿದಂತೆ ಧಾರ್ಮಿಕ ಮತ್ತು ಸಂಸ್ಕೃತಿಕ ಕಾರ್ಯಕ್ರಮ ವಿವಿಧ  ಮಠಾಧೀಶರ ಆಗಮನ - ಆನಂದಆಚಾರ್ಯ ಜಯಧ್ವಜ ನ್ಯೂಸ್, ರಾಯಚೂರು, ಜ.13- ನಗರದ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಜ.೧೫ ರಿಂದ ಫೆ.೧೨ರವರೆಗೆ ೫೭ ನೇ ವರ್ಷದ ೨೯ ದಿನಗಳ ಮಹಾನ್ ಜ್ಞಾನ ಸತ್ರ ನಡೆಯಲಿದೆ ಎಂದು ಆಯೋಜಕರಾದ ಆನಂದ ಆಚಾರ್ಯ ಹೇಳಿದರು. ಅವರಿಂದು ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮುಂಗ್ಲಿ ಮುಖ್ಯ ಪ್ರಾಣ ಸೇವಾ ಸಮಿತಿ ಹಾಗೂ ಸಮಸ್ತ ಯುವಕ ಮಂಡಳಿ ಕೋಟೆ ಹಾಗೂ ವಿವಿಧ ಭಜನಾ ಮಂಡಳಿಗಳ ಸಹಯೋಗದೊಂದಿಗೆ ಜ.೧೫ ರಂದು ಸಂಜೆ ೬.೩೦ ಜ್ಞಾನಸತ್ರ ಕಾರ್ಯಕ್ರಮ ಉದ್ಘಾಟನೆಯನ್ನು ಮಂತ್ರಾಲಯ ಶ್ರೀ ಗುರಸಾರ್ವಭೌಮ ಸಂಸ್ಕೃತಿಕ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ವಾದಿರಾಜ ಆಚಾರ್ ನೆರವೇರಿಸಲಿದ್ದಾರೆ ಎಂದರು. ಜ.೧೫ ಮತ್ತು ೧೬ ರಂದು ಸಂಜೆ ೭ಕ್ಕೆ ವಾದಿರಾಜ್ ಆಚಾರ್ ಆವರಿಂದ ಪ್ರವಚನ, ಜ.೧೭ ರಿಂದ ೧೯ ರವರೆಗೆ ಸಂಜೆ.೬.೩೦ಕ್ಕೆ ವೆಂಕಟ ನರಸಿಂಹ ಆಚಾರ್ ಅಚರಿಂದ ಪ್ರವಚನ,ಜ.೨೦ ರಿಂದ ೨೨ರವರೆಗೆ ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರಿಂದ ಪ್ರವಚನ ನಡೆಯಲಿದೆ ಎಂದರು. ಜ.೨೨ ರಂದು ಗೋಪಾಲದಾಸರ ಪುಣ್ಯ ತಿಥಿ ಅಂಗವಾಗಿ ಧನ್ವಂತರ ಹೋಮ ನಂತರ ಶ...
Image
  ಸ್ವಾಮಿ ವಿವೇಕಾನಂದ ರ 163 ನೇ ಜಯಂತಿ ಆಚರಣೆ                  ಜಯ ಧ್ವಜ ನ್ಯೂಸ್ ರಾಯಚೂರು,ಜ.12-                 ನಗರದ ಸ್ವಾಮಿ ವಿವೇಕಾನಂದ ವೃತ್ತ ದಲ್ಲಿ  ಸೋಮವಾರಪೇಟೆಯ ಮಠದ ಗುರುಗಳಾದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಜಿ ಯವರ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸುವದರ ಮೂಲಕ  ಉಧ್ಘಾಟಿಸಿ  ಆಶಿರ್ವಚನ ನೀಡಿದರು.     ಸ್ವಾಮಿ ವಿವೇಕಾನಂದ ಯುವಕ ಸಂಘದ  ಸದಸ್ಯ  ವಿಜಯ ಭಾಸ್ಕರ ಇಟಗಿ ಮಾಜಿ ಸಿಂಡಿಕೇಟ್ ಸದಸ್ಯರು,ರಮೇಶ ಕುಲಕರ್ಣಿ ಅಕಬ್ರಾಮಸ ಕಾರ್ಯಕಾರಿಣಿ ರಾಜ್ಯ ಸದಸ್ಯರು,ಶ್ರೀ ಜಯಕುಮಾರ ಗಬ್ಬೂರ ಬ್ರಾಹ್ಮಣ ಸಮಾಜದ ಮುಖಂಡರು ,ಪ್ರಸನ್ನ ಆಲಂಪಲ್ಲಿ ಆಲಂಪಲ್ಲಿ ಪ್ರತಿಷ್ಟಾನದ ಅಧ್ಯಕ್ಷರು, ಜೆ ಎಮ್ ವೀರೇಶ ಜ.ಗೃ.ನಿ ಸಮಿತಿ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.
