Posts

ಬೆಂಗಳೂರು ವರೆಗೂ ರೈಲು ವಿಸ್ತರಣೆಗೆ ಡಾ. ಬಾಬುರಾವ ಕೇಂದ್ರ ರೈಲ್ವೇ ಸಚಿವರಿಗೆ ಒತ್ತಾಯ

Image
  ಬೆಂಗಳೂರು ವರೆಗೂ ರೈಲು ವಿಸ್ತರಣೆಗೆ ಡಾ. ಬಾಬುರಾವ ಕೇಂದ್ರ ರೈಲ್ವೇ ಸಚಿವರಿಗೆ ಒತ್ತಾಯ  ರಾಯಚೂರು, ಜ.27-ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 77031-32 ಗುಲ್ಬರ್ಗದಿಂದ ರಾಯಚೂರು ಮಾರ್ಗದ ಮೂಲಕ ಬೆಂಗಳೂರು ವರೆಗೂ ವಿಸ್ತರಣೆ ಮಾಡುವಂತೆ ರೈಲ್ವೆ ಬೋರ್ಡ್ ಸದಸ್ಯ ಡಾ. ಬಾಬುರಾವ ಅವರು ಸಂಸದ ರಾಜ ಅಮರೇಶನಾಯಕ ಅವರ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.   ರೈಲ್ವೆ ಸಂಖ್ಯೆ 07067-68 ಮಚಲಿಪಟ್ನದಿಂದ ಕರ್ನೂಲ್ ವರೆಗೆ ವಿಸ್ತರಿಸಿದ್ದು, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪ್ರಯಾಣಕರ ಮತ್ತು ರಾಘವೇಂದ್ರ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ಸದರಿ ರೈಲ್ವೆಯನ್ನು ಮಂತ್ರಾಲಯ ವರೆಗೂ ವಿಸ್ತರಣೆ ಮಾಡುವಂತೆ ಮನವಿ ಮಾಡಿದರು. ರೈಲ್ವೆ ಸಂಖ್ಯೆ 12861-62 ದಿನನಿತ್ಯ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನ್ನು ವಿಶಾಖಪಟ್ನದಿಂದ ಮೆಹಬೂಬನಗರದ ವೆರೆಗೆ ವಿಸ್ತರಿಸಲಾಗಿದೆ. ಸದರಿ ರೈಲ್ವೆಯನ್ನು ರಾಯಚೂರು ವರೆಗೂ ವಿಸ್ತರಣೆ ಮಾಡುವಂತೆ ಒತ್ತಾಯಿಸಿದರು. ಕೇಂದ್ರ ಸಚಿವರು ಪ್ರಯಾಣಿಕರ ಅನುಕೂಲಕ್ಕಾಗಿ ಕೂಡಲೇ ನಮ್ಮ ಮನವಿಯನ್ನು ಆಲಿಸಿ ಶೀಘ್ರದಲ್ಲಿ ರೈಲ್ವೆಯನ್ನು ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಾಗೇಶ್ವರರಾವ್, ಭೀಮರೆಡ್ಡಿ, ಶಂಕರರಾವ್,ಸಿದ್ದಯ್ಯಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್: ಗಣರಾಜ್ಯೋತ್ಸವ ದಿನಾಚರಣೆ

