ಬೊಮ್ಮನಾಳ ಗ್ರಾಮದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ಅನುದಾನದಲ್ಲಿ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ
ಬೊಮ್ಮನಾಳ ಗ್ರಾಮದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ಅನುದಾನದಲ್ಲಿ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ ರಾಯಚೂರು, ಜೂ.೧6-ಮನುಷ್ಯನನ್ನು ಕಷ್ಟದಿಂದ ಪಾರು ಮಾಡಿ ಆತ ಮಾಡಿದ ಕೆಟ್ಟ ಕೆಲಸಗಳನ್ನು ಕ್ಷಮಿಸಲು ಆರಾಧನಾ ಸ್ಥಳವಾಗಿ ಪ್ರಾರ್ಥನಾ ಮಂದಿರ ಬೇಕು ಎಂದು ಸಿರವಾರ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಸನತ್ ಸತಿಶಕುಮಾರ್ ಹೇಳಿದರು. ಇಂದು ದೇವದುರ್ಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಕ್ರೈಸ್ತ ಅಭಿವೃದ್ಧಿ ನಿಗಮದಿಂದ ಮಂಜೂರಾಗಿರುವ ನವೀಕೃತ ಚರ್ಚ್ ಕಾಮಗಾರಿಗೆ ಭೂಮಿ ಪೂಜೆ ಜರುಗಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೆ ತನ್ನ ಧಾರ್ಮಿಕ ವಿಧಿ ವಿಧಾನ ಅನುಸರಿಸಲು ಮತ್ತು ಸಾಮೂಹಿಕ ಪ್ರಾರ್ಥನೆ ಮಾಡಲು ಪ್ರಾರ್ಥನಾ ಮಂದಿರ ಬೇಕು ಆ ದಿಶೆಯಲ್ಲಿ ಈ ಗ್ರಾಮದಲ್ಲಿ ನವೀಕೃತ ಚರ್ಚ್ ಕಾಮಗಾರಿ ಆರಂಭವಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಪರಮ ಪವಿತ್ರನಾದ ಯೇಸು ನಮ್ಮಲ್ಲಿರುವ ಕಷ್ಟಗಳನ್ನು ನಿವಾರಿಸಿ ಮತ್ತು ನಮ್ಮ ಪಾಪಗಳನ್ನು ಕ್ಷಮೆ ಮಾಡಿ ಸನ್ಮಾರ್ಗದಲ್ಲಿ ಕಳಿಸುವುದರ ಜೊತೆಗೆ ನಮಗೆ ಆಯುರ್ ಆರೋಗ್ಯ ನೀಡುವ ದೇವರಾಗಿದ್ದುಘಿ, ಆತನ ಪ್ರಾರ್ಥನೆಗೆ ಒಂದು ಆರಾಧನಾ ಸ್ಥಾನ ಅಗತ್ಯ...