Image
  ನಗರದ ವಿವಿಧೆಡೆ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ, ಪುನಸ್ಕಾರ . ಜಯ ಧ್ವಜ ನ್ಯೂಸ್, ರಾಯಚೂರು, ಜ.10- ನಗರದ ವಿವಿಧ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಎನ್.ಜಿ.ಓ ಕಾಲೋನಿ ವೆಂಕಟರಮಣ ದೇವಸ್ಥಾನ, ನವೋದಯ  ವೆಂಕಟೇಶ್ವರ ದೇವಸ್ಥಾನ,  ಆಶಾಪೂರು ರಸ್ತೆಯ ಇಸ್ಕಾನ್ ದೇವಸ್ಥಾನ, ರಾಜಮಾತಾ ದೇವಸ್ಥಾನ, ಉಪ್ಪಾರವಾಡಿ ವೆಂಕಟೇಶ್ವರ, ನಗರೇಶ್ವರ ದೇವಸ್ಥಾನ, ಬದರಿನಾರಾಯಣ ದೇವಸ್ಥಾನ, ಜೋಡು ವಿರಾಂಜಿನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ವೈಕುಂಠ ಏಕಾದಶಿ ನಿಮಿತ್ಯ ಉತ್ತರ ದ್ವಾರದ ಮೂಲಕ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಸಾವಿತ್ರಿ ಕಾಲೋನಿ ಜೋಡು ವಿರಾಂಜಿನೇಯ  ದೇವಸ್ಥಾನದಲ್ಲಿ ಅಖಂಡ ಭಾಗವತ ಪ್ರವಚನ ನೆರವೇರಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು  ದೇವಸ್ಥಾನ ಆವರಣಗಳನ್ನು ಪುಷ್ಪಗಳಿಂದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ನೂಕು ನುಗ್ಗಲು ಉಂಟಾಗದಂತೆ ಸರದಿ ಸಾಲಿನಲ್ಲಿ ಸಾಗುವುದಕ್ಕೆ ಅನುಕೂಲ ಕಲ್ಪಿಸಲಾಗಿತ್ತು.ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡು ಕೃತಾರ್ಥರಾದರು.  
Image
   ವೈಕುಂಠ ಏಕಾದಶಿ ಅಂಗವಾಗಿ ಶ್ರೀ ಬದರಿನಾರಾಯಣ ದೇವಸ್ಥಾನದಲ್ಲಿ ಏಕಾದಶ ವಿಷ್ಣು ಸಹಸ್ರ ನಾಮ ಹೋಮ ಜಯ ಧ್ವಜ ನ್ಯೂಸ್ ,ರಾಯಚೂರು.ಜ.10 ವೈಕುಂಠ ಏಕಾದಶಿ ಪ್ರಯುಕ್ತ ನಗರದ ಬದರಿನಾರಾಯಣ ಬಡಾವಣೆಯ ಶ್ರೀ ಬದರಿನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ಹೋಮ ಹವನಗಳು ಶುಕ್ರವಾರ ನಡೆದವು. ದೇವಸ್ಥಾನದ ಮುಖ್ಯಸ್ಥರಾದ ವೇ.ಮೂ.