Image
  ವೀರ ಸಾವರ್ಕರ್  ಯೂಥ್ ಅಸೋಸಿಯೇಷನ್: ಗಣರಾಜ್ಯೋತ್ಸವ ದಿನಾಚರಣೆ                    ರಾಯಚೂರು,ಜ.26- ವೀರ ಸಾವರ್ಕರ್  ಯೂಥ್ ಅಸೋಸಿಯೇಷನ್ ವತಿಯಿಂದ 75  ನೆಯ ಗಣರಾಜ್ಯೋತ್ಸವವನ್ನು ಮಾವಿನ ಕೆರೆ ಹತ್ತಿರದ  ವೀರ ಸಾವರ್ಕರ್ ಪುತ್ತಳಿ ಬಳಿ  ಆಚರಿಸಲಾಯಿತು.  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿಜಯ ವಿಠಲ ಆಚಾರ್  ಗಣರಾಜ್ಯೋತ್ಸವ ಉದ್ದೇಶಗಳು ತಿಳಿಸುತ್ತಾ  ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.ಭಾರತೀಯ ಸ್ವಾತಂತ್ರ್ಯ ಚಳುವಳಿ, ಜನವರಿ 26, 1929 ರಂದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯವನ್ನು ಗುರಿಯಾಗಿಸಿಕೊಂಡಿತು. ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ದಿನವನ್ನು ಪೂರ್ಣ ಸ್ವರಾಜ್ ದಿನ ಎಂದು ಘೋಷಿಸಲಾಯಿತು. ಈ ಕಾರಣಕ್ಕಾಗಿಯೇ ಭಾರತದ ಸಂವಿಧಾನವನ್ನು ಸ್ವಾತಂತ್ರ್ಯದ ನಂತರ ಈ ದಿನದಂದು ಜಾರಿಗೆ ತರಲಾಯಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸುರೇಶ್ ಬಾಬು  ಹೊಸೂರ್ ಅವರು ಮಾತನಾಡುತ್ತಾ ಗಣರಾಜ್ಯೋತ್ಸವ ದಿನವನ್ನುಇಡೀ ದೇಶವೇ ಸಂಭ್ರಮಿಸುತ್ತದೆ.       ಈ ದಿನವು ದೇಶ ಸ...

ವಿವಿಧೆಡೆ 75 ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ

Image
  ವಿವಿಧೆಡೆ 75ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ                                                           ರಾಯಚೂರು,ಜ.26- ವಿವಿಧೆಡೆ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ‌ ಆಚರಿಸಲಾಯಿತು.                                    ಪತ್ರಿಕಾ ಭವನದಲ್ಲಿ : ನಗರದ ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ವತಿಯಿಂದ  75ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣವನ್ನು ರಾಯಚೂರು ರಿಪೋರ್ಟ್ರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ ನೆರವೇರಿಸಿದರು. ರಾಷ್ಟ್ರಗೀತೆ ಮೊಳಗಿತು. ಈ ಸಂದರ್ಭದಲ್ಲಿ ಹಿರಿಯ ಮತ್ತು ಕಿರಿಯ ಪತ್ರಕರ್ತರು ಉಪಸ್ಥಿತರಿದ್ದರು .                                                               ರಾಘವೇಂದ್ರ ವಿದ್ಯಾರ್ಥಿ ನಿಲಯ: ನಗರದ ಶ...

ಜಿಲ್ಲೆಯ ಮೂವರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ.

Image
  ಜಿಲ್ಲೆಯ ಮೂವರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ  ಸ್ಥಾನ.                                                                                ರಾಯಚೂರು,ಜ.26- ಜಿಲ್ಲೆಯ ಮೂವರು ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.                                  ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಯವರಿಗೆ ರಾಜ್ಯ ಕೈಗಾರಿಕೆಗಳ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ   ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ರವರಿಗೆ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಹಾಗೂ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಅವರಿಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ರನ್ನಾಗಿ   ಎರೆಡು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಲಾಗಿದ್ದು ಸಂಪುಟ ದರ್ಜೆ ಸ್ಥಾನಮಾನ ಸೌಲಭ್ಯ ನೀಡಿ ಆದೇಶಿಸಲಾಗಿದೆ.

