Posts

Showing posts from August, 2023

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ:. ತಿರುಪತಿ ತಿರುಮಲ ದೇವಸ್ಥಾನದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆ

Image
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ  ಮಧ್ಯಾರಾಧನೆ:        ತಿರುಪತಿ ತಿರುಮಲ ದೇವಸ್ಥಾನದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆ                                     ರಾಯಚೂರು,ಸೆ.1-ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ  ಮಧ್ಯಾರಾಧನೆ ಅಂಗವಾಗಿ ತಿರುಪತಿ ತಿರುಮಲ ದೇವಸ್ಥಾನದಿಂದ ಮಂತ್ರಾಲಯಕ್ಕೆ ಆಗಮಿಸಿ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ  ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು.  ಶ್ರೀ ಮಠದ ಆವರಣದಿಂದ ಸಕಲ ವಾಧ್ಯಗಳ ಮೆರವಣಿಗೆ ಮೂಲಕ  ಸ್ವಾಗತಿಸಲಾಯಿತು.  ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು  ಶೇಷ ವಸ್ತ್ರವನ್ನು ಸ್ವೀಕರಿಸಿ ತಲೆಯ ಮೇಲೆ ಹೊತ್ತು ಮೂಲ ವೃಂದಾವನ ಪ್ರದಕ್ಷಿಣೆ ಮಾಡುವ ಮೂಲಕ ರಾಯರಿಗೆ ಸಮರ್ಪಿಸಿದರು. ನಂತರ ಶ್ರೀಗಳು ಮಾತನಾಡಿ, ಇಂದು ಭೂ ಲೋಕದ ಒಡೆಯ ಶ್ರೀನಿವಾಸ ದೇವರ ಶೇಷ ವಸ್ತ್ರದ ಮೂಲಕ ಗುರುರಾಯರ ಸನ್ನಿಧಾನಕ್ಕೆ ಬಂದಿದ್ದಾನೆ, ಕಳೆದ ಅನೇಕ ವರ್ಷಗಳಿಂದ ಗುರುರಾಯರ    ಆರಾಧನೆ ಸಮಯದಲ್ಲಿ ಪ್ರತಿ ವರ್ಷ ತಿರುಪತಿಯ ಶ್ರೀನಿವಾಸನ ಸನ್ನಿಧಿಯಿಂದ  ಶೇಷ ವಸ್ತ್ರವನ್ನು ಅಲ್ಲಿನ ದೇವಸ್ಥಾನ ಆಡಳಿತ ಮಂಡಳಿ ತಪ್ಪದೆ ವಾಡಿಕೆ ತಪ್ಪದೆ ಪಾಲಿಸುತ್ತ ಬಂದಿದ್ದು, ನಾಡ ನುಡಿಯಂತೆ ದೇವರು ಎಂದರೆ ತಿರುಪತಿ ತಿಮ್ಮಪ್ಪ ಗುರುಗಳು ಎಂದರೆ ಮಂತ್ರಾಲಯ ರಾಗಪ್ಪ ಎನ್ನುವ ಹಾಗೆ ತಿರುಪತಿ ಮಂತ್ರಾಲಯ ನಡುವೆ ಅವಿನಾವ ಸಂಬಂಧ ಹ

ನಗರದ ವಿವಿಧೆಡೆ ರಾಯರ ಪೂರ್ವಾರಾಧನೆ:.

Image
  ನಗರದ ವಿವಿಧೆಡೆ ರಾಯರ ಪೂರ್ವಾರಾಧನೆ:                     ರಾಯಚೂರು,ಆ.31-ನಗರದ ವಿವಿಧೆಡೆ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ವಿಜೃಂಭಣೆಯಿಂದ ನೆರವೇರಿತು. ನಗರದ ಜವಾಹರ ನಗರ ರಾಯರ ಮಠದಲ್ಲಿ ಬೆಳಿಗ್ಗೆ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಅಲಂಕಾರ, ಹಸ್ತೋದಕ, ಮಂಗಳಾರತಿ,ತೀರ್ಥ ಪ್ರಸಾದ ನೆರವೇರಿತು.                                   ಸಂಜೆ ಸಿ.ಎನ್.ರಾಘವೇಂದ್ರರವರಿಂದ ದಾಸವಾಣಿ ನೆರವೇರಿತು.                                           ಉತ್ತರಾಧಿ ಮಠದಲ್ಲಿ : ಗಾಜಗಾರಪೇಟೆ ಉತ್ತರಾಧಿ ಮಠದಲ್ಲಿ ಮಾರುತಿ ಭಜನಾ ಮಂಡಳಿ ಸಹಯೋಗದಲ್ಲಿ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.      ಸಾಯಂಕಾಲ ವೇದಿಕೆಯಲ್ಲಿ ರಘುಪತಿ ಪೂಜಾರ್ ತಂಡದಿಂದ ಕ್ಲಾರಿಯೋನೆಟ್ ವಾದನ ಮತ್ತು ದಾಸವಾಣಿ ನೆರವೇರಿತು.                        ಗಾಜಗಾರ ಪೇಟೆ  ಉತ್ತರಾದಿ ಮಠದ ಬೀದಿ ವಿದ್ಯುತ್ ದೀಪದಿಂದ ಕಂಗೊಳಿಸುತ್ತಿತ್ತು .