ಭೀಮಸೇನಾಚಾರ್ ಸಿರಗುಂಪಿ ನೇತೃತ್ವದಲ್ಲಿ ಬೆಳಿಗ್ಗೆ ಸುಪ್ರಭಾತ, ನೀರ್ಮಾಲ್ಯ ವಿಸರ್ಜನೆ,ಮಹಾಮಂಗಳಾರತಿ ಹನ್ನೊಂದು ಹೋಮ ಕುಂಡಗಳಲ್ಲಿ ಏಕಾದಶ ವಿಷ್ಣುಸಹಸ್ರನಾಮ ಹೋಮಗಳ ಪೂರ್ಣಾಹುತಿ ನೆರವೇರಿತು. ಪಂಡಿತರಿಂದ ಭಾಗವತ ಪ್ರವಚನ ನೆರವೇರಿತು. ಬೆಳಿಗ್ಗೆ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ಯ ಶ್ರೀ ಬದರಿನಾರಾಯಣ ದೇವರಿಗೆ ಭವ್ಯವಾಗಿ ತುಳಸಿಹಾರ ಅಲಂಕರಿಸಲಾಗಿತ್ತು , ವಿವಿಧ ಬಗೆಯ ಫಲಪುಷ್ಪಗಳಿಂದ ದೇವಸ್ಥಾನ ಕಂಗೊಳಿಸಿತು. ಉತ್ಸವ ಮೂರ್ತಿಗಳ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಮಾಧವಾಚಾರ್ ಜೋಷಿ ಮತ್ತು ಮಮತಾ ದೇಶಪಾಂಡೆಯವರಿಂದ  ಸಂಗೀತ ಕಾರ್ಯಕ್ರಮ ನೇರವೇರಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಕಳೆಕಟ್ಟಿದವು. ಮಹಿಳಾ ಭಜನಾಮಂಡಳಿಗಳಿಂದ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ದೇವರ ಸ್ತೋತ್ರಗಳ ಪಠಣ ನಡೆಯಿತು. ಈ ಸಂದರ್ಭದಲ್ಲಿ ಆರ್‌ಡಿಎ ಮಾಜಿ ಅಧ್ಯಕ್ಷ ಕಡಗೋಲ ಆಂಜಿನೇಯ್ಯ, ನಗರಸಭೆ ಸದಸ್ಯ ಇ.ಶಶಿರಾಜ, ಆಲಂಪಲ್ಲಿ ಪ್ರತಿಷ್ಟಾನದ ಅಧ್ಯಕ್ಷ ಮತ್ತು ಬ್ರಾಹ್ಮಣ ಸಮಾಜದ ಯುವಮುಖಂಡರಾ...
Image
  ಪತ್ರಕರ್ತ ಬಿ.ಎ.ನಂದಿಕೋಲಮಠ  ನಿಧನಕ್ಕೆ ಪತ್ರಕರ್ತರ ಸಂಘದಿಂದ ಶ್ರದ್ದಾಂಜಲಿ.                                                          ಜಯ ಧ್ವಜ ನ್ಯೂಸ್, ರಾಯಚೂರು, ಜ.9-       ಇತ್ತೀಚೆಗೆ ನಿಧನರಾದ ಪ್ರಜಾವಾಣಿ ಪತ್ರಿಕೆ ಲಿಂಗಸುಗೂರು ತಾಲ್ಲೂಕ ವರದಿಗಾರ ಬಿ.ಎ.ನಂದಿಕೋಲ ಮಠ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಬಿ.ಎ.ನಂದಿಕೋಲಮಠ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಭೆಯನ್ನುದ್ದೇಶಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪತ್ರಕರ್ತರಾದ ಬಿ.ವೆಂಕಟಸಿಂಗ್, ಭೀಮರಾಯ ಹದ್ದಿನಾಳ, ವಿಶ್ವನಾಥ ಹೂಗಾರ, ವೆಂಕಟೇಶ ಹೂಗಾರ ಮಾತನಾಡಿ, ಪತ್ರಕರ್ತ ಬಿ.ಎ.ನಂದಿಕೋಲಮಠ ಅಕಾಲಿಕ ನಿಧನದಿಂದ ಜಿಲ್ಲೆಯ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾದ ನಷ್ಟವಾಗಿದೆ ಎಂದರು. ಜನರ ಸಮಸ್ಯೆಗಳ ಕುರಿತು ವರದಿ ಮಾಡುವುದರ ಮೂಲಕ ತಾಲ್ಲೂಕಿನ ಜನರ ಅಚ್ಚುಮೆಚ್ಚಿನ ಪತ್ರಕರ್ತರಾಗಿದ್ದರು. ಹೋರಾಟಗಾರರ ಒಡನಾಡಿ ಎಂದು ಗುರುತಿ...