ರಾಮರಾಜ್ಯ ಕೇವಲ ಮಂದಿರ ಕಟ್ಟುವುದರಿಂದ ಆಗಲ್ಲ-ಡಾ.ಶರಣ ಪ್ರಕಾಶ್ ಪಾಟೀಲ್

Image
  ರಾಮರಾಜ್ಯ ಕೇವಲ ಮಂದಿರ ಕಟ್ಟುವುದರಿಂದ ಆಗಲ್ಲ- ಡಾ.ಶರಣ ಪ್ರಕಾಶ್ ಪಾಟೀಲ್                ರಾಯಚೂರು,ಜ.26- ಮಂದಿರ ಕಟ್ಟುವುದರಿಂದ ರಾಮರಾಜ್ಯ ವಾಗುವುದಿಲ್ಲವೆಂದು ವೈದ್ಯಕೀಯ ಶಿಕ್ಷಣ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.                                  ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಶೇ.40 ರಷ್ಟು ಭ್ರಷ್ಟಾಚಾರ ಮಾಡಿದ್ದರಿಂದಲೇ ಅವರನ್ನು ಜನರು ತಿರಸ್ಕರಿಸಿದ್ದಾರೆ. ಕೇವಲ ಗುಡಿ ಕಟ್ಟಿದರೆ ಮಾತ್ರ ರಾಮರಾಜ್ಯವಾಗುವುದಿಲ್ಲ ಬದಲಾಗಿ ಉತ್ತಮ ಆಡಳಿತ ನೀಡಿ ಜನರ ಕಷ್ಟ ನಿವಾರಿಸಿ ಮನ್ನಣೆ ಗಳಿಸಿದರೆ ರಾಮರಾಜ್ಯವಾಗುತ್ತದೆ ಎಂದರು.                             ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿದ್ದು ಅವರ ವೈಯಕ್ತಿಕ ಅವರಿಗೆ ಕಾಂಗ್ರೆಸ್ ಗೌರವಯುತವಾಗಿ ಎಂಎಲ್ಸಿ ಮಾಡಿತ್ತು ಸೋತರು ಅವರಿಗೆ ಸ್ಥಾನಮಾನ ನೀಡಿತ್ತು ಆದರೂ ಅವರು ಹೋಗಿದ್ದಾರೆ ಇದರಿಂದ ಪಕ್ಷಕ್ಕೆ ನಷ್ಟವಿಲ್ಲ ಪಕ್ಷದಿಂದ ವ್ಯಕ್ತಿಯೇ ಹೊರತು ವ್ಯಕ್ತಿಯಿಂದ ಪಕ್ಷವಲ್ಲ ಎಂದರು. ಜಿಲ್ಲೆ...

ಮಮದಾಪುರ ಗ್ರಾಮ ಪಂಚಾಯತಿ: ಗಣರಾಜ್ಯೋತ್ಸವ ನಿಮಿತ್ಯ ದ್ವಜಾರೋಹಣ

Image
  ಮಮದಾಪುರ  ಗ್ರಾಮ ಪಂಚಾಯತಿ:  ಗಣರಾಜ್ಯೋತ್ಸವ ನಿಮಿತ್ಯ ದ್ವಜಾರೋಹಣ  ರಾಯಚೂರು,ಜ.26. ತಾಲೂಕಿನ ಮಮದಾಪುರ  ಗ್ರಾಮ ಪಂಚಾಯತಿಯಲ್ಲಿ 75ನೇ  ಗಣರಾಜ್ಯೋತ್ಸವ ನಿಮಿತ್ಯ ದ್ವಜಾರೋಹಣ ನೆರವೇರಿಸಲಾಯಿತು .ನಂತರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ  15ನೇ ಹಣಕಾಸಿನ ಯೋಜನೆಯ 5% ವಿಕಲಚೇತನರ ಮೀಸಲಾತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ವಿಆರ್ ಡಬ್ಲ್ಕಯೂ ಛೇರಿಯನ್ನು ಉದ್ಘಾತಿಸಲಾಯಿತು.  ಸದರಿ ಕಛೇರಿಗೆ ಅಲ್ಮೆರಾ, ಮೇಜು, ಕುರ್ಚಿಯನ್ನು ನೀಡಲಾಯಿತು.ಗ್ರಾಮೀಣ ಭಾಗದ ವಿಕಲಚೇತನರು, ವೃದ್ಧರು, ಹಾಗೂ ವಿಧವೆಯರಿಗೆ ಸರಕಾರದ ಸೌಲಭ್ಯತಾಗಳನ್ನು ಅವರಿಗೆ ಸಮರ್ಪಕವಾಗಿ ದೊರಕಿಸುವುದು ಮತ್ತು ಪಂಚಾಯತಿ ಜೊತೆ ಸಮನ್ವಯ ಸಾಧಿಸುವುದು   ವಿ ಆರ್ಅ ಡಬ್ಲೂ ರವರ ಕರ್ತವ್ಯವಾಗಿದ್ದು. ಅವರು ಸಮರ್ಪಕವಾಗಿ ಕೆಲಸ ನಿರ್ವಹಿಸಲು  ಅನುಕೂಲ ಆಗುವುದು ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಾನ್ಯ ಶ್ರೀ ಹುಸೇನಪ್ಪ ನಾಯಕ್, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ನಾಗರತ್ನ, ಗ್ರಾಮ ಪಂಚಾಯಿತಿಯ ಎಲ್ಲಾ  ಸದಸ್ಯರು ಗ್ರಾಮ ಪಂಚಾಯತಿ ಸರ್ವ ಸಿಬ್ಬಂದಿಗಳು ಹಾಗೂ ಗ್ರಾಮದ ಮುಖಂಡರು ಹಾಗೂ ಹಿರಿಯರೆಲ್ಲರೂ ಸಹ ಉಪಸ್ಥಿತರಿದ್ದರು.