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ : ಗುರು ರಾಯರು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ- ಶ್ರೀ ಸುಬುಧೇಂದ್ರ ತೀರ್ಥರು

Image
ಮಂತ್ರಾಲಯದಲ್ಲಿ  ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ :              ಗುರು ರಾಯರು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ- ಶ್ರೀ ಸುಬುಧೇಂದ್ರ ತೀರ್ಥರು ,       ರಾಯಚೂರು, ಆ.31- ರಾಘವೇಂದ್ರ ಸ್ವಾಮಿಗಳಲ್ಲಿ ಇರುವ ಗುರುತ್ವ ಶಕ್ತಿಯಿಂದ  ಭಕ್ತರನ್ನು ಸನ್ಮಾರ್ಗದಲ್ಲಿ ಕರೆದೊಯುತ್ತಿದ್ದಾರೆ ಎಂದು ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು  ಹೇಳಿದರು. ಅವರಿಂದು ಸಂಜೆ ಶ್ರೀ ಮಠದ ಆವರಣದಲ್ಲಿರುವ ಯೋಗೀಂದ್ರ ಸಭಾ ಮಂಟಪದಲ್ಲಿ  ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಾದ ವಿದ್ವಾನ್ ರಾಮವಿಠಲಾಚಾರ್ಯ, ವಿದ್ವಾನ್ ಡಾ.ಗರಿಕಿಪಾಟಿ ನರಸಿಂಹರಾವ್, ಶ್ರೀ.ಎನ್.ಚಂದ್ರಶೇಖರನ್, ಶ್ರೀ ವಿಶ್ವನಾಥ್ ಕರಾಡ್ ಇವರಿಗೆ ಶ್ರೀಮಠದ ಪ್ರತಿಷ್ಠಿತ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.                        ದೇವರು ಎಂದರೆ ತಿರುಪತಿ ತಿಮ್ಮಪ್ಪ ಗುರುಗಳು ಎಂದರೆ ಮಂಚಾಲಿ ರಾಗಪ್ಪ ಎನ್ನುವ ನಾನ್ನುಡಿಯಂತೆ ಯೋಗ ಶಕ್ತಿಯ ಮೂಲಕ ವೃಂದಾವನಸ್ಥರಾಗಿದ್ದವರು, ಭಕ್ತರ ಸಂಕಷ್ಟಗಳನ್ನು ಈಡೇರಿಸುವ ಮೂಲಕ ಕಲಿಯುಗದ ಕಲ್ಪವೃಕ್ಷ ಕಾಮದೇನು ಆಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.  ರಾಘವೇಂದ್ರ ಸ್ವಾಮಿಗಳು ಜಾತ್ಯಾತೀತರಾಗಿ  ವಿಶ್ಚಮಾನ್ಯರಾಗಿದ್ದು,  ಗರುಸ್ಥಾನದಲ್ಲಿ ನಿಂತು ಭಕ್ತರನ್ನು ಸನ್ಮಾರ್ಗದಲ್ಲಿ ಕೊ

ರಾಯರ ಮಠ ಸರ್ವ ಜನಾಂಗದ ಶಾಂತಿಯ ತೋಟ- ರಾಜ್ಯಪಾಲ ನ್ಯಾ.ಅಬ್ದುಲ್‌ ನಜೀರ್‌

Image
  ರಾಯರ  ಮಠ ಸರ್ವ ಜನಾಂಗದ ಶಾಂತಿಯ ತೋಟ- ರಾಜ್ಯಪಾಲ ನ್ಯಾ.ಅಬ್ದುಲ್‌ ನಜೀರ್‌  ಮಂತ್ರಾಲಯ,ಆ.31-  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಆಂಧ್ರ ಪ್ರದೇಶದ  ರಾಜ್ಯಪಾಲರಾದ  ನ್ಯಾ. ಅಬ್ದುಲ್‌ ನಜೀರ್‌ ಹೇಳಿದರು.                               ಅವರಿಂದು ಮಂತ್ರಾಲಯಕ್ಕೆ ಆಗಮಿಸಿ ರಾಯರ ಬೃಂದಾವನ ದರ್ಶನ ಪಡೆದು ನಂತರ ವೇದಿಕೆ ಕಾರ್ಯಕ್ರಮದಲ್ಲಿ  ಮಾತನಾಡಿ, ಶ್ರೀ ಮಠವು ವಿಶ್ವದಾದ್ಯಾಂತ ಮಧ್ವ ಸಿದ್ದಾಂತದ ಪರಸರಿಸುವ ಕಾರ್ಯ ಮಾಡುತ್ತಿದೆ ಎಂದ ಅವರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಭಕ್ತರ ಪಾಲಿನ ಕಲ್ಪವೃಕ್ಷ ಕಾಮಧೇನು ಇದ್ದಂತೆ ಶ್ರೀ ಮಠವು ಸಾಮಾಜಿಕ ಕಾರ್ಯ ಮಾಡುತ್ತಿದ್ದು, ಭಕ್ತಾದಿಗಳಿಗೆ ಅನ್ನದಾನ, ರೋಗಿಗಳಿಗೆ ಪ್ರಾಣದಾನ, ಗುರುಸಾರ್ವಭೌಮ  ವಿದ್ಯಾಪೀಠದ ಮೂಲಕ ಆಧ್ಯಾತ್ಮಿಕ ಪ್ರಸಾರ, ಪರಿಮಳ ವಿದ್ಯಾಪೀಠದ ಮೂಲಕ  ಮಕ್ಕಳಿಗೆ ಉಚಿತ ಶಿಕ್ಷಣ, ಕೇಂದ್ರ ಸರ್ಕಾರದಿಂದ ಸ್ವಚ್ಛ ಮಂತ್ರಾಲಯಕ್ಕೆ ಪಾತ್ರವಾಗಿದೆ ಎಂದರು.  ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ವಿಶ್ವವಿದ್ಯಾಲಯ, ಮಿನಿ ವಿಮಾನ ನಿಲ್ದಾಣ  ಶ್ರೀ ಮಠದ ಯೋಜನೆಗಳಾಗಿವೆ ಎಂದರು.                              ಪೂರ್ಣ ಕುಂಬ ಸ್ವಾಗತ :  ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ  ಪೂರ್ವಾರಾಧನೆ ಅಂಗವಾಗಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದ ಹಿನ್ನೆಲೆ ಮಂತ್ರಾಲಯಕ್ಕೆ  ಆಗಮಿಸಿದ ಆಂಧ್ರ ಪ

