ಶ್ರೀ ಕಣ್ವಮಠ ಪಂಚಾಂಗ ಲೋಕಾರ್ಪಣೆ
ಜಯ ಧ್ವಜ ನ್ಯೂಸ್, ರಾಯಚೂರು.ಫೆ.1- ಕಣ್ವಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತ ದಿಂದ
ಶ್ರೀ ಶಾಲಿವಾಹನ ಶಕೆ 1947 ವಿಶ್ವಾವಸುನಾಮ ಸಂವತ್ಸರ (2025-26) ಕಣ್ವಮಠ ಪಂಚಾಂಗ ಲೋಕಾರ್ಪಣೆಯನ್ನು ಸುಕ್ಷೇತ್ರ ತುರುಡಗಿ (ಅಮ್ಮನ ಕಟ್ಟೆ) ಯಲ್ಲಿ ಇತ್ತೀಚೆಗೆ ನೆರವೇರಿಸಲಾಯಿತು
ಶ್ರೀ ಮದ್ ಕಣ್ವ ಮಠ ಆಡಳಿತಾಭಿವೃದ್ದಿ ಟ್ರಸ್ಟಕಾರ್ಯಾಧ್ಯಕ್ಷರಾದ ರಾಘವೇಂದ್ರ ಅಲಗೂರ ಹಾಗೂ ಟ್ರಸ್ಟ ಪ್ರಚಾರ ಹಾಗೂ ಮಾಧ್ಯಮ ಸಮಿತಿ ಮುಖ್ಯಸ್ಥರು ಆದ ಪ್ರಸನ್ನ ಆಲಂಪಲ್ಲಿ ಮತ್ತು ಇತರ ಪದಾಧಿಕಾರಿಗಳು,ಶ್ರೀ ಸಾದ್ವಿ ಶಿರೋಮಣಿ ತುರುಡಗಿ ತಿಮ್ಮಮ್ಮನವರ ವಿಶ್ವಸ್ಥ ಸಮಿತಿ ಸದಸ್ಯರು, ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.
Comments
Post a Comment