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಕಟ್ಟಡ ಅಭಿವೃದ್ಧಿಗೆ ಅನುದಾನ‌ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರಕರ್ತರಿಂದ ಮನವಿ

Image
  ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಕಟ್ಟಡ ಅಭಿವೃದ್ಧಿಗೆ ಅನುದಾನ‌ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರಕರ್ತರಿಂದ ಮನವಿ ರಾಯಚೂರು,ಜ.26- ನಗರದ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ನೀಡುವಂತೆ ಕೋರಿ‌‌ ನಗರದ ಪತ್ರಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ಮನವಿ ಸಲ್ಲಿಸಿದರು. ಗಣರಾಜ್ಯೋತ್ಸವ ಧ್ವಜಾರೋಹಣ ಹಿನ್ನೆಲೆ ನಗರಕ್ಕೆ ಆಗಮಿಸಿದ್ದ ಸಚಿವರಿಗೆ ಪತ್ರಕರ್ತರು ಮನವಿ ಮಾಡಿದ್ದಾರೆ. ನಗರದ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನಗರದ ಪತ್ರಕರ್ತರ ಶ್ರೇಯಾಭಿವೃದ್ದಿಗೆ ನಿರಂತರ ಶ್ರಮಿಸುತ್ತಿದ್ದು ಹಾಗೂ ಸಾರ್ವಜನಿಕರಿಗೆ ಪತ್ರಿಕಾಗೋಷ್ಠಿಗಳನ್ನ ನಡೆಸಲು ಉತ್ತಮ ಸ್ಥಳ ,ಸೌಲಭ್ಯಗಳನ್ನ ನೀಡುತ್ತ ಬಂದಿದೆ. ಈಗ ಗಿಲ್ಡ್ ‌ನ ಕಟ್ಟಡ ಹಳೆಯದಾಗಿದ್ದು ಕಟ್ಟಡದ ದುರಸ್ತಿ ಕಾರ್ಯ ಹಾಗೂ ಅಭಿವೃದ್ಧಿ ಕಾರ್ಯಗಳನ್ನ ಕೈಗೆತ್ತಿಕೊಳ್ಳುವ ಅನಿವಾರ್ಯತೆಯಿದೆ. ಹೀಗಾಗಿ ಕಟ್ಟಡದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಮಾಡಲಾಯಿತು. ಕಟ್ಟಡದ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಪೀಠೋಪಕರಣಗಳು, ಆವರಣದಲ್ಲಿ ನೆಲಹಾಸು, ಶೌಚಾಲಯ, ಕಟ್ಟಡಕ್ಕೆ ಬಣ್ಣ ಬಳಿಯುವುದು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕಾಗಿದ್ದು ತಮ್ಮ ಅನುದಾನದಲ್ಲಿ ಅಗತ್ಯ ಆರ್ಥಿಕ ನೆರವು ನೀಡಬೇಕೆಂದು ಪತ್ರಕರ್ತರು ಸಚಿವರಿಗೆ ಮನವಿ ಮಾಡಿದರು. ಪತ್ರಕರ್...