ಮಂತ್ರಾಲಯದಲ್ಲಿ ರಾಯರ ಪೂರ್ವಾರಾಧನೆ: ಶ್ರೀರಂಗಂ- ಅಹೋಬಲ ಕ್ಷೇತ್ರದಿಂದ ಗುರುರಾಯರಿಗೆ ಶೇಷ ವಸ್ತ್ರ ಸಮರ್ಪಣೆ

Image
ಮಂತ್ರಾಲಯದಲ್ಲಿ ರಾಯರ ಪೂರ್ವಾರಾಧನೆ:                ಶ್ರೀರಂಗಂ- ಅಹೋಬಲ ಕ್ಷೇತ್ರದಿಂದ ಗುರುರಾಯರಿಗೆ  ಶೇಷ ವಸ್ತ್ರ  ಸಮರ್ಪಣೆ                                ರಾಯಚೂರು,ಆ.31- ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ  ಪೂರ್ವಾರಾಧನೆ ಅಂಗವಾಗಿ ತಮಿಳುನಾಡಿನ ಶ್ರೀ ಕ್ಷೇತ್ರ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಆಂದ್ರಪ್ರದೇಶದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ಆಗಮಿಸಿದ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ  ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು.  ಶ್ರೀ ಮಠದ ಆವರಣದಿಂದ ಸಕಲ ವಾಧ್ಯಗಳ ಮೆರವಣಿಗೆ ಮೂಲಕ  ಸ್ವಾಗತಿಸಲಾಯಿತು.  ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು  ಶೇಷ ವಸ್ತ್ರವನ್ನು ಸ್ವೀಕರಿಸಿ  ರಾಯರಿಗೆ ಸಮರ್ಪಿಸಿದರು. ನಂತರ ಶ್ರೀಗಳು ಮಾತನಾಡಿ, ಶ್ರೀರಂಗಂ-ಅಹೋಬಲ ಕ್ಷೇತ್ರದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆಯಾಗಿದ್ದು, ಎಲ್ಲ ಪುಣ್ಯಕ್ಷೇತ್ರಗಳ ಫಲ ಮಂತ್ರಾಲಯಕ್ಕೆ ಬಂದಿದೆ. ಐತಿಹಾಸಿಕ ದೈವಿಕ ಕ್ಷೇತ್ರಗಳಿಂದ ಬಂದಿರುವ ಶೇಷವಸ್ತ್ರದ ಮೂಲಕ ರಾಯರಿಗೆ  ಅನುಗ್ರಹಿಸಿದ್ದಾರೆ. ಅಹೋಬಲ ಕ್ಷೇತ್ರದ ನರಸಿಂಹಸ್ವಾಮಿ ಹಾಗೂ ಶ್ರೀರಂಗಂ ಕ್ಷೇತ್ರದೊಂದಿಗೆ ಶ್ರೀ ಮಠ ಅವಿನಾಭಾವ ಸಂಬಂಧ ಹೊಂದಿದೆ ಎಂದರು. ಈ ಸಂದರ್ಭದಲ್ಲಿ  ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಸಂಪತ್, ಅರ್ಚಕ ರಮೇಶ್ ಆರ್ಚಾಯ, ಶ್ರೀ ರಂಗ

ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆ : ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ

Image
ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆ : ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ                         ರಾಯಚೂರ,ಆ.30- ನಗರದ ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಪಿ ಬಿ ಎಸ್ ಕೆ. ಸಿ ಬಿ ಎಸ್ ಇ ಶಾಲೆಯಲ್ಲಿ  ರಾಷ್ಟ್ರೀಯ ಕ್ರೀಡಾ ದಿನಾಚರಣೆ  ಆಗಸ್ಟ್ 29  ರಂದು ಆಚರಣೆ ಮಾಡಲಾಯಿತು.                   ಮೇಜರ್ ಧ್ಯಾನ್ ಚಂದ್ ರವರ   ಜನ್ಮ ದಿನದ  ನಿಮಿತ್ಯ   ರಾಷ್ಟ್ರೀಯ ಕ್ರೀಡಾದಿನ ಆಚರಿಸಲಾಯಿತು.  ಶಾಲೆಯ ಪ್ರಾಂಶುಪಾಲರಾದ     ‌ಡಿ ಜಿ ನಳಿನಿ   ಕಾರ್ಯಕ್ರ ಮವನ್ನು ಉದ್ದೇಶಿಸಿ ಮಾತನಾಡಿ  ಮಕ್ಕಳಿಗೆ  ಮೇಜರ್  ಧ್ಯಾನ್  ಚಂದ ರವರು  ಒಬ್ಬ ಭಾರತೀಯ ಫೀಲ್ಡ್ ಹಾಕಿ ಆಟಗಾರರಾಗಿದ್ದರು ಇವರನ್ನುಅನೇಕರು ಇತಿಹಾಸದಲ್ಲಿ ಶ್ರೇಷ್ಠ ಫೀಲ್ಡ್ ಹಾಕಿ ಆಟಗಾರ ಎಂದು ಪರಿಗಣಿಸಿದ್ದಾರೆ ಎಂದರು.    ಮುಖ್ಯ ಅತಿಥಿಗಳಾಗಿ  ಆಡಳಿತ ಅಧಿಕಾರಿಗಳಾದ ಕುಮಾರಿ ಸುಭಾಷಿಣಿ  ವಿಸಲಾಕ್ಷಿ     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.   ಕಾರ್ಯಕ್ರಮದ ನಿರೂಪಣೆ ಯನ್ನು  ಏಳನೆಯ ತರಗತಿ  ಸಂಧ್ಯಾ ನಿರ್ವಹಿಸಿದರು.     ಈ ಕಾರ್ಯಕ್ರಮ ಉದ್ದೇಶಿಸಿ  ಏಳನೇ ತರಗತಿ ವಿದ್ಯಾರ್ಥಿನಿ   ನಿರ್ಮಲ   ಹಾಗೂ    5ನೇ ತರಗತಿ ವಿದ್ಯಾರ್ಥಿ  ಆರುಷ್ ಸಿಂಗ್  ಧ್ಯಾನ್ ಚಂದ ರವರ  ಸಾಧನೆ ಬಗ್ಗೆ ಮಾತಾಡಿದರು . ದೈಹಿಕ ನಿರ್ದೇಶಕರಾದ  ಬಿ.ಎಸ್ ರೆಡ್ಡಿ  ಮತ್ತು ವೀರಭದ್ರಯ್ಯ  ಎಂ ಡಿ  ವಲಿ  , ಶಾಂತಕುಮಾರಿ  ಜಗದೀಶ್ ಹಾಗೂ  ಎಲ್ಲಾ  ಶಿಕ್ಷಕ ವೃಂದದವ

ತುಂಗಾ ನದಿ ಕಾರಿಡಾರ್ - ಶ್ರೀ ಜಗನ್ನಾಥ ದಾಸರ ಸಂಗ್ರಹಾಲಯ ಲೋಕಾರ್ಪಣೆ: ಪವಿತ್ರ ನದಿಗಳ ಮಹತ್ವ ಸಾರುವ ಅವಶ್ಯಕತೆ ಇದೆ- ಶ್ರೀ ಸುಬುಧೇಂದ್ರತೀರ್ಥರು

