ಎ.ವಸಂತ ಕುಮಾರ್ ರಿಂದ ನಾಮ ಫಲಕ ಉಧ್ಘಾಟನೆ: ಶೀಘ್ರದಲ್ಲಿ ಅನುದಾನ ಒದಗಿಸುವ ಭರವಸೆ. ಜಯ ಧ್ವಜ ನ್ಯೂಸ್ , ರಾಯಚೂರು, ಫೆ.1- ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ.ವಸಂತಕುಮಾರ ಅವರು ಇಂದು ಶ್ರೀ ನಂದೀಶ್ವರ ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ ದೇವಸ್ಥಾನ ಆವರಣದ ಹೊರಗಡೆ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ನಿಗದಿಗೊಳಿಸಲಾದ ಸ್ಥಳದ ನಾಮಪಲಕ ಉದ್ಘಾಟಿಸಿದರು. ಕಲ್ಯಾಣ ಮಂಟಪ ನಿರ್ಮಾಣ ಮಾಡಲು ದೇವಸ್ಥಾನದ ಆಧೀನದಲ್ಲಿ 80*120 ಅಡಿ ಸ್ಥಳವನ್ನು ಮೀಸಲಿಡಲಾಗಿದ್ದು, ದೇವಸ್ಥಾನದ ಸ್ವಾಮಿಜಿಗಳು ಆದಷ್ಟು ಶೀಘ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲು 2.00ಕೋ ರೂ ಅನುದಾನ ಒದಗಿಸಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಮುಂದಿನ ಎರಡು ಮೂರು ತಿಂಗಳಲ್ಲಿ ಅನುದಾನ ಒದಗಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಯಕರಾದ ಈಶಪ್ಪ, ಕೆಪಿಸಿಸಿ ವಕ್ತಾರರಾದ ಡಾ.ರಝಾಕ ಉಸ್ತಾದ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಡಿ.ಕೆ. ಮುರಳಿ ಯಾದವ, ರಮೇಶರೋಸ್ಲಿ, ಜೆ.ಸತ್ಯನಾಥ, ಮೊಹಮ್ಮದ ರಫಿ ಹಾಗೂ ಇತರರು ಉಪಸ್ಥಿತರಿದ್ದರು.