Image
  ತುಂಗಾ  ನದಿ ಕಾರಿಡಾರ್ - ಶ್ರೀ ಜಗನ್ನಾಥ ದಾಸರ  ಸಂಗ್ರಹಾಲಯ ಲೋಕಾರ್ಪಣೆ:                        ಪವಿತ್ರ ನದಿಗಳ ಮಹತ್ವ ಸಾರುವ ಅವಶ್ಯಕತೆ ಇದೆ- ಶ್ರೀ ಸುಬುಧೇಂದ್ರತೀರ್ಥರು   ರಾಯಚೂರು,ಆ.30-  ಧಾರ್ಮಿಕ ಕ್ಷೇತ್ರದಲ್ಲಿ ಹರಿಯುವ ನದಿಗಳ ಅವುಗಳ ಮಹತ್ವದ ಕುರಿತು ಭಕ್ತಾದಿಗಳಿಗೆ ತಿಳಿಸುವುದು ಬಹಳ ಅವಶ್ಯಕತೆ ಇದೆ ಎಂದು ಮಂತ್ರಾಯ ಶ್ರೀ ರಾಘವಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು  ಹೇಳಿದರು. ಅವರಿಂದು  ಶ್ರೀ ಮಠದ ಆವರಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಸಪ್ತರಾತ್ರೋತ್ಸವ  ಎರಡನೇ ದಿನವಾದ ಇಂದು ತುಂಗಭದ್ರಾ ನದಿಯಿಂದ ಶ್ರೀ ಮಠದ ವರೆಗಿನ ತುಂಗಾ  ನದಿ ಕಾರಿಡಾರ್ ( ತುಂಗಾ ಮಾರ್ಗ) ಹಾಗೂ ಶ್ರೀ ಜಗನ್ನಾಥ ದಾಸರ ಜೀವನ,  ಕೃತಿಗಳ ಪರಿಚಯಮಾಡಿಕೊಡುವ ಸಂಗ್ರಹಾಲಯ (ಮ್ಯೂಸಿಯಂ) ರ್ಲೋಕಾರ್ಪಣೆಗೊಳಿಸಿ ಮಾತನಾಡಿದರು.  ಧಾರ್ಮಿಕವಾಗಿ ನದಿಗಳು ಬಹಳ ಅತ್ಯಂತ ಪವಿತ್ರವಾಗಿದ್ದು, ಅವುಗಳ  ಮಹತ್ವ ಸಾರುವ ಕೆಲಸಕ್ಕೆ ಶ್ರೀ ಮಠ ಮುಂದಾಗಿದ್ದು, ಅದರ ಭಾಗವಾಗಿ ಇಂದು ಸಾಂಕೇತಿಕವಾಗಿ  ತುಂಗಾ ಮಾರ್ಗ ಉದ್ಘಾಟಿಸಲಾಗಿದೆ. ಬಾಕಿ ಇರುವ ಕಾಮಗಾರಿ ಆರಾಧನೆ ನಂತರ ಕೈ ಗೊಳ್ಳಲಾಗುವುದು ಎಂದರು. ನದಿಗಳ ಉಗಮ, ಅವುಗಳ ಪಾವಿತ್ರತೆ, ಸ್ಮರಣೆ, ಸಂಕಲ್ಪ ಸೇರಿದಂತೆ ಪೂಣ್ಯ ಸ್ನಾನದ ಮಹತ್ವವನ್ನು ಭಕ್ತಾದಿಗಳಿಗೆ ಸಾರುವ ಉದ್ದೇಶ ತುಂಗಾ  ನದಿ ಕಾರಿಡಾರ್ ಹೊಂದಲಾಗಿದೆ ಎಂದರು.  ದಾಸ ಸಾಹಿತ್ಯದ ಶ್ರೀ

ರಾಗಿಮಾನಗಡ್ಡ ಸಮುದಾಯ ಭವನದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

Image
  ರಾಗಿಮಾನಗಡ್ಡ ಸಮುದಾಯ ಭವನದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ರಾಯಚೂರು,ಆ.೩೦- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನ ಕಾರ್ಯಕ್ರಮವನ್ನು ನಗರದ ರಾಗಿಮಾನಗಡ್ಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮವನ್ನು ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೈಸೂರಿನಲ್ಲಿ ನಡೆದ ಗೃಹಲಕ್ಷಿö್ಮ ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.  ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಹ್ಮದ್ ಜಿಲಾನಿ, ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ಗೃಹಲಕ್ಷ್ಮೀ ಮೂಲಕ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಮಾಡುವ ಶಕ್ತಿ ನೀಡಿದ ರಾಜ್ಯ ಸರ್ಕಾರ- ಶಾಸಕ ಬಸನಗೌಡ ದದ್ದಲ್

Image
  ಗೃಹಲಕ್ಷ್ಮೀ ಮೂಲಕ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಮಾಡುವ ಶಕ್ತಿ ನೀಡಿದ ರಾಜ್ಯ ಸರ್ಕಾರ- ಶಾಸಕ ಬಸನಗೌಡ ದದ್ದಲ್ ರಾಯಚೂರು,ಆ.೩೦- ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಎರಡು ಸಾವಿರ ರೂ.ಗಳನ್ನು ಜಮಾ ಮಾಡುವ ಮೂಲಕ ಮಹಿಳೆಯರಿಗೆ ಕಷ್ಟದ ಸಂದರ್ಭದಲ್ಲಿ ಕುಟುಂಬ ನಿರ್ವಹಣೆ ಮಾಡುವ ಶಕ್ತಿಯನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಹೇಳಿದರು. ಅವರಿಂದು ತಾಲೂಕಿನ ದೇವಸುಗೂರು ಗ್ರಾಮದ ಶಕ್ತಿನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು  ತಾಲೂಕು ಪಂಚಾಯತ್, ದೇವಸುಗೂರು ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಭರವಸೆಯಂತೆ ಐದು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಈಗಾಗಲೇ ಮೂರು ಯೋಜನೆಯಗಳ ಸೌಲಭ್ಯಗಳನ್ನು ಯಶಸ್ವಿಯಾಗಿ ಜನರಿಗೆ ನೀಡಿರುವ ಸರ್ಕಾರ ಇದೀಗ ಸರ್ಕಾರದ ಮತ್ತೊಂದು ಮಹತ್ತರ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಮಾಡಲಾಗುತ್ತಿದ್ದು, ಮಹಿಳೆಯರು ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.  ರಾಜ್ಯ ಸರ್ಕಾರ ಈಗಾಗಲೇ ಹಲವು ಜನಪರವಾದ ಯೋಜನೆಗಳನ್ನು ಜಾರಿಗೆ

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ 2023 ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ: ಚಂದ್ರಯಾನ-3 ಯಶಸ್ಸಿನಿಂದ ಭಾರತೀಯ ತಂತ್ರಜ್ಞಾನದತ್ತ ಪ್ರಪಂಚದ ದೃಷ್ಟಿ-ದತ್ತಾತ್ರಿ ಸಾಲಗಾಮೆ

Image
  ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ 2023 ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ: ಚಂದ್ರಯಾನ-3 ಯಶಸ್ಸಿನಿಂದ ಭಾರತೀಯ ತಂತ್ರಜ್ಞಾನದತ್ತ ಪ್ರಪಂಚದ ದೃಷ್ಟಿ- ದತ್ತಾತ್ರಿ ಸಾಲಗಾಮೆ ರಾಯಚೂರು,ಆ.30- ಚಂದ್ರಯಾನ -3 ಯಶಸ್ವಿಯಾಗುವ ಮೂಲಕ ಇಡಿ ಪ್ರಪಂಚದ ದೃಷ್ಟಿ ಭಾರತೀಯ ತಂತ್ರಜ್ಞಾನದ ಮೇಲೆ ನೆಟ್ಟಿದೆ ಎಂದು ಬಾಷ್ ಗ್ಲೋಬಲ್ ಸಾಫ್ಟವೇರ್ ಟೆಕ್ನಾಲಜಿ ಸಿಇಓ ಮತ್ತು ಉಪಾಧ್ಯಕ್ಷರಾದ ದತ್ತಾತ್ರಿ ಸಾಲಗಾಮೆ ಅಭಿಪ್ರಾಯ ಪಟ್ಟರು. ಅವರಿಂದು ಯರಮರಸ್ ಕ್ಯಾಂಪ್‌ನಲ್ಲಿರುವ ಭಾರತೀಯ  ಮಾಹಿತಿ ತಂತ್ರಜ್ಞಾನ ಸಂಸ್ಥೆಯ ೨೦೨೩ ನೇ ಸಾಲಿನ  ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಂಡ್ ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಭಾರತ ದೇಶ ಇಂದು ತಂತ್ರಜ್ಞಾನದಲ್ಲಿ ಅಗಾಧವಾದ ಶಕ್ತಿ ಹೊಂದಿದ್ದು ಇಡಿ ಪ್ರಪಂಚವೆ ನಮ್ಮನ್ನು ನೋಡುತ್ತಿದ್ದು ದೇಶದ ಐಐಟಿ,ಐಐಎಂ,ಐಐಐಟ ಮುಂತಾದ ಸಂಸ್ಥೆಗಳು ಈ ದೇಶದ ಹೆಮ್ಮೆಯ ಸಂಸ್ಥೆಗಳಾಗಿವೆ ಎಂದ ಅವರು ಚಂದ್ರಯಾನ-೩ ಯಶಸ್ವಿಯಾಗುವ ಮೂಲಕ ಇಡಿ ವಿಶ್ವವೆ ಭಾರತದ ಬುದ್ದಿಮತ್ತೆಯನ್ನು ಪ್ರಶಂಸಿಸುತ್ತಿದೆ ಎಂದರು. ಚ0ದ್ರಯಾನ-೩ ರಲ್ಲಿ ವಿಕ್ರಮ ಲ್ಯಾಂಡರ್ ಪ್ರಗ್ಯಾನ್ ರೋವರ್‌ರನನ್ನು ಇಂತಿಷ್ಟೆ ಸಮಯದಲ್ಲಿ ಲ್ಯಾಂಡ್ ಮಾಡುತ್ತದೆ ಎಂದು ಮೊದಲೆ ಅಂದಾಜು ಮಾಡಿದ್ದು ಕರಾರುವಕ್ಕಾಗಿ ಅದೆ ಸಮಯಕ್ಕೆ ಲ್ಯಾಂಡ್ ಮಾಡುವುದು ಪ್ರಯಾಸಕರ ಸಂಗತಿ ಮತ್ತು ತಂತ್ರಜ್ಞಾನದಲ್ಲಿ

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನಾ ಸಪ್ತರಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ: ಭಕ್ತಾದಿಗಳಿಗೆ ಸಕಲ ವ್ಯವಸ್ಥೆ- ಶ್ರೀ ಸುಬುಧೇಂದ್ರತೀರ್ಥರು

Image
  ಮಂತ್ರಾಲಯದಲ್ಲಿ ರಾಯರ 352ನೇ ಆರಾಧನಾ ಸಪ್ತರಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ:                  ಭಕ್ತಾದಿಗಳಿಗೆ ಸಕಲ ವ್ಯವಸ್ಥೆ- ಶ್ರೀ ಸುಬುಧೇಂದ್ರತೀರ್ಥರು       ರಾಯಚೂರು,ಆ.29- ಮಂತ್ರಾಲಯದಲ್ಲಿ ರಾಯರ 352 ನೇ ರಾಘವೇಂದ್ರ ಸ್ವಾಮಿಗಳ ಆರಾಧನಾ ಸಪ್ತರಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಸಂಜೆ ಗೋಧೂಳಿ ಮುಹೂರ್ತದಲ್ಲಿ  ಗೋ, ಅಶ್ವ ಮುಂತಾದವುಗಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.    ನಂತರ ಯೋಗಿಂದ್ರ ಸಭಾಂಗಣದಲ್ಲಿ ಆರಾಧನಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ   ಮಾತನಾಡಿ  ಗ್ರಾಮ ದೇವತೆ   ಮಂಚಾಲಮ್ಮ ಆಶೀರ್ವಾದದೊಂದಿಗೆ ರಾಯರ ಆರಾಧನೆ ಸಪ್ತರಾತ್ರೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದ್ದು  ಆ.31 ಪೂರ್ವಾರಾಧನೆ, ಸೆ.1 ಮಧ್ಯಾ ರಾಧನೆ ಮತ್ತು 2 ರಂದು ಉತ್ತರಾರಾಧನೆ ನೆರವೇರಲಿದ್ದು   ಆರಾಧನೆಗೆ ಆಂಧ್ರದ ರಾಜ್ಯಪಾಲರಾದ ಅಬ್ದುಲ್ ನಜೀರ ಆಗಮಿಸಲಿದ್ದು ಈ ಬಾರಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಟಾಟಾ ಗ್ರುಪ್ ನ ಚಂದ್ರಶೇಖರ, ಕರಾಡ,ಗಿರಕಿಪಾಟಿ  ನರಸಿಂಹರಾವ್, ರಾಮವಿಠಲಾಚಾರ್ಯರಿಗೆ ನೀಡಲಾಗುತ್ತಿದೆ ಎಂದರು.                          ಬರುವ ಭಕ್ತಾದಿಗಳಿಗೆ ನೂತನವಾದ ಶ್ರೀ ನರಹರಿ ತೀರ್ಥ ವಸತಿಗೃಹ, ಮೂಲರಾಮ ವಸತಿಗೃಹ ಮುಂತಾದ ವಿವಿಧ  ವಸತಿಗೃಹಗಳಲ್ಲಿ ವ

ಜವಾಹರನಗರ ರಾಯರ‌ ಮಠದಲ್ಲಿ ಯಜ್ಞೋಪವಿತ ಧಾರಣೆ ಕಾರ್ಯಕ್ರಮ.

Image
  ಜವಾಹರನಗರ ರಾಯರ‌ ಮಠದಲ್ಲಿ ಯಜ್ಞೋಪವಿತ ಧಾರಣೆ ಕಾರ್ಯಕ್ರಮ.                           ರಾಯಚೂರು,ಆ.29-ನಗರದ ಜವಾಹರನಗರ ರಾಯರ ಮಠದಲ್ಲಿ ಯಜ್ಞೋಪವಿತ(ಜನಿವಾರ) ಧಾರಣೆ ಕಾರ್ಯಕ್ರಮ ನೆರವೇರಿತು.                                  ಋಗವೇದಿಗಳಿಗೆ ಯಜ್ಞೋಪವಿತ ಧಾರಣೆ ನೆರವೇರಿತು.               ಶ್ರೀ ಗಿರೀಶ ಆಚಾರ್ಯ ಪೌರೋಹಿತ್ಯದಲ್ಲಿ ಹೋಮ ,ಯಜ್ಞೋಪವಿತ ಧಾರಣೆ ವಿಧಿ ವಿಧಾನ ನೆರವೇರಿತು.                                        ಶ್ರೀಮಠದ  ವ್ಯವಸ್ಥಾಪಕರಾದ ದ್ವಾರಕಾನಾಥ್ ಆಚಾರ್ಯ, ಕೆ.ಆರ್.ಇನಾಂದಾರ ಆಚಾರ್ಯ ಸೇರಿದಂತೆ ಅನೇಕರಿದ್ದರು.                       ನೂರಾರು ಜನರು ಯಜ್ಞೋಪವಿತ ಧಾರಣೆ ಗೈದರು.

ಮಂತ್ರಾಲಯ: ನರಹರಿ ತೀರ್ಥ ವಸತಿಗೃಹ ಉದ್ಘಾಟನೆ.

Image
  ಮಂತ್ರಾಲಯ: ನರಹರಿ ತೀರ್ಥ ವಸತಿಗೃಹ ಉದ್ಘಾಟನೆ.         ರಾಯಚೂರು,ಆ.28- ಮಂತ್ರಾಲಯದಲ್ಲಿ ಶ್ರೀ ನರಹರಿ ತೀರ್ಥ ವಸತಿಗೃಹ, ನವೀಕೃತ ಶ್ರೀ ವಿಜಯಿಂದ್ರತೀರ್ಥ ವಸತಿಗೃಹ ಹಾಗೂ ನೂತನ  ವಾಹನ ನಿಲುಗಡೆ ಸ್ಥಳಗಳನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಇಂದು ಉದ್ಘಾಟಿಸಿದರು.  ರಾಯರ 352 ನೇ ಆರಾಧನೆ ಹಿನ್ನಲೆ ಭಕ್ತರಿಗೆ ವಸತಿ ಸೌಲಭ್ಯ ಕಲ್ಪಿಸಲು ನೂತನ ವಸತಿ ಗೃಹಗಳನ್ನು ಆರಾಧನೆ ಮುಂಚಿತವಾಗಿ ಉಧ್ಘಾಟಿಸಲಾಗಿದೆ.                                        ಈ ಸಂದರ್ಭದಲ್ಲಿ ಮಹಾಮಹೋಪಾಧ್ಯಾಯರಾದ  ಶ್ರೀ ರಾಜಾ ಎಸ್.ಗಿರಿಯಾಚಾರ್ ಸೇರಿದಂತೆ ಮಠದ ಸಿಬ್ಬಂದಿಗಳಿದ್ದರು .

ಕಲ್ಯಾಣ ರಥ ನೂತನ ಬಸ್ ಸಂಚಾರಕ್ಕೆ ಚಾಲನೆ: ಕಲ್ಯಾಣ ಕರ್ನಾಟಕ ಭಾಗಕ್ಕೆ ಶೀಘ್ರವೇ ಹೆಚ್ಚುವರಿ ಬಸ್- ಸಚಿವ ರಾಮಲಿಂಗಾರೆಡ್ಡಿ

Image
   ಕಲ್ಯಾಣ ರಥ ನೂತನ ಬಸ್ ಸಂಚಾರಕ್ಕೆ ಚಾಲನೆ:              ಕಲ್ಯಾಣ ಕರ್ನಾಟಕ ಭಾಗಕ್ಕೆ ಶೀಘ್ರವೇ ಹೆಚ್ಚುವರಿ ಬಸ್- ಸಚಿವ ರಾಮಲಿಂಗಾರೆಡ್ಡಿ ರಾಯಚೂರು,ಆ.28- ಕಲ್ಯಾಣ ಕರ್ನಾಟಕ ಭಾಗಕ್ಕೆ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಭಾಗಕ್ಕೆ ಅಗತ್ಯಕ್ಕೆ ಅನುಗುಣವಾಗಿ ಹಂತ ಹಂತವಾಗಿ ನೂತನ ಬಸ್‌ಗಳನ್ನು ಬಿಡುಗಡೆಗೊಳಿಸಲಾಗುವುದು ಮತ್ತು ಈ ಭಾಗದ ಸಾರಿಗೆ ಸಂಸ್ಥೆಗೆ ಶೀಘ್ರವೇ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.  ಅವರಿಂದು ಜಿಲ್ಲೆಯ ಸಿಂಧನೂರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ, ಸಿಂಧನೂರಿನಿಂದ ಬೆಂಗಳೂರಿಗೆ ಸಂಚರಿಸಲಿರುವ ನೂತನ ಕಲ್ಯಾಣ ರಥ ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಬಸ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು.  ಪ್ರಸ್ತುತ ಸಾಲಿನಲ್ಲಿ 7೦೦ ಹೊಸ ಬಸ್‌ಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗುವುದು, ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾದ ಮತ್ತು ಪ್ರಥಮವಾಗಿ ಜಾರಿಯಾದ ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ಸಾರಿಗೆ ಪ್ರಯಾಣಿಕರ ಸಂಖ್ಯೆ ಅತ್ಯಂತ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು.  ಸಿಂಧನೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ನೀಡುವ ಉದ್ದೇಶದಿಂದ ಇಂದು ಕಲ್ಯಾಣ ರಥ

ರಾಯಚೂರು ತಾಲೂಕು ಪಂಚಾಯತ್ ತ್ರೈ ಮಾಸಿಕ ಕೆಡಿಪಿ ಸಭೆ: ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ, ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ- ಶಾಸಕ ಬಸನಗೌಡ ದದ್ದಲ್

Image
ರಾಯಚೂರು ತಾಲೂಕು ಪಂಚಾಯತ್  ತ್ರೈ ಮಾಸಿಕ ಕೆಡಿಪಿ ಸಭೆ:                                                  ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ, ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ- ಶಾಸಕ ಬಸನಗೌಡ ದದ್ದಲ್        ರಾಯಚೂರು,ಆ.೨೮- ರಾಯಚೂರು ತಾಲೂಕು ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.  ಅವರಿಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಯಚೂರು ತಾಲೂಕು ಪಂಚಾಯತಿಯ ಪ್ರಥಮ ತ್ರೆöÊಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ರಾಯಚೂರು ತಾಲೂಕು ವ್ಯಾಪ್ತಿಯಲ್ಲಿರುವ ಅಂಗನವಾಡಿ, ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಅಂಗನವಾಡಿ ಕೇಂದ್ರ ಹಾಗೂ ಸಾಳೆಗಳ ಸುತ್ತಲೂ ಕಾಂಪೌಂಡ್ ವ್ಯವಸ್ಥೆಯಿರುವಂತೆ ಮತ್ತು ಸುತ್ತಮುತ್ತಲೂ ಸ್ವಚ್ಛತೆ, ಬಿಸಿಯೂಟ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ನಿಡಲಾಗುವ ಪೌಷ್ಠಿಕಾಂಶಯುಕ್ತ ಆಹಾರದಲ್ಲಿ ಯಾವುದೇ ದೋಷಗಳಾಗಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.  ಆ.೩೦ರಂದು ಸರ್ಕಾರದ ಮಹತ್ತರ ಯೋಜನೆಗಳ